AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟಿಗೊಬ್ಬ-3 ಚಿತ್ರದ ಅಫೀಷಿಯಲ್ ಪೋಸ್ಟರ್​​ ಡೀಸೈನರ್​​ ಅಲ್ಲ, ಮಾಹಿತಿ ನೀಡದೇ ನನ್ನನ್ನು ನಿರ್ಮಾಣ ಸಂಸ್ಥೆ ಹೊರಹಾಕಿದೆ; ಸಾಯಿ ಕೃಷ್ಣ

Kotigobba 3 Designer Sai Krishna: ಅಭಿನಯ ಚಕ್ರವರ್ತಿ ನಟಿಸಿರುವ ಕೆಂಪೇಗೌಡ, ವಿಷ್ಣುವರ್ಧನ, ವರದ ನಾಯಕ ಸೇರಿದಂತೆ ಇನ್ನಿತರ ಅಧ್ಬುತ ಸಿನಿಮಾಗಳಿಗೆ ಸಾಯಿ ಕೃಷ್ಣ ಅವರೇ ಪೋಸ್ಟರ್​​ ಡಿಸೈನ್​ ಮಾಡಿದ್ದಾರೆ. ಇದೀಗ ಕೋಟಿಗೊಬ್ಬ-3 ಚಿತ್ರ ತಂಡದಿಂದ ಹೊರಬಂದಿರುವುದು ಸುದೀಪ್​ ಅಭಿಮಾನಿಗಳಿಗೆ ಬೇಸರ ನೀಡಿದೆ.

ಕೋಟಿಗೊಬ್ಬ-3 ಚಿತ್ರದ ಅಫೀಷಿಯಲ್ ಪೋಸ್ಟರ್​​ ಡೀಸೈನರ್​​ ಅಲ್ಲ, ಮಾಹಿತಿ ನೀಡದೇ ನನ್ನನ್ನು ನಿರ್ಮಾಣ ಸಂಸ್ಥೆ ಹೊರಹಾಕಿದೆ; ಸಾಯಿ ಕೃಷ್ಣ
kotigobba 3
shruti hegde
|

Updated on:Apr 14, 2021 | 11:43 AM

Share

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕೊವಿಡ್​ ಸೋಂಕು ದೇಶದೆಲ್ಲೆಡೆ ಹರಡಿರುವುದರಿಂದ ಸಿನಿಮಾರಂಗಕ್ಕೆ ದೊಡ್ಡಹೊಡೆತ ಉಂಟಾಗಿದೆ. ಹಾಗಾಗಿ ಬಿಡುಗಡೆಗೊಳ್ಳಲು ಸಿದ್ಧವಾಗಿದ್ದ ಚಿತ್ರಗಳೆಲ್ಲವೂ ಮುಂದೂಡಿಕೆಯಾಗುತ್ತಿದೆ. ಅಂದುಕೊಂಡಂತೆಯೇ ಎಲ್ಲವೂ ಸರಿಯಾಗಿ ನಡೆಯುತ್ತಿದ್ದರೆ ಇದೇ ತಿಂಗಳಲ್ಲಿ ಕೋಟಿಗೊಬ್ಬ-3 ಚಿತ್ರ ಜನಮನ ತಲುಪುತ್ತಿತ್ತು. ಈ ನಡುವೆಯೇ ಆದರೆ ಸುದೀಪ್​ ಅಭಿಮಾನಿಗಳಿಗೆ ನಿರಾಸೆಯ ಮೂಡಿರುವ ಸಂಗತಿಯೊಂದು ನಡೆದಿದೆ.

ಇದೆಲ್ಲದರ ಮಧ್ಯೆ ಸುದೀಪ್​ ಅವರ ಸಿನಿಮಾಗಳ ಪೋಸ್ಟರ್​ ಡಿಸೈನ್​ ಮಾಡುತ್ತಿದ್ದ ಸಾಯಿ ಕೃಷ್ಣ ಅವರು ಕೋಟಿಗೊಬ್ಬ-3 ಚಿತ್ರ ತಂಡ ಬಿಟ್ಟು ಹೊರ ಬಂದಿದ್ದಾರೆ ಎಂಬ ಮಾಹಿತಿಗಳು ಹರಿ ಬರುತ್ತಿದೆ. ನಿನ್ನೆ ಏಪ್ರಿಲ್​ 14ರಂದು ಈ ಕುರಿತಂತೆ ಸಾಯಿ ಕೃಷ್ಣ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಅಸಮಾಧಾನವನ್ನು ಹೊರಹಾಕಿದ್ದರೆ. ಕಾರಣ ಕೊಡದೆ ಕೋಟಿಕೊಬ್ಬ-3 ಚಿತ್ರ ತಂಡ ನನ್ನನ್ನು ಹೊರಹಾಕಿದೆ ಎಂದು ಹೇಳಿಕೊಂಡಿದ್ದಾರೆ. ನಾನು ಈ ಚಿತ್ರದ ಪೋಸ್ಟರ್​ ತಯಾರಿಗೆ ಒಪ್ಪಿಕೊಂಡಿರುವುದು ಒಂದು ಪ್ರಮುಖ ಕಾರಣ ಸುದೀಪ್​ , ಅವರ ಅಭಿಮಾನಿಗಳು ಮತ್ತೊಂದು ಕೊವಿಡ್​ ಪರಿಣಾಮವಾಗಿ ಹಣ. ಇವುಗಳನ್ನು ಬಿಟ್ಟು ಇನ್ಯಾರೂ ಅಲ್ಲ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ. ಇಂದಿನಿಂದ ನಾನು ಕೋಟಿಗಿಬ್ಬ-3 ಚಿತ್ರದ ಅಫೀಷಿಯಲ್​ ಪೋಸ್ಟರ್​ ಡಿಸೈನರ್​ ಅಲ್ಲ ಎಂದು ಸಾಯಿ ಕೃಷ್ಣ ಸುದೀಪ್​ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ.

ಗೆಳೆಯರೇ.. ನಾನು ಪೋಸ್ಟರ್​ ಡೀಸೈನ್​ ನಿಲ್ಲಿಸಿ ತುಂಬಾ ದಿನಗಳಾಯಿತು. ಲಾಕ್​ಡೌನ್​ ಸಮಯದಲ್ಲಿ ಈ ಸಿನಿಮಾ ಒಪ್ಪಿಕೊಂಡಿದ್ದೆ. ನನ್ನ ಮೊದಲನೇ ಸಿನಿಮಾ ಅಪ್ಪು ಅವರದ್ದು.. ಅಜಯ್​.. ನಂತರ ಪರಮಾತ್ಮ, ರಣವಿಕ್ರಮ ಮಾಡಿದ್ದೀನಿ. ಇನ್ನೇನಾದರೂ ಕಾಲ ಕೂಡಿಬಂದರೆ, ಹಣೆಬರಹ ಚೆನ್ನಾಗಿದ್ದರೆ ನಿರ್ದೇಶನ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸಾಯಿ ಕೃಷ್ಣ ಅವರು ಇತ್ತೀಚಿನ ದಿನಗಳಲ್ಲಿ ಪೋಸ್ಟರ್​ ಡಿಸೈನ್​ ಮಾಡುವುದನ್ನು ನಿಲ್ಲಿಸಿದ್ದರು. ಕೊವಿಡ್​ ಕಾರಣದಿಂದ ಅನಿವಾರ್ಯತೆ ಇದ್ದರಿಂದ ಕೋಟಿಗೊಬ್ಬ-3 ಚಿತ್ರ ಒಪ್ಪಿಕೊಂಡಿದ್ದರು ಎಂದು ಖುದ್ದಾಗಿ ಅವರೇ ಹೇಳಿಕೊಂಡಿದ್ದಾರೆ.

ಸಾಯಿ ಕೃಷ್ಣ ಅವರ ಟ್ವೀಟ್​ ಗಮನಿಸಿದ ಕಿಚ್ಚ ಸುದೀಪ್​ ಪ್ರತಿಕ್ರಿಯಿಸಿದ್ದು, ಕೋಟಿಗೊಬ್ಬ-3 ಚಿತ್ರತಂಡದ ಜತೆಗೆ ಇಲ್ಲಿಯವರೆಗೆ ಜೊತೆಯಾಗಿದ್ದೀರಿ. ಈ ಸಿನಿಮಾ ಮುಗಿಯುವವರೆಗೂ ನಿಮ್ಮ ಪ್ರಯಾಣ ಮುಂದುವರೆಯಬೇಕು ಎಂಬುದು ನನ್ನ ಆಸೆ. ಈ ನಿಮ್ಮ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಇದೀಗ ನೀವು ಹೇಳಿರುವ ವಿಷಯದ ಕುರಿತಾಗಿ ಗಮನ ಹರಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಭಿನಯ ಚಕ್ರವರ್ತಿ ನಟಿಸಿರುವ ಕೆಂಪೇಗೌಡ, ವಿಷ್ಣುವರ್ಧನ, ವರದ ನಾಯಕ ಸೇರಿದಂತೆ ಇನ್ನಿತರ ಅಧ್ಬುತ ಸಿನಿಮಾಗಳಿಗೆ ಸಾಯಿ ಕೃಷ್ಣ ಅವರೇ ಪೋಸ್ಟರ್​​ ಡಿಸೈನ್​ ಮಾಡಿದ್ದಾರೆ. ಇದೀಗ ಕೋಟಿಗೊಬ್ಬ-3 ಚಿತ್ರ ತಂಡದಿಂದ ಹೊರಬಂದಿರುವುದು ಸುದೀಪ್​ ಅಭಿಮಾನಿಗಳಿಗೆ ಬೇಸರ ನೀಡಿದೆ.

ಇದನ್ನೂ ಓದಿ: ರುಕ್ಮಿಣಿ ವಿಜಯಕುಮಾರ್ ಸೀರೆಯುಟ್ಟು ಕಸರತ್ತು ಮಾಡಿದ ವಿಡಿಯೋ ವೈರಲ್; ಮಹಿಳೆಯರಿಗೆ ಇದು ಸ್ಫೂರ್ತಿ ಎಂದ ನೆಟ್ಟಿಗರು

(Kotigobba 3 poster designer Sai Krishna Enreddy walked out of Movie Crew)

Published On - 10:18 am, Wed, 14 April 21

Follow Us
shruti hegde
shruti hegde
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು