Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ದರ್ಶನ್ ಅನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತೆ?

Darshan: ನಟ ದರ್ಶನ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ 'ಡಿ ಬಾಸ್' ಎನ್ನುತ್ತಾರೆ. ಗೆಳೆಯರು ದಚ್ಚು ಎನ್ನುತ್ತಾರೆ. ಕೆಲವರು ಲಂಬು ಎಂದೂ ಕರೆಯುತ್ತಾರೆ. ಆದರೆ ಮನೆಯಲ್ಲಿ ದರ್ಶನ್​ರ ತಾಯಿ, ಸಹೋದರಿ ಅವರನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತೆ?

ಮನೆಯಲ್ಲಿ ದರ್ಶನ್ ಅನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತೆ?
Follow us
ಮಂಜುನಾಥ ಸಿ.
|

Updated on: Oct 18, 2023 | 10:05 PM

ದರ್ಶನ್​ ತೂಗುದೀಪ (Darshan) ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ಡಿ-ಬಾಸ್’ ಎನ್ನುತ್ತಾರೆ. ಆತ್ಮೀಯ ಗೆಳೆಯರು ದಚ್ಚು ಎನ್ನುತ್ತಾರೆ. ಲಂಬು ಎಂದು ಕರೆಯುವ ಕೆಲವು ಗೆಳೆಯರೂ ದರ್ಶನ್ ಅವರಿಗಿದ್ದಾರೆ. ಆದರೆ ದರ್ಶನ್ ಅವರನ್ನು ಅವರ ತಾಯಿ ಮೀನಾ ಹಾಗೂ ಅವರ ಸಹೋದರಿ ಏನೆಂದು ಕರೆಯುತ್ತಾರೆ ಗೊತ್ತೆ? ಇಂದು ‘ಟಗರು ಪಲ್ಯ’ ಸಿನಿಮಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ ತಾರಾ ಈ ವಿಷಯ ಹಂಚಿಕೊಂಡಿದ್ದಾರೆ.

ವೇದಿಕೆ ಮೇಲೆ ‘ಟಗರು ಪಲ್ಯ’ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದ ನಟಿ ತಾರಾ, ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ದರ್ಶನ್ ಅವರನ್ನು ‘ಅಪ್ಪು’ ಎಂದು ಸಂಭೋಧಿಸಿದರು. ಬಳಿಕ, ಕ್ಷಮಿಸಿ, ದರ್ಶನ್ ಅವರನ್ನು ಅವರ ಮನೆಯಲ್ಲಿ ಅವರ ತಾಯಿ, ಸಹೋದರಿ ಎಲ್ಲ ಅಪ್ಪು ಎಂದೇ ಕರೆಯುವುದು ಹಾಗಾಗಿ ನನಗೂ ದರ್ಶನ್ ಅನ್ನು ಅಪ್ಪು ಎಂದು ಕರೆದೇ ಅಭ್ಯಾಸ, ನಾನು ಅವರನ್ನು ಅಪ್ಪು ಎಂದೇ ಕರೆಯುವುದು ಎಂದರು.

ಇದನ್ನೂ ಓದಿ:‘ದರ್ಶನ್​ ಬಳಿ ಕೇಳೋಕೆ ನನ್ನಲ್ಲಿ ಕೆಲವು ಪ್ರಶ್ನೆಗಳಿವೆ’; ಗೊಂದಲದ ಬಗ್ಗೆ ಧ್ರುವ ಸರ್ಜಾ ಮಾತು 

ದರ್ಶನ್ ಬಂದಿದ್ದು ನನಗೆ ಬಹಳ ಖುಷಿಯಾಯಿತು. ಒಳ್ಳೆಯ ಮನಸ್ಸುಗಳು ಒಟ್ಟಿಗೆ ಸೇರಿದಾಗ ಗೆಲುವು ಶತಸಿದ್ಧ. ನೀನು ಇಂದು ಬಂದು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿರುವುದಕ್ಕೆ ವೈಯಕ್ತಿಕವಾಗಿ ಹಾಗೂ ಸಿನಿಮಾ ತಂಡದ ಭಾಗವಾಗಿ ನಾನು ಧನ್ಯವಾದ ತಿಳಿಸುತ್ತೀನಿ ಎಂದ ತಾರಾ ಚಿತ್ರತಂಡದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು.

ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್ ಚಿತ್ರತಂಡದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು. ಸಿನಿಮಾದ ನಾಯಕ ನಾಗಭೂಷಣ್, ನಿರ್ಮಾಪಕ ಡಾಲಿ ಧನಂಜಯ್, ನಾಯಕಿ ಪ್ರೇಮ್ ಪುತ್ರಿ ಅಮೃತಾ, ನಿರ್ದೇಶಕ ಉಮೇಶ್ ಇನ್ನೂ ಹಲವರಿಗೆ ವೈಯಕ್ತಿಕವಾಗಿ ವಿಷ್ ಮಾಡಿದ ನಟ ದರ್ಶನ್ ಈ ಸಿನಿಮಾ ದೊಡ್ಡ ಹಿಟ್ ಆಗಲೆಂದು ಶುಭ ಹಾರೈಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..