AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rajyotsava 2021: ಕರುನಾಡ ಬಗ್ಗೆ ಹಲವು ಕನಸು ಕಂಡಿದ್ದ ಶಂಕರ್​ ನಾಗ್​; ಕನ್ನಡ ರಾಜ್ಯೋತ್ಸವದ ದಿನ ಅವರ ನೆನೆಯಲೇಬೇಕು

Shankar Nag: ಕರ್ನಾಟಕದ ಬಗ್ಗೆ ಅವರು ಸಾಕಷ್ಟು ಕನಸುಗಳನ್ನು ಕಂಡಿದ್ದರು. ಆದರೆ, ಅದೆಲ್ಲವೂ ಕಾರ್ಯರೂಪಕ್ಕೆ ಬರುವುದಕ್ಕೂ ಮೊದಲೇ ಮೃತಪಟ್ಟಿದ್ದರು.

Karnataka Rajyotsava 2021: ಕರುನಾಡ ಬಗ್ಗೆ ಹಲವು ಕನಸು ಕಂಡಿದ್ದ ಶಂಕರ್​ ನಾಗ್​; ಕನ್ನಡ ರಾಜ್ಯೋತ್ಸವದ ದಿನ ಅವರ ನೆನೆಯಲೇಬೇಕು
ಶಂಕರ್​ ನಾಗ್​
TV9 Web
| Updated By: ಮದನ್​ ಕುಮಾರ್​|

Updated on: Nov 01, 2021 | 9:38 AM

Share

ಶಂಕರ್​ ನಾಗ್​ ಅವರು ಕನ್ನಡ ನಾಡು ಕಂಡ ಶ್ರೇಷ್ಠ ನಟ, ನಿರ್ಮಾಪಕ ಹಾಗೂ ನಿರ್ದೇಶಕ. ಅತಿ ಕಡಿಮೆ ಅವಧಿಯಲ್ಲಿ ಸಾಕಷ್ಟು ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗಿದೆ. ಆಗಿನ ಕಾಲದಲ್ಲೇ ಸಾಕಷ್ಟು ಪ್ರಯೋಗಾತ್ಮಕ ಸಿನಿಮಾಗಳನ್ನು ನೀಡಿದ ಖ್ಯಾತಿ ಶಂಕರ್​ನಾಗ್​ಗೆ ಸಲ್ಲುತ್ತದೆ. ಅಷ್ಟೇ ಅಲ್ಲ, ಕರ್ನಾಟಕದ ಬಗ್ಗೆ ಅವರು ಸಾಕಷ್ಟು ಕನಸುಗಳನ್ನು ಕಂಡಿದ್ದರು. ಆದರೆ, ಅದೆಲ್ಲವೂ ಕಾರ್ಯರೂಪಕ್ಕೆ ಬರುವುದಕ್ಕೂ ಮೊದಲೇ ಮೃತಪಟ್ಟಿದ್ದರು. ಈ ಸಾವು ನ್ಯಾಯವಲ್ಲ ಎಂಬುದು ಈಗಲೂ ಅನೇಕರ ಅಭಿಪ್ರಾಯ. ಹಾಗಾದರೆ, ಶಂಕರ್​ ನಾಗ್​ ಅವರು ಕನ್ನಡ ನಾಡ ಬಗ್ಗೆ ಕಂಡ ಕನಸುಗಳೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹಾಲಿವುಡ್​ ಮಾದರಿಯ ಸ್ಟುಡಿಯೋ

ಹಾಲಿವುಡ್​ನಲ್ಲಿ ಇರುವ ಸ್ಟುಡಿಯೋಗಳಲ್ಲಿ ಒಂದೇ ಕಡೆಗಳಲ್ಲಿ ಎಲ್ಲವೂ ಸಿಗುತ್ತದೆ. ಇದೇ ಮಾದರಿಯ ಕನಸನ್ನು ಶಂಕರ್​ ನಾಗ್​ ಕೂಡ ಕಂಡಿದ್ದರು. ಶೂಟಿಂಗ್​, ವಿಎಫ್​ಎಕ್ಸ್​ ಸೇರಿ ಎಲ್ಲವೂ ಒಂದೇ ಕಡೆಯಲ್ಲಿ ಸಿಗಬೇಕು. ಆ ರೀತಿಯ ಸ್ಟುಡಿಯೋ ನಿರ್ಮಾಣ ಮಾಡಬೇಕು ಎಂಬುದು ಶಂಕರ್​ ನಾಗ್​ ಅವರ ಕನಸಾಗಿತ್ತು. 1985ರ ಸಂದರ್ಭದಲ್ಲಿ ಡಬ್ಬಿಂಗ್​ ಸೇರಿ ಎಲ್ಲಾ ಸಿನಿಮಾ ಕೆಲಸಗಳು ಚೆನ್ನೈನಲ್ಲಿ ನಡೆಯುತ್ತಿತ್ತು. ಹೀಗಾಗಿ, ಕನ್ನಡದ ಹೀರೋಗಳು ಅಲ್ಲಿಯೇ ವಾಸವಾಗಿದ್ದರು. ಅವೆಲ್ಲವೂ ಕರ್ನಾಟಕಕ್ಕೆ ಶಿಫ್ಟ್​ ಆಗಬೇಕು ಎನ್ನುವುದು ಅವರ ಕನಸಾಗಿತ್ತು. ಅಂತೆಯೇ, ಶಂಕರ್​ನಾಗ್​ ಕಷ್ಟಪಟ್ಟು ಬೆಂಗಳೂರಿನಲ್ಲಿ ಒಂದು ಸ್ಟುಡಿಯೋ ಆರಂಭಿಸಿದ್ದರು.

ಪ್ರಯೋಗಾತ್ಮಕ ಸಿನಿಮಾಗಳು

ಸ್ಯಾಂಡಲ್​ವುಡ್​ಗೆ ಸಾಕಷ್ಟು ಪ್ರಯೋಗಾತ್ಮಕ ಸಿನಿಮಾಗಳನ್ನು ನೀಡಿದ ಖ್ಯಾತಿ ಶಂಕರ್​ ನಾಗ್​ ಅವರಿಗೆ ಸಲ್ಲುತ್ತದೆ. ಇದರ ಜತೆಗೆ ಸಾಕಷ್ಟು ಪ್ರಯೋಗಾತ್ಮಕ ದೃಶ್ಯಗಳನ್ನು ಕೂಡ ಅವರು ತಮ್ಮ ಸಿನಿಮಾಗಳಲ್ಲಿ ಸೇರಿಸಿದ್ದರು. ‘ಒಂದು ಮುತ್ತಿನ ಕಥೆ’ ಸಿನಿಮಾದಲ್ಲಿ ಬರುವ ಅಂಡರ್​ವಾಟರ್​ ದೃಶ್ಯ ಇದಕ್ಕೆ ಉತ್ತಮ ಉದಾಹರಣೆ. ಇನ್ನು, ಹಾಲಿವುಡ್​ ಸಿನಿಮಾಗಳಿಂದ ಆಗಲೇ ಅವರು ಪ್ರೇರಿತರಾಗಿದ್ದರು.

ಸ್ಪೆಷಲ್​ ಎಫೆಕ್ಟ್​ ಸೆಂಟರ್​

1991 ಅಲ್ಲಿ ‘ಘೋಸ್ಟ್’​ ಹೆಸರಿನ ಇಂಗ್ಲಿಷ್​ ಸಿನಿಮಾ ತೆರೆಗೆ ಬಂದಿತ್ತು. ಇದರಲ್ಲಿ ಸಾಕಷ್ಟು ಸ್ಪೆಷಲ್​ ಎಫೆಕ್ಟ್​ ಬಳಕೆ ಮಾಡಿಕೊಳ್ಳಲಾಗಿತ್ತು. ಇದನ್ನು ‘ನಾಗಮಂಡಲ’ ಸಿನಿಮಾಗೆ ತರಬೇಕು ಎನ್ನುವುದು ಶಂಕರ್​ನಾಗ್​ ಕನಸಾಗಿತ್ತು. ಇದಕ್ಕಾಗಿ ಅವರು ಲಂಡನ್​, ಯುರೋಪ್​ಗೆ ಹೋಗಿ ಆ ಕಂಪನಿಗಳ ಜತೆ ಮಾತನಾಡಿದ್ದರು. ಆ ರೀತಿಯ ಸ್ಪೆಷಲ್​ ಎಫೆಕ್ಟ್​ ಸೆಂಟರ್​​ಗಳನ್ನು ಭಾರತಕ್ಕೆ ತರಬೇಕು ಎಂದು ಶಂಕರ್​ ನಾಗ್​ ಕನಸು ಕಂಡಿದ್ದರು.

ಮೆಟ್ರೋ ಕನಸು

ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾಗಿ ಹಲವು ವರ್ಷ ಕಳೆದಿದೆ. ಇದರಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ವೇಗವಾಗಿ ತಲುಪಬಹುದು. ಅಷ್ಟೇ ಅಲ್ಲ, ಟ್ರಾಫಿಕ್​ ಕೂಡ ಕಡಿಮೆ ಆಗುತ್ತದೆ. ಬೆಂಗಳೂರಿಗೆ ಮೆಟ್ರೋ ಬರಬೇಕು ಎಂದು ಶಂಕರ್​ ನಾಗ್​ ಆಗಲೇ ಕನಸು ಕಂಡಿದ್ದರು.

ನಂದಿ ಬೆಟ್ಟದಲ್ಲಿ ರೋಪ್​ ವೇ

ನಂದಿ ಬೆಟ್ಟ ಜನಪ್ರಿಯ ಪ್ರವಾಸಿ ತಾಣ. ಪ್ರತಿ ವಾರ ಇಲ್ಲಿಗೆ ಸಾವಿರಾರು ಜನರು ಭೇಟಿ ನೀಡುತ್ತಾರೆ. ಇಲ್ಲಿ ರೋಪ್​ವೇ ಮಾಡಬೇಕು ಎಂದು ಶಂಕರ್​ನಾಗ್​ ಕನಸು ಕಂಡಿದ್ದರು. ಆದರೆ, ಅದು ಈವರೆಗೆ ಸಾಧ್ಯವಾಗಿಲ್ಲ. ಆದರೆ, ಶಂಕರ್​ ನಾಗ್​ ಈ ಬಗ್ಗೆ ಆಗಲೇ ಕನಸು ಕಂಡಿದ್ದರು.

ಇದನ್ನೂ ಓದಿ: ‘ಆ ಕಾಲದಲ್ಲೇ ಶಂಕರ್​ ನಾಗ್​ ಲ್ಯಾಪ್​ಟಾಪ್​ ಬಳಸುತ್ತಿದ್ರು’; ಅಚ್ಚರಿ ವಿಚಾರ ಹಂಚಿಕೊಂಡ ಬಿರಾದಾರ್​

ಶಂಕರ್‌ ನಾಗ್​ಗೆ ಆ್ಯಕ್ಸಿಡೆಂಟ್​ ಆಗುವ ಹಿಂದಿನ ದಿನವೇ ಅವರು ಸಾಯುವ ಸೀನ್‌ ಶೂಟ್​ ಮಾಡಿದ್ವಿ; ದೊಡ್ಡಣ್ಣ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ