ರಿಲೀಸ್​ಗೂ ಮೊದಲೇ ಮಾರಾಟ ಆಯ್ತು ‘ಫಾರ್ ರಿಜಿಸ್ಟ್ರೇಷನ್’ ಡಬ್ಬಿಂಗ್ ಹಕ್ಕು

|

Updated on: Feb 22, 2024 | 7:30 PM

ಶಿವರಾಜ್​ಕುಮಾರ್ ನಟನೆಯ 125ನೇ ಸಿನಿಮಾ ‘ವೇದ’ ತೆಲುಗಿಗೂ ಡಬ್ ಆಯಿತು. ಈ ಚಿತ್ರವನ್ನು ತೆಲುಗಿನಲ್ಲಿ ಎಂವಿಆರ್ ಕೃಷ್ಣ ಅವರು ರಿಲೀಸ್ ಮಾಡಿದ್ದರು. ಈಗ ಅವರು. ‘ಫಾರ್ ರಿಜಿಸ್ಟ್ರೇಷನ್’ ಡಬ್ಬಿಂಗ್ ಹಕ್ಕು ಖರೀದಿ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಡಬ್ಬಿಂಗ್ ರೈಟ್ಸ್ ಸೇಲ್ ಆಗಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ.

ರಿಲೀಸ್​ಗೂ ಮೊದಲೇ ಮಾರಾಟ ಆಯ್ತು ‘ಫಾರ್ ರಿಜಿಸ್ಟ್ರೇಷನ್’ ಡಬ್ಬಿಂಗ್ ಹಕ್ಕು
ಮಿಲನಾ-ಪೃಥ್ವಿ
Follow us on

ಕನ್ನಡ ಸಿನಿಮಾರಂಗದ ಚಿತ್ರಗಳ ಬಗ್ಗೆ ಪರಭಾಷೆಯವರೂ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಈ ಕಾರಣಕ್ಕೆ ಕನ್ನಡದ ಅನೇಕ ಸಿನಿಮಾಗಳು ಪರಭಾಷೆಗೆ ಡಬ್ ಆಗಿ ರಿಲೀಸ್ ಆಗುತ್ತವೆ. ಕೇವಲ ಸ್ಟಾರ್ ಹೀರೋಗಳ ಸಿನಿಮಾಗಳು ಮಾತ್ರವಲ್ಲದೆ ಹೊಸಬರ ಸಿನಿಮಾಗಳು ಕೂಡ ಪರಭಾಷೆಗೆ ಡಬ್ ಆಗುತ್ತಿವೆ. ಇದಕ್ಕೆ ಹೊಸ ಉದಾಹರಣೆ ‘ಫಾರ್ ರಿಜಿಸ್ಟ್ರೇಷನ್’ (For Registration) ಸಿನಿಮಾ. ಫೆಬ್ರವರಿ 23ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಸಿನಿಮಾದ ಡಬ್ಬಿಂಗ್ ಹಕ್ಕು ಮಾರಾಟ ಆಗಿದೆ.

ನವೀನ್ ದ್ವಾರಕಾನಾಥ್ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದು ಅವರಿಗೆ ಮೊದಲ ಅನುಭವ. ನವೀನ್ ರಾವ್ ನಿರ್ಮಾಣ ಮಾಡಿದ್ದಾರೆ. ಪೃಥ್ವಿ ಅಂಬಾರ್ ಹಾಗೂ ಮಿಲನಾ ನಾಗರಾಜ್ ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ಡಬ್ಬಿಂಗ್ ಹಕ್ಕನ್ನು ತೆಲುಗಿನ ಖ್ಯಾತ ನಿರ್ಮಾಪಕರೊಬ್ಬರು ಭಾರೀ ಮೊತ್ತಕ್ಕೆ ಖರೀದಿ ಮಾಡಿದ್ದಾರೆ. ಅವರು ಬೇರಾರೂ ಅಲ್ಲ ಎಂವಿಆರ್ ಕೃಷ್ಣ.

ಶಿವರಾಜ್​ಕುಮಾರ್ ನಟನೆಯ 125ನೇ ಸಿನಿಮಾ ‘ವೇದ’ ತೆಲುಗಿಗೂ ಡಬ್ ಆಯಿತು. ಈ ಚಿತ್ರವನ್ನು ತೆಲುಗಿನಲ್ಲಿ ಎಂವಿಆರ್ ಕೃಷ್ಣ ಅವರು ರಿಲೀಸ್ ಮಾಡಿದ್ದರು. ಈಗ ಅವರು. ‘ಫಾರ್ ರಿಜಿಸ್ಟ್ರೇಷನ್’ ಡಬ್ಬಿಂಗ್ ಹಕ್ಕು ಖರೀದಿ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಡಬ್ಬಿಂಗ್ ರೈಟ್ಸ್ ಸೇಲ್ ಆಗಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ.

ಟ್ರೇಲರ್ ಹಾಗೂ ಹಾಡಿನ ಮೂಲಕ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ಗಮನ ಸೆಳೆದಿದೆ. ಪೃಥ್ವಿ ಅಂಬಾರ್ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಸೃಷ್ಟಿ ಆಗುತ್ತಿದೆ. ಮಿಲನಾ ನಾಗರಾಜ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಇದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇಬ್ಬರ ಕಾಂಬಿನೇಷನ್ ಎನ್ನುವ ಕಾರಣಕ್ಕೆ ಬೇಡಿಕೆ ಸೃಷ್ಟಿ ಆಗಿದೆ.

ಇದನ್ನೂ ಓದಿ: ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​ಗೆ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಇಷ್ಟ ಆಯ್ತಾ? ವಿಡಿಯೋ ನೋಡಿ..

ರವಿಶಂಕರ್, ಸುಧಾ ಬೆಳವಾಡಿ, ತಬಲಾ ನಾಣಿ, ಬಾಬು ಹಿರಣಯ್ಯ, ರಮೇಶ್ ಭಟ್, ಸ್ವಾತಿ, ಉಮೇಶ್ ಸೇರಿ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ನವೀನ್ ದ್ವಾರಕನಾಥ್ ಅವರೇ ಚಿತ್ರಕಥೆ ಬರೆದಿದ್ದಾರೆ. ಆರ್.ಕೆ ಹರೀಶ್ ಸಂಗೀತ ಸಂಯೋಜನೆ, ಅಭಿಲಾಷ್ ಕಲಾತಿ, ಅಭಿಷೇಕ್ ಜಿ. ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್ ಸಂಕಲನ ಈ ಸಿನಿಮಾಗೆ ಇದೆ. ‘ನಿಶ್ಚಲ್ ಫಿಲ್ಮ್ಸ್​’ ಬ್ಯಾನರ್​​ ಮೂಲಕ ನವೀನ್ ರಾವ್ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ