AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dr. Rajkumar: ವಿಶೇಷ ಸಿಹಿ ತಿನಿಸಿಗೆ ರಾಜ್​ ಲಡ್ಡು ಎಂದು ಅಣ್ಣಾವ್ರ ಹೆಸರು ಇಟ್ಟಿದ್ದಕ್ಕೆ ಇಲ್ಲಿದೆ ಇಂಟರೆಸ್ಟಿಂಗ್​ ಕಾರಣ

Dr Rajkumar Birth Anniversary 2006ರ ಜೂನ್ ತಿಂಗಳಲ್ಲಿ ರಾಜ್​ಕುಮಾರ್​ ಅವರ ಹೆಸರಿನಲ್ಲಿ ಒಂದು ಸ್ವೀಟ್​ ತಯಾರಿಸಬೇಕು ಎಂಬ ಆಲೋಚನೆ ಸದಾಶಿವ ರಾವ್​ ಅವರಿಗೆ ಬಂತು. ಆಗ ತಯಾರಾಗಿದ್ದೇ ರಾಜ್​ ಲಡ್ಡು.

Dr. Rajkumar: ವಿಶೇಷ ಸಿಹಿ ತಿನಿಸಿಗೆ ರಾಜ್​ ಲಡ್ಡು ಎಂದು ಅಣ್ಣಾವ್ರ ಹೆಸರು ಇಟ್ಟಿದ್ದಕ್ಕೆ ಇಲ್ಲಿದೆ ಇಂಟರೆಸ್ಟಿಂಗ್​ ಕಾರಣ
ಡಾ. ರಾಜ್​ಕುಮಾರ್​
ಮದನ್​ ಕುಮಾರ್​
|

Updated on:Apr 24, 2021 | 12:47 PM

Share

ಡಾ. ರಾಜ್​ಕುಮಾರ್​ ಅವರ 92ನೇ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಮೇರುನಟನ ಬಗೆಗಿನ ಹಲವು ಸಂಗತಿಗಳನ್ನು ಮೆಲುಕು ಹಾಕಲಾಗುತ್ತಿದೆ. ‘ನಟ ಸಾರ್ವಭೌಮ’ನ ಹುಟ್ಟುಹಬ್ಬಕ್ಕೆ ಸೋಶಿಯಲ್​ ಮೀಡಿಯಾ ಮೂಲಕ ಎಲ್ಲರೂ ಶುಭಕೋರುತ್ತಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಗಣೇಶ ಸ್ವೀಟ್ಸ್​ ಅಂಗಡಿಯ ಮಾಲೀಕ ಸದಾಶಿವ್​ ರಾವ್​ ಅವರು ಒಂದು ವಿಶೇಷ ಸಂಗತಿಯನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ. ಇವರ ಅಂಗಡಿಯಲ್ಲಿ ಸಿಗುವ ‘ರಾಜ್​ ಲಡ್ಡು’ ತುಂಬ ಫೇಮಸ್​. ಅದಕ್ಕೆ ಆ ಹೆಸರು ಬರಲು ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ನಾನು ರಾಜ್​ಕುಮಾರ್​ ಅವರ ಅಪ್ಪಟ ಅಭಿಮಾನಿ. ಎಲ್ಲ ಸಿನಿಮಾವನ್ನು 5-10 ಸಲ ನೋಡಿದ್ದೇನೆ. ಶಂಕರ್​ ಗುರು ಚಿತ್ರವನ್ನು 51 ಬಾರಿ ನೋಡಿದ್ದೆ. ಆಗಿನ ಕಾಲದಲ್ಲಿ ಸಿನಿಮಾ ನೋಡಲು ಹಣ ಇಲ್ಲದವರನ್ನು ನಾನೇ ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಿ ಸಿನಿಮಾ ತೋರಿಸುತ್ತಿದ್ದೆ. 1951ರಲ್ಲಿ ನಮ್ಮ ತಂದೆ ಕಾಟಪ್​ಪೇಟೆ ಚರ್ಚ್​ ಬಳಿ ಅಂಗಡಿ ಮಾಡಿದ್ದರು. ಆಗಿನ ಕಾಲದಲ್ಲೇ ಸಿನಿಮಾ ಕಲಾವಿದರು ಬಂದು ನಮ್ಮ ಅಂಗಡಿಯಲ್ಲಿ ಸ್ವೀಟ್​ ತೆಗೆದುಕೊಂಡು ಹೋಗುತ್ತಿದ್ದರು.

ಎರಡು ನಕ್ಷತ್ರ ಸಿನಿಮಾ ಬಿಡುಗಡೆಯಾಗಿ 15 ದಿನ ಆದ ಬಳಿಕ ಅಣ್ಣಾವ್ರ ಮನೆಗೆ ಸ್ವೀಟ್​ ತೆಗೆದುಕೊಂಡು ಹೋದೆವು. ಮೊದಲಿಗೆ ವಾಚ್​ಮ್ಯಾನ್​ ನಮ್ಮನ್ನು ಒಳಗೆ ಬಿಡಲಿಲ್ಲ. ನಾವು ಜೋರಾಗಿ ಕನ್ನಡದಲ್ಲಿ ಮಾತನಾಡಿದ್ದನ್ನು ಕೇಳಿ ಅಣ್ಣಾವ್ರು ಒಳಗೆ ಕರೆಸಿಕೊಂಡರು. ನಮಗೆ ಉಪ್ಪಿಟ್ಟು ಕಾಪಿ ಕೊಟ್ಟು ಉಪಚರಿಸಿದರು. ಸ್ವೀಟ್​ ತಿಂದು ಖುಷಿಪಟ್ಟರು.

ಮೊದಲೆಲ್ಲ ತುಪ್ಪದಲ್ಲಿ ಮಾಡಿದ ಲಾಡನ್ನು ಅವರಿಗೆ ತಿನ್ನಿಸುತ್ತಿದ್ದೆ. ನಮ್ಮ ಅಂಗಡಿಯಲ್ಲಿ ಅವರಿಗೆ ಮೈಸೂರು ಪಾಕ್​ ತುಂಬ ಇಷ್ಟ ಆಗುತ್ತಿತ್ತು. ಅವರ ಮನೆಗೆ ಸ್ವೀಟ್​ ತಲುಪಿಸುತ್ತಿದ್ದೆವು. 2006ರ ಜೂನ್ ತಿಂಗಳಲ್ಲಿ ರಾಜ್​ಕುಮಾರ್​ ಅವರ ಹೆಸರಿನಲ್ಲಿ ಯಾಕೆ ಒಂದು ಸ್ವೀಟ್​ ಮಾಡಬಾರದು ಎಂಬ ಆಲೋಚನೆ ಬಂತು. ಇದನ್ನು ವಿಭಿನ್ನವಾಗಿ ಮಾಡಬೇಕೆಂದು ಗೋಡುಂಬಿ ಬಾದಾಮಿ, ದ್ರಾಕ್ಷಿ, ಪಿಸ್ತಾ ಹಾಕಿದೆವು. ಬೇರೆ ಯಾವುದೇ ಬಣ್ಣ ಬೇಡ ಎಂದು ಬಿಳಿ ಬಣ್ಣದಲ್ಲಿ ತಯಾರಿಸಿದೆವು. ಯಾಕೆಂದರೆ ರಾಜ್​ಕುಮಾರ್​ ಅವರ ಬಟ್ಟೆ ಬಿಳಿ. ಮನಸ್ಸು ಕೂಡ ಶುಭ್ರವಾಗಿತ್ತು. ಹಾಗಾಗಿ ಈ ಲಾಡು ಕೂಡ ಬಿಳಿ.

Sadashiva Rao

(ಗಣೇಶ ಸ್ವೀಟ್ಸ್ ಅಂಗಡಿಯ ಮಾಲೀಕ ಸದಾಶಿವ್ ರಾವ್)

ರಾಜ್​ ಲಾಡನ್ನು ಎಲ್ಲರಿಗೂ ಹಂಚಿದೆವು. ರುಚಿ ನೋಡಿದ ಎಲ್ಲರೂ ಚೆನ್ನಾಗಿದೆ ಎಂದು ಹೇಳಿದರು. ಬೇರೆ ರಾಜ್ಯ, ದೇಶದಿಂದಲೂ ಬಂದು ರಾಜ್​ ಲಾಡು ತೆಗೆದುಕೊಂಡು ಹೋಗುತ್ತಿದ್ದರು. ಅಣ್ಣಾವ್ರ ಹುಟ್ಟುಹಬ್ಬದ ದಿನ ಮತ್ತು ಪುಣ್ಯತಿಥಿಯ ದಿನ ಸಾವಿರಾರು ಲಾಡುಗಳನ್ನು ನಾವು ಹಂಚುತ್ತಿದ್ದೆವು.

ಇದನ್ನೂ ಓದಿ: Dr. Rajkumar Birth Anniversary: ರಾಜ್​ಕುಮಾರ್​ ಜತೆ ಫೋಟೋ ತೆಗೆಸಿಕೊಳ್ಳಲು ಲವರ್​​ ಕಾಯಿಸಿದ್ದೆ

Dr Rajkumar Birth Anniversary: ರಾಜ್​ಕುಮಾರ್ ಊಟ​ ಮಾಡಿ ಎದ್ದರೆ ಒಂದಗಳು ಕೂಡ ಬಾಳೆಯಲ್ಲಿ ಉಳಿಯುತ್ತಿರಲಿಲ್ಲ

(Dr Rajkumar 92nd Birth Anniversary: interesting facts behind Raj laddu)

Published On - 12:39 pm, Sat, 24 April 21

ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ
ತಿಪ್ಪೆ ಸೇರಿದ ಸರ್ಕಾರಿ ಆಸ್ಪತ್ರೆ ಔಷಧಿ: ಸ್ಥಳೀಯರ ಆಕ್ರೋಶ
ತಿಪ್ಪೆ ಸೇರಿದ ಸರ್ಕಾರಿ ಆಸ್ಪತ್ರೆ ಔಷಧಿ: ಸ್ಥಳೀಯರ ಆಕ್ರೋಶ