AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ಗೀತ ಸಾಹಿತಿ, ಪತ್ರಕರ್ತ ಶ್ಯಾಮಸುಂದರ ಕುಲಕರ್ಣಿ ಇನ್ನಿಲ್ಲ

‘ಒಲವಿನ ಉಡುಗೊರೆ ಕೊಡಲೇನು’, ‘ಕನ್ನಡ ಹೊನ್ನುಡಿ ದೇವಿಯನು ಪೂಜಿಸುವೆ’, ‘ಯಾವ ಹೂವು ಯಾರ ಮುಡಿಗೋ’, ‘ಸೇವಂತಿಯೇ-ಸೇವಂತಿಯೇ’ ಇನ್ನೂ ಹಲವಾರು ಕನ್ನಡ ಹಾಡುಗಳನ್ನು ಬರೆದಿರುವ ಶ್ಯಾಮಸುಂದರ ಕುಲಕರ್ಣಿ ನಿಧನ ಹೊಂದಿದ್ದಾರೆ.

ಖ್ಯಾತ ಗೀತ ಸಾಹಿತಿ, ಪತ್ರಕರ್ತ ಶ್ಯಾಮಸುಂದರ ಕುಲಕರ್ಣಿ ಇನ್ನಿಲ್ಲ
ಮಂಜುನಾಥ ಸಿ.
|

Updated on: Nov 13, 2024 | 6:15 PM

Share

‘ಒಲವಿನ ಉಡುಗೊರೆ ಕೊಡಲೇನು’, ‘ಕನ್ನಡ ಹೊನ್ನುಡಿ ದೇವಿಯನು ಪೂಜಿಒಸುವೆ’ ಇನ್ನೂ ಹಲವು ಅತ್ಯುತ್ತಮ ಹಾಡುಗಳನ್ನು ಕನ್ನಡ ಸಿನಿಮಾಗಳಿಗೆ ಬರೆದಿರುವ ಖ್ಯಾತ ಚಿತ್ರ ಸಾಹಿತಿ ಶ್ಯಾಮಸುಂದರ ಕುಲಕರ್ಣಿ ಅವರು ಅಕ್ಟೋಬರ್ 31 ರಂದು ನಿಧನ ಹೊಂದಿದ್ದಾರೆ. ಆದರೆ ಸುದ್ದಿ ತಡವಾಗಿ ಬಹಿರಂಗಗೊಂಡಿದೆ. ತಮ್ಮ ಸಾವು ಸುದ್ದಿ ಆಗಬಾರದೆಂದು ಅವರು ಬಯಸಿದ್ದರು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ನಿಧನದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಹತ್ತು ವರ್ಷಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ.

‘ಒಲವಿನ ಉಡುಗೊರೆ’ ಸಿನಿಮಾದ ‘ಒಲವಿನ ಉಡುಗೊರೆ ಕೊಡಲೇನು’, ‘ಪರಾಜಿತ’ ಸಿನಿಮಾದ ‘ಸುತ್ತಮುತ್ತಲು ಸಂಜೆಗತ್ತಲು ಸಂಜೆ ಗತ್ತಲು’, ‘ಅಜೇಯ’ ಸಿನಿಮಾದ ‘ಹೀರೋ ಹೀರೋ ಹೀರೋ ನಾನೇ ನಾನೇ ನಾನೇ’, ‘ಸೂರ್ಯವಂಶ’ ಸಿನಿಮಾದ ‘ಸೇವಂತಿಯೆ ಸೇವಂತಿಯೆ’, ‘ಭರತ್’ ಸಿನಿಮಾದ ‘ನೀಲಿ ಬಾನಲಿ’ ‘ಒಂದು ಸಿನಿಮಾ ಕತೆ’ ಸಿನಿಮಾದ ‘ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ’, ‘ಬೆಸುಗೆ’ ಸಿನಿಮಾದ ‘ಯಾವ ಹೂವು ಯಾರ ಮುಡಿಗೊ…ಯಾರ ಒಲವು ಯಾರ ಕಡೆಗೊ’ ಸೇರಿದಂತೆ ಅನೇಕ ಜನಪ್ರಿಯ ಗೀತೆಗಳನ್ನು ಶ್ಯಾಮಸುಂದರ ಕುಲಕರ್ಣಿ ಅವರು ರಚಿಸಿದ್ದಾರೆ.

ಗಾಯಕಿ ವಾಣಿಜಯರಾಂ ಅವರ ಕನ್ನಡದ ಮೊದಲ ಹಾಡು ‘ಮೂಡಣದಾ ರವಿ…’ ಹಾಡು ಕೆ ಶ್ಯಾಮಸುಂದರ ಕುಲಕರ್ಣಿಯವರು ಬರೆದ ಮೊದಲ ಹಾಡಾಗಿತ್ತು. ಹಾಡುಗಳು ಮಾತ್ರವೇ ಅಲ್ಲದೆ ಕನ್ನಡದ ಕೆಲವು ಜನಪ್ರಿಯ ಸಿನಿಮಾಗಳಿಗೆ ಸಂಭಾಷಣೆ, ಕೆಲವಕ್ಕೆ ಚಿತ್ರಕತೆಗಳನ್ನು ಸಹ ಬರೆದಿದ್ದಾರೆ.

ಇದನ್ನೂ ಓದಿ:ಕನ್ನಡ ಹಾಡು ಹಾಡಿ ಪ್ರಧಾನಿ ಮೋದಿಯ ಮೆಚ್ಚುಗೆಗೆ ಪಾತ್ರರಾದ ಶಿವಶ್ರೀ ಯಾರು?

ಖ್ಯಾತ ಪತ್ರಕರ್ತರೂ ಆಗಿದ್ದ ಶ್ಯಾಮಸುಂದರ ಕುಲಕರ್ಣಿ ಅವರು ಕನ್ನಡ ಚಿತ್ರರಂಗದೊಂದಿಗೆ ಆಪ್ತ ಬಂಧ ಹೊಂದಿದ್ದರು. ಸಂಯುಕ್ತ ಕರ್ನಾಟಕದಲ್ಲಿ ಹಲವು ವರ್ಷ ಕೆಲಸ ಮಾಡಿದ್ದ ಶ್ಯಾಮಸುಂದರ ಕುಲಕರ್ಣಿ ಅವರು, ನಟಿ ಕಲ್ಪನಾ ಅವರಿಂದ ಅಂಕಣಗಳನ್ನು ಬರೆಸಿದ್ದರು. ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ನೇರವಾಗಿ, ಪರೋಕ್ಷವಾಗಿ ಅವರು ಸಹಾಯ ಮಾಡಿದ್ದರು. ಡಾ ರಾಜ್​ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ದಿಗ್ಗಜರೊಟ್ಟಿಗೆ ಆಪ್ತ ಸ್ನೇಹ ಹೊಂದಿದ್ದರು. ಹಲವರ ಸಂದರ್ಶನಗಳನ್ನು ಅವರು ಪ್ರಕಟಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ