AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

’ಕಾಟೇರ‘ ಸಿನಿಮಾದ ಹೈದರಾಬಾದ್-ಕರ್ನಾಟಕ ವಿತರಣೆ ಹಕ್ಕು ಯಾರ ಪಾಲಾಯ್ತು?

Katera: ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ಹೈದರಾಬಾದ್ ಕರ್ನಾಟಕ ವಿತರಣೆ ಹಕ್ಕು ಯಾರಾ ಪಾಲಾಗಿದೆ?

’ಕಾಟೇರ‘ ಸಿನಿಮಾದ ಹೈದರಾಬಾದ್-ಕರ್ನಾಟಕ ವಿತರಣೆ ಹಕ್ಕು ಯಾರ ಪಾಲಾಯ್ತು?
ದರ್ಶನ್
Follow us
ಮಂಜುನಾಥ ಸಿ.
|

Updated on:Dec 23, 2023 | 3:59 PM

‘ಸಲಾರ್’, ‘ಡಂಕಿ’ ಸಿನಿಮಾಗಳೆರಡೂ ಬಿಡುಗಡೆ ಆಗಿದೆ. ಕರ್ನಾಟಕದಲ್ಲಿ ಎರಡೂ ಸಿನಿಮಾಗಳ ಹವಾ ತಕ್ಕಮಟ್ಟಿಗಷ್ಟೆ ಇದೆ. ಆದರೆ ಸಿನಿಮಾ ಪ್ರೇಕಗಳ ಕಣ್ಣು ಮುಂದಿನ ಶುಕ್ರವಾರದ ಮೇಲೆ ನೆಟ್ಟಿದೆ. ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆ ಆಗಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಶುಕ್ರವಾರದ ಬರುವಿಕೆಗೆ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಈ ವರ್ಷ ಬಿಡುಗಡೆ ಆಗುತ್ತಿರುವ ದರ್ಶನ್​ರ ಎರಡನೇ ಸಿನಿಮಾ ಇದಾಗಿದ್ದು, ದರ್ಶನ್ ಸಹ ಉತ್ಸಾಹದಿಂದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ರಾಕ್​ಲೈನ್ ವೆಂಕಟೇಶ್ ನಿರ್ಮಾಣ ಮಾಡಿರುವ ಈ ಸಿನಿಮಾದ ವಿತರಣಾ ಹಕ್ಕಿನ ಒಂದು ಭಾಗವನ್ನು ನಿರ್ದೇಶಕ ಗುರು ದೇಶಪಾಂಡೆ ತೆಗೆದುಕೊಂಡಿದ್ದಾರೆ.

ಗುರು ದೇಶಪಾಂಡೆ ನಿರ್ದೇಶಕರಾಗಿ ಜನಪ್ರಿಯತೆ ಗಳಿಸಿರುವವರು. ಇತ್ತೀಚಿನ ದಿನಗಳಲ್ಲಿ ನಿರ್ಮಾಪಕರಾಗಿಯೂ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಒಂದರ ನಿರ್ಮಾಣ ಸಮಯದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದೂ ಇದೆ. ಇಂತಿಪ್ಪ, ಗುರು ದೇಶಪಾಂಡೆ ಏಕಾ-ಏಕಿ ಸಿನಿಮಾ ವಿತರಣಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದಾರೆ. ಹಾಗೆಂದು ಸಿನಿಮಾ ವಿತರಣೆ ಅವರಿಗೆ ಹೊಸದೇನೂ ಅಲ್ಲ. ದಶಕಗಳ ಹಿಂದೆ ಹಲವಾರು ಹಿಟ್ ಸಿನಿಮಾಗಳನ್ನು ವಿತರಿಸಿ ಸೈ ಅನ್ನಿಸಿಕೊಂಡಿದ್ದಾರೆ. ಆದರೆ ವಿತರಣೆಯಿಂದ ಬಿಡುವು ಪಡೆದು ನಿರ್ದೇಶನ, ನಿರ್ಮಾಣದ ಕಡೆ ವಾಲಿದ್ದ ಗುರು ದೇಶಪಾಂಡೆ ‘ಕಾಟೇರ’ ಸಿನಿಮಾ ಮೂಲಕ ಈ ಕ್ಷೇತ್ರಕ್ಕೆ ಮತ್ತೆ ಕಾಲಿರಿಸಿದ್ದಾರೆ.

ದರ್ಶನ್​ಗೆ ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಇದೀಗ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಕರ್ನಾಟಕದಾದ್ಯಂತ ಪ್ರೇಕ್ಷಕರು ಸಿನಿಮಾ ನೋಡಲು ಕಾತರರಾಗಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಹೈದ್ರಾಬಾದ್ ಕರ್ನಾಟಕ ಮಂದಿಯ ಸಿನಿಮಾ ವ್ಯಾಮೋಹ ಅತೀವವಾದದ್ದು. ದರ್ಶನ್​ಗೆ ಅಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹಾಗಾಗಿ ಆ ಭಾಗದ ‘ಕಾಟೇರ’ ಸಿನಿಮಾ ವಿತರಣಾ ಹಕ್ಕನ್ನು ಗುರು ದೇಶಪಾಂಡೆ ಖರೀದಿ ಮಾಡಿದ್ದಾರೆ. ಹೈದರಾಬಾದ್-ಕರ್ನಾಟಕ ಭಾಗದ ಜನರಿಗೆ ಸಿನಿಮಾವನ್ನು ತಲುಪಿಸುವ ಕಾರ್ಯವನ್ನು ಗುರು ದೇಶಪಾಂಡೆ ಮಾಡಲಿದ್ದಾರೆ. ಇದರ ಜೊತೆಗೆ ‘ಕಾಟೇರ’ ಮೂಲಕ ಸಿನಿಮಾ ವಿತರಕರಾಗಿ ಗುರು ದೇಶಪಾಡೆ ಅವರ ಸೆಕೆಂಡ್ ಇನ್ನಿಂಗ್ಸ್ ಆರಂಭ ಮಾಡಲಿದ್ದಾರೆ.

ಇದನ್ನೂ ಓದಿ:ಇದು ಇಂದಿರಾ ಗಾಂಧಿ ಕಾಲದ ಕತೆ: ‘ಕಾಟೇರ’ ಬಗ್ಗೆ ದರ್ಶನ್ ಮಾತು

ಗುರು ದೇಶಪಾಂಡೆ ಸಿನಿಮಾ ರಂಗದ ನಾನಾ ವಿಭಾಗಗಳಲ್ಲಿ ಸಕ್ರಿಯರಾಗಿದ್ದವರು. 2010-11ನೇ ಸಾಲಿನಲ್ಲಿ ಅವರು ಸಿನಿಮಾ ವಿತರಕರಾಗಿ ಸಕ್ರಿಯರಾಗಿದ್ದರು. ಆ ಕಾಲದಲ್ಲಿ ರಜನೀಕಾಂತ್ ಮಾಜಿ ಅಳಿಯ ಧನುಶ್ ನಟಿಸಿದ್ದ ‘ಆಡುಕುಳಂ’, ‘ದೈವ ತಿರುಮಗಳ್’, ದಳಪತಿ ವಿಜಯ್ ನಟಿಸಿದ್ದ ‘ವೇಲಾಯುಧನ್’, ಯಶ್ ಅಭಿನಯದ ‘ಕಿರಾತಕ’, ‘ಸಂಜು ವೆಡ್ಸ್ ಗೀತಾ’ ಅಂಥಹಾ ಹಿಟ್ ಸಿನಿಮಾಗಳನ್ನು ವಿತರಿಸುವ ಮೂಲಕ ಗೆದ್ದಿದ್ದರು. ಆ ನಂತರದಲ್ಲಿ ನಿರ್ದೇಶನದತ್ತ ಹೊರಳಿಕೊಂಡಿದ್ದ ಗುರು ದೇಶಪಾಂಡೆ ವಿತರಣಾ ಕ್ಷೇತ್ರದಿಂದ ಹಿಂದೆ ಸರಿದ್ದರು. ಇದೀಗ ದಶಕದ ನಂತರ, ‘ಕಾಟೇರ’ನ ಪ್ರಭೆಯಲ್ಲವರು ಹಳೇ ಹಾದಿಯಲ್ಲಿ ಹೊಸಾ ಹುರುಪಿನೊಂದಿಗೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.

ಗುರು ದೇಶಪಾಂಡೆ ಈ ಹಿಂದೆ ಯಶ್ ನಟನೆಯ ‘ರಾಜಾಹುಲಿ’ ಸಿನಿಮಾ ನಿರ್ದೇಶನ ಮಾಡಿದ್ದರು. ಅದರ ಹೊರತಾಗಿ, ‘ರುದ್ರತಾಂಡವ’, ‘ಜಾನ್ ಜಾನಿ ಜನಾರ್ಧನ’, ‘ಸಂಹಾರ’, ‘ಪಡ್ಡೆ ಹುಲಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ‘ಜಂಟಲ್​ಮ್ಯಾನ್’, ‘ಲವ್ ಯು ರಚ್ಚು’, ‘ಒಂಬತ್ತನೇ ದಿಕ್ಕು’ ಸಿನಿಮಾಗಳನ್ನು ನಿರ್ಮಾಣವೂ ಮಾಡಿದ್ದಾರೆ. ‘ಲವ್ ಯು ರಚ್ಚು’ ಸಿನಿಮಾದ ಚಿತ್ರೀಕರಣದ ವೇಳೆ ಅಪಘಾತ ನಡೆದು ಸಾಕಷ್ಟು ಸಮಸ್ಯೆಯನ್ನೂ ಸಹ ಗುರು ದೇಶಪಾಂಡೆ ಅನುಭವಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Sat, 23 December 23