AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀನು ಯಾರು ಅಂತ ಅಣ್ಣಾವ್ರು ಬಂದು ಮಾತನಾಡಿಸಬೇಕಿತ್ತಯ್ಯ?’; ಅಂಬಿಗೆ ಬಂದಿತ್ತು ಖಾರದ ಮಾತು

‘ರಾಜ್​ಕುಮಾರ್ ನಮ್ಮೊಂದಿಗೆ ಇಲ್ಲದೆ ಇರಬಹುದು, ಆದರೆ ಅವರು ಹೃದಯದಲ್ಲಿದ್ದಾರೆ. ಅದನ್ನು ಯಾರಿಂದಲೂ ತೆಗೆಯೋಕೆ ಸಾಧ್ಯ ಇಲ್ಲ. ಅವರ ಪ್ರತಿಭೆ ಬಗ್ಗೆ ಮಾತನಾಡೋವಷ್ಟು ದೊಡ್ಡವರು ನಾನಲ್ಲ’ ಎಂದು ವೇದಿಕೆ ಮೇಲೆ ನಿಂತು ಮಾತು ಆರಂಭಿಸಿದ್ದರು ಅಂಬರೀಷ್.

‘ನೀನು ಯಾರು ಅಂತ ಅಣ್ಣಾವ್ರು ಬಂದು ಮಾತನಾಡಿಸಬೇಕಿತ್ತಯ್ಯ?’; ಅಂಬಿಗೆ ಬಂದಿತ್ತು ಖಾರದ ಮಾತು
ರಾಜ್​ಕುಮಾರ್-ಅಂಬರೀಷ್
ರಾಜೇಶ್ ದುಗ್ಗುಮನೆ
|

Updated on:May 29, 2024 | 12:01 PM

Share

ರಾಜ್​ಕುಮಾರ್ ಹಾಗೂ ಅಂಬರೀಷ್ (Ambareesh) ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ‘ಒಡ ಹುಟ್ಟಿದವರು’ ಸಿನಿಮಾದಲ್ಲಿ ಅಣ್ಣಾವ್ರು ಹಾಗೂ ಅಂಬಿ ನಟಿಸಿದ್ದರು. ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಲು ಇದೂ ಕೂಡ ಕಾರಣ ಆಗಿತ್ತು. ಅಂಬರೀಷ್ ಅವರು ಕಾರ್ಯಕ್ರಮ ಒಂದರಲ್ಲಿ ಹಳೆಯ ಘಟನೆಯ ಬಗ್ಗೆ ಹೇಳಿಕೊಂಡಿದ್ದರು. ಅವರು ಆಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಆಗಲೇ ರಾಜ್​ಕುಮಾರ್ ದೊಡ್ಡ ಸ್ಟಾರ್. ಅಂಬಿಯನ್ನು ರಾಜ್​ಕುಮಾರ್ ಅವರೇ ಬಂದು ಮಾತನಾಡಿಸಿದ್ದರಂತೆ. ಇದರಿಂದಾಗಿ ಅವರು ತಾಯಿ ಬಳಿ ಬೈಸಿಕೊಳ್ಳಬೇಕಾಯಿತು. ಈ ಬಗ್ಗೆ ಅಂಬರೀಷ್ ಮಾತನಾಡಿದ್ದರು.

‘ರಾಜ್​ಕುಮಾರ್ ನಮ್ಮೊಂದಿಗೆ ಇಲ್ಲದೆ ಇರಬಹುದು, ಆದರೆ ಅವರು ಹೃದಯದಲ್ಲಿದ್ದಾರೆ. ಅದನ್ನು ಯಾರಿಂದಲೂ ತೆಗೆಯೋಕೆ ಸಾಧ್ಯ ಇಲ್ಲ. ಅವರ ಪ್ರತಿಭೆ ಬಗ್ಗೆ ಮಾತನಾಡೋವಷ್ಟು ದೊಡ್ಡವರು ನಾನಲ್ಲ’ ಎಂದು ವೇದಿಕೆ ಮೇಲೆ ನಿಂತು ಮಾತು ಆರಂಭಿಸಿದ್ದರು ಅಂಬರೀಷ್.

‘ನನಗೆ ಅವಾರ್ಡ್ ಬಂದಿತ್ತು. ಅದು ನನ್ನ ಮೊದಲ ಅವಾರ್ಡ್. ಅವಾರ್ಡ್ ಕಾರ್ಯಕ್ರಮಕ್ಕೆ ನನ್ನ ತಾಯಿಯನ್ನೂ ಕರೆದುಕೊಂಡು ಹೋದೆ. ಆ ಕಾರ್ಯಕ್ರಮಕ್ಕೆ ರಾಜ್​ಕುಮಾರ್ ಬಂದಿದ್ದರು. ನನ್ನ ತಾಯಿಗೆ ರಾಜ್​ಕುಮಾರ್ ದೇವರಿದ್ದಂತೆ. ಹೋಗಿ ನಮಸ್ಕಾರ ಮಾಡು ಎಂದರು. ನಾವು ಕತ್ತಲೆಯಲ್ಲಿ ಕೂತಿದ್ದೇವೆ, ನಮಸ್ಕಾರ ಮಾಡಿದರೆ ಅವರಿಗೆ ಕಾಣಲ್ಲ ಎಂದೆ’ ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದರು ಅಂಬಿ.

‘ರಾಜಣ್ಣ ಅವರು ನನ್ನನ್ನು ನೋಡಿದರು. ನನ್ನ ಬಳಿ ಬಂದು ಹೇಗಿದ್ದೀರಾ ಅಂಬರೀಷ್ ಎಂದರು. ನೀನು ಯಾರು ಅಂತ ಅವರು ಬಂದು ಮಾತನಾಡಿಸಬೇಕಿತ್ತಯ? ನಿನಗೆ ಹೋಗಿ ಮತನಾಡಿಸೋಕೆ ಆಗುತ್ತಿರಲಿಲ್ಲವಾ? ಎಂದು ಕೇಳುತ್ತಲೇ ಇದ್ದರು. ಅಮ್ಮ ಮೈಸೂರಿನವರಿಗೂ ನನ್ನನ್ನು ಬಿಟ್ಟಿಲ್ಲ. ದೊಡ್ಡವರು ಬಂದು ಚಿಕ್ಕವರನ್ನು ಮಾತನಾಡಿಸಿದ್ರೆ ಅವರ ಮೇಲಿನ ಗೌರವ ಹೆಚ್ಚುತ್ತದೆ ಎಂದು ಅಮ್ಮನಿಗೆ ಹೇಳಿದ್ದೆ’ ಎಂದಿದ್ದರು ಅಂಬರೀಷ್.

ಇದನ್ನೂ ಓದಿ: ಅಂಬರೀಷ್​ಗೆ ‘ಮಂಡ್ಯದ ಗಂಡು’ ಎಂದು ಬಿರುದು ಕೊಟ್ಟವರು ಯಾರು ಗೊತ್ತಾ? 

ಯಾವುದೇ ವಿಷಯ ಬಂದರೂ ರಾಜ್​ಕುಮಾರ್ ಅವರು ಅಂಬರೀಷ್ ಪರ ನಿಲ್ಲುತ್ತಿದ್ದರಂತೆ. ‘ಒಡಹುಟ್ಟಿದವರು ಶೂಟಿಂಗ್ ಸಂದರ್ಭದಲ್ಲಿ ನಿರ್ದೇಶಕರಾದ ದೊರೈ-ಭಗವಾನ್ ಬೇಗ ಬರುವಂತೆ ನನಗೆ ಹೇಳುತ್ತಿದ್ದರು. ರಾಜ್​ಕುಮಾರ್ ಸಿನಿಮಾ ಅವರ ಶೂಟಿಂಗ್ ಮೊದಲು ಮಾಡಬೇಕಲ್ಲವೇ ಎಂದು ಕೇಳುತ್ತಿದ್ದೆ. ರಾಜ್​ಕುಮಾರ್ ಅವರ ಬಳಿ ಯಾವಾಗ ಬರಲಿ ಎಂದು ಕೇಳಿದರೆ ಯಾವಾಗ ಬೇಕಿದ್ದರೂ ಬನ್ನಿ ಎನ್ನುತ್ತಿದ್ದರು’ ಎಂದಿದ್ದಾರೆ ಅಂಬಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:40 am, Wed, 29 May 24

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ