AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kiran Raj: ನೀವು ನೋಡಿದ ‘ಕನ್ನಡತಿ’ ನಟ ಕಿರಣ್​ ರಾಜ್​ ಇವರೇನಾ? ‘ರಾನಿ’ ಟೀಸರ್​ನಲ್ಲಿದೆ ಬೇರೆಯದೇ ಅವತಾರ

Ronny Movie Teaser: ಅದ್ದೂರಿ ಮೇಕಿಂಗ್​, ಮೈ ನವಿರೇಳಿಸುವ ಆ್ಯಕ್ಷನ್​, ಖಡಕ್​ ಆದ ಡೈಲಾಗ್​ಗಳು ಈ ಟೀಸರ್​ನಲ್ಲಿ ಹೈಲೈಟ್​ ಆಗಿವೆ. ಅಪ್ಪಟ ಮಾಸ್​ ಹೀರೋ ಆಗಿ ಕಿರಣ್​ ರಾಜ್​ ಅವರು ಅಬ್ಬರಿಸಿದ್ದಾರೆ.

Kiran Raj: ನೀವು ನೋಡಿದ ‘ಕನ್ನಡತಿ’ ನಟ ಕಿರಣ್​ ರಾಜ್​ ಇವರೇನಾ? ‘ರಾನಿ’ ಟೀಸರ್​ನಲ್ಲಿದೆ ಬೇರೆಯದೇ ಅವತಾರ
ಕಿರಣ್​ ರಾಜ್​
ಮದನ್​ ಕುಮಾರ್​
|

Updated on: Jul 05, 2023 | 7:45 PM

Share

ಖ್ಯಾತ ನಟ ಕಿರಣ್​ ರಾಜ್​ (Kiran Raj) ಅವರನ್ನು ‘ಕನ್ನಡತಿ’ ಸೀರಿಯಲ್​ನಲ್ಲಿ ನೋಡಿ ಜನರು ಇಷ್ಟಪಟ್ಟರು. ಸಾಫ್ಟ್​ ವ್ಯಕ್ತಿತ್ವದ ಪ್ರೇಮಿಯಾಗಿ ಅವರು ಗಮನ ಸೆಳೆದರು. ಆದರೆ ಈಗ ‘ರಾನಿ’ (Ronny Movie) ಸಿನಿಮಾದಲ್ಲಿ ಅವರ ಗೆಟಪ್​ ಸಂಪೂರ್ಣ ಬದಲಾಗಿದೆ. ತುಂಬ ಮಾಸ್​ ಆಗಿ ಅವರು ಜನರ ಮುಂದೆ ಬರಲು ಸಜ್ಜಾಗಿದ್ದಾರೆ. ಆ ಸಿನಿಮಾದ ಝಲಕ್​ ಹೇಗಿರಲಿದೆ ಎಂಬುದನ್ನು ಪೋಸ್ಟರ್​ ಮೂಲಕ ತೋರಿಸಲಾಗಿತ್ತು. ಈಗ ‘ರಾನಿ’ ಸಿನಿಮಾದ ಟೀಸರ್​ (Ronny Teaser) ಬಿಡುಗಡೆ ಆಗಿದೆ. ಅದರಲ್ಲಿ ಕಿರಣ್ ರಾಜ್​ ಅವರನ್ನು ನೋಡಿದ ಎಲ್ಲರಿಗೂ ಅಚ್ಚರಿ ಆಗಿದೆ. ‘ನಾವು ಸೀರಿಯಲ್​ನಲ್ಲಿ ನೋಡಿದ ಕಿರಣ್​ ರಾಜ್​ ಇವರೇನಾ’ ಎಂಬ ಪ್ರಶ್ನೆ ಮೂಡುವ ರೀತಿಯಲ್ಲಿ ಅವರು ರಗಡ್​ ಅವತಾರ ತಾಳಿದ್ದಾರೆ. ಕಿರಣ್​ ರಾಜ್​ ಅವರ ಜನ್ಮದಿನದ ಪ್ರಯುಕ್ತ ಇಂದು (ಜುಲೈ 5) ಈ ಟೀಸರ್​ ಬಿಡುಗಡೆ ಆಗಿದೆ.

‘ರಾನಿ’ ಸಿನಿಮಾಗೆ ಗುರುತೇಜ್​ ಶೆಟ್ಟಿ ಅವರು ನಿರ್ದೇಶನ ಮಾಡಿದ್ದಾರೆ. ಚಂದ್ರಕಾಂತ್​ ಪೂಜಾರಿ ಮತ್ತು ಉಮೇಶ್​ ಹೆಗ್ಡೆ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಪಾತ್ರವರ್ಗದಲ್ಲಿ ಕಿರಣ್​ ರಾಜ್​, ರವಿಶಂಕರ್​, ಬಿ. ಸುರೇಶ, ಉಗ್ರಂ ಮಂಜು, ಯಶ್​ ಶೆಟ್ಟಿ, ಮೈಕೋ ನಾಗರಾಜ್​, ಉ್ರಗಂ ರವಿ, ಧರ್ಮಣ್ಣ ಮುಂತಾದವರು ಇದ್ದಾರೆ. ಈ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ. ಕಿರಣ್​ ರಾಜ್​ ಅವರ ಅಭಿಮಾನಿಗಳು ಈ ಸಿನಿಮಾ ಮೇಲೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಟೀಸರ್​ ನೋಡಿದ ಬಳಿಕ ಆ ನಿರೀಕ್ಷೆ ಡಬಲ್​ ಆಗಿದೆ.

ಒಂದು ಅಂಡರ್​ವರ್ಲ್ಡ್​ ಕಥೆಯನ್ನು ‘ರಾನಿ’ ಸಿನಿಮಾದಲ್ಲಿ ತೋರಿಸಲಾಗುವುದು ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ಅದ್ದೂರಿ ಮೇಕಿಂಗ್​, ಮೈ ನವಿರೇಳಿಸುವ ಆ್ಯಕ್ಷನ್​, ಖಡಕ್​ ಆದ ಡೈಲಾಗ್​ಗಳು ಈ ಟೀಸರ್​ನಲ್ಲಿ ಹೈಲೈಟ್​ ಆಗಿವೆ. ಅಪ್ಪಟ ಮಾಸ್​ ಹೀರೋ ಆಗಿ ಕಿರಣ್​ ರಾಜ್​ ಅವರು ಅಬ್ಬರಿಸಿದ್ದಾರೆ. ಫೈಟಿಂಗ್​ ದೃಶ್ಯಗಳಲ್ಲಿ ಆರ್ಭಟಿಸಿದ್ದಾರೆ. ‘ನಾನು ನಾನಾಗೋಕೆ ಬಂದಿದ್ದೇನೆ. ಡಾನ್​ ಆಗೋಕೆ ಬಂದಿಲ್ಲ’ ಎಂಬ ಡೈಲಾಗ್​ ಇಲ್ಲಿದೆ. ಹಾಗಾದರೆ ಕಥಾನಾಯಕ ಅಂಡರ್​ವರ್ಲ್ಡ್​ಗೆ ಹೇಗೆ ಎಂಟ್ರಿ ನೀಡುತ್ತಾನೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ.

ಇದನ್ನೂ ಓದಿ: Kiran Raj: ‘ಕನ್ನಡತಿ’ ಸೀರಿಯಲ್ ನಟ​ ಕಿರಣ್​ ರಾಜ್​ ಹುಟ್ಟುಹಬ್ಬಕ್ಕೆ ಹರಿದುಬಂತು ಶುಭಾಶಯಗಳ ಮಹಾಪೂರ

ಈ ಚಿತ್ರಕ್ಕೆ ಮಣಿಕಾಂತ್​ ಖದ್ರಿ ಅವರು ಸಂಗೀತ ನೀಡಿದ್ದಾರೆ. ಸಚಿನ್​ ಬಸ್ರೂರು ಅವರ ಹಿನ್ನೆಲೆ ಸಂಗೀತ ಇದೆ. ರಾಘವೇಂದ್ರ ಬಿ. ಕೋಲಾರ ಅವರು ಛಾಯಾಗ್ರಹಣ ಮಾಡಿದ್ದಾರೆ. ಎಕ್ಸಿಕ್ಯೂಟಿವ್​ ಪ್ರೊಡ್ಯೂಸರ್​ ಆಗಿ ಗಿರೀಶ್​ ಹೆಗ್ಡೆ ಕೆಲಸ ಮಾಡಿದ್ದಾರೆ. ವಿನೋದ್​ ಅವರ ಸಾಹಸ ನಿರ್ದೇಶನ, ಎ. ಸತೀಶ್​ ಕಲಾ ನಿರ್ದೇಶನ, ಉಮೇಶ್​​ ಆರ್​.ಬಿ. ಅವರ ಸಂಕಲನ ‘ರಾನಿ’ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು