‘ರಾಬರ್ಟ್​’ನಲ್ಲಿ ದರ್ಶನ್​ ಖಡಕ್​ ಆಗಿ ಹೇಳಿದ ‘ಏ ತುಕಾಲಿ…’ ಡೈಲಾಗ್​ನ ಹಿಂದಿದೆ ಇಂಟರೆಸ್ಟಿಂಗ್​ ವಿಷ್ಯ!

ದರ್ಶನ್​ ನಟನೆಯ ‘ರಾಬರ್ಟ್​’ ಸಿನಿಮಾ ರಿಲೀಸ್​ಗೂ ಮುನ್ನ ಹಲವು ವಿಚಾರಗಳಲ್ಲಿ ಹೈಪ್​ ಸೃಷ್ಟಿಸಿದೆ. ಡೈಲಾಗ್​ಗಳು ಕೂಡ ಚಿತ್ರದ ಮೇಲಿನ ನಿರೀಕ್ಷೆಯಲ್ಲಿ ಹೆಚ್ಚಿಸಿವೆ.

‘ರಾಬರ್ಟ್​’ನಲ್ಲಿ ದರ್ಶನ್​ ಖಡಕ್​ ಆಗಿ ಹೇಳಿದ ‘ಏ ತುಕಾಲಿ...’ ಡೈಲಾಗ್​ನ ಹಿಂದಿದೆ ಇಂಟರೆಸ್ಟಿಂಗ್​ ವಿಷ್ಯ!
ರಾಬರ್ಟ್​ ಸಿನಿಮಾದಲ್ಲಿ ದರ್ಶನ್​
Edited By: ಆಯೇಷಾ ಬಾನು

Updated on: Mar 09, 2021 | 8:23 AM

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರ ‘ರಾಬರ್ಟ್​’ ಚಿತ್ರದ ಟ್ರೇಲರ್​ ಬಿಡುಗಡೆಯಾದಾಗ ಸಂಭಾಷಣೆಗಳು ಹೆಚ್ಚು ಗಮನ ಸೆಳೆದವು. ರಾಜಶೇಖರ್​ ಮತ್ತು ಚಂದ್ರಮೌಳಿ ಜೊತೆಯಾಗಿ ಈ ಚಿತ್ರಕ್ಕೆ ಡೈಲಾಗ್​ ಬರೆದಿದ್ದಾರೆ. ‘ಏ ತುಕಾಲಿ… ನೀನು ಮಾಸ್​ ಆದ್ರೆ ನಾನು ಆ ಮಾಸ್​ಗೆ ಬಾಸ್​…’ ಎಂಬ ಡೈಲಾಗ್​ ಕೇಳಿ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ. ಅದರ ಹಿಂದೆ ಒಂದು ಇಂಟರೆಸ್ಟಿಂಗ್​ ವಿಷಯ ಇದೆ.

ಆರಂಭದಲ್ಲಿ ‘ತುಕಾಲಿ’ ಎಂಬ ಪದವೇ ಆ ಡೈಲಾಗ್​ನಲ್ಲಿ ಇರಲಿಲ್ಲ. ಅದನ್ನು ಶೂಟಿಂಗ್​ ಸ್ಪಾಟ್​ನಲ್ಲಿ ಸೇರಿಸಲಾಯಿತು ಎಂಬ ವಿಚಾರವನ್ನು ಸಂಭಾಷಣೆಕಾರ ರಾಜಶೇಖರ್​ ಹೇಳಿದ್ದಾರೆ. ‘ಏ ತುಕಾಲಿ ಎಂಬುದು ಈಗ ದೊಡ್ಡ ಹಿಟ್​ ಆಗಿದೆ. ಅದು ಸ್ಪಾಟ್​ನಲ್ಲಿ ಹುಟ್ಟಿಕೊಂಡ ಡೈಲಾಗ್​. ಆ ದೃಶ್ಯದ ಶೂಟಿಂಗ್​ ನಡೆಯುತ್ತಿರುವಾಗ ನಿರ್ದೇಶಕ ತರುಣ್​ ಸುಧೀರ್​ ನನಗೆ ಫೋನ್​ ಮಾಡಿ ಅರ್ಧ ಗಂಟೆಯಲ್ಲಿ ಚಿತ್ರೀಕರಣದ ಸ್ಥಳಕ್ಕೆ ಬರುವಂತೆ ಸೂಚಿಸಿದರು. ಈ ಜಾಗದಲ್ಲಿ ಖಡಕ್​ ಫೀಲ್​ ಇರುವ ಡೈಲಾಗ್​ ಬೇಕು ಎಂದರು’ ಎಂದು ಆ ದಿನದ ಘಟನೆಯನ್ನು ವಿವರಿಸುತ್ತಾರೆ ರಾಜಶೇಖರ್​.

ರಾಜಶೇಖರ್​ ಅವರು ಚಿತ್ರೀಕರಣದ ಸ್ಥಳದಲ್ಲೇ ‘ಏ ತಗಡು… ನೀನು ಮಾಸ್​ ಆದ್ರೆ ನಾನು ಆ ಮಾಸ್​ಗೆ ಬಾಸ್​’ ಎಂದು ಬರೆದರು. ಅದನ್ನು ನಿರ್ದೇಶಕ ತರುಣ್ ಸುಧೀರ್​ ಸ್ವಲ್ಪ ಬದಲಾಯಿಸಿದರು. ‘ತಗಡು’ ಎಂಬುದಕ್ಕಿಂತಲೂ ‘ತುಕಾಲಿ’ ಪದದ ಸೌಂಡಿಂಗ್​ ಚೆನ್ನಾಗಿದೆ ಅಂತ ಚೇಂಜ್​ ಮಾಡಿದರು ಎಂಬ ಮಾಹಿತಿಯನ್ನು ರಾಜಶೇಖರ್​ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಇರುವ ಇನ್ನಷ್ಟು ಪಂಚಿಂಗ್​ ಡೈಲಾಗ್​ಗಳನ್ನು ಕೇಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

‘ಮಜಾ ಟಾಕೀಸ್​’ನಲ್ಲಿ ಡೈಲಾಗ್​ ಬರೆದು ಅನುಭವ ಹೊಂದಿದ್ದ ರಾಜಶೇಖರ್​ ಅವರಿಗೆ ರಾಬರ್ಟ್​ ಸಿನಿಮಾಗೆ ಸಂಭಾಷಣೆ ಬರೆಯುವ ಅವಕಾಶ ಸಿಕ್ಕಿತು. ‘ಇದು ನನ್ನ ವೃತ್ತಿಜೀವನದಲ್ಲಿ ಸಿಕ್ಕಿರುವ ಸುವರ್ಣಾವಕಾಶ. ಎಲ್ಲರಿಗೂ ಈ ಚಾನ್ಸ್​ ಸಿಗುವುದಿಲ್ಲ. ಅದಕ್ಕೆ ನಾನು ತರುಣ್​ ಸುಧೀರ್​ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಅವರಿಗೆ ಧನ್ಯವಾದ ಹೇಳಲೇಬೇಕು. ದರ್ಶನ್​ ಅವರಿಗೆ ಡೈಲಾಗ್​ ಬರೆಯುವುದು ತುಂಬ ಚಾಲೆಂಜಿಂಗ್​ ವಿಷಯ. ತುಂಬ ಕೇರ್​ಫುಲ್​ ಆಗಿ ಬರೆಯಬೇಕು’ ಎಂದಿದ್ದಾರೆ ರಾಜಶೇಖರ್​

ಇದನ್ನೂ ಓದಿ: Roberrt Movie: ದರ್ಶನ್​ ಕಟೌಟ್​ಗೆ ಹಾಲಿನ ಅಭಿಷೇಕ; ಶುರುವಾಯ್ತು ರಾಬರ್ಟ್​ ಸಿನಿಮಾ ಜ್ವರ

Roberrt vs Kotigobba 3: ಸಿನಿಮಾಗಳ ರಿಲೀಸ್​ಗೂ ಮುನ್ನ ಇನ್ನೊಂದು ರೀತಿಯಲ್ಲಿ ದರ್ಶನ್​-ಸುದೀಪ್​ ಪೈಪೋಟಿ!

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us