Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಣ್ಣನಿಗಿದೆ ಸಿನಿಮಾ ನಿರ್ದೇಶಿಸುವ ಆಸೆ: ನಾಯಕನನ್ನೂ ಸೆಲೆಕ್ಟ್ ಮಾಡಿಕೊಂಡಿದ್ದಾರೆ

Shiva Rajkumar: 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟಿಸುತ್ತಲೇ ಇರುವ ಶಿವರಾಜ್ ಕುಮಾರ್ ಅವರಿಗೆ ಸಿನಿಮಾ ನಿರ್ದೇಶನ ಮಾಡುವ ಆಸೆಯಿದೆಯಂತೆ. ಅಂದಹಾಗೆ ತಮ್ಮ ಸಿನಿಮಾಕ್ಕೆ ನಾಯಕನನ್ನೂ ಆಯ್ಕೆ ಮಾಡಿಕೊಂಡಿದ್ದಾರೆ ಶಿವಣ್ಣ.

ಶಿವಣ್ಣನಿಗಿದೆ ಸಿನಿಮಾ ನಿರ್ದೇಶಿಸುವ ಆಸೆ: ನಾಯಕನನ್ನೂ ಸೆಲೆಕ್ಟ್ ಮಾಡಿಕೊಂಡಿದ್ದಾರೆ
ಶಿವಣ್ಣ
Follow us
ಮಂಜುನಾಥ ಸಿ.
|

Updated on: Oct 19, 2023 | 7:29 PM

ಶಿವರಾಜ್ ಕುಮಾರ್ (Shiva Rajkumar) ‘ಆನಂದ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದಾಗಿನಿಂದ ಈ ದಿನದ ವರೆಗೂ ಸಿನಿಮಾ ಇಲ್ಲದೆ ಖಾಲಿ ಕೂತ ದಿನವೇ ಇಲ್ಲ. ಸತತವಾಗಿ ನಟಿಸುತ್ತಲೇ ಬರುತ್ತಿದ್ದಾರೆ. ನಟನೆಯ ಹೊರತಾಗಿ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವೇ ದೊರೆತಂತಿಲ್ಲ ಅವರಿಗೆ. ಆದರೆ ಶಿವಣ್ಣನಿಗೆ ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆಯಂತೆ. ಹಲವು ಬಾರಿ ಆ ಬಗ್ಗೆ ಯೋಚನೆಯನ್ನೂ ಮಾಡಿದ್ದಾರಂತೆ. ಮಾತ್ರವಲ್ಲ ಸಿನಿಮಾಕ್ಕಾಗಿ ಒಂದು ಐಡಿಯಾ ಸಹ ಶಿವಣ್ಣನ ಬಳಿ ಈಗಾಗಲೇ ಇದೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್, ”ಸಿನಿಮಾ ನಿರ್ದೇಶನ ಎಂಬುದು ಸುಲಭದ ಕೆಲಸವಲ್ಲ ಎಂಬುದು ಗೊತ್ತಿದೆ. ಕನ್ನಡ ಸೇರಿದಂತೆ ನೆರೆ ಹೊರೆಯ ಚಿತ್ರರಂಗದಲ್ಲಿ ಕೆಲವು ಅದ್ಭುತವಾದ ಸಿನಿಮಾ ನಿರ್ದೇಶಕರಿದ್ದಾರೆ, ಕೆಲವರೊಟ್ಟಿಗೆ ಕೆಲಸ ಮಾಡುವ ಅವಕಾಶವೂ ನನಗೆ ಸಿಕ್ಕಿದೆ. ಆ ನಿರ್ದೇಶಕರು ತಮಗೆ ತಮ್ಮದೇ ಆದ ಬ್ರ್ಯಾಂಡ್ ಸೃಷ್ಟಿ ಮಾಡಿಕೊಂಡಿದ್ದಾರೆ. ನಾನು ಸಿನಿಮಾ ನಿರ್ದೇಶಿಸಿದರೂ ಸಹ ನನ್ನದೇ ಆದ ಗುರುತು ಮೂಡಿಸುವ ಇಚ್ಛೆ ನನಗೆ ಇದೆ” ಎಂದಿದ್ದಾರೆ ಶಿವರಾಜ್ ಕುಮಾರ್.

ಇದನ್ನೂ ಓದಿ:ಕಾವೇರಿ ರೈತರ ಬೆನ್ನೆಲುಬು, ರೈತರು ಸಂಕಷ್ಟದಲ್ಲಿದ್ದಾರೆ: ಶಿವರಾಜ್ ಕುಮಾರ್

”ನನಗೆ ಬಿಲ್ಡಪ್ ಕ್ಯಾರೆಕ್ಟರ್ ರೀತಿಯ ಕತೆ, ಅಥವಾ ರೂಲ್ ಮಾಡುವ ವ್ಯಕ್ತಿಗಳ ಕತೆ ಮಾಡುವುದಕ್ಕೆ ಇಷ್ಟವಿಲ್ಲ. ಸಾಮಾನ್ಯ ವ್ಯಕ್ತಿಯ ಕತೆ ಇಷ್ಟ. ಸಾಮಾನ್ಯ ವ್ಯಕ್ತಿ ಸಮಾಜದಲ್ಲಿ ಬದಲಾವಣೆ ತರುವ ರೀತಿಯ ಕತೆಯನ್ನು ಸಿನಿಮಾ ಮಾಡುವ ಆಸೆ. ಒಂದು ರೀತಿ ಶಂಕರ್ ಮಾದರಿಯ ಕತೆ ಎನ್ನಬಹುದು ಆದರೆ ಸೂಪರ್ ಹೀರೋ ಮಾದರಿಯಲ್ಲಲ್ಲದೆ ಸಾಮಾನ್ಯ ವ್ಯಕ್ತಿಯೇ ಹೀರೋ ಆಗುವ ಮಾದರಿಯ ಕತೆ” ಎಂದರು ಶಿವರಾಜ್ ಕುಮಾರ್.

ಇನ್ನು ತಮಗೆ ಯಾವ ನಟನಿಗಾಗಿ ಸಿನಿಮಾ ಮಾಡುವ ಆಸೆ ಇದೆ ಎಂಬ ಪ್ರಶ್ನೆಗೆ, ”ನನಗೆ ಅಪ್ಪು, ಅನಂತ್​ನಾಗ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡುವ ಆಸೆ ಇದೆ. ಈಗಿನ ಸ್ಟಾರ್​ ನಟರಲ್ಲಿ ನನಗೆ ಧನುಶ್ ಅವರನ್ನು ಹಾಕಿಕೊಂಡು ಸಿನಿಮಾ ನಿರ್ದೇಶಿಸುವ ಆಸೆ ಇದೆ. ಅವರು ಸಾಮಾನ್ಯ ವ್ಯಕ್ತಿಯಂತೆ ಕಾಣುತ್ತಾರೆ” ಎಂದಿದ್ದಾರೆ ಶಿವರಾಜ್ ಕುಮಾರ್. ”ನನ್ನ ಬಳಿ ಈಗಾಗಲೇ ಒಂದು ಐಡಿಯಾ ಇದೆ. ನಾನು ಅದನ್ನು ಮಾಡುತ್ತೇನೆಯೋ ಇಲ್ಲವೋ ಗೊತ್ತಿಲ್ಲ” ಎಂದಿರುವ ಶಿವಣ್ಣ, ಆ ಐಡಿಯಾ ಅನ್ನು ನಿರ್ದೇಶಕ ಶ್ರೀನಿಗೆ ಹೇಳುತ್ತೀನಿ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ
ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ
ಪುಣ್ಯಸ್ನಾನ ಮಾಡಿ ಸಂಗಮ ತೀರದಲ್ಲೇ ಬಟ್ಟೆ ಬಿಸಾಡಿ ಹೋಗುತ್ತಿರುವ ಜನ
ಪುಣ್ಯಸ್ನಾನ ಮಾಡಿ ಸಂಗಮ ತೀರದಲ್ಲೇ ಬಟ್ಟೆ ಬಿಸಾಡಿ ಹೋಗುತ್ತಿರುವ ಜನ
ಎಲೆಕೋಸು ಬೆಲೆ ದಿಢೀರ್​​ ಕುಸಿತ: ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ ರೈತ
ಎಲೆಕೋಸು ಬೆಲೆ ದಿಢೀರ್​​ ಕುಸಿತ: ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ ರೈತ
ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ