AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ತೆರೆಗೆ ಬರುತ್ತಿವೆ ಹಲವು ಸಿನಿಮಾ, ರೀ ರಿಲೀಸ್ ಸಹ ಇದೆ

Movie Release: ಮತ್ತೊಂದು ಶುಕ್ರವಾರ ಬಂದಿದೆ. ಮತ್ತೊಮ್ಮೆ ಹಲವು ಸಿನಿಮಾಗಳು ಗೆಲುವಿನ ಭರವಸೆಯಲ್ಲಿ ಬಿಡುಗಡೆ ಆಗಿವೆ. ಕನ್ನಡದ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ತಿಂಗಳುಗಳೇ ಆಗಿ ಹೋಗಿವೆ. ಹಾಗೆಂದು ಚಿತ್ರಮಂದಿರಗಳಲ್ಲಿ ನಿರಾಸೆ ಮೂಡಿಸುವ ಸಿನಿಮಾಗಳು ಇವೆ ಎಂದೇನೂ ಅಲ್ಲ. ಈ ವಾರವೂ ಸಹ ಕೆಲ ಒಳ್ಳೆಯ ಸಿನಿಮಾಗಳು ತೆರೆಗೆ ಬಂದಿವೆ. ಅದರಲ್ಲಿ ಒಂದು ರೀ-ರಿಲೀಸ್ ಸಹ ಇದೆ.

ಮಂಜುನಾಥ ಸಿ.
|

Updated on: Jul 03, 2025 | 9:26 AM

Share
ದಲಿತ ಯುವಕನೊಬ್ಬ ‘ಹೆಬ್ಬುಲಿ’ ಸಿನಿಮಾನಲ್ಲಿ ಸುದೀಪ್ ರೀತಿ ಕಟಿಂಗ್ ಮಾಡಿಸಿಕೊಳ್ಳಬೇಕೆಂಬ ಆಸೆಯನ್ನು ನನಸು ಮಾಡಿಕೊಳ್ಳಲು ಪಡುವ ಪಾಡು, ಆತನ ಆಸೆಗೆ ಅಡ್ಡಿಯಾಗುವ ಊರಿನ ಜಾತೀವಾದಿಗಳ ಕತೆ ಒಳಗೊಂಡ ಸಿನಿಮಾ ‘ಹೆಬ್ಬುಲಿ ಕಟ್’. ಸಿನಿಮಾದ ಟ್ರೈಲರ್ ಅದ್ಭುತವಾಗಿದೆ. ಭೀಮರಾವ್ ನಿರ್ದೇಶನ ಮಾಡಿದ್ದಾರೆ.

ದಲಿತ ಯುವಕನೊಬ್ಬ ‘ಹೆಬ್ಬುಲಿ’ ಸಿನಿಮಾನಲ್ಲಿ ಸುದೀಪ್ ರೀತಿ ಕಟಿಂಗ್ ಮಾಡಿಸಿಕೊಳ್ಳಬೇಕೆಂಬ ಆಸೆಯನ್ನು ನನಸು ಮಾಡಿಕೊಳ್ಳಲು ಪಡುವ ಪಾಡು, ಆತನ ಆಸೆಗೆ ಅಡ್ಡಿಯಾಗುವ ಊರಿನ ಜಾತೀವಾದಿಗಳ ಕತೆ ಒಳಗೊಂಡ ಸಿನಿಮಾ ‘ಹೆಬ್ಬುಲಿ ಕಟ್’. ಸಿನಿಮಾದ ಟ್ರೈಲರ್ ಅದ್ಭುತವಾಗಿದೆ. ಭೀಮರಾವ್ ನಿರ್ದೇಶನ ಮಾಡಿದ್ದಾರೆ.

1 / 8
ಕಾಡಿಗೆ ಹೋಗಿ ಸಿಕ್ಕಿಹಾಕಿಕೊಂಡು ಅಲ್ಲಿ ನಾ-ನಾ ರೀತಿಯ ಸಮಸ್ಯೆಗಳನ್ನು ಎದುರಿಸುವ ಜೋಡಿಯೊಂದರ ಕತೆ ‘ಜಂಗಲ್-ಮಂಗಲ್’. ನೈಜ ಪಾತ್ರಗಳನ್ನು ಆಧರಿಸಿ ನಿರ್ಮಾಣ ಮಾಡಿರುವ ಸಿನಿಮಾ ಇದಾಗಿದೆ. ರಕ್ಷಿತ್ ಕುಮಾರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಯಶ್ ಶೆಟ್ಟಿ ನಾಯಕ. ಹರ್ಷಿತಾ ರಾಮಚಂದ್ರ ನಾಯಕಿ.

ಕಾಡಿಗೆ ಹೋಗಿ ಸಿಕ್ಕಿಹಾಕಿಕೊಂಡು ಅಲ್ಲಿ ನಾ-ನಾ ರೀತಿಯ ಸಮಸ್ಯೆಗಳನ್ನು ಎದುರಿಸುವ ಜೋಡಿಯೊಂದರ ಕತೆ ‘ಜಂಗಲ್-ಮಂಗಲ್’. ನೈಜ ಪಾತ್ರಗಳನ್ನು ಆಧರಿಸಿ ನಿರ್ಮಾಣ ಮಾಡಿರುವ ಸಿನಿಮಾ ಇದಾಗಿದೆ. ರಕ್ಷಿತ್ ಕುಮಾರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಯಶ್ ಶೆಟ್ಟಿ ನಾಯಕ. ಹರ್ಷಿತಾ ರಾಮಚಂದ್ರ ನಾಯಕಿ.

2 / 8
ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸಿರುವ ‘ತಪಸ್ಸಿ’ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ರವಿಚಂದ್ರನ್ ಅವರಿಗೆ ಸಿನಿಮಾನಲ್ಲಿ ವಿಶೇಷ ಪಾತ್ರ ಇದೆಯಂತೆ. ಅಮ್ರೆಯಾ ಗೋಸ್ವಾಮಿ ಈ ಸಿನಿಮಾದ ನಾಯಕಿ.

ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸಿರುವ ‘ತಪಸ್ಸಿ’ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ರವಿಚಂದ್ರನ್ ಅವರಿಗೆ ಸಿನಿಮಾನಲ್ಲಿ ವಿಶೇಷ ಪಾತ್ರ ಇದೆಯಂತೆ. ಅಮ್ರೆಯಾ ಗೋಸ್ವಾಮಿ ಈ ಸಿನಿಮಾದ ನಾಯಕಿ.

3 / 8
ಬೆಂಗಳೂರು ಭೂಗತ ಲೋಕದ ಕತೆ ಒಳಗೊಂಡ ‘ಕ್ಯಾಪಿಟಲ್ ಸಿಟಿ’ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಸಿನಿಮಾನಲ್ಲಿ ಶರತ್ ಲೋಹಿತಾಶ್ವ, ರವಿಶಂಕರ್, ಸುಮನ್ ನಟಿಸಿದ್ದಾರೆ. ನಾಯಕ ರಾಜೀವ್, ನಾಯಕಿ ಪ್ರೇರಣಾ ಕಂಬಂ. ಮಾಲಾಶ್ರೀ ಅತಿಥಿ ಪಾತ್ರದಲ್ಲಿ ನಟಿಸಿರುವ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾ ‘ಪೆನ್ ಡ್ರೈವ್’ ಸಹ ಈ ವಾರ ಬಿಡುಗಡೆ ಆಗುತ್ತಿದೆ.

ಬೆಂಗಳೂರು ಭೂಗತ ಲೋಕದ ಕತೆ ಒಳಗೊಂಡ ‘ಕ್ಯಾಪಿಟಲ್ ಸಿಟಿ’ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಸಿನಿಮಾನಲ್ಲಿ ಶರತ್ ಲೋಹಿತಾಶ್ವ, ರವಿಶಂಕರ್, ಸುಮನ್ ನಟಿಸಿದ್ದಾರೆ. ನಾಯಕ ರಾಜೀವ್, ನಾಯಕಿ ಪ್ರೇರಣಾ ಕಂಬಂ. ಮಾಲಾಶ್ರೀ ಅತಿಥಿ ಪಾತ್ರದಲ್ಲಿ ನಟಿಸಿರುವ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾ ‘ಪೆನ್ ಡ್ರೈವ್’ ಸಹ ಈ ವಾರ ಬಿಡುಗಡೆ ಆಗುತ್ತಿದೆ.

4 / 8
ಹತ್ತು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಕನ್ನಡದ ಕಲ್ಟ್ ಕ್ಲಾಸಿಕ್ ಥ್ರಿಲ್ಲರ್ ಸಿನಿಮಾ ‘ರಂಗಿತರಂಗ’ ಇದೇ ವಾರ ಮರು ಬಿಡುಗಡೆ ಆಗುತ್ತಿದೆ. ಅನುಪ್ ಭಂಡಾರಿ ನಿರ್ದೇಶಿಸಿ ಅವರ ಸಹೋದರ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದ ಈ ಸಿನಿಮಾ ‘ಬಾಹುಬಲಿ’ ಸಿನಿಮಾದ ಎದುರು ಸ್ಪರ್ಧಿಸಿ ದೊಡ್ಡ ಗೆಲುವು ಸಾಧಿಸಿತ್ತು. ಹತ್ತು ವರ್ಷದ ಬಳಿಕವೂ ಸಿನಿಮಾ ತಮ್ಮ ಮ್ಯಾಜಿಕ್ ಅನ್ನು ಉಳಿಸಿಕೊಂಡಿದೆ. ಈ ವಾರ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ.

ಹತ್ತು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಕನ್ನಡದ ಕಲ್ಟ್ ಕ್ಲಾಸಿಕ್ ಥ್ರಿಲ್ಲರ್ ಸಿನಿಮಾ ‘ರಂಗಿತರಂಗ’ ಇದೇ ವಾರ ಮರು ಬಿಡುಗಡೆ ಆಗುತ್ತಿದೆ. ಅನುಪ್ ಭಂಡಾರಿ ನಿರ್ದೇಶಿಸಿ ಅವರ ಸಹೋದರ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದ ಈ ಸಿನಿಮಾ ‘ಬಾಹುಬಲಿ’ ಸಿನಿಮಾದ ಎದುರು ಸ್ಪರ್ಧಿಸಿ ದೊಡ್ಡ ಗೆಲುವು ಸಾಧಿಸಿತ್ತು. ಹತ್ತು ವರ್ಷದ ಬಳಿಕವೂ ಸಿನಿಮಾ ತಮ್ಮ ಮ್ಯಾಜಿಕ್ ಅನ್ನು ಉಳಿಸಿಕೊಂಡಿದೆ. ಈ ವಾರ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ.

5 / 8
ನಿತಿನ್ ನಟನೆಯ ‘ತಮ್ಮುಡು’ ತೆಲುಗು ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಈ ಸಿನಿಮಾನಲ್ಲಿ ಕನ್ನಡದ ನಟಿ ‘ಕಾಂತಾರ’ ಚೆಲುವೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಅಕ್ಕ-ತಮ್ಮನ ನಡುವೆ ಬಾಂಧವ್ಯದ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಹಲವು ಆಕ್ಷನ್ ಸನ್ನಿವೇಶಗಳು ಸಹ ಇವೆ. ಸಪ್ತಮಿ ಗೌಡ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದೆ.

ನಿತಿನ್ ನಟನೆಯ ‘ತಮ್ಮುಡು’ ತೆಲುಗು ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಈ ಸಿನಿಮಾನಲ್ಲಿ ಕನ್ನಡದ ನಟಿ ‘ಕಾಂತಾರ’ ಚೆಲುವೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಅಕ್ಕ-ತಮ್ಮನ ನಡುವೆ ಬಾಂಧವ್ಯದ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಹಲವು ಆಕ್ಷನ್ ಸನ್ನಿವೇಶಗಳು ಸಹ ಇವೆ. ಸಪ್ತಮಿ ಗೌಡ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದೆ.

6 / 8
ಕನ್ನಡದ ನಟಿ ಚೈತ್ರಾ ಆಚಾರ ನಟಿಸಿರುವ ತಮಿಳು ಸಿನಿಮಾ ‘3ಬಿಎಚ್​​ಕೆ’ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಸ್ಟಾರ್ ನಟ ಸಿದ್ಧಾರ್ಥ್ ಈ ಸಿನಿಮಾದ ನಾಯಕ. ಸಿನಿಮಾನಲ್ಲಿ ಶರತ್ ಕುಮಾರ್ ಸಹ ಇದ್ದಾರೆ. ಮಧ್ಯಮ ವರ್ಗದ ಕುಟುಂಬವೊಂದು ಮನೆ ಕಟ್ಟಿಸಲು ಪಡುವ ಕಷ್ಟಗಳ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಕನ್ನಡದ ನಟಿ ಚೈತ್ರಾ ಆಚಾರ ನಟಿಸಿರುವ ತಮಿಳು ಸಿನಿಮಾ ‘3ಬಿಎಚ್​​ಕೆ’ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಸ್ಟಾರ್ ನಟ ಸಿದ್ಧಾರ್ಥ್ ಈ ಸಿನಿಮಾದ ನಾಯಕ. ಸಿನಿಮಾನಲ್ಲಿ ಶರತ್ ಕುಮಾರ್ ಸಹ ಇದ್ದಾರೆ. ಮಧ್ಯಮ ವರ್ಗದ ಕುಟುಂಬವೊಂದು ಮನೆ ಕಟ್ಟಿಸಲು ಪಡುವ ಕಷ್ಟಗಳ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

7 / 8
ದಶಕಗಳಿಂದಲೂ ಹಾಲಿವುಡ್​ನ ಬ್ಲಾಕ್ ಬಸ್ಟರ್ ಫ್ಯಾಂಟಸಿ ಸಿನಿಮಾ ಸರಣಿ ಆಗಿರುವ ‘ಜುರಾಸಿಕ್ ಪಾರ್ಕ್’ನ ಹೊಸ ಸಿನಿಮಾ ‘ಜುರಾಸಿಕ್ ವರ್ಲ್ಡ್: ರೀಬರ್ತ್’ ಇದೇ ವಾರ ಬಿಡುಗಡೆ ಆಗುತ್ತಿದೆ. ಸ್ಕಾರ್ಲೆಟ್ ಜಾನ್ಸನ್ ಮೊದಲ ಬಾರಿಗೆ ಜುರಾಸಿಕ್ ಸಿನಿಮಾನಲ್ಲಿ ನಟಿಸಿದ್ದಾರೆ. ಜುರಾಸಿಕ್ ಪಾರ್ಕ್​​ನ ಸೃಷ್ಟಿಕರ್ತ ಸ್ಟಿಫನ್ ಸ್ಪೀಲ್​ಬರ್ಗ್ ಈ ಸಿನಿಮಾದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್.

ದಶಕಗಳಿಂದಲೂ ಹಾಲಿವುಡ್​ನ ಬ್ಲಾಕ್ ಬಸ್ಟರ್ ಫ್ಯಾಂಟಸಿ ಸಿನಿಮಾ ಸರಣಿ ಆಗಿರುವ ‘ಜುರಾಸಿಕ್ ಪಾರ್ಕ್’ನ ಹೊಸ ಸಿನಿಮಾ ‘ಜುರಾಸಿಕ್ ವರ್ಲ್ಡ್: ರೀಬರ್ತ್’ ಇದೇ ವಾರ ಬಿಡುಗಡೆ ಆಗುತ್ತಿದೆ. ಸ್ಕಾರ್ಲೆಟ್ ಜಾನ್ಸನ್ ಮೊದಲ ಬಾರಿಗೆ ಜುರಾಸಿಕ್ ಸಿನಿಮಾನಲ್ಲಿ ನಟಿಸಿದ್ದಾರೆ. ಜುರಾಸಿಕ್ ಪಾರ್ಕ್​​ನ ಸೃಷ್ಟಿಕರ್ತ ಸ್ಟಿಫನ್ ಸ್ಪೀಲ್​ಬರ್ಗ್ ಈ ಸಿನಿಮಾದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್.

8 / 8
Follow Us
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್