AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವ್ಯಕ್ತಿಯ ಕುತ್ತಿಗೆಯಲ್ಲಿ ಇದೆ ಹಗ್ಗದಷ್ಟು ದಪ್ಪದ ಚಿನ್ನದ ಸರ; ಇದನ್ನು ಗಳಿಸೋದು ಹೇಗೆಂದು ಹೇಳ್ತೀನಿ ಎಂದ ರಾಜ್ ​ಅಭಿಮಾನಿ

ಪುನೀತ್​​ ರಾಜ್​ಕುಮಾರ್​ ಖ್ಯಾತಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ದೇಶ-ವಿದೇಶದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಮೃತಪಟ್ಟ ನಂತರದಲ್ಲಿ ವಿದೇಶದಲ್ಲೂ ಅವರ ಬಗ್ಗೆ ಸುದ್ದಿಗಳು ಪ್ರಕಟವಾದವು.

ಈ ವ್ಯಕ್ತಿಯ ಕುತ್ತಿಗೆಯಲ್ಲಿ ಇದೆ ಹಗ್ಗದಷ್ಟು ದಪ್ಪದ ಚಿನ್ನದ ಸರ; ಇದನ್ನು ಗಳಿಸೋದು ಹೇಗೆಂದು ಹೇಳ್ತೀನಿ ಎಂದ ರಾಜ್ ​ಅಭಿಮಾನಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 29, 2021 | 6:26 PM

ಚಿನ್ನ ಎಂದರೆ ಭಾರತೀಯರಿಗೆ ಹೆಚ್ಚು ಇಷ್ಟ. ದುಡಿಮೆ ಆರಂಭಿಸಿದ ನಂತರ ಒಂದು ಚಿನ್ನದ ಸರ ಮಾಡಿಸಿಕೊಳ್ಳಬೇಕು ಎನ್ನುವ ಆಸೆ ಅನೇಕರಲ್ಲಿ ಇರುತ್ತದೆ. ಇನ್ನೂ ಕೆಲವರು ತಮ್ಮ ದುಡಿಮೆಯ ಹಣವನ್ನು ಚಿನ್ನ ಕೊಂಡುಕೊಳ್ಳಲು ಖರ್ಚು ಮಾಡುತ್ತಾರೆ. ತಮ್ಮ ಕತ್ತಿಗೆ ಕೆಜಿಗೆಟ್ಟಲೆ ಬಂಗಾರವನ್ನು ಹೇರಿಕೊಂಡು ಓಡಾಡುವವರೂ ಇದ್ದಾರೆ. ಈ ಸಾಲಿಗೆ ಡಾ. ರಾಜ್​ಕುಮಾರ್​ ಅಭಿಮಾನಿ, ಉದ್ಯಮಿ, ರೈತ ಲಕ್ಷ್ಮೀ ನಾರಾಯಣ ಕೂಡ ಸೇರ್ಪಡೆ ಆಗುತ್ತಾರೆ. ಪುನೀತ್​ ಸಮಾಧಿಯ ದರ್ಶನ ಪಡೆಯೋಕೆ ಇಂದು (ಡಿಸೆಂಬರ್​ 29) ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಅವರು ಆಗಮಿಸಿದ್ದರು. ಈ ವೇಳೆ ಅವರು ತಮ್ಮ ಚಿನ್ನದ ಸರದ ರಹಸ್ಯ​ ಬಿಟ್ಟುಕೊಟ್ಟಿದ್ದಾರೆ.

ಪುನೀತ್​​ ರಾಜ್​ಕುಮಾರ್​ ಖ್ಯಾತಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ದೇಶ-ವಿದೇಶದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಮೃತಪಟ್ಟ ನಂತರದಲ್ಲಿ ವಿದೇಶದಲ್ಲೂ ಅವರ ಬಗ್ಗೆ ಸುದ್ದಿಗಳು ಪ್ರಕಟವಾದವು. ಇನ್ನು, ಪುನೀತ್​ ಸಮಾಧಿ ದರ್ಶನಕ್ಕೆ ರಾಜ್ಯದ ಮೂಲೆಮೂಲೆಯಿಂದಲೂ ಅಭಿಮಾನಿಗಳು ಬರುತ್ತಿದ್ದಾರೆ. ಅವರ ಸಮಾಧಿ ಎದುರು ಫ್ಯಾನ್ಸ್​ ಭಾವುಕರಾಗುತ್ತಿರುವ ದೃಶ್ಯ ಕಂಡು ಬರುತ್ತಲೇ ಇದೆ. ಇಂದು ಅಪ್ಪು ಸಮಾಧಿಗೆ ಲಕ್ಷ್ಮೀ ನಾರಾಯಣ ಅವರು ಕೂಡ ಭೇಟಿ ನೀಡಿದ್ದಾರೆ.

‘ಪುನೀತ್​ ರಾಜ್​ಕುಮಾರ್​ ಅವರು ಬಲಗೈಯಲ್ಲಿ ಕೊಟ್ಟಿದ್ದನ್ನು ಎಡಗೈಗೆ ಗೊತ್ತಾಗದಂತೆ ನೋಡಿಕೊಂಡಿದ್ದಾರೆ. ಹೀಗಿರುವಾಗ ಚಿನ್ನದ ಸರದ ಬಗ್ಗೆ ಹೇಳೋಕೆ ಇಷ್ಟ ಇಲ್ಲ. ಆದರೆ, ನೀವು ಕೇಳುತ್ತಿರುವುದಕ್ಕೆ ಹೇಳುತ್ತಿದ್ದೇನೆ’ ಎಂದು ಮಾತು ಆರಂಭಿಸಿದರು ಲಕ್ಷ್ಮೀ ನಾರಾಯಣ.

‘ನಾನು ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಹೇಗೆ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಹೇಳುತ್ತೇನೆ. ಮಾರ್ವಾಡಿಗಳಿಗೆ ಮಾತ್ರ ದುಡ್ಡು ಮಾಡುವುದು ಗೊತ್ತು. ಕನ್ನಡದವರಿಗೆ ದುಡ್ಡು ಹೇಗೆ ಗಳಿಸಬೇಕು ಎಂಬುದು ಗೊತ್ತಿಲ್ಲ. ಇಷ್ಟೊಂದು ಚಿನ್ನವನ್ನು ಹೇಗೆ ಗಳಿಸಬೇಕು ಎಂಬುದನ್ನು ನಾನು ಹೇಳಿ ಕೊಡ್ತೀನಿ. ವ್ಯಾಪಾರ ಹೇಗೆ ಮಾಡಬೇಕು, ದುಡ್ಡು ಹೇಗೆ ಮಾಡಬೇಕು ಎಂಬುದನ್ನು ನಾನು ಕಲಿಸಿಕೊಡ್ತೀನಿ. ಎಲ್ಲರೂ ಸರ್ಕಾರಿ ಕೆಲಸ ಎಂದು ಹೋಗ್ತಾರೆ. ಆದರೆ, ರೈತನಾಗಿಯೇ ದುಡ್ಡು ಮಾಡೋದು ಹೇಗೆ ಎನ್ನುವುದನ್ನು ನಾನು ಹೇಳಿ ಕೊಡ್ತೀನಿ’ ಎಂದಿದ್ದಾರೆ ಲಕ್ಷ್ಮೀ ನಾರಾಯಣ.

ಇದನ್ನೂ ಓದಿ: ‘ನಾನೂ ಅಪ್ಪು ಸಿನಿಮಾ ನೋಡುತ್ತಿದ್ದೆ’; ಪುನೀತ್​ ಸಮಾಧಿ ದರ್ಶನಕ್ಕೆ ಅಮೆರಿಕದಿಂದ ಬಂದ ಅಭಿಮಾನಿ

Published On - 6:25 pm, Wed, 29 December 21

ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ