Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು

DK Shivakumar: ಕರ್ನಾಟಕ ರಾಜ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಚಿತ್ರರಂಗದೊಂದಿಗೆ ಹತ್ತಿರದ ಬಂಧವಿದೆ. ಈ ಹಿಂದೆ ಅವರು ಕೆಲವು ಚಿತ್ರಮಂದಿರಗಳ ಮಾಲೀಕರಾಗಿದ್ದರು. ಊರಿನಲ್ಲಿ ಟೂರಿಂಗ್ ಟಾಕೀಸ್ ಸಹ ನಡೆಸುತ್ತಿದ್ದರು. ಈಗಲೂ ಸಹ ಡಿಕೆ ಶಿವಕುಮಾರ್, 23 ಸಿನಿಮಾ ಸ್ಕ್ರೀನ್​ಗಳ ಮಾಲೀಕ. ಸಿನಿಮಾ ರಂಗದೊಟ್ಟಿಗಿನ ತಮ್ಮ ಬಂಧವನ್ನು ಡಿಕೆ ಶಿವಕುಮಾರ್ ನೆನಪು ಮಾಡಿಕೊಂಡಿದ್ದಾರೆ.

4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Dk Shivakumar1
Follow us
ಮಂಜುನಾಥ ಸಿ.
|

Updated on: Mar 01, 2025 | 10:03 PM

ರಾಜಕಾರಣಕ್ಕೂ ಸಿನಿಮಾ ರಂಗಕ್ಕೂ ಬಲು ಹತ್ತಿರದ ನಂಟು. ಕೆಲವು ರಾಜಕಾರಣಿಗಳು ಸಿನಿಮಾ ರಂಗದಲ್ಲಿಯೂ ಸಕ್ರಿಯರಾಗಿದ್ದಾರೆ. ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈಗಲೂ ಸಹ ಚಿತ್ರರಂಗದೊಂದಿಗೆ ನಂಟು ಹೊಂದಿದ್ದಾರೆ. ಮಾತ್ರವಲ್ಲದೆ ಡಿಕೆ ಶಿವಕುಮಾರ್ ಅವರಿಗೂ ಚಿತ್ರರಂಗಕ್ಕೂ ಇರುವ ನಂಟು ಬಹಳ ಹಳೆಯದು. ಡಿಕೆ ಶಿವಕುಮಾರ್ ರಾಜಕಾರಣಿ ಆಗುವ ಮುಂಚೆಯೇ ಅವರು ಚಿತ್ರರಂಗದೊಟ್ಟಿಗೆ ನಂಟು ಹೊಂದಿದ್ದರು. ಇಂದು (ಮಾರ್ಚ್ 1) ವಿಧಾನಸೌಧದ ಆವರಣದಲ್ಲಿ ನಡೆದ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಳೆಯ ನೆನಪುಗಳನ್ನು ಡಿಕೆ ಶಿವಕುಮಾರ್ ಮೆಲುಕು ಹಾಕಿದರು.

ತಾವು ಸಿನಿಮಾ ಪ್ರದರ್ಶಕನಾಗಿ ಚಿತ್ರರಂಗದೊಟ್ಟಿಗೆ ನಂಟು ಬೆಳೆಸಿಕೊಂಡಿದ್ದಾಗಿ ನೆನಪು ಮಾಡಿಕೊಂಡ ಡಿಕೆ ಶಿವಕುಮಾರ್, ‘ನಾನು ಸಿನಿಮಾ ಪ್ರದರ್ಶಕನಾಗಿದ್ದೆ, ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಚಿತ್ರಮಂದಿರ ಇತ್ತು, ಒಟ್ಟಿಗೆ ನಾಲ್ಕು ಚಿತ್ರಮಂದಿರ ನಡೆಸುತ್ತಿದ್ದೆ, ಟೂರಿಂಗ್ ಟಾಕೀಸ್ ಸಹ ನಡೆಸಿದ್ದೆ. ಆ ನಂತರ ಎಲ್ಲ ಬಿಟ್ಟುಬಿಟ್ಟೆ’ ಎಂದರು ಡಿಕೆ ಶಿವಕುಮಾರ್. ‘ಈಗ 23 ಸಿನಿಮಾ ಸ್ಕ್ರೀನ್​ಗಳು ಇವೆ. ಆದರೆ ಒಂದು ಸ್ಕ್ರೀನ್​ನಲ್ಲೂ ಸಹ ಆರಾಮವಾಗಿ ಕೂತು ಒಂದು ಸಿನಿಮಾ ನೋಡುವಷ್ಟೆ ಸಮಯ ಸಿಗುತ್ತಿಲ್ಲ’ ಎಂದು ಬೇಸರದಿಂದ ನುಡಿದರು.

ಬೇಕಾದಷ್ಟು ರಾಜಕಾರಣಿಳಿಗೆ ಚಿತ್ರರಂಗಕ್ಕೆ ಹತ್ತಿರದ ನಂಟು ಇದೆ. ಎಷ್ಟೋ ಮಂದಿ ರಾಜಕಾರಣಿಗಳು ತಮ್ಮ ಮಕ್ಕಳನ್ನು ಸಿನಿಮಾ ನಟರನ್ನಾಗಿಸಿ ಪ್ರಚಾರ ಕೊಡಿಸಿ ಆ ನಂತರ ರಾಜಕಾರಣಿಗಳನ್ನಾಗಿ ಮಾಡುತ್ತಿದ್ದಾರೆ. ಕೆಲವರು ಯಶಸ್ವಿಯಾಗಿದ್ದಾರೆ, ಕೆಲವರು ವಿಫಲರಾಗಿದ್ದಾರೆ ಎಂದು ಕೆಲ ರಾಜಕಾರಣಿಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಮಾತು ಮುಂದುವರೆಸಿ, ನೀವೆಲ್ಲ ಬಣ್ಣ ಹಾಕಿಕೊಂಡು ನಾಟಕ ಮಾಡುತ್ತೀರಿ, ನಾವು ಬಣ್ಣ ಹಾಕಿಕೊಳ್ಳದೆ ದಿನಾ ಸಿನಿಮಾ ಮಾಡುತ್ತಿದ್ದೀವಿ’ ಎಂದರು ಉಪ ಮುಖ್ಯಮಂತ್ರಿ.

ಇದನ್ನೂ ಓದಿ:‘ನಿಮ್ಮ ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆ ಶಿವಕುಮಾರ್

ತಮ್ಮ ಸಿನಿಮಾ ಪ್ರೇಮದ ಬಗ್ಗೆಯೂ ಮಾತನಾಡಿದ ಡಿಕೆ ಶಿವಕುಮಾರ್, ಡಾ ರಾಜ್​ಕುಮಾರ್ ನಟನೆಯ ‘ಸತ್ಯಹರೀಶ್ಚಂದ್ರ’ ಸಿನಿಮಾವನ್ನು ಹಲವು ಭಾರಿ ನೋಡಿದ್ದಾಗಿ ಹೇಳಿದರು. ‘ನಾನು ಟೂರಿಂಗ್ ಟಾಕೀಸ್ ನಡೆಸುವಾಗ, ಗಾಂಧಿ ನಗರಕ್ಕೆ ಹೋಗಿ ನಾನು ಸಿನಿಮಾ ನೋಡಿಯೇ ಆ ನಂತರ ಡಬ್ಬಾ ತೆಗೆದುಕೊಂಡು ಹೋಗಿ ಊರಿನಲ್ಲಿ ಸಿನಿಮಾ ಹಾಕುತ್ತಿದ್ದೆ. ರಾಜ್​ಕುಮಾರ್ ಅವರ ಸತ್ಯ ಹರೀಶ್ಚಂದ್ರ ಸಿನಿಮಾವನ್ನು 14-15 ಬಾರಿ ನೋಡಿದ್ದೀನಿ. ಮದುವೆ ಆದ ಮೇಲೆ ಮೈಸೂರಿಗೆ ಹೆಂಡತಿಯನ್ನು ಕರೆದುಕೊಂಡು ಹೋಗಿ ‘ಸತ್ಯ ಹರೀಶ್ಚಂದ್ರ’ ಸಿನಿಮಾ ತೋರಿಸಿದ್ದೆ’ ಎಂದು ಡಿಕೆಶಿ ನೆನಪು ಮಾಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ