ಮನೆಯಲ್ಲಿ ದರ್ಶನ್ ಅನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತೆ?

Darshan: ನಟ ದರ್ಶನ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ 'ಡಿ ಬಾಸ್' ಎನ್ನುತ್ತಾರೆ. ಗೆಳೆಯರು ದಚ್ಚು ಎನ್ನುತ್ತಾರೆ. ಕೆಲವರು ಲಂಬು ಎಂದೂ ಕರೆಯುತ್ತಾರೆ. ಆದರೆ ಮನೆಯಲ್ಲಿ ದರ್ಶನ್​ರ ತಾಯಿ, ಸಹೋದರಿ ಅವರನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತೆ?

ಮನೆಯಲ್ಲಿ ದರ್ಶನ್ ಅನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತೆ?
Follow us
|

Updated on: Oct 18, 2023 | 10:05 PM

ದರ್ಶನ್​ ತೂಗುದೀಪ (Darshan) ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ಡಿ-ಬಾಸ್’ ಎನ್ನುತ್ತಾರೆ. ಆತ್ಮೀಯ ಗೆಳೆಯರು ದಚ್ಚು ಎನ್ನುತ್ತಾರೆ. ಲಂಬು ಎಂದು ಕರೆಯುವ ಕೆಲವು ಗೆಳೆಯರೂ ದರ್ಶನ್ ಅವರಿಗಿದ್ದಾರೆ. ಆದರೆ ದರ್ಶನ್ ಅವರನ್ನು ಅವರ ತಾಯಿ ಮೀನಾ ಹಾಗೂ ಅವರ ಸಹೋದರಿ ಏನೆಂದು ಕರೆಯುತ್ತಾರೆ ಗೊತ್ತೆ? ಇಂದು ‘ಟಗರು ಪಲ್ಯ’ ಸಿನಿಮಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ ತಾರಾ ಈ ವಿಷಯ ಹಂಚಿಕೊಂಡಿದ್ದಾರೆ.

ವೇದಿಕೆ ಮೇಲೆ ‘ಟಗರು ಪಲ್ಯ’ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದ ನಟಿ ತಾರಾ, ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ದರ್ಶನ್ ಅವರನ್ನು ‘ಅಪ್ಪು’ ಎಂದು ಸಂಭೋಧಿಸಿದರು. ಬಳಿಕ, ಕ್ಷಮಿಸಿ, ದರ್ಶನ್ ಅವರನ್ನು ಅವರ ಮನೆಯಲ್ಲಿ ಅವರ ತಾಯಿ, ಸಹೋದರಿ ಎಲ್ಲ ಅಪ್ಪು ಎಂದೇ ಕರೆಯುವುದು ಹಾಗಾಗಿ ನನಗೂ ದರ್ಶನ್ ಅನ್ನು ಅಪ್ಪು ಎಂದು ಕರೆದೇ ಅಭ್ಯಾಸ, ನಾನು ಅವರನ್ನು ಅಪ್ಪು ಎಂದೇ ಕರೆಯುವುದು ಎಂದರು.

ಇದನ್ನೂ ಓದಿ:‘ದರ್ಶನ್​ ಬಳಿ ಕೇಳೋಕೆ ನನ್ನಲ್ಲಿ ಕೆಲವು ಪ್ರಶ್ನೆಗಳಿವೆ’; ಗೊಂದಲದ ಬಗ್ಗೆ ಧ್ರುವ ಸರ್ಜಾ ಮಾತು 

ದರ್ಶನ್ ಬಂದಿದ್ದು ನನಗೆ ಬಹಳ ಖುಷಿಯಾಯಿತು. ಒಳ್ಳೆಯ ಮನಸ್ಸುಗಳು ಒಟ್ಟಿಗೆ ಸೇರಿದಾಗ ಗೆಲುವು ಶತಸಿದ್ಧ. ನೀನು ಇಂದು ಬಂದು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿರುವುದಕ್ಕೆ ವೈಯಕ್ತಿಕವಾಗಿ ಹಾಗೂ ಸಿನಿಮಾ ತಂಡದ ಭಾಗವಾಗಿ ನಾನು ಧನ್ಯವಾದ ತಿಳಿಸುತ್ತೀನಿ ಎಂದ ತಾರಾ ಚಿತ್ರತಂಡದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು.

ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್ ಚಿತ್ರತಂಡದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು. ಸಿನಿಮಾದ ನಾಯಕ ನಾಗಭೂಷಣ್, ನಿರ್ಮಾಪಕ ಡಾಲಿ ಧನಂಜಯ್, ನಾಯಕಿ ಪ್ರೇಮ್ ಪುತ್ರಿ ಅಮೃತಾ, ನಿರ್ದೇಶಕ ಉಮೇಶ್ ಇನ್ನೂ ಹಲವರಿಗೆ ವೈಯಕ್ತಿಕವಾಗಿ ವಿಷ್ ಮಾಡಿದ ನಟ ದರ್ಶನ್ ಈ ಸಿನಿಮಾ ದೊಡ್ಡ ಹಿಟ್ ಆಗಲೆಂದು ಶುಭ ಹಾರೈಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ