Puneeth Rajkumar: ಪುನೀತ್​ ಮೇಲೆ RSS ಕಾರ್ಯಕರ್ತೆ ಗಂಭೀರ ಆರೋಪ; ಮೌನ ಮುರಿಯಬೇಕಿದೆ ರಿಷಬ್​ ಶೆಟ್ಟಿ

| Updated By: ಮದನ್​ ಕುಮಾರ್​

Updated on: Nov 06, 2022 | 5:10 PM

Jyoti Suparna Chincholi | Rishab Shetty: ‘ಕಾಂತಾರ’ ಚಿತ್ರವನ್ನು ಹೊಗಳುವ ಭರದಲ್ಲಿ ಜ್ಯೋತಿ ಸುಪರ್ಣಾ ಚಿಂಚೋಳಿ ಅವರು ಡಾ. ರಾಜ್​ಕುಮಾರ್​ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್​ ಮಾಡಿದ್ದಾರೆ. ಇದಕ್ಕೆ ರಿಷಬ್​ ಶೆಟ್ಟಿಯವರ ಖಾತೆಯನ್ನೂ ಟ್ಯಾಗ್​ ಮಾಡಿದ್ದಾರೆ.

Puneeth Rajkumar: ಪುನೀತ್​ ಮೇಲೆ RSS ಕಾರ್ಯಕರ್ತೆ ಗಂಭೀರ ಆರೋಪ; ಮೌನ ಮುರಿಯಬೇಕಿದೆ ರಿಷಬ್​ ಶೆಟ್ಟಿ
ಪುನೀತ್​, ರಿಷಬ್​ ಬಗ್ಗೆ ಜ್ಯೋತಿ ಸುಪರ್ಣಾ ಚಿಂಚೋಳಿ ಟ್ವೀಟ್​
Follow us on

‘ಕರ್ನಾಟಕ ರತ್ನ’ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕಳೆದುಕೊಂಡು ಇಡೀ ಕರುನಾಡು ಕಣ್ಣೀರು ಹಾಕುತ್ತಿದೆ. ದೇಶಾದ್ಯಂತ ಇರುವ ಸೆಲೆಬ್ರಿಟಿಗಳು ಕೂಡ ಅಪ್ಪು ಅವರ ಸಾಧನೆ ಮತ್ತು ವ್ಯಕ್ತಿತ್ವಕ್ಕೆ ತಲೆಬಾಗಿದ್ದಾರೆ. ಆದರೆ ಆರ್​ಎಸ್​ಎಸ್​ ಕಾರ್ಯಕರ್ತೆ ಜ್ಯೋತಿ ಸುಪರ್ಣಾ ಚಿಂಚೋಳಿ (Jyoti Suparna Chincholi) ಅವರು ಪುನೀತ್​ ರಾಜ್​ಕುಮಾರ್​ ಅವರನ್ನು ನೆಪೋಕಿಡ್​ ಎಂದು ಕರೆದಿದ್ದಾರೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಆಗಿದೆ. ಡಾ. ರಾಜ್​ಕುಮಾರ್​ ಕುಟುಂಬದ ಮೇಲೆ ಅವರು ನೆಪೋಟಿಸಂ (Nepotism) ಆರೋಪ ಹೊರಿಸಿದ್ದಾರೆ. ಈ ಕುರಿತು ಮಾಡಿರುವ ಟ್ವೀಟ್​ನಲ್ಲಿ ರಿಷಬ್​ ಶೆಟ್ಟಿ ಅವರನ್ನೂ ಜ್ಯೋತಿ ಟ್ಯಾಗ್​​ ಮಾಡಿದ್ದಾರೆ. ಹಾಗಾಗಿ ಈ ಬಗ್ಗೆ ರಿಷಬ್​ ಶೆಟ್ಟಿ ಮೌನ ಮುರಿಯಬೇಕಿದೆ. ‘ಕಾಂತಾರ’ ಸಿನಿಮಾವನ್ನು ಹೊಗಳುವ ಭರದಲ್ಲಿ ಜ್ಯೋತಿ ಸುಪರ್ಣಾ ಚಿಂಚೋಳಿ ಅವರು ಅಣ್ಣಾವ್ರು ಕುಟುಂಬದ ಬಗ್ಗೆ ಈ ರೀತಿಯಾಗಿ ಟ್ವೀಟ್​ ಮಾಡಿದ್ದಾರೆ.

ಡಾ. ರಾಜ್​ಕುಮಾರ್​ ಮಕ್ಕಳನ್ನು ಕರಣ್​ ಜೋಹರ್​ಗೆ ಹೋಲಿಸಿ ಜ್ಯೋತಿ ಸುಪರ್ಣಾ ಚಿಂಚೋಳಿ ಟ್ವೀಟ್​ ಮಾಡಿದ್ದಾರೆ. ಇದು ಈಗ ಚರ್ಚೆಗೆ ಕಾರಣ ಆಗಿದೆ. ಅಣ್ಣಾವ್ರು ಕುಟುಂಬದ ಅಭಿಮಾನಿಗಳು ಜ್ಯೋತಿ ವಿರುದ್ಧ ಗರಂ ಆಗಿದ್ದಾರೆ. ಎಷ್ಟೋ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ ಕೀರ್ತಿ ಡಾ. ರಾಜ್​ ಫ್ಯಾಮಿಲಿಗೆ ಸಲ್ಲುತ್ತದೆ. ಪುನೀತ್​ ರಾಜ್​ಕುಮಾರ್​ ಕೂಡ ತಮ್ಮ ‘ಪಿಆರ್​ಕೆ ಪ್ರೊಡಕ್ಷನ್ಸ್​’ ಬ್ಯಾನರ್​ ಮೂಲಕ ಹಲವರಿಗೆ ಅವಕಾಶ ನೀಡಿದ್ದರು. ಶಿವರಾಜ್​ಕುಮಾರ್​ ಅವರು ಇಂದಿಗೂ ಹೊಸಬರ ಬೆನ್ನು ತಟ್ಟುತ್ತಲೇ ಇದ್ದಾರೆ. ಅಂಥವರ ವಿರುದ್ಧವೇ ನೆಪೋಟಿಸಂ ಆರೋಪ ಮಾಡಿದ್ದಾರೆ ಜ್ಯೋತಿ.

ವಿವಾದಾತ್ಮಕ ಟ್ವೀಟ್​ನಲ್ಲಿ ಏನಿದೆ?

ಇದನ್ನೂ ಓದಿ
‘ಹುಡುಗಿ’ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದ ರಾಮ್​ ಗೋಪಾಲ್​ ವರ್ಮಾ; ಜುಲೈ 15ಕ್ಕೆ ಸಿನಿಮಾ ರಿಲೀಸ್​
‘ಡೇಂಜರಸ್​’ ಹುಡುಗಿಯರನ್ನು ಬೆಂಗಳೂರಿಗೆ ಕರೆತಂದು ಪರಿಚಯ ಮಾಡಿಸಿದ ರಾಮ್​ ಗೋಪಾಲ್ ವರ್ಮಾ
‘ಕೆಜಿಎಫ್​ 2’, ಉಪೇಂದ್ರ ಮತ್ತು ಸ್ಯಾಂಡಲ್​ವುಡ್​ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಹೇಳೋದು ಏನು?
‘ಪುನೀತ್​ ಸಾವಿನಿಂದ ಕಟು ಸತ್ಯ ಬಯಲಾಗಿದೆ’: ಆತಂಕದಲ್ಲೇ ಅನಿಸಿಕೆ ಹಂಚಿಕೊಂಡ ರಾಮ್​ ಗೋಪಾಲ್​ ವರ್ಮಾ

‘ಬಾಲಿವುಡ್​ನಲ್ಲಿ ಕರಣ್​ ಜೋಹರ್​ ಇರುವ ರೀತಿ, ಕರ್ನಾಟಕದಲ್ಲಿ ಡಾ. ರಾಜ್​ಕುಮಾರ್​ ಅವರ ನೆಪೋಕಿಡ್ಸ್​ ದೇವರಿದ್ದಂತೆ. ಯಾರಾದರೂ ಸ್ಯಾಂಡಲ್​ವುಡ್​ನಲ್ಲಿ ಉಳಿಯಬೇಕಾದರೆ ಇವರಿಗೆ ಸಲಾಂ ಹೊಡೆಯಬೇಕು. ರಿಷಬ್​ ಶೆಟ್ಟಿ ಕೂಡ ಪುನೀತ್​ ರಾಜ್​ಕುಮಾರ್​ ಅವರಿಗೆ ಈ ಪಾತ್ರವನ್ನು ನೀಡಿದ್ದೆ ಅಂತ ಹೇಳಬೇಕಾಯಿತು’ ಎಂದು ಜ್ಯೋತಿ ಟ್ವೀಟ್​ ಆರಂಭಿಸಿದ್ದಾರೆ.

‘ಪುನೀತ್​ ನಿಧನದಿಂದ ನನಗೆ ಬೇಸರ ಆಗಿದೆ. ಆದರೆ ವಾಸ್ತವ ಏನೆಂದರೆ, ಪ್ರತಿಭಾವಂತ ನಟ/ನಿರ್ದೇಶಕ/ಬರಹಗಾರ ರಿಷಬ್​ ಶೆಟ್ಟಿ ಅವರು ಸ್ಯಾಂಡಲ್​ವುಡ್​ನಲ್ಲಿ ದಶಕಗಳ ಕಾಲ ಕಷ್ಟಪಡಬೇಕಾಯಿತು. ದಶಕದ ಹಿಂದೆಯೇ ಅವರು ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು ಕನ್ನಡಿಗರು ಹೆಮ್ಮೆ ಪಡುವಂತೆ ಮಾಡುತ್ತಿದ್ದರು’ ಎಂದು ಜ್ಯೋತಿ ಟ್ವೀಟ್​ ಮಾಡಿದ್ದಾರೆ.

(ಜ್ಯೋತಿ ಸುಪರ್ಣಾ ಚಿಂಚೋಳಿ ಟ್ವೀಟ್)

‘ಪ್ರಾಮಾಣಿಕವಾಗಿ ಹೇಳಿ, ಪುನೀತ್​ಗೆ ಈ ಪಾತ್ರ ಮಾಡಲು ಸಾಧ್ಯವಾಗುತ್ತಿತ್ತಾ? ದೈವಾರಾಧನೆ ಮತ್ತು ಭೂತಕೋಲದಲ್ಲಿ ರಿಷಬ್​ ಅವರ ಮೂಲ ಸಂಸ್ಕೃತಿ ಇರುವುದರಿಂದ ಅವರಿಗೆ ಈ ದೈವಿ ಪರ್ಫಾರ್ಮೆನ್ಸ್​ ನೀಡಲು ಸಾಧ್ಯವಾಯ್ತು’ ಎಂದು ಜ್ಯೋತಿ ಪೋಸ್ಟ್​ ಮಾಡಿದ್ದಾರೆ. ಅವರ ಈ ಟ್ವಿಟರ್​ ಖಾತೆಯನ್ನು ನರೇಂದ್ರ ಮೋದಿ, ಸಿ.ಟಿ. ರವಿ ಮುಂತಾದವರು ಕೂಡ ಫಾಲೋ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.