AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತಂದೆ ಎಂದಿಗೂ ಗತ್ತು ಬಿಟ್ಟುಕೊಟ್ಟಿಲ್ಲ’; ರವಿಚಂದ್ರನ್ ಬಗ್ಗೆ ಪುತ್ರ ಮನೋರಂಜನ್ ಮಾತು

ಸ್ಟಾರ್ ಮಕ್ಕಳು ಎಂದಾಗ ಸ್ಕೂಲ್​ನಲ್ಲಿ ಅವರನ್ನು ನೋಡೋ ರೀತಿಯೇ ಬೇರೆ ಇರುತ್ತದೆ. ವಿಶೇಷ ಎಂದರೆ ಶಿಕ್ಷಣ ಕಲಿಯುವಾಗ ಮನೋರಂಜನ್ ಆ ವಿಚಾರಗಳನ್ನು ಶಾಲಾ-ಕಾಲೇಜಿನಲ್ಲಿ ರಿವೀಲ್ ಮಾಡಿಯೇ ಇರಲಿಲ್ಲವಂತೆ. ಇದು ಮನೋರಂಜನ್​ಗೆ ತಂದೆ-ತಾಯಿ ಹೇಳಿಕೊಟ್ಟ ಪಾಠ. ಇದನ್ನು ಅನುಸರಿಸಿಕೊಂಡು ಬಂದಿದ್ದಾರೆ ಅವರು.

‘ತಂದೆ ಎಂದಿಗೂ ಗತ್ತು ಬಿಟ್ಟುಕೊಟ್ಟಿಲ್ಲ’; ರವಿಚಂದ್ರನ್ ಬಗ್ಗೆ ಪುತ್ರ ಮನೋರಂಜನ್ ಮಾತು
‘ತಂದೆ ಎಂದಿಗೂ ಗತ್ತು ಬಿಟ್ಟುಕೊಟ್ಟಿಲ್ಲ’; ರವಿಚಂದ್ರನ್ ಬಗ್ಗೆ ಪುತ್ರ ಮನೋರಂಜನ್ ಮಾತು
TV9 Web
| Edited By: |

Updated on: May 29, 2024 | 12:56 PM

Share

ಮೇ 30 ನಟ ರವಿಚಂದ್ರನ್ (Ravichandran) ಅವರ ಜನ್ಮದಿನ. ಅವರಿಗೆ ಎಲ್ಲರೂ ಮುಂಚಿತವಾಗಿ ಶುಭಾಶಯ ಕೋರುತ್ತಿದ್ದಾರೆ. ರವಿಚಂದ್ರನ್ ಕ್ರೇಜಿಸ್ಟಾರ್, ನಟ-ನಿರ್ದೇಶಕ-ನಿರ್ಮಾಪಕ ಅನ್ನೋದು ಎಲ್ಲರಿಗೂ ಗೊತ್ತು. ಅವರು ನಿಜ ಜೀವನದಲ್ಲಿ ಹೇಗಿರುತ್ತಾರೆ? ಕುಟುಂಬದ ಮೇಲೆ ಅವರಿಗೆ ಇರೋ ಪ್ರೀತಿ ಎಂಥದ್ದು ಎಂಬುದನ್ನು ಅವರ ಪುತ್ರ ಮನೋರಂಜನ್ ಅವರು ರವಿಚಂದ್ರನ್ ಬರ್ತ್​ಡೇ ಸಂದರ್ಭದಲ್ಲಿ ಟಿವಿ9 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

‘ನನಗೆ ನನ್ನ ತಂದೆ ಯಾವಾಗಲೂ ಸ್ಟಾರ್ ಆಗಿಯೇ ಕಾಣೋದು. ತೆರೆಮೇಲೆ ಯಾವ ರೀತಿ ಇರುತ್ತಾರೋ ನಿಜ ಜೀವನದಲ್ಲೂ ಹಾಗೆಯೇ ಇರುತ್ತಾರೆ. ಅವರು ಗತ್ತನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ’ ಎಂದಿದ್ದಾರೆ ಮನೋರಂಜನ್. ಸಿನಿಮಾ ರಂಗವನ್ನೇ ಆಯ್ಕೆ ಮಾಡಿಕೊಳ್ಳುವಂತೆ ಸೆಲೆಬ್ರಿಟಿಗಳು ಮಕ್ಕಳಿಗೆ ಫೋರ್ಸ್ ಮಾಡುತ್ತಾರೆ. ಆದರೆ, ರವಿಚಂದ್ರನ್ ಈ ವಿಚಾರದಲ್ಲಿ ಆ ರೀತಿ ಇಲ್ಲ. ‘ನಟನೆ ನನ್ನ ಆಯ್ಕೆ. ಅವರು ಫೋರ್ಸ್ ಮಾಡಿಲ್ಲ. ನಾನು ನಟನೆಯನ್ನು ಆಯ್ಕೆ ಮಾಡಿಕೊಂಡಿದ್ದು ಅವರಿಗೆ ಶಾಕ್ ಎನಿಸಿತು. ಹಾಬಿ ರೀತಿ ಇರಲಿ ಎಂದು ಸಣ್ಣ ವಯಸ್ಸಿನಲ್ಲೇ ನನ್ನನ್ನು ಮ್ಯೂಸಿಕ್ ಕ್ಲಾಸ್​ಗೆ ಸೇರಿಸಿದ್ರು. ಆಗಲೂ ನನ್ನ ಗಮನ ನಟನೆ ಬಗ್ಗೆ ಇತ್ತು’ ಎಂದಿದ್ದಾರೆ ಅವರು.

ಸ್ಟಾರ್ ಮಕ್ಕಳು ಎಂದಾಗ ಸ್ಕೂಲ್​ನಲ್ಲಿ ಅವರನ್ನು ನೋಡೋ ರೀತಿಯೇ ಬೇರೆ ಇರುತ್ತದೆ. ವಿಶೇಷ ಎಂದರೆ ಶಿಕ್ಷಣ ಕಲಿಯುವಾಗ ಮನೋರಂಜನ್ ಆ ವಿಚಾರಗಳನ್ನು ಶಾಲಾ-ಕಾಲೇಜಿನಲ್ಲಿ ರಿವೀಲ್ ಮಾಡಿಯೇ ಇರಲಿಲ್ಲವಂತೆ. ಇದು ಮನೋರಂಜನ್​ಗೆ ತಂದೆ-ತಾಯಿ ಹೇಳಿಕೊಟ್ಟ ಪಾಠ. ಇದನ್ನು ಅನುಸರಿಸಿಕೊಂಡು ಬಂದಿದ್ದಾರೆ ಅವರು. ‘ನಾನು ರವಿಚಂದ್ರನ್ ಮಗ ಎನ್ನುವ ವಿಚಾರವನ್ನು ಎಂದೂ ಆಚೆ ಹೇಳಿಲ್ಲ. ನಮ್ಮ ತಂದೆ ತಾಯಿ ನಮ್ಮನ್ನು ಬೆಳೆಸಿದ್ದು ಹಾಗೆ. ಒಂದೊಮ್ಮೆ ಗೊತ್ತಾದ್ರೆ ನಮಗೇನು ಎರಡು ಕೊಂಬು ಇದೆಯಾ ಅಂತ ಕೇಳು ಎಂದು ಅಮ್ಮ ಹೇಳಿದ್ರು. ಸಾಮಾನ್ಯರಂತೆ ಇರಬೇಕು ಅನ್ನೋದು ಅವರ ಉದ್ದೇಶ ಆಗಿತ್ತು’ ಎಂದಿದ್ದಾರೆ ಮನೋರಂಜನ್. ‘ನಮ್ಮ ತಂದೆ ತುಂಬಾನೇ ಡೆಡಿಕೇಟ್. ಅವರು ನಿತ್ಯ ಮುಂಜಾನೆ 4-5 ಗಂಟೆಗೆ ಏಳುತ್ತಾರೆ. ಆರು ಗಂಟೆ ಮೇಲೆ ಏಕೆ ಮಲಗುತ್ತೀರಾ ಎಂದು ಕೇಳುತ್ತಾರೆ. ಅವರಿಂದ ಕಲಿತಿದ್ದು ತುಂಬಾ ವಿಷಯಗಳಿವೆ. ಅವರಿಂದ ಒಂದು ದಿನಕ್ಕೆಲ್ಲ ಕಲಿಯೋಕೆ ಆಗಲ್ಲ, ತುಂಬಾ ವರ್ಷಗಳೇ ಬೇಕು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಪ್ರೇಮಲೋಕ 2’ ಚಿತ್ರಕ್ಕೆ ನಾಯಕಿ ಫೈನಲ್? ಯಾರಿಗೆ ಸಿಕ್ತು ಗೋಲ್ಡನ್ ಚಾನ್ಸ್? 

‘ಪ್ರೇಮಲೋಕ 2’ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಮನೋರಂಜನ್ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ರವಿಚಂದ್ರನ್ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾ ಶೀಘ್ರವೇ ಸೆಟ್ಟೇರಲಿದೆ. ಇದಕ್ಕಾಗಿ ಅವರು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ