AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟಿಗೊಬ್ಬ-3 ಚಿತ್ರದ ಅಫೀಷಿಯಲ್ ಪೋಸ್ಟರ್​​ ಡೀಸೈನರ್​​ ಅಲ್ಲ, ಮಾಹಿತಿ ನೀಡದೇ ನನ್ನನ್ನು ನಿರ್ಮಾಣ ಸಂಸ್ಥೆ ಹೊರಹಾಕಿದೆ; ಸಾಯಿ ಕೃಷ್ಣ

Kotigobba 3 Designer Sai Krishna: ಅಭಿನಯ ಚಕ್ರವರ್ತಿ ನಟಿಸಿರುವ ಕೆಂಪೇಗೌಡ, ವಿಷ್ಣುವರ್ಧನ, ವರದ ನಾಯಕ ಸೇರಿದಂತೆ ಇನ್ನಿತರ ಅಧ್ಬುತ ಸಿನಿಮಾಗಳಿಗೆ ಸಾಯಿ ಕೃಷ್ಣ ಅವರೇ ಪೋಸ್ಟರ್​​ ಡಿಸೈನ್​ ಮಾಡಿದ್ದಾರೆ. ಇದೀಗ ಕೋಟಿಗೊಬ್ಬ-3 ಚಿತ್ರ ತಂಡದಿಂದ ಹೊರಬಂದಿರುವುದು ಸುದೀಪ್​ ಅಭಿಮಾನಿಗಳಿಗೆ ಬೇಸರ ನೀಡಿದೆ.

ಕೋಟಿಗೊಬ್ಬ-3 ಚಿತ್ರದ ಅಫೀಷಿಯಲ್ ಪೋಸ್ಟರ್​​ ಡೀಸೈನರ್​​ ಅಲ್ಲ, ಮಾಹಿತಿ ನೀಡದೇ ನನ್ನನ್ನು ನಿರ್ಮಾಣ ಸಂಸ್ಥೆ ಹೊರಹಾಕಿದೆ; ಸಾಯಿ ಕೃಷ್ಣ
kotigobba 3
shruti hegde
|

Updated on:Apr 14, 2021 | 11:43 AM

Share

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕೊವಿಡ್​ ಸೋಂಕು ದೇಶದೆಲ್ಲೆಡೆ ಹರಡಿರುವುದರಿಂದ ಸಿನಿಮಾರಂಗಕ್ಕೆ ದೊಡ್ಡಹೊಡೆತ ಉಂಟಾಗಿದೆ. ಹಾಗಾಗಿ ಬಿಡುಗಡೆಗೊಳ್ಳಲು ಸಿದ್ಧವಾಗಿದ್ದ ಚಿತ್ರಗಳೆಲ್ಲವೂ ಮುಂದೂಡಿಕೆಯಾಗುತ್ತಿದೆ. ಅಂದುಕೊಂಡಂತೆಯೇ ಎಲ್ಲವೂ ಸರಿಯಾಗಿ ನಡೆಯುತ್ತಿದ್ದರೆ ಇದೇ ತಿಂಗಳಲ್ಲಿ ಕೋಟಿಗೊಬ್ಬ-3 ಚಿತ್ರ ಜನಮನ ತಲುಪುತ್ತಿತ್ತು. ಈ ನಡುವೆಯೇ ಆದರೆ ಸುದೀಪ್​ ಅಭಿಮಾನಿಗಳಿಗೆ ನಿರಾಸೆಯ ಮೂಡಿರುವ ಸಂಗತಿಯೊಂದು ನಡೆದಿದೆ.

ಇದೆಲ್ಲದರ ಮಧ್ಯೆ ಸುದೀಪ್​ ಅವರ ಸಿನಿಮಾಗಳ ಪೋಸ್ಟರ್​ ಡಿಸೈನ್​ ಮಾಡುತ್ತಿದ್ದ ಸಾಯಿ ಕೃಷ್ಣ ಅವರು ಕೋಟಿಗೊಬ್ಬ-3 ಚಿತ್ರ ತಂಡ ಬಿಟ್ಟು ಹೊರ ಬಂದಿದ್ದಾರೆ ಎಂಬ ಮಾಹಿತಿಗಳು ಹರಿ ಬರುತ್ತಿದೆ. ನಿನ್ನೆ ಏಪ್ರಿಲ್​ 14ರಂದು ಈ ಕುರಿತಂತೆ ಸಾಯಿ ಕೃಷ್ಣ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಅಸಮಾಧಾನವನ್ನು ಹೊರಹಾಕಿದ್ದರೆ. ಕಾರಣ ಕೊಡದೆ ಕೋಟಿಕೊಬ್ಬ-3 ಚಿತ್ರ ತಂಡ ನನ್ನನ್ನು ಹೊರಹಾಕಿದೆ ಎಂದು ಹೇಳಿಕೊಂಡಿದ್ದಾರೆ. ನಾನು ಈ ಚಿತ್ರದ ಪೋಸ್ಟರ್​ ತಯಾರಿಗೆ ಒಪ್ಪಿಕೊಂಡಿರುವುದು ಒಂದು ಪ್ರಮುಖ ಕಾರಣ ಸುದೀಪ್​ , ಅವರ ಅಭಿಮಾನಿಗಳು ಮತ್ತೊಂದು ಕೊವಿಡ್​ ಪರಿಣಾಮವಾಗಿ ಹಣ. ಇವುಗಳನ್ನು ಬಿಟ್ಟು ಇನ್ಯಾರೂ ಅಲ್ಲ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ. ಇಂದಿನಿಂದ ನಾನು ಕೋಟಿಗಿಬ್ಬ-3 ಚಿತ್ರದ ಅಫೀಷಿಯಲ್​ ಪೋಸ್ಟರ್​ ಡಿಸೈನರ್​ ಅಲ್ಲ ಎಂದು ಸಾಯಿ ಕೃಷ್ಣ ಸುದೀಪ್​ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ.

ಗೆಳೆಯರೇ.. ನಾನು ಪೋಸ್ಟರ್​ ಡೀಸೈನ್​ ನಿಲ್ಲಿಸಿ ತುಂಬಾ ದಿನಗಳಾಯಿತು. ಲಾಕ್​ಡೌನ್​ ಸಮಯದಲ್ಲಿ ಈ ಸಿನಿಮಾ ಒಪ್ಪಿಕೊಂಡಿದ್ದೆ. ನನ್ನ ಮೊದಲನೇ ಸಿನಿಮಾ ಅಪ್ಪು ಅವರದ್ದು.. ಅಜಯ್​.. ನಂತರ ಪರಮಾತ್ಮ, ರಣವಿಕ್ರಮ ಮಾಡಿದ್ದೀನಿ. ಇನ್ನೇನಾದರೂ ಕಾಲ ಕೂಡಿಬಂದರೆ, ಹಣೆಬರಹ ಚೆನ್ನಾಗಿದ್ದರೆ ನಿರ್ದೇಶನ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸಾಯಿ ಕೃಷ್ಣ ಅವರು ಇತ್ತೀಚಿನ ದಿನಗಳಲ್ಲಿ ಪೋಸ್ಟರ್​ ಡಿಸೈನ್​ ಮಾಡುವುದನ್ನು ನಿಲ್ಲಿಸಿದ್ದರು. ಕೊವಿಡ್​ ಕಾರಣದಿಂದ ಅನಿವಾರ್ಯತೆ ಇದ್ದರಿಂದ ಕೋಟಿಗೊಬ್ಬ-3 ಚಿತ್ರ ಒಪ್ಪಿಕೊಂಡಿದ್ದರು ಎಂದು ಖುದ್ದಾಗಿ ಅವರೇ ಹೇಳಿಕೊಂಡಿದ್ದಾರೆ.

ಸಾಯಿ ಕೃಷ್ಣ ಅವರ ಟ್ವೀಟ್​ ಗಮನಿಸಿದ ಕಿಚ್ಚ ಸುದೀಪ್​ ಪ್ರತಿಕ್ರಿಯಿಸಿದ್ದು, ಕೋಟಿಗೊಬ್ಬ-3 ಚಿತ್ರತಂಡದ ಜತೆಗೆ ಇಲ್ಲಿಯವರೆಗೆ ಜೊತೆಯಾಗಿದ್ದೀರಿ. ಈ ಸಿನಿಮಾ ಮುಗಿಯುವವರೆಗೂ ನಿಮ್ಮ ಪ್ರಯಾಣ ಮುಂದುವರೆಯಬೇಕು ಎಂಬುದು ನನ್ನ ಆಸೆ. ಈ ನಿಮ್ಮ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಇದೀಗ ನೀವು ಹೇಳಿರುವ ವಿಷಯದ ಕುರಿತಾಗಿ ಗಮನ ಹರಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಭಿನಯ ಚಕ್ರವರ್ತಿ ನಟಿಸಿರುವ ಕೆಂಪೇಗೌಡ, ವಿಷ್ಣುವರ್ಧನ, ವರದ ನಾಯಕ ಸೇರಿದಂತೆ ಇನ್ನಿತರ ಅಧ್ಬುತ ಸಿನಿಮಾಗಳಿಗೆ ಸಾಯಿ ಕೃಷ್ಣ ಅವರೇ ಪೋಸ್ಟರ್​​ ಡಿಸೈನ್​ ಮಾಡಿದ್ದಾರೆ. ಇದೀಗ ಕೋಟಿಗೊಬ್ಬ-3 ಚಿತ್ರ ತಂಡದಿಂದ ಹೊರಬಂದಿರುವುದು ಸುದೀಪ್​ ಅಭಿಮಾನಿಗಳಿಗೆ ಬೇಸರ ನೀಡಿದೆ.

ಇದನ್ನೂ ಓದಿ: ರುಕ್ಮಿಣಿ ವಿಜಯಕುಮಾರ್ ಸೀರೆಯುಟ್ಟು ಕಸರತ್ತು ಮಾಡಿದ ವಿಡಿಯೋ ವೈರಲ್; ಮಹಿಳೆಯರಿಗೆ ಇದು ಸ್ಫೂರ್ತಿ ಎಂದ ನೆಟ್ಟಿಗರು

(Kotigobba 3 poster designer Sai Krishna Enreddy walked out of Movie Crew)

Published On - 10:18 am, Wed, 14 April 21

Follow Us
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ