AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಐರನ್ ಲೆಗ್ ಎನ್ನುತ್ತಿದ್ದರು’; ಸುದೀಪ್ ಆರಂಭದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ

ಕಿಚ್ಚ ಸುದೀಪ್ ಅವರ ಸೂಪರ್‌ಸ್ಟಾರ್ ಪಯಣ ಸುಲಭವಲ್ಲ. ಆರಂಭದಲ್ಲಿ 'ಐರನ್ ಲೆಗ್' ಮತ್ತು 'ಲತ್ತೆ' ಎಂಬ ಟೀಕೆಗಳನ್ನು ಎದುರಿಸಿದರು. ಹಲವು ಸಿನಿಮಾಗಳು ಯಶಸ್ಸು ಕಾಣಲಿಲ್ಲ. ಧಾರಾವಾಹಿಗಳಲ್ಲಿ ನಟಿಸಿ, ಸಪೋರ್ಟಿಂಗ್ ಪಾತ್ರಗಳ ಮೂಲಕ ಪುಟಿದೆದ್ದರು. 'ಹುಚ್ಚ' ಸಿನಿಮಾ ಯಶಸ್ಸಿನೊಂದಿಗೆ 'ಕಿಚ್ಚ' ಎಂಬ ಬಿರುದು ಪಡೆದು, ತಮ್ಮ ಕಠಿಣ ಪರಿಶ್ರಮದಿಂದ ಸ್ಟಾರ್ ಸ್ಥಾನಕ್ಕೇರಿದರು.

‘ನನ್ನ ಐರನ್ ಲೆಗ್ ಎನ್ನುತ್ತಿದ್ದರು’; ಸುದೀಪ್ ಆರಂಭದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ
ಸುದೀಪ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Nov 04, 2025 | 8:03 AM

Share

ಸೂಪರ್ ಸ್ಟಾರ್ ಆದ ಪ್ರತಿ ಹೀರೋಗಳ ಹಿಂದೆ ಒಂದು ಶ್ರಮ ಇರುತ್ತದೆ. ಆ ಶ್ರಮ ಎಲ್ಲರಿಗೂ ಕಾಣಿಸಿರೋದಿಲ್ಲ. ಕೆಲವರು ಇದನ್ನು ಹೇಳಿಕೊಂಡರೆ, ಇನ್ನೂ ಕೆಲವರು ಮೌನ ವಹಿಸುತ್ತಾರೆ. ಕಿಚ್ಚ ಸುದೀಪ್ ಅವರು ಇಂದು ಸ್ಟಾರ್ ಹೀರೋ. ಅವರು ಮಾಡಿದ ಸಾಧನೆ ತುಂಬಾನೇ ದೊಡ್ಡದು. ಆದರೆ, ಮೊದಲು ಅವರು ಈ ರೀತಿ ಇರಲಿಲ್ಲ. ಅವರು ತುಂಬಾನೇ ಕಷ್ಟಪಟ್ಟಿದ್ದರು. ಈ ಬಗ್ಗೆ ಸುದೀಪ್ ಅವರೇ ಮೊದಲು ಹೇಳಿಕೊಂಡಿದ್ದರು. ಅವರನ್ನು ಅನೇಕರು ಲತ್ತೆ ಎಂದು ಕರೆಯುತ್ತಿದ್ದರಂತೆ.

ತಮಿಳಿನ ಸಂದರ್ಶನ ಒಂದರಲ್ಲಿ ಸುದೀಪ್ ಮಾತನಾಡಿದ್ದರು. ‘ಎರಡು ಸಿನಿಮಾ ಒಪ್ಪಿಕೊಂಡೆ ಎರಡೂ ಸೆಟ್ಟೇರಿಲ್ಲ. ಮೂರನೇ ಸಿನಿಮಾ ಮಾಡಿದೆ, ಯಶಸ್ಸು ಕಾಣಲಿಲ್ಲ. ಆ ಸಮಯದಲ್ಲಿ ಐರನ್ ಲೆಗ್ ಎಂದರು. ನನಗೆ ಅದರ ಅರ್ಥವೇ ಗೊತ್ತಿರಲಿಲ್ಲ. ಆಮೇಲೆ ಯಾರೋ ಬಂದು ಲತ್ತೆ ಎಂಬ ಅರ್ಥ ಇದೆ ಎಂದರು. ಐರನ್ ಎಂದರೆ ಸ್ಟ್ರಾಂಗ್ ಅಲ್ಲವೇ ಎಂದು ಕೇಳಿದೆ. ಆಗ ಅವರು ಹಾಗಲ್ಲ ಎಂದರು. ಆಗ ಏನು ಮಾಡಬೇಕು ಎಂಬ ಪ್ರಶ್ನೆ ಮೂಡಿತು’ ಎಂದಿದ್ದರು ಸುದೀಪ್.

‘ಆಗ ನಾನು ಧಾರಾವಾಹಿ ಮಾಡಿದೆ. ಮರಳಿ ಬಂದು ಸಪೋರ್ಟಿಂಗ್ ಪಾತ್ರ ಮಾಡಿದೆ. ಆಗ ಸುನಿಲ್ ದೇಸಾಯಿ ಅವರು ಸಿಕ್ಕರು. ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸಿದೆ. ಸಿನಿಮಾ ಒಳ್ಳೆಯ ಹಿಟ್ ಆಯಿತು. ಆದರೆ, ಕೆಲವೇ ದಿನಗಳಲ್ಲಿ ರಾಜ್​ಕುಮಾರ್ ಅಪಹರಣ ಆದರು. ಥಿಯೇಟರ್ ಕ್ಲೋಸ್ ಆಯಿತು. ಮತ್ತೆ ಬಂತು ಐರನ್ ಲೆಗ್’ ಎಂದಿದ್ದರು ಕಿಚ್ಚ.

ಇದನ್ನೂ ಓದಿ: ಗಿಲ್ಲಿಯಷ್ಟು ಅಮಾಯಕ ಯಾರೂ ಇಲ್ಲ: ಕಾವ್ಯ ವಿಚಾರಕ್ಕೆ ಕಾಲೆಳೆದ ಕಿಚ್ಚ ಸುದೀಪ್

‘ಹುಚ್ಚ ಸಿನಿಮಾ ರಿಲೀಸ್ ಆಯಿತು. ಥಿಯೇಟರ್​ಗೆ ಹೋದೆ ಕೆಲವೇ ಮಂದಿ ಇದ್ದರು. ಆಲ್​ ದಿ ಬೆಸ್ಟ್ ಎಂದರು. ನಾನು ಅಲ್ಲಿಂದ ಹೋದೆ. ಬೇಸರ ಆಗ್ತಾ ಇತ್ತು. ಆ ಬಳಿಕ ಸಿನಿಮಾ ಹೌಸ್​ಫುಲ್ ಆಗೋಕೆ ಪ್ರಾರಂಭ ಆಯ್ತು. ನಾನು ಥಿಯೇಟರ್​ನಲ್ಲಿ ಬಂದಾಗ ಕಿಚ್ಚ ಎಂದು ಕೂಗಿದರು. ನನ್ನ ಹೆಸರು ಆಗ ಯಾರಿಗೂ ಗೊತ್ತಿರಲಿಲ್ಲ. ಅಲ್ಲಿಂದ ಕಿಚ್ಚ ಬಿರುದು ಬಂತು’ ಎಂದು ಸುದೀಪ್ ಅವರು ವಿವರಣೆ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:57 am, Tue, 4 November 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್