‘ನಾನು ಹಾಡಿದ್ರೆ ಪಿಬಿ ಶ್ರೀನಿವಾಸ್​ಗೆ ಆಫರ್ ಸಿಗಲ್ಲ’ ಎಂದಿದ್ದ ರಾಜ್​ಕುಮಾರ್; ಅಣ್ಣಾವ್ರ ಒಳ್ಳೆ ಮನಸ್ಸಿನ ಬಗ್ಗೆ ಇಳಯರಾಜ ಅಪರೂಪದ ಮಾತು

|

Updated on: Oct 17, 2024 | 12:10 PM

ರಾಜ್​ಕುಮಾರ್ ಅವರು ‘ಯಾರೇ ಕೂಗಾಡಲಿ..’ ಹಾಡನ್ನು ಹಾಡಿದ್ದರು. ಈ ಹಾಡನ್ನು ರಾಜ್​ಕುಮಾರ್ ಅವರ ಬಳಿ ಹಾಡಿಸೋ ಆಲೋಚನೆ ಯಾರಿಗೂ ಇರಲಿಲ್ಲ. ಈ ಆಲೋಚನೆ ಮೊದಲು ಬಂದಿದ್ದು ಇಳಯರಾಜ ಹಾಗೂ ಜಿಕೆ ವೆಂಕಟೇಶ್ ಅವರಿಗೆ.

‘ನಾನು ಹಾಡಿದ್ರೆ ಪಿಬಿ ಶ್ರೀನಿವಾಸ್​ಗೆ ಆಫರ್ ಸಿಗಲ್ಲ’ ಎಂದಿದ್ದ ರಾಜ್​ಕುಮಾರ್; ಅಣ್ಣಾವ್ರ ಒಳ್ಳೆ ಮನಸ್ಸಿನ ಬಗ್ಗೆ ಇಳಯರಾಜ ಅಪರೂಪದ ಮಾತು
‘ನಾನು ಹಾಡಿದ್ರೆ ಪಿಬಿ ಶ್ರೀನಿವಾಸ್​ಗೆ ಆಫರ್ ಸಿಗಲ್ಲ’ ಎಂದಿದ್ದ ರಾಜ್​ಕುಮಾರ್
Follow us on

ರಾಜ್​ಕುಮಾರ್ ಅವರ ಕಂಠಕ್ಕೆ ಮರುಳಾಗದವರೇ ಇಲ್ಲ. ಅವರು ಮೊದಲ ಹಾಡಿದ್ದು ಎಂದರೆ ಅದು ‘ಸಂಪತ್ತಿಗೆ ಸವಾಲ್’ ಚಿತ್ರದ ‘ಯಾರೇ ಕೂಗಾಡಲಿ..’ ಹಾಡನ್ನು. ರಾಜ್​ಕುಮಾರ್ ಅವರು ಗಾಯಕ ಆಗಲು ಕಾರಣವಾಗಿದ್ದು ಇಳಯರಾಜ ಅವರು ಅನ್ನೋದು ವಿಶೇಷ. ಈ ಬಗ್ಗೆ ಇಳಯರಾಜ ಇತ್ತೀಚೆಗೆ ಹೇಳಿಕೊಂಡಿದ್ದರು. ಮೈಸೂರು ದಸರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು.

‘ಸಂಪತ್ತಿಗೆ ಸವಾಲ್’ ಚಿತ್ರಕ್ಕೆ ಜಿಕೆ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದರು. ನಾನು ಅವರಿಗೆ ಸಹಾಯಕನಾಗಿದ್ದೆ. ಆಗ ರಾಜ್​ಕುಮಾರ್ ಸಿನಿಮಾಗಳು ಎಂದಾಗ ಪಿಬಿ ಶ್ರೀನಿವಾಸ್ ಹಾಡುತ್ತಿದ್ದರು. ಈ ಸಿನಿಮಾದ ಹಾಡನ್ನು ಹೊಸ ಧ್ವನಿ ಬೇಕು ಎಂದು ನಾನು ಜಿಕೆ ವೆಂಟಕೇಶ್ ಹತ್ತಿರ ಹೇಳಿದೆ’ ಎಂದು ಅಂದಿನ ಘಟನೆ ವಿವರಿಸಿದರು ಇಳಯರಾಜ.

‘ಜಿಕೆ ವೆಂಕಟೇಶ್ ಅವರು ಎಸ್​ಪಿ ಬಾಲಸುಬ್ರಹ್ಮಣ್ಯ ಹೆಸರು ಹೇಳಿದರು. ಬೇಡ ಎಂದೆ. ಆ ಬಳಿಕ ರಾಜ್​ಕುಮಾರ್ ಅವರ ಹತ್ತಿರವೇ ಹಾಡಿಸಿದರೆ ಹೇಗೆ ಎಂದು ಜಿಕೆವಿ ಕೇಳಿದರು. ರಾಜ್​ಕುಮಾರ್ ಹಾಡ್ತಾರಾ ಎಂದು ಪ್ರಶ್ನೆ ಮಾಡಿದೆ. ಹೌದು, ಅವರ ಧ್ವನಿ ಉತ್ತಮವಾಗಿದೆ. ಅವರು ರಂಗಭೂಮಿಯಿಂದ ಬಂದವರು ಎಂದು ಜಿಕೆವಿ ಹೇಳಿದರು. ಅವರೇ ಹಾಡಿದರೆ ಉತ್ತಮ ಎಂದು ನಿರ್ಧರಿಸಲಾಯಿತು’ ಎಂದಿದ್ದಾರೆ ರಾಜ್​ಕುಮಾರ್.

‘ಈ ವಿಚಾರವನ್ನು ರಾಜ್​ಕುಮಾರ್ ಬಳಿ ಹೇಳಲಾಯಿತು. ಈ ಹಾಡನ್ನು ಪಿಬಿ ಶ್ರೀನಿವಾಸ್ ಅವರೇ ಹಾಡಲಿ ಬಿಟ್ಟುಬಿಡಲಿ, ಇದರಿಂದ ಅವರ ಜೀವನ ನಡೆಯುತ್ತಿದೆ ಎಂದು ರಾಜ್​ಕುಮಾರ್ ಹೇಳಿದ್ದರು. ಅವರ ಒಳ್ಳೆಯತನ ಎಷ್ಟಿತ್ತು ನೋಡಿ’ ಎಂದಿದ್ದಾರೆ ಇಳಯರಾಜ. ತಾವು ಹಾಡಿದರೆ ಪಿಬಿಎಸ್​ಗೆ ಆಫರ್​ಗಳು ಇರುವುದಿಲ್ಲವಲ್ಲ ಎನ್ನುವ ಬೇಸರ ರಾಜ್​ಕುಮಾರ್​ಗೆ ಕಾಡಿತ್ತು.

ಇದನ್ನೂ ಓದಿ: ‘ನಾನು ಎಮ್ಮೆ ಕಾದವನು ಎಂಎ ಮಾಡಿದವನಲ್ಲ, ನನಗೇಕೆ ಡಾಕ್ಟರೇಟ್’ ಎಂದು ಕೇಳಿದ್ದ ರಾಜ್​ಕುಮಾರ್

‘ಜಿಕೆವಿ ಅವರ ಬಳಿ ಹಾಡಿ ತೋರಿಸಿ ಎಂದರು ರಾಜ್​ಕುಮಾರ್. ಹಾಡಿ ತೋರಿಸಿದಾಗ ಅವರು ಖುಷಿಪಟ್ಟರು. ನಾನೇ ಹಾಡುತ್ತೇನೆ ಎಂದರು. ರಾಜ್​ಕುಮಾರ್ ಅಣ್ಣ ಅವರ ಬಳಿ ಮೊದಲು ಹಾಡಿಸಿದ್ದು ನಾನೇ’ ಎಂದರು ಇಳಯರಾಜ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:10 pm, Thu, 17 October 24