‘ಅದಕ್ಕೆ ದೊಡ್ಡೋರು ಅನ್ನೋದು’; ಸುದೀಪ್ ಬಗ್ಗೆ ಧನ್ವೀರ್ ಮೆಚ್ಚುಗೆ

ನಟ ಸುದೀಪ್ ಅವರು ದರ್ಶನ್ ಆಪ್ತ ಧನ್ವೀರ್ ನೀಯತ್ತನ್ನು ಮೆಚ್ಚಿ ಮಾತನಾಡಿದ್ದರು. ಇದು ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ದರ್ಶನ್ ಬಗ್ಗೆ ಸುದೀಪ್‌ಗೆ ಗೌರವವಿದ್ದರೂ, ಇಬ್ಬರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಘರ್ಷಣೆಗಳು ನಡೆಯುತ್ತವೆ. ಇತ್ತೀಚೆಗೆ ಧನ್ವೀರ್ ಮಾತನಾಡಿದ್ದು, ಸುದೀಪ್ ಅವರನ್ನು ದೊಡ್ಡವರ ಮಾತು ಎಂದು ಶ್ಲಾಘಿಸಿದ್ದಾರೆ.

‘ಅದಕ್ಕೆ ದೊಡ್ಡೋರು ಅನ್ನೋದು’; ಸುದೀಪ್ ಬಗ್ಗೆ ಧನ್ವೀರ್ ಮೆಚ್ಚುಗೆ
ಧನ್ವೀರ್-ಸುದೀಪ್

Updated on: Feb 09, 2026 | 7:59 AM

ಚಿತ್ರರಂಗ ಒಟ್ಟಾಗಿ ಸಾಗಬೇಕು ಎಂಬುದು ಅನೇಕರ ಕೋರಿಕೆ. ಆದರೆ, ಇದಕ್ಕೆ ಪ್ರತಿಕೂಲವಾಗಿ ಘಟನೆಗಳು ನಡೆದಿದ್ದೇ ಹೆಚ್ಚು. ದರ್ಶನ್ ಬಗ್ಗೆ ಸುದೀಪ್ ಅವರು ಸದಾ ಮೆಚ್ಚುಗೆ ಸೂಚಿಸಿ ಮಾತನಾಡುತ್ತಾರೆ. ಆದರೆ, ಇಬ್ಬರ ಅಭಿಮಾನಿಗಳ ಮಧ್ಯೆ ಆಗಾಗ ಕಿರಿಕ್​​ಗಳು ಆಗುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಳ್ಳುತ್ತಾರೆ. ಇತ್ತೀಚೆಗೆ ಮಾತನಾಡಿದ್ದ ಸುದೀಪ್ (Sudeep) ಅವರು, ದರ್ಶನ್ ಆಪ್ತ ಧನ್ವೀರ್ ಬಗ್ಗೆ ಮಾತನಾಡಿದ್ದರು. ಈ ವಿಷಯಕ್ಕೆ ಧನ್ವೀರ್ ಪ್ರತಿಕ್ರಿಯೆ ನೀಡಿದ್ದಾರೆ.

ವಿನಯ್ ಹಾಗೂ ಧನ್ವೀರ್ ಪೋಸ್ಟ್ ಹಾಕಿಕೊಂಡು ಕಿರಿಕ್ ಮಾಡಿಕೊಂಡ ಬಗ್ಗೆ ಸುದೀಪ್ ಮಾತನಾಡಿದ್ದರು. ‘ನನಗೆ ಧನ್ವೀರ್ ಹಾಗೂ ವಿನಯ್ ಇಬ್ಬರೂ ಒಂದೇ. ಅವರಿಬ್ಬರೂ ಚಿತ್ರರಂಗದ ಯಂಗ್​ಸ್ಟರ್ಸ್​. ಧನ್ವೀರ್​​ನ ನಾನು ನೋಡಿದ್ದೇನೆ. ಅವರು ಆ ಹೀರೋ ಜೊತೆ ಓಡಾಡೋದು ನೋಡಿದ್ದೇನೆ. ಏನೇ ಆದರೂ ಆ ಹೀರೋ ಜೊತೆ ನಿಲ್ಲುತ್ತೇನೆ ಎಂಬ ನೀಯತ್ತು ಇದೆಯಲ್ಲ ಅದು ಬೇಕು’ ಎಂದಿದ್ದರು ಕಿಚ್ಚ.

ಈ ವಿಷಯವಾಗಿ ಧನ್ವೀರ್ ಮಾತನಾಡಿದ್ದಾರೆ. ಬಾಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಊ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ನಾನು ಆ ವಿಡಿಯೋ ನೋಡಿದೆ. ದೊಡ್ಡವರು ಎಂಬುದು ಹೇಳೋದು ಇದಕ್ಕೆ. ಅವರಿಗೆ ಎಲ್ಲವೂ ಗೊತ್ತಿರುತ್ತದೆ. ಅದಕ್ಕೆ ಅವರು ದೊಡ್ಡ ಮಾತು ಆಡ್ತಾರೆ’ ಎಂದರು ಧನ್ವೀರ್.

ಇದೇ ವೇಳೆ ವಿನಯ್ ಗೌಡಗೆ ಟಾಂಗ್ ಕೂಡ ಕೊಟ್ಟಿದ್ದಾರೆ. ‘ಆಗದೆ ಇದ್ದವರು ಎಲ್ಲೋ ಕುಳಿತುಕೊಂಡು ಮಾತನಾಡ್ತಾರೆ’ ಎಂದಿದ್ದಾರೆ. ‘ದೊಡ್ಡವರು ಮಾತನಾಡೋದು ಕೇಳಿ ನಮಗೆ ಖುಷಿ ಆಯ್ತು’ ಎಂದು ಧನ್ವೀರ್ ಹೇಳಿದ್ದಾರೆ.

ಇದನ್ನೂ ಓದಿ: ಕನಕಪುರ ಶ್ರೀನಿವಾಸ್ ಅಶ್ಲೀಲ ಮಾತಿಗೆ ಕಿಚ್ಚ ಸುದೀಪ್ ಖಡಕ್ ರಿಯಾಕ್ಷನ್

ಸುದೀಪ್​​ಗೆ ಅನೇಕ ಯುವ ಹೀರೋಗಳು ನೀಯತ್ತು ತೋರಿಸುತ್ತಾರೆ. ಈ ನೀಯತ್ತು ಸುದೀಪ್​​ಗೆ ಇಷ್ಟ. ಬೇರೆ ನಟರಿಗೂ ಯುವ ಹೀರೋಗಳು ನೀಯತ್ತು ತೋರಿಸುತ್ತಾರೆ ಎಂದರೆ ಅದು ಹೆಮ್ಮೆ ಪಡೋ ವಿಷಯವೇ ಸರಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us