ದುಬೈನಲ್ಲಿ ಕಿಚ್ಚ; ಬುರ್ಜ್​ ಖಲೀಫಾ ಫೋಟೋ ಹಾಕಿ ‘ವಿಕ್ರಾಂತ್​ ರೋಣ’ ಟೈಟಲ್​ ಲಾಂಚ್​ ನೆನಪಿಸಿಕೊಂಡ ಸುದೀಪ್​

| Updated By: ರಾಜೇಶ್ ದುಗ್ಗುಮನೆ

Updated on: Sep 18, 2021 | 4:48 PM

ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್​ 14ನೇ ಸೀಸನ್​ ಕೊವಿಡ್​ ಕಾರಣದಿಂದ ನಿಂತಿತ್ತು. ಹೀಗಾಗಿ, ಅರ್ಧಕ್ಕೆ ನಿಂತ ಐಪಿಎಲ್​ ಮ್ಯಾಚ್​ ದುಬೈನಲ್ಲಿ ಮುಂದುವರಿಯುತ್ತಿದೆ. ಐಪಿಎಲ್​ ಮ್ಯಾಚ್​ ನೋಡೋಕೆ ಸುದೀಪ್​ ಕೂಡ ದುಬೈಗೆ ತೆರಳಿದ್ದಾರೆ.

ದುಬೈನಲ್ಲಿ ಕಿಚ್ಚ; ಬುರ್ಜ್​ ಖಲೀಫಾ ಫೋಟೋ ಹಾಕಿ ‘ವಿಕ್ರಾಂತ್​ ರೋಣ’ ಟೈಟಲ್​ ಲಾಂಚ್​ ನೆನಪಿಸಿಕೊಂಡ ಸುದೀಪ್​
ದುಬೈನಲ್ಲಿ ಕಿಚ್ಚ; ಬುರ್ಜ್​ ಖಲೀಫಾ ಫೋಟೋ ಹಾಕಿ ‘ವಿಕ್ರಾಂತ್​ ರೋಣ’ ಟೈಟಲ್​ ಲಾಂಚ್​ ನೆನಪಿಸಿಕೊಂಡ ಸುದೀಪ್​
Follow us on

‘ವಿಕ್ರಾಂತ್​ ರೋಣ’ ಸಿನಿಮಾ ಟೈಟಲ್​ ಲಾಂಚ್​ ದುಬೈನ ಬುರ್ಜ್​ ಖಲೀಫಾ ಕಟ್ಟಡದ ಮೇಲೆ ನಡೆದಿತ್ತು. ವಿಶ್ವದ ಅತಿ ಎತ್ತರದ ಕಟ್ಟಡದ ಮೇಲೆ ಸುದೀಪ್ ಸಿನಿಮಾ​ ಟೈಟಲ್​ ಲಾಂಚ್​ ಆಗಿದ್ದಲ್ಲದೆ, ಕರ್ನಾಟಕದ ಬಾವುಟ ರಾರಾಜಿಸಿತ್ತು. ಇದಾಗಿ ಹಲವು ತಿಂಗಳುಗಳು ಕಳೆದಿವೆ. ಈಗ ಸುದೀಪ್​ ಮತ್ತೆ ದುಬೈಗೆ ತೆರಳಿದ್ದಾರೆ. ಬುರ್ಜ್​ ಖಲೀಫಾ ಕಟ್ಟಡದ ಫೋಟೋ ಹಾಕಿಕೊಂಡು, ‘ವಿಕ್ರಾಂತ್​ ರೋಣ’ ಸಿನಿಮಾ ಟೈಟಲ್​ ಲಾಂಚ್​ ಕಾರ್ಯಕ್ರಮವನ್ನು ನೆನಪಿಸಿಕೊಂಡಿದ್ದಾರೆ.

ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್​ 14ನೇ ಸೀಸನ್​ ಕೊವಿಡ್​ ಕಾರಣದಿಂದ ನಿಂತಿತ್ತು. ಹೀಗಾಗಿ, ಅರ್ಧಕ್ಕೆ ನಿಂತ ಐಪಿಎಲ್​ ಮ್ಯಾಚ್​ ದುಬೈನಲ್ಲಿ ಮುಂದುವರಿಯುತ್ತಿದೆ. ಐಪಿಎಲ್​ ಮ್ಯಾಚ್​ ನೋಡೋಕೆ ಸುದೀಪ್​ ಕೂಡ ದುಬೈಗೆ ತೆರಳಿದ್ದಾರೆ. ಈ ವೇಳೆ ಅವರು ಈ ಎತ್ತರದ ಕಟ್ಟಡದ ಫೋಟೋ ಪೋಸ್ಟ್​ ಮಾಡಿದ್ದಾರೆ.

‘#VikrantRonaOnBurjKhalifa ಅನ್ನು ಅಳಿಸಲು ಮತ್ತು ಬದಲಿಸಲು ಸಾಧ್ಯವಿಲ್ಲ. ಐಪಿಎಲ್​ ಮ್ಯಾಚ್​ ನೋಡೋಕೆ ಎಗ್ಸೈಟ್​ ಆಗಿದ್ದೇನೆ’ ಎಂದು ಸುದೀಪ್​ ಬರೆದುಕೊಂಡಿದ್ದಾರೆ. ಸುದೀಪ್​ ಮೊದಲಿನಿಂದಲೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಅಭಿಮಾನಿ. ಬೆಂಗಳೂರಿನಲ್ಲಿ ಮ್ಯಾಚ್​ ಇದ್ದಾಗ ಸಾಕಷ್ಟು ಬಾರಿ ಸ್ಟೇಡಿಯಮ್​ಗೆ ಬಂದು ಅವರು ಪಂದ್ಯ ವೀಕ್ಷಣೆ ಮಾಡಿದ್ದರು. ಆದರೆ, ಕಳೆದ ಬಾರಿ ಹಾಗೂ ಈ ಬಾರಿ ಕೊವಿಡ್​ ಕಾರಣದಿಂದ ಪಂದ್ಯ ವೀಕ್ಷಣೆಗೆ ಅವಕಾಶ ಇರಲಿಲ್ಲ. ಆದರೆ, ಕೊವಿಡ್​ ಲಸಿಕೆ ಪಡೆದವರಿಗೆ ಐಪಿಎಲ್​​ ವೀಕ್ಷಿಸೋಕೆ ದುಬೈನಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ, ಸುದೀಪ್​ ಕೂಡ ಅಲ್ಲಿಗೆ ತೆರಳಿದ್ದಾರೆ.

ಸೆಪ್ಟೆಂಬರ್​ 19ರಿಂದ ಅಂದರೆ ಭಾನುವಾರದಿಂದ ಐಪಿಎಲ್​ ಮ್ಯಾಚ್​ ಪುನರಾರಂಭಗೊಳ್ಳಲಿದೆ. ಸೋಮವಾರ (ಸೆಪ್ಟೆಂಬರ್​ 20) ಆರ್​ಸಿಬಿ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ನಡುವೆ ಪಂದ್ಯ ನಡೆಯಲಿದೆ. ಈ ಮ್ಯಾಚ್​​ಅನ್ನು ಸುದೀಪ್​ ವೀಕ್ಷಿಸಲಿದ್ದಾರೆ. ಈ ಮ್ಯಾಚ್​ ನೋಡೋಕೆ ಕೋಲ್ಕತ್ತಾ ತಂಡದ ಮಾಲೀಕ, ಬಾಲಿವುಡ್​ ನಟ ಶಾರುಖ್​ ಕೂಡ ಬರುವ ಸಾಧ್ಯತೆ ಇದೆ. ಹೀಗಾಗಿ, ಸುದೀಪ್​ ಮತ್ತು ಶಾರುಖ್​ ಮುಖಾಮುಖಿ ಆದರೂ ಅಚ್ಚರಿ ಇಲ್ಲ.

ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಹಾಗೂ ‘ವಿಕ್ರಾಂತ್​ ರೋಣ’ ಸಿನಿಮಾ ಕೆಲಸಗಳು ಪೂರ್ಣಗೊಂಡಿವೆ. ಕೊವಿಡ್​ ಕಡಿಮೆ ಆಗಿ, ಚಿತ್ರಮಂದಿರದಲ್ಲಿ ಸಂಪೂರ್ಣ ಭರ್ತಿಗೆ ಅವಕಾಶ ನೀಡಿದ ನಂತರದಲ್ಲಿ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಕೊರೊನಾಗೆ ಸೆಡ್ಡು ಹೊಡೆದು ಹಳೇ ಚಾರ್ಮ್​ ಪಡೆದ ಸುದೀಪ್​; ಫೋಟೋ ನೋಡಿ ವಾವ್​ ಎಂದ ಫ್ಯಾನ್ಸ್​

ಸರ್ಕಾರಿ ಶಾಲೆಗೆ ಸುಣ್ಣ-ಬಣ್ಣ ಬಳಿದು, ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಿಸಿದ ಆಲ್ ಇಂಡಿಯಾ ಬಾದ್ ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್

Published On - 4:42 pm, Sat, 18 September 21