AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು

DK Shivakumar: ಕರ್ನಾಟಕ ರಾಜ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಚಿತ್ರರಂಗದೊಂದಿಗೆ ಹತ್ತಿರದ ಬಂಧವಿದೆ. ಈ ಹಿಂದೆ ಅವರು ಕೆಲವು ಚಿತ್ರಮಂದಿರಗಳ ಮಾಲೀಕರಾಗಿದ್ದರು. ಊರಿನಲ್ಲಿ ಟೂರಿಂಗ್ ಟಾಕೀಸ್ ಸಹ ನಡೆಸುತ್ತಿದ್ದರು. ಈಗಲೂ ಸಹ ಡಿಕೆ ಶಿವಕುಮಾರ್, 23 ಸಿನಿಮಾ ಸ್ಕ್ರೀನ್​ಗಳ ಮಾಲೀಕ. ಸಿನಿಮಾ ರಂಗದೊಟ್ಟಿಗಿನ ತಮ್ಮ ಬಂಧವನ್ನು ಡಿಕೆ ಶಿವಕುಮಾರ್ ನೆನಪು ಮಾಡಿಕೊಂಡಿದ್ದಾರೆ.

4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Dk Shivakumar1
ಮಂಜುನಾಥ ಸಿ.
|

Updated on: Mar 01, 2025 | 10:03 PM

Share

ರಾಜಕಾರಣಕ್ಕೂ ಸಿನಿಮಾ ರಂಗಕ್ಕೂ ಬಲು ಹತ್ತಿರದ ನಂಟು. ಕೆಲವು ರಾಜಕಾರಣಿಗಳು ಸಿನಿಮಾ ರಂಗದಲ್ಲಿಯೂ ಸಕ್ರಿಯರಾಗಿದ್ದಾರೆ. ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈಗಲೂ ಸಹ ಚಿತ್ರರಂಗದೊಂದಿಗೆ ನಂಟು ಹೊಂದಿದ್ದಾರೆ. ಮಾತ್ರವಲ್ಲದೆ ಡಿಕೆ ಶಿವಕುಮಾರ್ ಅವರಿಗೂ ಚಿತ್ರರಂಗಕ್ಕೂ ಇರುವ ನಂಟು ಬಹಳ ಹಳೆಯದು. ಡಿಕೆ ಶಿವಕುಮಾರ್ ರಾಜಕಾರಣಿ ಆಗುವ ಮುಂಚೆಯೇ ಅವರು ಚಿತ್ರರಂಗದೊಟ್ಟಿಗೆ ನಂಟು ಹೊಂದಿದ್ದರು. ಇಂದು (ಮಾರ್ಚ್ 1) ವಿಧಾನಸೌಧದ ಆವರಣದಲ್ಲಿ ನಡೆದ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಳೆಯ ನೆನಪುಗಳನ್ನು ಡಿಕೆ ಶಿವಕುಮಾರ್ ಮೆಲುಕು ಹಾಕಿದರು.

ತಾವು ಸಿನಿಮಾ ಪ್ರದರ್ಶಕನಾಗಿ ಚಿತ್ರರಂಗದೊಟ್ಟಿಗೆ ನಂಟು ಬೆಳೆಸಿಕೊಂಡಿದ್ದಾಗಿ ನೆನಪು ಮಾಡಿಕೊಂಡ ಡಿಕೆ ಶಿವಕುಮಾರ್, ‘ನಾನು ಸಿನಿಮಾ ಪ್ರದರ್ಶಕನಾಗಿದ್ದೆ, ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಚಿತ್ರಮಂದಿರ ಇತ್ತು, ಒಟ್ಟಿಗೆ ನಾಲ್ಕು ಚಿತ್ರಮಂದಿರ ನಡೆಸುತ್ತಿದ್ದೆ, ಟೂರಿಂಗ್ ಟಾಕೀಸ್ ಸಹ ನಡೆಸಿದ್ದೆ. ಆ ನಂತರ ಎಲ್ಲ ಬಿಟ್ಟುಬಿಟ್ಟೆ’ ಎಂದರು ಡಿಕೆ ಶಿವಕುಮಾರ್. ‘ಈಗ 23 ಸಿನಿಮಾ ಸ್ಕ್ರೀನ್​ಗಳು ಇವೆ. ಆದರೆ ಒಂದು ಸ್ಕ್ರೀನ್​ನಲ್ಲೂ ಸಹ ಆರಾಮವಾಗಿ ಕೂತು ಒಂದು ಸಿನಿಮಾ ನೋಡುವಷ್ಟೆ ಸಮಯ ಸಿಗುತ್ತಿಲ್ಲ’ ಎಂದು ಬೇಸರದಿಂದ ನುಡಿದರು.

ಬೇಕಾದಷ್ಟು ರಾಜಕಾರಣಿಳಿಗೆ ಚಿತ್ರರಂಗಕ್ಕೆ ಹತ್ತಿರದ ನಂಟು ಇದೆ. ಎಷ್ಟೋ ಮಂದಿ ರಾಜಕಾರಣಿಗಳು ತಮ್ಮ ಮಕ್ಕಳನ್ನು ಸಿನಿಮಾ ನಟರನ್ನಾಗಿಸಿ ಪ್ರಚಾರ ಕೊಡಿಸಿ ಆ ನಂತರ ರಾಜಕಾರಣಿಗಳನ್ನಾಗಿ ಮಾಡುತ್ತಿದ್ದಾರೆ. ಕೆಲವರು ಯಶಸ್ವಿಯಾಗಿದ್ದಾರೆ, ಕೆಲವರು ವಿಫಲರಾಗಿದ್ದಾರೆ ಎಂದು ಕೆಲ ರಾಜಕಾರಣಿಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಮಾತು ಮುಂದುವರೆಸಿ, ನೀವೆಲ್ಲ ಬಣ್ಣ ಹಾಕಿಕೊಂಡು ನಾಟಕ ಮಾಡುತ್ತೀರಿ, ನಾವು ಬಣ್ಣ ಹಾಕಿಕೊಳ್ಳದೆ ದಿನಾ ಸಿನಿಮಾ ಮಾಡುತ್ತಿದ್ದೀವಿ’ ಎಂದರು ಉಪ ಮುಖ್ಯಮಂತ್ರಿ.

ಇದನ್ನೂ ಓದಿ:‘ನಿಮ್ಮ ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆ ಶಿವಕುಮಾರ್

ತಮ್ಮ ಸಿನಿಮಾ ಪ್ರೇಮದ ಬಗ್ಗೆಯೂ ಮಾತನಾಡಿದ ಡಿಕೆ ಶಿವಕುಮಾರ್, ಡಾ ರಾಜ್​ಕುಮಾರ್ ನಟನೆಯ ‘ಸತ್ಯಹರೀಶ್ಚಂದ್ರ’ ಸಿನಿಮಾವನ್ನು ಹಲವು ಭಾರಿ ನೋಡಿದ್ದಾಗಿ ಹೇಳಿದರು. ‘ನಾನು ಟೂರಿಂಗ್ ಟಾಕೀಸ್ ನಡೆಸುವಾಗ, ಗಾಂಧಿ ನಗರಕ್ಕೆ ಹೋಗಿ ನಾನು ಸಿನಿಮಾ ನೋಡಿಯೇ ಆ ನಂತರ ಡಬ್ಬಾ ತೆಗೆದುಕೊಂಡು ಹೋಗಿ ಊರಿನಲ್ಲಿ ಸಿನಿಮಾ ಹಾಕುತ್ತಿದ್ದೆ. ರಾಜ್​ಕುಮಾರ್ ಅವರ ಸತ್ಯ ಹರೀಶ್ಚಂದ್ರ ಸಿನಿಮಾವನ್ನು 14-15 ಬಾರಿ ನೋಡಿದ್ದೀನಿ. ಮದುವೆ ಆದ ಮೇಲೆ ಮೈಸೂರಿಗೆ ಹೆಂಡತಿಯನ್ನು ಕರೆದುಕೊಂಡು ಹೋಗಿ ‘ಸತ್ಯ ಹರೀಶ್ಚಂದ್ರ’ ಸಿನಿಮಾ ತೋರಿಸಿದ್ದೆ’ ಎಂದು ಡಿಕೆಶಿ ನೆನಪು ಮಾಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ