AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Darshan: ಹಲ್ಲೆ ಮಾಡಿಲ್ಲ ಎಂದಿದ್ದ ದರ್ಶನ್ ನಿಜ ಒಪ್ಪಿಕೊಂಡಿದ್ದು ಹೇಗೆ? ಇಲ್ಲಿದೆ ಆ ಐವತ್ತು ನಿಮಿಷಗಳ ಸೀಕ್ರೆಟ್

ಬೆಂಗಳೂರಿನ ಪಟ್ಟಣಗೆರೆ ಶೆಡ್​ಗೆ ಸಂಜೆ 4.30ರ ಸುಮಾರಿಗೆ ದರ್ಶನ್ ಆಗಮಿಸಿದ್ದಾರೆ. ಆ  ಬಳಿಕ ಅವರು ಮರಳಿ ತೆರಳಿದ್ದು ಸಂಜೆ 5.20ಕ್ಕೆ. ರೇಣುಕಾಸ್ವಾಮಿ ಮೇಲೆ ದರ್ಶನ್ ನಿರಂತರವಾಗಿ 30 ನಿಮಿಷಗಳ ಕಾಲ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಸಿನಿಮಾ ಮಾದರಿಯಲ್ಲೇ ನಟ ದರ್ಶನ್ ಕ್ರೌರ್ಯ ಇತ್ತು ಎಂದು ವರದಿ ಆಗಿದೆ.

Darshan: ಹಲ್ಲೆ ಮಾಡಿಲ್ಲ ಎಂದಿದ್ದ ದರ್ಶನ್ ನಿಜ ಒಪ್ಪಿಕೊಂಡಿದ್ದು ಹೇಗೆ? ಇಲ್ಲಿದೆ ಆ ಐವತ್ತು ನಿಮಿಷಗಳ ಸೀಕ್ರೆಟ್
ದರ್ಶನ್
TV9 Web
| Edited By: |

Updated on:Jun 28, 2024 | 12:18 PM

Share

ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಆರಂಭದಲ್ಲಿ ತಮಗೂ ಈ ಕೇಸ್​ಗೂ ಸಂಬಂಧ ಇಲ್ಲ ಎನ್ನುತ್ತಲೇ ಬರುತ್ತಿದ್ದರು. ‘ರೇಣುಕಾಸ್ವಾಮಿಗೆ ಎರಡೇಟು ಹೊಡೆದು ಟ್ಯಾಬ್ಲೆಟ್ ಹಾಗೂ ಊಟ ಕೊಡಿ ಎಂದು ಹೇಳಿ ನಾನು ಬಂದೆ’ ಎಂದು ದರ್ಶನ್​ ಹೇಳಿದ್ದರು. ಆದರೆ, ಪೊಲೀಸರು ಎದುರು ಇಟ್ಟ ಸಾಕ್ಷಿಗಳಿಂದ ದರ್ಶನ್ ಕಂಗಾಲಾಗಿದ್ದಾರೆ. ಕೊನೆಗೆ ಅವರು ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿ ಆಗಿದೆ. 50 ನಿಮಿಷ ಶೆಡ್​ನಲ್ಲಿ ಏನಾಯ್ತು ಎನ್ನುವ ಮಾಹಿತಿ ಸಿಕ್ಕಿದೆ.

ಪಟ್ಟಣಗೆರೆ ಶೆಡ್​ಗೆ ಸಂಜೆ 4.30ರ ಸುಮಾರಿಗೆ ವಿನಯ್ ಜೊತೆಗೆ ದರ್ಶನ್ ಎಂಟ್ರಿ ಕೊಟ್ಟಿದ್ದಾರೆ. ಆ  ಬಳಿಕ ಅವರು ತೆರಳಿದ್ದು ಸಂಜೆ 5.20ಕ್ಕೆ. ರೇಣುಕಾಸ್ವಾಮಿ ಮೇಲೆ ದರ್ಶನ್ ನಿರಂತರವಾಗಿ 30 ನಿಮಿಷಗಳ ಕಾಲ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಸಿನಿಮಾ ಮಾದರಿಯಲ್ಲೇ ನಟ ದರ್ಶನ್ ಕ್ರೌರ್ಯ ಇತ್ತು ಎಂದು ವರದಿ ಆಗಿದೆ. ನಿಂತಿದ್ದ ವಾಹನಗಳ ಮೇಲೆ ರೇಣುಕಾಸ್ವಾಮಿ ಅವರನ್ನು ದರ್ಶನ್ ಎತ್ತಿ ಬೀಸಾಡಿದ್ದರು. ದರ್ಶನ್ ಆರ್ಭಟಕ್ಕೆ ಅಲ್ಲಿದ್ದ ವಾಹನಗಳೇ ಶೇಕ್ ಆಗಿದ್ದವು. ಬೂಟು ಕಾಲಿನಲ್ಲಿ ರೇಣುಕಾಸ್ವಾಮಿಗೆ ಒದ್ದು ಹಲ್ಲೆ ಮಾಡಿದ್ದರು. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳುಹಿಸಿದ್ದ ಮೆಸೆಜ್​ನ ಗ್ಯಾಂಗ್ ಓಪನ್ ಮಾಡಿಕೊಂಡಿತ್ತು. ಆ ಮೆಸೇಜ್​ಗಳನ್ನು ಓದಲು ಪವನ್​ಗೆ ದರ್ಶನ್ ಹೇಳಿದ್ದರು. ಮೆಸೆಜ್ ಓದುತ್ತಿದ್ದ ಟೋನ್​ನಲ್ಲಿಯೇ ದರ್ಶನ್ ಹಲ್ಲೆ ಮಾಡುತ್ತಿದ್ದರು.

ಮೊದ ಮೊದಲು ಎರಡೇಟು ಹೊಡೆದು ಹಣ ಕೊಟ್ಟು ಹೊರಟೆ ಎಂದು ದರ್ಶನ್ ಹೇಳಿದ್ದರು. ಆದರೆ, ದರ್ಶನ್ ಐವತ್ತು ನಿಮಿಷ ಶೆಡ್​ನಲ್ಲಿದ್ದ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದರು. ಕೊನೆಗೆ ಸಾಕ್ಷಿ ಮುಂದೆ ಇಟ್ಟು ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಹಲ್ಲೆ ಮಾಡಿರೋದಾಗಿ ಅವರು ಸತ್ಯ ಒಪ್ಪಿಕೊಂಡರು ಎನ್ನಲಾಗಿದೆ.

ಇದನ್ನೂ ಓದಿ: ಸೋನು ಗೌಡಗೆ ದರ್ಶನ್ ಅಭಿಮಾನಿಗಳಿಂದ ಕಿರುಕುಳ, ಅಳಲು ತೋಡಿಕೊಂಡ ನಟಿ

ಫೆಬ್ರವರಿ ತಿಂಗಳಿಂದ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮೆಸೆಜ್ ಮಾಡಲು ಶುರು ಮಾಡಿದ್ದರು. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಬರೋಬ್ಬರಿ 200 ಮೆಸೆಜ್ ಕಳುಹಿಸಿದ್ದರು. ಎಲ್ಲವೂ ಅಶ್ಲೀಲ್ ಮೆಸೆಜ್​ಗಳೇಆಗಿತ್ತು. ಈತನ ಕಾಟ ಅತಿಯಾದಾಗ ಪವನ್​ಗೆ ಪವಿತ್ರಾ ಗೌಡ ವಿಚಾರ ತಿಳಿಸಿದ್ದರು. ಆತ‌ನ ಕೊಲೆ ಆಗುತ್ತೆ ಅಂದುಕೊಂಡಿರ್ಲಿಲ್ಲ ಎಂದು ಪವಿತ್ರಾ ಗೌಡ ಹೇಳಿಕೆ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:17 pm, Fri, 28 June 24

Follow Us
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್