‘ಡೇಂಜರಸ್​’ ಹುಡುಗಿಯರನ್ನು ಬೆಂಗಳೂರಿಗೆ ಕರೆತಂದು ಪರಿಚಯ ಮಾಡಿಸಿದ ರಾಮ್​ ಗೋಪಾಲ್ ವರ್ಮಾ

Khatra Dangerous: ‘ಖತ್ರಾ ಡೇಂಜರಸ್​’ ಸಿನಿಮಾ ಕುರಿತು ಮಾಹಿತಿ ಹಂಚಿಕೊಳ್ಳಲು ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಚಿತ್ರದಲ್ಲಿ ನೈನಾ ಗಂಗೂಲಿ ಮತ್ತು ಅಪ್ಸರಾ ರಾಣಿ ನಟಿಸಿದ್ದಾರೆ.

‘ಡೇಂಜರಸ್​’ ಹುಡುಗಿಯರನ್ನು ಬೆಂಗಳೂರಿಗೆ ಕರೆತಂದು ಪರಿಚಯ ಮಾಡಿಸಿದ ರಾಮ್​ ಗೋಪಾಲ್ ವರ್ಮಾ
ನೈನಾ ಗಂಗೂಲಿ, ರಾಮ್​ ಗೋಪಾಲ್​ ವರ್ಮಾ, ಅಪ್ಸರಾ ರಾಣಿ
Follow us
| Updated By: ಮದನ್​ ಕುಮಾರ್​

Updated on:Mar 31, 2022 | 4:05 PM

ಒಂದು ಕಾಲದಲ್ಲಿ ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದವರು ನಿರ್ದೇಶಕ ರಾಮ್​ ಗೋಪಾಲ್​​ ವರ್ಮಾ. ಈಗಲೂ ಅವರು ಡಿಫರೆಂಟ್​ ಪ್ರಯತ್ನಗಳ ಮೂಲಕ ಗಮನ ಸೆಳೆಯುತ್ತಾರೆ. ರಾಮ್​ ಗೋಪಾಲ್​ ವರ್ಮಾ (Ram Gopal Varma) ಸಿನಿಮಾ ಮಾಡುತ್ತಾರೆ ಎಂದರೆ ಅದು ವಿವಾದ ಮಾಡುತ್ತದೆ ಅಥವಾ ವಿಭಿನ್ನವಾಗಿ ಇರುತ್ತದೆ ಎಂಬುದರಲ್ಲಿ ಅನುಮಾನವೇ ಬೇಡ. ಈಗ ಅವರು ಹೊಸದೊಂದು ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಚಿತ್ರದ ಹೆಸರು ‘ಖತ್ರಾ ಡೇಂಜರಸ್​’. ಈಗಾಗಲೇ ಪೋಸ್ಟರ್​ ಮತ್ತು ಟ್ರೇಲರ್​ಗಳ ಮೂಲಕ ಈ ಚಿತ್ರ ಸಖತ್​ ಸದ್ದು ಮಾಡುತ್ತಿದೆ. ಹತ್ತು ಹಲವು ಕಾರಣಗಳಿಂದ ‘ಖತ್ರಾ ಡೇಂಜರಸ್​’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ನೈನಾ ಗಂಗೂಲಿ, ಅಪ್ಸರಾ ರಾಣಿ (Apsara Rani), ರಾಜ್​ಪಾಲ್​ ಯಾದವ್​ ಮುಂತಾದವರು ನಟಿಸಿದ್ದಾರೆ. ಟ್ರೇಲರ್​ ನೋಡಿದರೆ ಇದು ಸಲಿಂಗ ಕಾಮದ ಕುರಿತಾದ ಸಿನಿಮಾ ಎನಿಸುವುದು ಸಹಜ. ಆದರೆ ಇನ್ನಷ್ಟು ಆಳವಾದ ವಿಚಾರಗಳನ್ನು ಇಟ್ಟುಕೊಂಡು ರಾಮ್​ ಗೋಪಾಲ್​ ವರ್ಮಾ ಅವರು ‘ಖತ್ರಾ ಡೇಂಜರಸ್​’ (Khatra Dangerous Movie) ಚಿತ್ರವನ್ನು ಕಟ್ಟಿಕೊಟ್ಟಿದ್ದಾರಂತೆ. ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಏ.8ರಂದು ಚಿತ್ರಮಂದಿರಗಳಲ್ಲಿ ಇದು ತೆರೆ ಕಾಣಲಿದೆ.

‘ಖತ್ರಾ ಡೇಂಜರಸ್​’ ಸಿನಿಮಾ ಕುರಿತು ಮಾಹಿತಿ ಹಂಚಿಕೊಳ್ಳಲು ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ತಮ್ಮ ಜೊತೆ ಚಿತ್ರದ ಪ್ರಮುಖ ಪಾತ್ರಧಾರಿಗಳಾದ ನೈನಾ ಗಂಗೂಲಿ ಮತ್ತು ಅಪ್ಸರಾ ರಾಣಿ ಅವರನ್ನೂ ಕರೆದುಕೊಂಡು ಬಂದು ಪಾತ್ರ ಪರಿಚಯ ಮಾಡಿಸಿದರು. ಕ್ರೈಂ ಥ್ರಿಲ್ಲರ್​ ಕಥಾಹಂದರ ಹೊಂದಿರುವ ಭಾರತದ ಮೊದಲ ಲೆಸ್ಬಿಯನ್​ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಪರಸ್ಪರ ಪ್ರೇಮ-ಕಾಮ ಹೊಂದಿರುವ ಹುಡುಗಿಯರಾಗಿ ನೈನಾ ಗಂಗೂಲಿ ಮತ್ತು ಅಪ್ಸರಾ ರಾಣಿ ಅವರು ನಟಿಸಿದ್ದಾರೆ.

‘ಹುಡುಗ-ಹುಡುಗಿ ಪ್ರೀತಿ ಮಾಡುತ್ತಿದ್ದಾಗ ಜನರು ಅದನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ ಇಬ್ಬರು ಹುಡುಗಿಯರು ಪರಸ್ಪರ ಪ್ರೀತಿಸಿದಾಗ ಪ್ರಶ್ನೆ ಎದುರಾಗುತ್ತದೆ. ಅವರಿಬ್ಬರ ಪ್ರೀತಿಯನ್ನು ಈ ಸಿನಿಮಾ ಪ್ರಶ್ನೆ ಮಾಡುವುದಿಲ್ಲ. ಸಮಾಜದಲ್ಲಿ ಅಂಥ ಜನರು ಇದ್ದಾರೆ. ಅವರಲ್ಲಿಯೂ ಹಲವು ಕಥೆಗಳಿವೆ. ಲೆಸ್ಬಿಯನ್​ ಕುರಿತು ಕೆಲವು ಸಿನಿಮಾಗಳು ಬಂದಿವೆ. ಆದರೆ ನಮ್ಮ ಚಿತ್ರದ ಕಥೆ ಭಿನ್ನವಾಗಿದೆ’ ಎಂದು ರಾಮ್​ ಗೋಪಾಲ್​ ವರ್ಮಾ ಹೇಳಿದ್ದಾರೆ.

‘ಇಂಥ ಚಿತ್ರಕ್ಕೆ ನಟಿಯರನ್ನು ಒಪ್ಪಿಸುವುದು ಕಷ್ಟ ಎಂದುಕೊಂಡು ಮೊದಲು ಅಪ್ಸರಾ ಅವರನ್ನು ಸಂಪರ್ಕಿಸಿದೆ. ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಅವರು ಹಿಂದೇಟು ಹಾಕಲಿಲ್ಲ. ಇದೊಂದು ಸವಾಲಿನ ಪಾತ್ರ ಎಂದುಕೊಂಡು ಒಪ್ಪಿಕೊಂಡರು. ಆದರೆ ನೈನಾ ಗಂಗೂಲಿ ಅವರು ಒಪ್ಪಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರು’ ಎಂದರು ರಾಮ್​ ಗೋಪಾಲ್​ ವರ್ಮಾ. ಟ್ರೇಲರ್​ ಮತ್ತು ಹಾಡುಗಳಲ್ಲಿ ನೈನಾ ಗಂಗೂಲಿ ಮತ್ತು ಅಪ್ಸರಾ ರಾಣಿ ಅವರು ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ.

‘ಈ ಕಥೆ ಕೇಳಿದಾಗ ನನಗೆ ನಂಬಿಕೆ ಮೂಡಿತು. ಸವಾಲಿನ ಪಾತ್ರ ಆದ್ದರಿಂದ ಒಪ್ಪಿಕೊಂಡೆ. ಈ ಚಿತ್ರ ತೆರೆಕಂಡ ಬಳಿಕ ಇದೇ ರೀತಿಯ ಕಾನ್ಸೆಪ್ಟ್​ ಮೇಲೆ ಇನ್ನಷ್ಟು ಸಿನಿಮಾಗಳು ಬರಲಿವೆ ಅಂತ ಅಂದುಕೊಂಡಿದ್ದೇನೆ. ರಾಮ್​ ಗೋಪಾಲ್​ ವರ್ಮಾ ಜೊತೆ ಕೆಲಸ ಮಾಡಿ ತುಂಬ ಕಲಿಯಲು ಸಿಕ್ಕಿತು’ ಎಂದು ಅಪ್ಸರಾ ರಾಣಿ ಹೇಳಿದ್ದಾರೆ.

ಇತ್ತೀಚೆಗೆ ‘ಆರ್​ಆರ್​ಆರ್​’ ಸಿನಿಮಾ ಬಿಡುಗಡೆ ಆಯಿತು. ರಾಜಮೌಳಿ ನಿರ್ದೇಶನದ ಆ ಚಿತ್ರದಲ್ಲಿ ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ನಟಿಸಿದ್ದಾರೆ. ಅದರ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪ್ರಸ್ತಾಪಿಸಿರುವ ರಾಮ್​ ಗೋಪಾಲ್​ ವರ್ಮಾ ಅವರು ಹೀಗೊಂದು ಟ್ವೀಟ್​ ಮಾಡಿದ್ದಾರೆ. ತಮ್ಮ ಸಿನಿಮಾದ ನಾಯಕಿಯ ಫೋಟೋ ಹಂಚಿಕೊಂಡು, ‘ರಾಜಮೌಳಿ ಸರ್​.. ನಿಮ್ಮ ಬಳಿ ಡೇಂಜರಸ್​ ಗಂಡಸರು ಇದ್ದರೆ ನನ್ನ ಬಳಿ ಡೇಂಜರಸ್​ ಹೆಂಗಸರು ಇದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:

4 ತಪ್ಪು ಕಲ್ಪನೆಗಳನ್ನು ಅಳಿಸಿಹಾಕಿದೆ ‘ದಿ ಕಾಶ್ಮೀರ್​ ಫೈಲ್ಸ್​’; ಪರಿಪರಿಯಾಗಿ ವಿಶ್ಲೇಷಣೆ ಮಾಡಿದ ಆರ್​ಜಿವಿ

‘ಕೆಜಿಎಫ್​ 2’, ಉಪೇಂದ್ರ ಮತ್ತು ಸ್ಯಾಂಡಲ್​ವುಡ್​ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಹೇಳೋದು ಏನು?

Published On - 4:04 pm, Thu, 31 March 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ