AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ರಾಘವೇಂದ್ರ ಟಾರ್ಚರ್​​ಗೆ ಸುಸ್ತಾದ ಅನುಶ್ರೀ; ಕೊನೆಗೂ ಮೂಡಿತು ನಗು

ವಿಜಯ್ ರಾಘವೇಂದ್ರ ಮತ್ತು ನಿರೂಪಕಿ ಅನುಶ್ರೀ ಅವರ ಗೆಳೆತನ ಹಲವು ವರ್ಷಗಳದ್ದು. 'ಸೆಕೆಂಡ್ ಕೇಸ್ ಆಫ್ ಸೀತಾರಾಮ' ಸಿನೆಮಾ ಪ್ರಚಾರಕ್ಕಾಗಿ ಇವರು ಮಾಡಿದ ಫನ್ ವಿಡಿಯೋ ವೈರಲ್ ಆಗಿದೆ. ವಿಜಯ್‌ಗೆ ಮಾಸ್ ಡೈಲಾಗ್ ಇಲ್ಲ ಎಂಬ ನೆಪದಲ್ಲಿ ಆರಂಭವಾದ ಈ ಸಂಭಾಷಣೆ, ಅನುಶ್ರೀಗೆ ತಮಾಷೆಯ 'ಟಾರ್ಚರ್' ನೀಡುತ್ತದೆ. ಅಂತಿಮವಾಗಿ, 'ಸೆಕೆಂಡ್ ಕೇಸ್ ಆಫ್ ಕೊಂಡಾಣ' ಸಿನೆಮಾವನ್ನು ಪ್ರೇಕ್ಷಕರಿಗೆ ತಲುಪಿಸಲು ಇಬ್ಬರೂ ವಿನಂತಿಸುತ್ತಾರೆ.

ವಿಜಯ್ ರಾಘವೇಂದ್ರ ಟಾರ್ಚರ್​​ಗೆ ಸುಸ್ತಾದ ಅನುಶ್ರೀ; ಕೊನೆಗೂ ಮೂಡಿತು ನಗು
ವಿಜಯ್-ಅನುಶ್ರೀ
ರಾಜೇಶ್ ದುಗ್ಗುಮನೆ
|

Updated on: Feb 20, 2026 | 7:29 AM

Share

ವಿಜಯ್ ರಾಘವೇಂದ್ರ ಹಾಗೂ ಆ್ಯಂಕರ್ ಅನುಶ್ರೀ (Anushree) ಮಧ್ಯೆ ಒಳ್ಳೆಯ ಗೆಳೆತನ ಇದೆ. ವಿಜಯ್ ರಾಘವೇಂದ್ರ ಅವರು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗೆ ಜಡ್ಜ್ ಆಗಿದ್ದು, ಅನುಶ್ರೀ ಆ್ಯಂಕರಿಂಗ್ ಮಾಡುತ್ತಿದ್ದಾರೆ. ಸೆಟ್​​ನಲ್ಲಿ ನಡೆದ ಒಂದು ಫನ್ ವಿಡಿಯೋನ ಅನುಶ್ರೀ ಹಂಚಿಕೊಂಡಿದ್ದಾರೆ. ಈ ವಾರ ರಿಲೀಸ್ ಆದ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ’ ಸಿನಿಮಾದ ಪ್ರಚಾರ ಮಾಡಲು ಈ ವಿಡಿಯೋ ಮಾಡಲಾಗಿದೆ.

ವಿಜಯ್ ರಾಘವೇಂದ್ರ ಅವರು 60ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಕೆಲವು ಹಿಟ್ ಆಗಿವೆ. ಆದರೆ, ಯಾವುದೇ ಸಿನಿಮಾದಲ್ಲಿ ಅವರಿಗೆ ಮಾಸ್ ಡೈಲಾಗ್ ಇಲ್ಲ. ಈ ಮಾಸ್ ಡೈಲಾಗ್ ಅಥವಾ ನೆನಪಿಕೊಳ್ಳುವ ಡೈಲಾಗ್ ಇಲ್ಲ ಎಂಬ ವಿಷಯದೊಂದಿಗೆ ವಿಡಿಯೋ ಆರಂಭ ಆಗುತ್ತದೆ. ‘ವಿಜಯ್ ನಿನ್ನ ಸಿನಿಮಾದ ಒಂದೊಳ್ಳೆಯ ಡೈಲಾಗ್ ಹೇಳು’ ಎಂದು ಅನುಶ್ರೀ ಕೇಳುತ್ತಾರೆ. ಆದರೆ, ಏನೇ ಮಾಡಿದರೂ ಯಾವ ಸಿನಿಮಾದಲ್ಲೂ ಡೈಲಾಗ್ ಸಿಗಲ್ಲ.

ಹಲವು ಸಿನಿಮಾಗಳ ಹೆಸರನ್ನು ಅನುಶ್ರೀ ಹೇಳುತ್ತಾರೆ. ಆದರೆ, ವಿಜಯ್ ರಾಘವೇಂದ್ರ ಅವರಿಂದ ನಕಾರಾತ್ಮಕ ಉತ್ತರವೇ ಬರುತ್ತದೆ. ಈ ವಿಷಯದಲ್ಲಿ ಅನುಶ್ರೀ ಫ್ರೆಸ್ಟ್ರೇಟ್ ಆಗುತ್ತಾರೆ. ಅವರಿಗೆ ಟಾರ್ಚರ್ ರೀತಿಯ ಫೀಲ್ ಆಗುತ್ತದೆ.

ಇದನ್ನೂ ಓದಿ: ವಿಜಯ್ ರಾಘವೇಂದ್ರ ಮತ್ತು ಅನುಶ್ರೀ ಕಾಮಿಡಿ ಪ್ರಮೋಷನ್: ವಿಡಿಯೋ

ವಿಜಯ್ ‘ಕಳ್ಳ ಮಳ್ಳ ಸುಳ್ಳ’ ಸಿನಿಮಾ ಹೆಸರು ಹೇಳುತ್ತಿದ್ದಂತೆ, ‘ಆ ಮೂರು ನೀನೇ’ ಎನ್ನುತ್ತಾರೆ ಅನುಶ್ರೀ. ‘ನಾನು ಕಳ್ಳನೂ ಅಲ್ಲ, ಮಳ್ಳನೂ ಅಲ್ಲ, ಸುಳ್ಳನೂ ಅಲ್ಲ’ ಎಂದು ವಿಜಯ್ ಉತ್ತರಿಸುತ್ತಾರೆ. ಆಗ, ಅನುಶ್ರೀ, ‘ಇವನು ಸೀತಾರಾಮ್’ ಎನ್ನುತ್ತಾರೆ. ‘ನೀನು ಮೆಂಟಲ್ ಕೇಸ್ ರೀತಿ ಆಡ್ತಾ ಇದೀಯಾ’ ಎಂದು ವಿಜಯ್ ಹೇಳುತ್ತಾರೆ. ‘ಇದು ಮೆಂಟಲ್ ಕೇಸ್ ಅಲ್ಲ, ಸೆಕೆಂಡ್ ಕೇಸ್ ಆಫ್ ಸೀತಾರಾಮ’ ಎಂದರು ಅವರು. ‘20ಕ್ಕೆ ಸೆಕೆಂಡ್ ಕೇಸ್ ಆಫ್ ಸೀತಾರಾಮ ಸಿನಿಮಾ ರಿಲೀಸ್ ಆಗುತ್ತಿದೆ. ದಯವಿಟ್ಟು ನೋಡಿ’ ಎಂದು ವಿಜಯ್ ಹಾಗೂ ಅನುಶ್ರೀ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್