ನನಗೆ ನನ್ನ ಮಗನೇ ಶಕ್ತಿ, ಸ್ಫೂರ್ತಿ.. ಅವನಿಗೆ ಒಳ್ಳೇ ಹೆಸರು ಇಡ್ತೇವೆ -ಮೇಘನಾ ರಾಜ್

ಬೆಂಗಳೂರು: ತುಂಬಾ ದಿನದ ನಂತರ ಮಾಧ್ಯಮದ ಜೊತೆ ಮಾತಾಡ್ತಿದ್ದೇನೆ. ನಿಮ್ಮ ಸಪೋರ್ಟ್ ನನಗೆ ಸಿಕ್ಕಿದೆ. ಅದಕ್ಕೆ ತುಂಬಾ ಧನ್ಯವಾದಗಳು ಎಂದು ಪುತ್ರನ ತೊಟ್ಟಿಲು ಶಾಸ್ತ್ರದ ಬಳಿಕ ಮಾತನಾಡುತ್ತಾ ನಟಿ ಮೇಘನಾ ರಾಜ್​ ಭಾವುಕರಾದರು. ಇಂದಿನ ತೊಟ್ಟಿಲು ಶಾಸ್ತ್ರ ಹೊಸ ರೀತಿಯ ಸಂತೋಷ ತಂದಿದೆ. ಮಗ ಮನೆಗೆ ಬಂದಿದ್ದಾನೆ. ತುಂಬಾ ಖುಷಿಯಾಗಿದೆ ನನಗೆ. ಈ ತೊಟ್ಟಿಲನ್ನು ನನ್ನ ತವರು ಮನೆ ಕಡೆಯವರು ಕೊಟ್ಟಿರೋದು ಎಂದು ಮೇಘನಾ ಹೇಳಿದರು. ನನ್ನನ್ನ ಹಾಗೂ ಚಿರುನಾ ಮತ್ತು ನಮ್ಮ ಇಡೀ ಕುಟುಂಬವನ್ನ ನಿಮ್ಮ […]

ನನಗೆ ನನ್ನ ಮಗನೇ ಶಕ್ತಿ, ಸ್ಫೂರ್ತಿ.. ಅವನಿಗೆ ಒಳ್ಳೇ ಹೆಸರು ಇಡ್ತೇವೆ -ಮೇಘನಾ ರಾಜ್
Follow us
|

Updated on:Nov 12, 2020 | 1:24 PM

ಬೆಂಗಳೂರು: ತುಂಬಾ ದಿನದ ನಂತರ ಮಾಧ್ಯಮದ ಜೊತೆ ಮಾತಾಡ್ತಿದ್ದೇನೆ. ನಿಮ್ಮ ಸಪೋರ್ಟ್ ನನಗೆ ಸಿಕ್ಕಿದೆ. ಅದಕ್ಕೆ ತುಂಬಾ ಧನ್ಯವಾದಗಳು ಎಂದು ಪುತ್ರನ ತೊಟ್ಟಿಲು ಶಾಸ್ತ್ರದ ಬಳಿಕ ಮಾತನಾಡುತ್ತಾ ನಟಿ ಮೇಘನಾ ರಾಜ್​ ಭಾವುಕರಾದರು.

ಇಂದಿನ ತೊಟ್ಟಿಲು ಶಾಸ್ತ್ರ ಹೊಸ ರೀತಿಯ ಸಂತೋಷ ತಂದಿದೆ. ಮಗ ಮನೆಗೆ ಬಂದಿದ್ದಾನೆ. ತುಂಬಾ ಖುಷಿಯಾಗಿದೆ ನನಗೆ. ಈ ತೊಟ್ಟಿಲನ್ನು ನನ್ನ ತವರು ಮನೆ ಕಡೆಯವರು ಕೊಟ್ಟಿರೋದು ಎಂದು ಮೇಘನಾ ಹೇಳಿದರು.

ನನ್ನನ್ನ ಹಾಗೂ ಚಿರುನಾ ಮತ್ತು ನಮ್ಮ ಇಡೀ ಕುಟುಂಬವನ್ನ ನಿಮ್ಮ ಮನೆಯವ್ರಂತೆ ನೋಡಿಕೊಂಡಿದ್ದೀರಾ ಎಂದು ಸಹ ಹೇಳಿದರು.

ನಾನು ಸ್ಟ್ರಾಂಗ್ ಇದ್ದೀನಾ, ಇಲ್ವೋ ಗೊತ್ತಿಲ್ಲ. ಆದರೆ ಎಲ್ಲಾರೂ ಹೇಳ್ತಾರೆ ನೀನು ಸ್ಟ್ರಾಂಗ್ ಅಂತಾ. ಬಟ್​​, ನನಗೆ ನನ್ನ ಮಗನೇ ಶಕ್ತಿ. ಇದನ್ನೆಲ್ಲಾ ಚಿರು ನನ್ನ ಕೈಯಲ್ಲಿ ಮಾಡಿಸ್ತಾ ಇದ್ದಾರೆ ಎಂದು ಮೇಘನಾ ಹೇಳಿದರು. ಜೊತೆಗೆ, ನೋಡೋರೆಲ್ಲಾ ಮಗು ಚಿರುನ ಜೆರಾಕ್ಸ್ ಕಾಪಿನೇ ಅಂತಾರೆ ಎಂದು ಖುಷಿಪಟ್ಟರು.

ಜೂನಿಯರ್ ಚಿರುನ ಅದ್ದೂರಿ ತೊಟ್ಟಿಲು ಶಾಸ್ತ್ರವನ್ನು ಇಂದು ನೆರವೇರಿಸಲಾಯಿತು. ಜೆ.ಪಿ. ನಗರದ ಮೇಘನಾ ರಾಜ್​ರ ಮನೆಯಲ್ಲಿ ನಡೆದ ತೊಟ್ಟಿಲು ಶಾಸ್ತ್ರದಲ್ಲಿ ಕೇವಲ ಕುಟುಂಬಸ್ಥರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಸರಳವಾಗಿ ಆಯೋಜಿಸಲಾಯಿತು. ತೊಟ್ಟಿಲು ಶಾಸ್ತ್ರಕ್ಕೆ ಮೇಘನಾ ಮನೆಗೆ ಚಿರಂಜೀವಿ ಸರ್ಜಾರ ಅಜ್ಜಿ ಲಕ್ಷ್ಮೀ ದೇವಮ್ಮ ಹಾಗೂ ತಾಯಿ ಅಮ್ಮಾಜಿ ಸಹ ಬಂದಿದ್ದರು.

ಕೂಸು ಹುಟ್ಟುವ ಮೊದಲೇ.. ಅಣ್ಣನ ಮಗುವಿಗಾಗಿ ಬೆಳ್ಳಿ ತೊಟ್ಟಿಲು ಖರೀದಿಸಿದ ಧ್ರುವ

Published On - 1:08 pm, Thu, 12 November 20

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು