AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟಿಗೊಬ್ಬ-3 ಚಿತ್ರದ ಅಫೀಷಿಯಲ್ ಪೋಸ್ಟರ್​​ ಡೀಸೈನರ್​​ ಅಲ್ಲ, ಮಾಹಿತಿ ನೀಡದೇ ನನ್ನನ್ನು ನಿರ್ಮಾಣ ಸಂಸ್ಥೆ ಹೊರಹಾಕಿದೆ; ಸಾಯಿ ಕೃಷ್ಣ

Kotigobba 3 Designer Sai Krishna: ಅಭಿನಯ ಚಕ್ರವರ್ತಿ ನಟಿಸಿರುವ ಕೆಂಪೇಗೌಡ, ವಿಷ್ಣುವರ್ಧನ, ವರದ ನಾಯಕ ಸೇರಿದಂತೆ ಇನ್ನಿತರ ಅಧ್ಬುತ ಸಿನಿಮಾಗಳಿಗೆ ಸಾಯಿ ಕೃಷ್ಣ ಅವರೇ ಪೋಸ್ಟರ್​​ ಡಿಸೈನ್​ ಮಾಡಿದ್ದಾರೆ. ಇದೀಗ ಕೋಟಿಗೊಬ್ಬ-3 ಚಿತ್ರ ತಂಡದಿಂದ ಹೊರಬಂದಿರುವುದು ಸುದೀಪ್​ ಅಭಿಮಾನಿಗಳಿಗೆ ಬೇಸರ ನೀಡಿದೆ.

ಕೋಟಿಗೊಬ್ಬ-3 ಚಿತ್ರದ ಅಫೀಷಿಯಲ್ ಪೋಸ್ಟರ್​​ ಡೀಸೈನರ್​​ ಅಲ್ಲ, ಮಾಹಿತಿ ನೀಡದೇ ನನ್ನನ್ನು ನಿರ್ಮಾಣ ಸಂಸ್ಥೆ ಹೊರಹಾಕಿದೆ; ಸಾಯಿ ಕೃಷ್ಣ
kotigobba 3
shruti hegde
|

Updated on:Apr 14, 2021 | 11:43 AM

Share

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕೊವಿಡ್​ ಸೋಂಕು ದೇಶದೆಲ್ಲೆಡೆ ಹರಡಿರುವುದರಿಂದ ಸಿನಿಮಾರಂಗಕ್ಕೆ ದೊಡ್ಡಹೊಡೆತ ಉಂಟಾಗಿದೆ. ಹಾಗಾಗಿ ಬಿಡುಗಡೆಗೊಳ್ಳಲು ಸಿದ್ಧವಾಗಿದ್ದ ಚಿತ್ರಗಳೆಲ್ಲವೂ ಮುಂದೂಡಿಕೆಯಾಗುತ್ತಿದೆ. ಅಂದುಕೊಂಡಂತೆಯೇ ಎಲ್ಲವೂ ಸರಿಯಾಗಿ ನಡೆಯುತ್ತಿದ್ದರೆ ಇದೇ ತಿಂಗಳಲ್ಲಿ ಕೋಟಿಗೊಬ್ಬ-3 ಚಿತ್ರ ಜನಮನ ತಲುಪುತ್ತಿತ್ತು. ಈ ನಡುವೆಯೇ ಆದರೆ ಸುದೀಪ್​ ಅಭಿಮಾನಿಗಳಿಗೆ ನಿರಾಸೆಯ ಮೂಡಿರುವ ಸಂಗತಿಯೊಂದು ನಡೆದಿದೆ.

ಇದೆಲ್ಲದರ ಮಧ್ಯೆ ಸುದೀಪ್​ ಅವರ ಸಿನಿಮಾಗಳ ಪೋಸ್ಟರ್​ ಡಿಸೈನ್​ ಮಾಡುತ್ತಿದ್ದ ಸಾಯಿ ಕೃಷ್ಣ ಅವರು ಕೋಟಿಗೊಬ್ಬ-3 ಚಿತ್ರ ತಂಡ ಬಿಟ್ಟು ಹೊರ ಬಂದಿದ್ದಾರೆ ಎಂಬ ಮಾಹಿತಿಗಳು ಹರಿ ಬರುತ್ತಿದೆ. ನಿನ್ನೆ ಏಪ್ರಿಲ್​ 14ರಂದು ಈ ಕುರಿತಂತೆ ಸಾಯಿ ಕೃಷ್ಣ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಅಸಮಾಧಾನವನ್ನು ಹೊರಹಾಕಿದ್ದರೆ. ಕಾರಣ ಕೊಡದೆ ಕೋಟಿಕೊಬ್ಬ-3 ಚಿತ್ರ ತಂಡ ನನ್ನನ್ನು ಹೊರಹಾಕಿದೆ ಎಂದು ಹೇಳಿಕೊಂಡಿದ್ದಾರೆ. ನಾನು ಈ ಚಿತ್ರದ ಪೋಸ್ಟರ್​ ತಯಾರಿಗೆ ಒಪ್ಪಿಕೊಂಡಿರುವುದು ಒಂದು ಪ್ರಮುಖ ಕಾರಣ ಸುದೀಪ್​ , ಅವರ ಅಭಿಮಾನಿಗಳು ಮತ್ತೊಂದು ಕೊವಿಡ್​ ಪರಿಣಾಮವಾಗಿ ಹಣ. ಇವುಗಳನ್ನು ಬಿಟ್ಟು ಇನ್ಯಾರೂ ಅಲ್ಲ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ. ಇಂದಿನಿಂದ ನಾನು ಕೋಟಿಗಿಬ್ಬ-3 ಚಿತ್ರದ ಅಫೀಷಿಯಲ್​ ಪೋಸ್ಟರ್​ ಡಿಸೈನರ್​ ಅಲ್ಲ ಎಂದು ಸಾಯಿ ಕೃಷ್ಣ ಸುದೀಪ್​ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ.

ಗೆಳೆಯರೇ.. ನಾನು ಪೋಸ್ಟರ್​ ಡೀಸೈನ್​ ನಿಲ್ಲಿಸಿ ತುಂಬಾ ದಿನಗಳಾಯಿತು. ಲಾಕ್​ಡೌನ್​ ಸಮಯದಲ್ಲಿ ಈ ಸಿನಿಮಾ ಒಪ್ಪಿಕೊಂಡಿದ್ದೆ. ನನ್ನ ಮೊದಲನೇ ಸಿನಿಮಾ ಅಪ್ಪು ಅವರದ್ದು.. ಅಜಯ್​.. ನಂತರ ಪರಮಾತ್ಮ, ರಣವಿಕ್ರಮ ಮಾಡಿದ್ದೀನಿ. ಇನ್ನೇನಾದರೂ ಕಾಲ ಕೂಡಿಬಂದರೆ, ಹಣೆಬರಹ ಚೆನ್ನಾಗಿದ್ದರೆ ನಿರ್ದೇಶನ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸಾಯಿ ಕೃಷ್ಣ ಅವರು ಇತ್ತೀಚಿನ ದಿನಗಳಲ್ಲಿ ಪೋಸ್ಟರ್​ ಡಿಸೈನ್​ ಮಾಡುವುದನ್ನು ನಿಲ್ಲಿಸಿದ್ದರು. ಕೊವಿಡ್​ ಕಾರಣದಿಂದ ಅನಿವಾರ್ಯತೆ ಇದ್ದರಿಂದ ಕೋಟಿಗೊಬ್ಬ-3 ಚಿತ್ರ ಒಪ್ಪಿಕೊಂಡಿದ್ದರು ಎಂದು ಖುದ್ದಾಗಿ ಅವರೇ ಹೇಳಿಕೊಂಡಿದ್ದಾರೆ.

ಸಾಯಿ ಕೃಷ್ಣ ಅವರ ಟ್ವೀಟ್​ ಗಮನಿಸಿದ ಕಿಚ್ಚ ಸುದೀಪ್​ ಪ್ರತಿಕ್ರಿಯಿಸಿದ್ದು, ಕೋಟಿಗೊಬ್ಬ-3 ಚಿತ್ರತಂಡದ ಜತೆಗೆ ಇಲ್ಲಿಯವರೆಗೆ ಜೊತೆಯಾಗಿದ್ದೀರಿ. ಈ ಸಿನಿಮಾ ಮುಗಿಯುವವರೆಗೂ ನಿಮ್ಮ ಪ್ರಯಾಣ ಮುಂದುವರೆಯಬೇಕು ಎಂಬುದು ನನ್ನ ಆಸೆ. ಈ ನಿಮ್ಮ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಇದೀಗ ನೀವು ಹೇಳಿರುವ ವಿಷಯದ ಕುರಿತಾಗಿ ಗಮನ ಹರಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಭಿನಯ ಚಕ್ರವರ್ತಿ ನಟಿಸಿರುವ ಕೆಂಪೇಗೌಡ, ವಿಷ್ಣುವರ್ಧನ, ವರದ ನಾಯಕ ಸೇರಿದಂತೆ ಇನ್ನಿತರ ಅಧ್ಬುತ ಸಿನಿಮಾಗಳಿಗೆ ಸಾಯಿ ಕೃಷ್ಣ ಅವರೇ ಪೋಸ್ಟರ್​​ ಡಿಸೈನ್​ ಮಾಡಿದ್ದಾರೆ. ಇದೀಗ ಕೋಟಿಗೊಬ್ಬ-3 ಚಿತ್ರ ತಂಡದಿಂದ ಹೊರಬಂದಿರುವುದು ಸುದೀಪ್​ ಅಭಿಮಾನಿಗಳಿಗೆ ಬೇಸರ ನೀಡಿದೆ.

ಇದನ್ನೂ ಓದಿ: ರುಕ್ಮಿಣಿ ವಿಜಯಕುಮಾರ್ ಸೀರೆಯುಟ್ಟು ಕಸರತ್ತು ಮಾಡಿದ ವಿಡಿಯೋ ವೈರಲ್; ಮಹಿಳೆಯರಿಗೆ ಇದು ಸ್ಫೂರ್ತಿ ಎಂದ ನೆಟ್ಟಿಗರು

(Kotigobba 3 poster designer Sai Krishna Enreddy walked out of Movie Crew)

Published On - 10:18 am, Wed, 14 April 21

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ