AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Music Director: ಕನ್ನಡದ ಮೊದಲ ಸಂಗೀತ ನಿರ್ದೇಶಕಿ ‘ನೀಲಮ್ಮ ಕಡಾಂಬಿ’

Female Music Director: ಈಗ ಲಭ್ಯವಾಗಿರುವ ಹೊಸ ಮಾಹಿತಿಯ ಪ್ರಕಾರ 1949ರಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಮಹಿಳೆಯೊಬ್ಬರು ಸಂಗೀತ ನೀಡಿದ್ದಾರೆ. ಅದು ಯಶಸ್ವಿ ಕೂಡ ಆಗಿದೆ. ಹೀಗಾಗಿ ಕನ್ನಡದ ಮೊದಲ ಮಹಿಳಾ ಸಂಗೀತ ನಿರ್ದೇಶಕಿ ಎನ್ನುವ ಹೆಗ್ಗಳಿಕೆಗೆ ನೀಲಮ್ಮ ಕಡಾಂಬಿ ಪಾತ್ರಾಗಿದ್ದಾರೆ.

Music Director: ಕನ್ನಡದ ಮೊದಲ ಸಂಗೀತ ನಿರ್ದೇಶಕಿ ‘ನೀಲಮ್ಮ ಕಡಾಂಬಿ’
ನೀಲಮ್ಮ ಕಡಾಂಬಿ ಮತ್ತು ಎನ್. ಎಸ್​. ಶ್ರೀಧರ ಮೂರ್ತಿ
ಶ್ರೀದೇವಿ ಕಳಸದ
|

Updated on:Mar 30, 2022 | 11:21 AM

Share

ಸಂಗೀತ ನಿರ್ದೇಶಕಿ | Music Director : ಚಿತ್ರರಂಗದಲ್ಲಿ ಸಂಗೀತ, ಸಂಕಲನ, ಛಾಯಾಗ್ರಹಣ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರ ಸಂಖ್ಯೆ ಎಂದಿನಿಂದಲೂ ಕಡಿಮೆ. ಅದರಲ್ಲಿಯೂ ಸಂಗೀತ ನಿರ್ದೇಶಕಿಯರ ಸಂಖ್ಯೆ ಇನ್ನಷ್ಟು ವಿರಳ. ಭಾರತೀಯ ಚಿತ್ರರಂಗದ ಮೊದಲ ಸಂಗೀತ ನಿರ್ದೇಶಕಿ ಎನ್ನಿಸಿಕೊಂಡವರು ಸರಸ್ವತಿದೇವಿ. 1935ರಲ್ಲಿಯೇ ಅಚ್ಯುತ ಕನ್ಯಾ’ ಚಿತ್ರಕ್ಕೆ ಸಂಗೀತ ನೀಡಿದ್ದರು. ‘ಮಾಯಾ ಬೇಬಿ’ವಚನ್’ಬಂಧನ್’ಆಮ್ರಪಾಲಿ’ ಅವರು ಸಂಗೀತ ನೀಡಿದ ಚಿತ್ರಗಳು. ಇದೇ ಸಂದರ್ಭದಲ್ಲಿ ಖ್ಯಾತ ತಾರೆ ನರ್ಗೀಸ್ ಅವರ ತಾಯಿ ಜದನ್ ಬಾಯಿ ಕೂಡ ಸಂಗೀತ ನಿರ್ದೇಶಕಿಯಾದರು. ಕೆ. ಎನ್. ಸೈಗಲ್ ಅವರ ಪ್ರತಿಭೆಯನ್ನು ಗುರುತಿಸಿ ಸಂಗೀತ ನಿರ್ದೇಶಕಿಯಾಗುವಂತೆ ಪ್ರೋತ್ಸಾಹ ನೀಡಿದರು. ‘ಪ್ರೇಮ ಪರೀಕ್ಷೆ’ ‘ಸೇವಾ ಸದನ’ ‘ತಲಾಷ್‍’ ಮೊದಲಾದವು ಅವರು ಸಂಗೀತ ನೀಡಿದ ಕೆಲವು ಚಿತ್ರಗಳು. ಚಿತ್ರರಂಗದ ಆರಂಭಿಕ ದಿನಗಳಲ್ಲಿಯೇ ಇಬ್ಬರು ಮಹಿಳಾ ಸಂಗೀತ ನಿರ್ದೇಶಕಿಯರು ಬಂದರೂ ಇದೊಂದು ಪರಂಪರೆಯಾಗಿ ಮುಂದುವರೆಯಲಿಲ್ಲ. ಸುಮಾರು ಮೂರು ದಶಕಗಳ  ನಂತರ ಭಾರತದ ಯಶಸ್ವಿ ಸಂಗೀತ ನಿರ್ದೇಶಕಿ ಎನ್ನಿಸಿಕೊಂಡ ಉಷಾ ಖನ್ನಾ ಕಾಣಿಸಿಕೊಂಡರು. ಎನ್.ಎಸ್.ಶ್ರೀಧರ ಮೂರ್ತಿ, ಹಿರಿಯ ಪತ್ರಕರ್ತ

(ಭಾಗ 1)

ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ 1947ರಲ್ಲಿ ‘ಬಿಂದು ಬಿ.ಎ’ ಎನ್ನುವ ಚಿತ್ರ ಹಿಮಾಂಶು ರೂಪವಾಣಿ ಲಾಂಛನದಲ್ಲಿ ಆರಂಭವಾಯಿತು. ಬೋಳಾರ ಭೋಜರಾವ್ ಚಿತ್ರದ ನಾಯಕರಾದರೆ ಪ್ರತಿಮಾದೇವಿ ನಾಯಕಿ. ಮಹಿಳೆಯರ ವಿದ್ಯಾಭ್ಯಾಸದ ಮಹತ್ವವನ್ನು ಬಿಂಬಿಸುವ ಚಿತ್ರ ಇದಾಗಿತ್ತು. ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ದೊರೆಸ್ವಾಮಿಯವರು ದಾಖಲೆ ಮಾಡಿರುವಂತೆ ಇದಕ್ಕೆ ಮಹಿಳಾ ಸಂಗೀತ ನಿರ್ದೇಶಕಿ ಬೇಕು ಎಂದೇ ಹುಡುಕಲಾಯಿತು. ಆಗ ಸಿಕ್ಕವರು ರಜಿಯಾ. ಎಸ್. ಅಹಮದ್. ಈ ಚಿತ್ರ ಪೂರ್ತಿಯಾಗಲಿಲ್ಲ. ಇದರ ಕುರಿತು ಬಂದಿದ್ದ ಜಾಹಿರಾತು ಒಂದೇ ಈಗ ಉಳಿದಿರುವ ಏಕೈಕ ದಾಖಲೆ. ಆ ಕಾಲದಲ್ಲಿಯೇ ಮಹಿಳೆಯೊಬ್ಬರು ಸಂಗೀತ ನೀಡಿದ್ದು ದೊಡ್ಡ ಸಾಧನೆಯಾದರೂ ಈ ರಜಿಯಾ. ಎಸ್. ಅಹಮದ್ ಯಾರು? ಮುಂದೆ ಅವರು ಏನಾದರು ಎನ್ನುವ ಕುರಿತು ವಿವರಗಳು ಲಭ್ಯವಿಲ್ಲ.

ಇದನ್ನೂ ಓದಿ : S.V.Parameshwar Bhat Birth Anniversary: ‘ಬಡಕವಿಯ ಮನೆಗೆ ನುಗ್ಗಿದ ಕಳ್ಳ ತಾನೇ ಐದು ರೂಪಾಯಿ ಇಟ್ಟು ಹೋಗಿದ್ದ’

ಅಲ್ಲಿಂದ ಮುಂದೆ 1962ರಲ್ಲಿ ‘ಮಹಾತ್ಮ ಕಬೀರ’ ಚಿತ್ರಕ್ಕೆ ಸಂಗೀತ ನೀಡಿದ ಅನುಸೂಯಾದೇವಿಯವರೇ ಕನ್ನಡದ ಮೊದಲ ಸಂಗೀತ ನಿರ್ದೇಶಕಿ ಎಂದು ಇತಿಹಾಸದಲ್ಲಿ ದಾಖಲಾಗಿತ್ತು. ಇಷ್ಟು ದಿನವೂ ಇದೇ ಸರಿಯಾದ ಮಾಹಿತಿ ಎಂದುಕೊಳ್ಳಲಾಗಿತ್ತು. ಈಗ ಲಭ್ಯವಾಗಿರುವ ಹೊಸ ಮಾಹಿತಿಗಳ ಪ್ರಕಾರ 1949ರಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಮಹಿಳೆಯೊಬ್ಬರು ಸಂಗೀತ ನೀಡಿದ್ದಾರೆ. ಅದು ಯಶಸ್ವಿ ಕೂಡ ಆಗಿದೆ. ಹೀಗಾಗಿ ಕನ್ನಡದ ಮೊದಲ ಮಹಿಳಾ ಸಂಗೀತ ನಿರ್ದೇಶಕಿ ಎನ್ನುವ ಹೆಗ್ಗಳಿಕೆಗೆ ನೀಲಮ್ಮ ಕಡಾಂಬಿ ಪಾತ್ರಾಗಿದ್ದಾರೆ. ‘ಸತಿ ತುಳಸಿ’ ಚಿತ್ರಕ್ಕೆ ಅವರು ನೀಡಿದ ಸಂಗೀತ ವಿಶಿಷ್ಟವಾಗಿತ್ತು. ಚಿತ್ರದ 13 ಗೀತೆಗಳೂ ಕೂಡ ಪ್ರಯೋಗಶೀಲವಾಗಿರುವುದನ್ನು ನಾವು ಗಮನಿಸಬಹುದಾಗಿದೆ.  ಈ ಚಿತ್ರದಲ್ಲಿ ಒಟ್ಟು 13 ಹಾಡುಗಳಿದ್ದು ಮೈಸೂರಿನ ನವಜ್ಯೋತಿ ಸ್ಟುಡಿಯೋದಲ್ಲಿ ಧ್ವನಿಮುದ್ರಣಗೊಂಡಿದ್ದವು. ಮೈಸೂರಿನ ಅಯ್ಯಂಗಾರ್ ಪ್ರೊಡಕ್ಷನ್‍ನ ಈ ಚಿತ್ರದ ನಿರ್ದೇಶಕರು ಎಂ. ಎ. ಎನ್. ಅಯ್ಯಂಗಾರ್.

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಇದನ್ನೂ ಓದಿ : Chi. Udayashankar’s Birth Anniversary: ಎರಡುತಾಸಿಗೆ ‘ಬೆಂಗಳೂರ್ ಮೈಲ್’, ಹತ್ತುನಿಮಿಷಕ್ಕೆ ಕೆ.ಜಿ ಮೈಸೂರ್​ಪಾಕ್ ಖಾಲಿ

ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/kannada-music-directors

Published On - 11:20 am, Wed, 30 March 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ