Sign In

By signing in or creating an account, you agree with Associated Broadcasting Company's Terms & Conditions and Privacy Policy.

Kiran Raj: ನೀವು ನೋಡಿದ ‘ಕನ್ನಡತಿ’ ನಟ ಕಿರಣ್​ ರಾಜ್​ ಇವರೇನಾ? ‘ರಾನಿ’ ಟೀಸರ್​ನಲ್ಲಿದೆ ಬೇರೆಯದೇ ಅವತಾರ

Ronny Movie Teaser: ಅದ್ದೂರಿ ಮೇಕಿಂಗ್​, ಮೈ ನವಿರೇಳಿಸುವ ಆ್ಯಕ್ಷನ್​, ಖಡಕ್​ ಆದ ಡೈಲಾಗ್​ಗಳು ಈ ಟೀಸರ್​ನಲ್ಲಿ ಹೈಲೈಟ್​ ಆಗಿವೆ. ಅಪ್ಪಟ ಮಾಸ್​ ಹೀರೋ ಆಗಿ ಕಿರಣ್​ ರಾಜ್​ ಅವರು ಅಬ್ಬರಿಸಿದ್ದಾರೆ.

Kiran Raj: ನೀವು ನೋಡಿದ ‘ಕನ್ನಡತಿ’ ನಟ ಕಿರಣ್​ ರಾಜ್​ ಇವರೇನಾ? ‘ರಾನಿ’ ಟೀಸರ್​ನಲ್ಲಿದೆ ಬೇರೆಯದೇ ಅವತಾರ
ಕಿರಣ್​ ರಾಜ್​
Follow us
ಮದನ್​ ಕುಮಾರ್​
|

Updated on: Jul 05, 2023 | 7:45 PM

ಖ್ಯಾತ ನಟ ಕಿರಣ್​ ರಾಜ್​ (Kiran Raj) ಅವರನ್ನು ‘ಕನ್ನಡತಿ’ ಸೀರಿಯಲ್​ನಲ್ಲಿ ನೋಡಿ ಜನರು ಇಷ್ಟಪಟ್ಟರು. ಸಾಫ್ಟ್​ ವ್ಯಕ್ತಿತ್ವದ ಪ್ರೇಮಿಯಾಗಿ ಅವರು ಗಮನ ಸೆಳೆದರು. ಆದರೆ ಈಗ ‘ರಾನಿ’ (Ronny Movie) ಸಿನಿಮಾದಲ್ಲಿ ಅವರ ಗೆಟಪ್​ ಸಂಪೂರ್ಣ ಬದಲಾಗಿದೆ. ತುಂಬ ಮಾಸ್​ ಆಗಿ ಅವರು ಜನರ ಮುಂದೆ ಬರಲು ಸಜ್ಜಾಗಿದ್ದಾರೆ. ಆ ಸಿನಿಮಾದ ಝಲಕ್​ ಹೇಗಿರಲಿದೆ ಎಂಬುದನ್ನು ಪೋಸ್ಟರ್​ ಮೂಲಕ ತೋರಿಸಲಾಗಿತ್ತು. ಈಗ ‘ರಾನಿ’ ಸಿನಿಮಾದ ಟೀಸರ್​ (Ronny Teaser) ಬಿಡುಗಡೆ ಆಗಿದೆ. ಅದರಲ್ಲಿ ಕಿರಣ್ ರಾಜ್​ ಅವರನ್ನು ನೋಡಿದ ಎಲ್ಲರಿಗೂ ಅಚ್ಚರಿ ಆಗಿದೆ. ‘ನಾವು ಸೀರಿಯಲ್​ನಲ್ಲಿ ನೋಡಿದ ಕಿರಣ್​ ರಾಜ್​ ಇವರೇನಾ’ ಎಂಬ ಪ್ರಶ್ನೆ ಮೂಡುವ ರೀತಿಯಲ್ಲಿ ಅವರು ರಗಡ್​ ಅವತಾರ ತಾಳಿದ್ದಾರೆ. ಕಿರಣ್​ ರಾಜ್​ ಅವರ ಜನ್ಮದಿನದ ಪ್ರಯುಕ್ತ ಇಂದು (ಜುಲೈ 5) ಈ ಟೀಸರ್​ ಬಿಡುಗಡೆ ಆಗಿದೆ.

‘ರಾನಿ’ ಸಿನಿಮಾಗೆ ಗುರುತೇಜ್​ ಶೆಟ್ಟಿ ಅವರು ನಿರ್ದೇಶನ ಮಾಡಿದ್ದಾರೆ. ಚಂದ್ರಕಾಂತ್​ ಪೂಜಾರಿ ಮತ್ತು ಉಮೇಶ್​ ಹೆಗ್ಡೆ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಪಾತ್ರವರ್ಗದಲ್ಲಿ ಕಿರಣ್​ ರಾಜ್​, ರವಿಶಂಕರ್​, ಬಿ. ಸುರೇಶ, ಉಗ್ರಂ ಮಂಜು, ಯಶ್​ ಶೆಟ್ಟಿ, ಮೈಕೋ ನಾಗರಾಜ್​, ಉ್ರಗಂ ರವಿ, ಧರ್ಮಣ್ಣ ಮುಂತಾದವರು ಇದ್ದಾರೆ. ಈ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ. ಕಿರಣ್​ ರಾಜ್​ ಅವರ ಅಭಿಮಾನಿಗಳು ಈ ಸಿನಿಮಾ ಮೇಲೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಟೀಸರ್​ ನೋಡಿದ ಬಳಿಕ ಆ ನಿರೀಕ್ಷೆ ಡಬಲ್​ ಆಗಿದೆ.

ಒಂದು ಅಂಡರ್​ವರ್ಲ್ಡ್​ ಕಥೆಯನ್ನು ‘ರಾನಿ’ ಸಿನಿಮಾದಲ್ಲಿ ತೋರಿಸಲಾಗುವುದು ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ಅದ್ದೂರಿ ಮೇಕಿಂಗ್​, ಮೈ ನವಿರೇಳಿಸುವ ಆ್ಯಕ್ಷನ್​, ಖಡಕ್​ ಆದ ಡೈಲಾಗ್​ಗಳು ಈ ಟೀಸರ್​ನಲ್ಲಿ ಹೈಲೈಟ್​ ಆಗಿವೆ. ಅಪ್ಪಟ ಮಾಸ್​ ಹೀರೋ ಆಗಿ ಕಿರಣ್​ ರಾಜ್​ ಅವರು ಅಬ್ಬರಿಸಿದ್ದಾರೆ. ಫೈಟಿಂಗ್​ ದೃಶ್ಯಗಳಲ್ಲಿ ಆರ್ಭಟಿಸಿದ್ದಾರೆ. ‘ನಾನು ನಾನಾಗೋಕೆ ಬಂದಿದ್ದೇನೆ. ಡಾನ್​ ಆಗೋಕೆ ಬಂದಿಲ್ಲ’ ಎಂಬ ಡೈಲಾಗ್​ ಇಲ್ಲಿದೆ. ಹಾಗಾದರೆ ಕಥಾನಾಯಕ ಅಂಡರ್​ವರ್ಲ್ಡ್​ಗೆ ಹೇಗೆ ಎಂಟ್ರಿ ನೀಡುತ್ತಾನೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ.

ಇದನ್ನೂ ಓದಿ: Kiran Raj: ‘ಕನ್ನಡತಿ’ ಸೀರಿಯಲ್ ನಟ​ ಕಿರಣ್​ ರಾಜ್​ ಹುಟ್ಟುಹಬ್ಬಕ್ಕೆ ಹರಿದುಬಂತು ಶುಭಾಶಯಗಳ ಮಹಾಪೂರ

ಈ ಚಿತ್ರಕ್ಕೆ ಮಣಿಕಾಂತ್​ ಖದ್ರಿ ಅವರು ಸಂಗೀತ ನೀಡಿದ್ದಾರೆ. ಸಚಿನ್​ ಬಸ್ರೂರು ಅವರ ಹಿನ್ನೆಲೆ ಸಂಗೀತ ಇದೆ. ರಾಘವೇಂದ್ರ ಬಿ. ಕೋಲಾರ ಅವರು ಛಾಯಾಗ್ರಹಣ ಮಾಡಿದ್ದಾರೆ. ಎಕ್ಸಿಕ್ಯೂಟಿವ್​ ಪ್ರೊಡ್ಯೂಸರ್​ ಆಗಿ ಗಿರೀಶ್​ ಹೆಗ್ಡೆ ಕೆಲಸ ಮಾಡಿದ್ದಾರೆ. ವಿನೋದ್​ ಅವರ ಸಾಹಸ ನಿರ್ದೇಶನ, ಎ. ಸತೀಶ್​ ಕಲಾ ನಿರ್ದೇಶನ, ಉಮೇಶ್​​ ಆರ್​.ಬಿ. ಅವರ ಸಂಕಲನ ‘ರಾನಿ’ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ