Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್​ ಅನ್ನು ‘ಕಿಚ್ಚ ಸುದೀಪ್’ ಮಾಡಿದ ಸಿನಿಮಾ ಮರುಬಿಡುಗಡೆ, ಆದರೆ ನೋಡಬೇಕೆ, ಬೇಡವೇ ಎಂಬ ಗೊಂದಲ

Kichcha Sudeep: ಸುದೀಪ್ ಅವರನ್ನು ‘ಕಿಚ್ಚ ಸುದೀಪ್’ ಮಾಡಿದ ಹಳೆ ಸಿನಿಮಾ ಮರು ಬಿಡುಗಡೆ. ಆದರೆ ಸಿನಿಮಾವನ್ನು ನೋಡಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ ಅಭಿಮಾನಿಗಳು.

ಸುದೀಪ್​ ಅನ್ನು ‘ಕಿಚ್ಚ ಸುದೀಪ್’ ಮಾಡಿದ ಸಿನಿಮಾ ಮರುಬಿಡುಗಡೆ, ಆದರೆ ನೋಡಬೇಕೆ, ಬೇಡವೇ ಎಂಬ ಗೊಂದಲ
Follow us
ಮಂಜುನಾಥ ಸಿ.
|

Updated on: Dec 31, 2023 | 4:38 PM

ಕಿಚ್ಚ ಸುದೀಪ್ (Kichcha Sudeep) ಎಂದರೆ ತಿಳಿಯದ ಕನ್ನಡಿಗರಿಲ್ಲ. ಸುದೀಪ್ ಹೆಸರಿನ ಜೊತೆಗೆ ಜನ್ಮ ನಾಮವೇನೋ ಎಂಬಂತೆ ‘ಕಿಚ್ಚ’ ಎಂಬುದು ಸಹ ಸೇರಿಕೊಂಡು ಬಿಟ್ಟಿದೆ. ಸುದೀಪ್ ಅನ್ನು ಕಿಚ್ಚ ಸುದೀಪ್ ಮಾಡಿದ, ಕನ್ನಡ ಚಿತ್ರರಂಗದ ಮಾಸ್-ಕ್ಲಾಸ್ ಎರಡಕ್ಕೂ ಒಗ್ಗುವ ನಟ ಎಂಬಂತೆ ಮಾಡಿದ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ ಅದೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ.

ಹೀರೋ ಆಗಿ ನೆಲೆ ನಿಲ್ಲುವ ಪ್ರಯತ್ನದಲ್ಲಿದ್ದಾಗ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಆಗಿ ಬೆಳೆಯಲು ಬುನಾದಿ ಹಾಕಿಕೊಟ್ಟ ಸಿನಿಮಾ ‘ಹುಚ್ಚ’. 2001ರಲ್ಲಿ ಬಿಡುಗಡೆ ಆದ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುವ ಮೂಲಕ ಸುದೀಪ್ ಅವರನ್ನು ಕನ್ನಡ ಚಿತ್ರರಂಗದ ಆಸ್ತಿಯನ್ನಾಗಿ ಮಾಡಿತು. ಈ ಸಿನಿಮಾದಲ್ಲಿ ಸುದೀಪ್​, ಸಚ್ಚಿದಾನಂದ ಅಲಿಯಾಸ್ ಕಿಚ್ಚ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದ ಮೂಲಕ ಸುದೀಪ್​ಗೆ ಕಿಚ್ಚ ಎನ್ನುವ ಅನ್ವರ್ಥ ನಾಮ ಸೇರಿಕೊಂಡಿತು.

ಸುದೀಪ್​ಗೆ ಗುರುತು ತಂದುಕೊಟ್ಟ ‘ಹುಚ್ಚ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಅದೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ. ಆದರೆ ಈ ಸಿನಿಮಾವನ್ನು ನೋಡಬೇಕೇ ಬೇಡವೆ ಎಂಬ ಬಗ್ಗೆ ಕಿಚ್ಚು ಸುದೀಪ್ ಅಭಿಮಾನಿಗಳು ಭಿನ್ನ ನಿಲವು ಹೊಂದಿದ್ದಾರೆ. ಕೆಲವರು ನೋಡಬೇಕು ಎಂದರೆ ಕೆಲವರು ನೋಡಬಾರದು ಎಂದಿದ್ದಾರೆ. ಇದಕ್ಕೆ ಕಾರಣವೂ ಇದೆ.

ಇದನ್ನೂ ಓದಿ:ಕಿಚ್ಚ ಸುದೀಪ್​ ಬಿಡುಗಡೆ ಮಾಡಿದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದ ಟೀಸರ್

‘ಹುಚ್ಚ’ ಸಿನಿಮಾವನ್ನು ನಿರ್ಮಾಣ ಮಾಡಿದ್ದು ನಿರ್ಮಾಪಕ ರೆಹಮಾನ್. ಆಗಿನ ಸೂಪರ್ ಬ್ಲಾಕ್​ಬಸ್ಟರ್ ಸಿನಿಮಾ ಇದು. ಈ ಸಿನಿಮಾದಿಂದಾಗಿ ಭಾರಿ ದೊಡ್ಡ ಮೊತ್ತವನ್ನೇ ಆಗಿನ ಕಾಲಕ್ಕೆ ರೆಹಮಾನ್ ಗಳಿಸಿದ್ದರು. ಆದರೆ ಇತ್ತೀಚೆಗೆ ಸುದೀಪ್ ವಿರುದ್ಧ ನಿರ್ಮಾಪಕ ಕುಮಾರ್ ವಂಚನೆ ಆರೋಪ ಮಾಡಿದಾಗ ಅವರ ತಂಡ ಸೇರಿಕೊಂಡು ರೆಹಮಾನ್ ಸಹ ಸುದೀಪ್ ವಿರುದ್ಧ ಮಾತನಾಡಿದ್ದರು. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.

ದೊಡ್ಡ ಮೊತ್ತದ ಹಣ ಮಾಡಿಕೊಟ್ಟ ಸುದೀಪ್ ವಿರುದ್ಧವೇ ಮಾತನಾಡಿದ ರೆಹಮಾನ್ ನಿರ್ಮಾಣ ಮಾಡಿರುವ ಸಿನಿಮಾವನ್ನು ನೋಡಬಾರದು ಎಂದು ಕೆಲವು ಸುದೀಪ್ ಅಭಿಮಾನಿಗಳು ವಾದವಾಗಿದ್ದರೆ, ಇನ್ನು ಕೆಲವರು ‘ಹುಚ್ಚ’ ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು ಅಂಥಹಾ ಚಿತ್ರವನ್ನು, ಸಿನಿಮಾ ಪ್ರೇಮಿಯಾಗಿ ನೋಡಬೇಕು ಎಂದು ವಾದಿಸಿದ್ದಾರೆ.

ಕಿಚ್ಚ ಸುದೀಪ್ ಪ್ರಸ್ತುತ ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಅದರ ಜೊತೆಗೆ ಬಿಗ್​ಬಾಸ್ ನಿರೂಪಣೆಯನ್ನೂ ಮಾಡುತ್ತಿದ್ದಾರೆ. ಇವೆರಡರ ಬಳಿಕ ತಮ್ಮ 47ನೇ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಸಿನಿಮಾವನ್ನು ತಮಿಳಿನ ನಟ, ನಿರ್ದೇಶಕ ಚೇರನ್ ನಿರ್ದೇಶನ ಮಾಡಲಿದ್ದಾರೆ. ಈ ಎರಡೂ ಸಿನಿಮಾಗಳ ಬಳಿಕ ರಕ್ಷಿತ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ಸುದೀಪ್ ನಟಿಸುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್