AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವ್ಯಕ್ತಿಯ ಕುತ್ತಿಗೆಯಲ್ಲಿ ಇದೆ ಹಗ್ಗದಷ್ಟು ದಪ್ಪದ ಚಿನ್ನದ ಸರ; ಇದನ್ನು ಗಳಿಸೋದು ಹೇಗೆಂದು ಹೇಳ್ತೀನಿ ಎಂದ ರಾಜ್ ​ಅಭಿಮಾನಿ

ಪುನೀತ್​​ ರಾಜ್​ಕುಮಾರ್​ ಖ್ಯಾತಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ದೇಶ-ವಿದೇಶದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಮೃತಪಟ್ಟ ನಂತರದಲ್ಲಿ ವಿದೇಶದಲ್ಲೂ ಅವರ ಬಗ್ಗೆ ಸುದ್ದಿಗಳು ಪ್ರಕಟವಾದವು.

ಈ ವ್ಯಕ್ತಿಯ ಕುತ್ತಿಗೆಯಲ್ಲಿ ಇದೆ ಹಗ್ಗದಷ್ಟು ದಪ್ಪದ ಚಿನ್ನದ ಸರ; ಇದನ್ನು ಗಳಿಸೋದು ಹೇಗೆಂದು ಹೇಳ್ತೀನಿ ಎಂದ ರಾಜ್ ​ಅಭಿಮಾನಿ
TV9 Web
| Edited By: |

Updated on:Dec 29, 2021 | 6:26 PM

Share

ಚಿನ್ನ ಎಂದರೆ ಭಾರತೀಯರಿಗೆ ಹೆಚ್ಚು ಇಷ್ಟ. ದುಡಿಮೆ ಆರಂಭಿಸಿದ ನಂತರ ಒಂದು ಚಿನ್ನದ ಸರ ಮಾಡಿಸಿಕೊಳ್ಳಬೇಕು ಎನ್ನುವ ಆಸೆ ಅನೇಕರಲ್ಲಿ ಇರುತ್ತದೆ. ಇನ್ನೂ ಕೆಲವರು ತಮ್ಮ ದುಡಿಮೆಯ ಹಣವನ್ನು ಚಿನ್ನ ಕೊಂಡುಕೊಳ್ಳಲು ಖರ್ಚು ಮಾಡುತ್ತಾರೆ. ತಮ್ಮ ಕತ್ತಿಗೆ ಕೆಜಿಗೆಟ್ಟಲೆ ಬಂಗಾರವನ್ನು ಹೇರಿಕೊಂಡು ಓಡಾಡುವವರೂ ಇದ್ದಾರೆ. ಈ ಸಾಲಿಗೆ ಡಾ. ರಾಜ್​ಕುಮಾರ್​ ಅಭಿಮಾನಿ, ಉದ್ಯಮಿ, ರೈತ ಲಕ್ಷ್ಮೀ ನಾರಾಯಣ ಕೂಡ ಸೇರ್ಪಡೆ ಆಗುತ್ತಾರೆ. ಪುನೀತ್​ ಸಮಾಧಿಯ ದರ್ಶನ ಪಡೆಯೋಕೆ ಇಂದು (ಡಿಸೆಂಬರ್​ 29) ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಅವರು ಆಗಮಿಸಿದ್ದರು. ಈ ವೇಳೆ ಅವರು ತಮ್ಮ ಚಿನ್ನದ ಸರದ ರಹಸ್ಯ​ ಬಿಟ್ಟುಕೊಟ್ಟಿದ್ದಾರೆ.

ಪುನೀತ್​​ ರಾಜ್​ಕುಮಾರ್​ ಖ್ಯಾತಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ದೇಶ-ವಿದೇಶದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಮೃತಪಟ್ಟ ನಂತರದಲ್ಲಿ ವಿದೇಶದಲ್ಲೂ ಅವರ ಬಗ್ಗೆ ಸುದ್ದಿಗಳು ಪ್ರಕಟವಾದವು. ಇನ್ನು, ಪುನೀತ್​ ಸಮಾಧಿ ದರ್ಶನಕ್ಕೆ ರಾಜ್ಯದ ಮೂಲೆಮೂಲೆಯಿಂದಲೂ ಅಭಿಮಾನಿಗಳು ಬರುತ್ತಿದ್ದಾರೆ. ಅವರ ಸಮಾಧಿ ಎದುರು ಫ್ಯಾನ್ಸ್​ ಭಾವುಕರಾಗುತ್ತಿರುವ ದೃಶ್ಯ ಕಂಡು ಬರುತ್ತಲೇ ಇದೆ. ಇಂದು ಅಪ್ಪು ಸಮಾಧಿಗೆ ಲಕ್ಷ್ಮೀ ನಾರಾಯಣ ಅವರು ಕೂಡ ಭೇಟಿ ನೀಡಿದ್ದಾರೆ.

‘ಪುನೀತ್​ ರಾಜ್​ಕುಮಾರ್​ ಅವರು ಬಲಗೈಯಲ್ಲಿ ಕೊಟ್ಟಿದ್ದನ್ನು ಎಡಗೈಗೆ ಗೊತ್ತಾಗದಂತೆ ನೋಡಿಕೊಂಡಿದ್ದಾರೆ. ಹೀಗಿರುವಾಗ ಚಿನ್ನದ ಸರದ ಬಗ್ಗೆ ಹೇಳೋಕೆ ಇಷ್ಟ ಇಲ್ಲ. ಆದರೆ, ನೀವು ಕೇಳುತ್ತಿರುವುದಕ್ಕೆ ಹೇಳುತ್ತಿದ್ದೇನೆ’ ಎಂದು ಮಾತು ಆರಂಭಿಸಿದರು ಲಕ್ಷ್ಮೀ ನಾರಾಯಣ.

‘ನಾನು ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಹೇಗೆ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಹೇಳುತ್ತೇನೆ. ಮಾರ್ವಾಡಿಗಳಿಗೆ ಮಾತ್ರ ದುಡ್ಡು ಮಾಡುವುದು ಗೊತ್ತು. ಕನ್ನಡದವರಿಗೆ ದುಡ್ಡು ಹೇಗೆ ಗಳಿಸಬೇಕು ಎಂಬುದು ಗೊತ್ತಿಲ್ಲ. ಇಷ್ಟೊಂದು ಚಿನ್ನವನ್ನು ಹೇಗೆ ಗಳಿಸಬೇಕು ಎಂಬುದನ್ನು ನಾನು ಹೇಳಿ ಕೊಡ್ತೀನಿ. ವ್ಯಾಪಾರ ಹೇಗೆ ಮಾಡಬೇಕು, ದುಡ್ಡು ಹೇಗೆ ಮಾಡಬೇಕು ಎಂಬುದನ್ನು ನಾನು ಕಲಿಸಿಕೊಡ್ತೀನಿ. ಎಲ್ಲರೂ ಸರ್ಕಾರಿ ಕೆಲಸ ಎಂದು ಹೋಗ್ತಾರೆ. ಆದರೆ, ರೈತನಾಗಿಯೇ ದುಡ್ಡು ಮಾಡೋದು ಹೇಗೆ ಎನ್ನುವುದನ್ನು ನಾನು ಹೇಳಿ ಕೊಡ್ತೀನಿ’ ಎಂದಿದ್ದಾರೆ ಲಕ್ಷ್ಮೀ ನಾರಾಯಣ.

ಇದನ್ನೂ ಓದಿ: ‘ನಾನೂ ಅಪ್ಪು ಸಿನಿಮಾ ನೋಡುತ್ತಿದ್ದೆ’; ಪುನೀತ್​ ಸಮಾಧಿ ದರ್ಶನಕ್ಕೆ ಅಮೆರಿಕದಿಂದ ಬಂದ ಅಭಿಮಾನಿ

Published On - 6:25 pm, Wed, 29 December 21

Follow Us
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ