AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತಂದೆ ಎಂದಿಗೂ ಗತ್ತು ಬಿಟ್ಟುಕೊಟ್ಟಿಲ್ಲ’; ರವಿಚಂದ್ರನ್ ಬಗ್ಗೆ ಪುತ್ರ ಮನೋರಂಜನ್ ಮಾತು

ಸ್ಟಾರ್ ಮಕ್ಕಳು ಎಂದಾಗ ಸ್ಕೂಲ್​ನಲ್ಲಿ ಅವರನ್ನು ನೋಡೋ ರೀತಿಯೇ ಬೇರೆ ಇರುತ್ತದೆ. ವಿಶೇಷ ಎಂದರೆ ಶಿಕ್ಷಣ ಕಲಿಯುವಾಗ ಮನೋರಂಜನ್ ಆ ವಿಚಾರಗಳನ್ನು ಶಾಲಾ-ಕಾಲೇಜಿನಲ್ಲಿ ರಿವೀಲ್ ಮಾಡಿಯೇ ಇರಲಿಲ್ಲವಂತೆ. ಇದು ಮನೋರಂಜನ್​ಗೆ ತಂದೆ-ತಾಯಿ ಹೇಳಿಕೊಟ್ಟ ಪಾಠ. ಇದನ್ನು ಅನುಸರಿಸಿಕೊಂಡು ಬಂದಿದ್ದಾರೆ ಅವರು.

‘ತಂದೆ ಎಂದಿಗೂ ಗತ್ತು ಬಿಟ್ಟುಕೊಟ್ಟಿಲ್ಲ’; ರವಿಚಂದ್ರನ್ ಬಗ್ಗೆ ಪುತ್ರ ಮನೋರಂಜನ್ ಮಾತು
‘ತಂದೆ ಎಂದಿಗೂ ಗತ್ತು ಬಿಟ್ಟುಕೊಟ್ಟಿಲ್ಲ’; ರವಿಚಂದ್ರನ್ ಬಗ್ಗೆ ಪುತ್ರ ಮನೋರಂಜನ್ ಮಾತು
TV9 Web
| Updated By: ರಾಜೇಶ್ ದುಗ್ಗುಮನೆ|

Updated on: May 29, 2024 | 12:56 PM

Share

ಮೇ 30 ನಟ ರವಿಚಂದ್ರನ್ (Ravichandran) ಅವರ ಜನ್ಮದಿನ. ಅವರಿಗೆ ಎಲ್ಲರೂ ಮುಂಚಿತವಾಗಿ ಶುಭಾಶಯ ಕೋರುತ್ತಿದ್ದಾರೆ. ರವಿಚಂದ್ರನ್ ಕ್ರೇಜಿಸ್ಟಾರ್, ನಟ-ನಿರ್ದೇಶಕ-ನಿರ್ಮಾಪಕ ಅನ್ನೋದು ಎಲ್ಲರಿಗೂ ಗೊತ್ತು. ಅವರು ನಿಜ ಜೀವನದಲ್ಲಿ ಹೇಗಿರುತ್ತಾರೆ? ಕುಟುಂಬದ ಮೇಲೆ ಅವರಿಗೆ ಇರೋ ಪ್ರೀತಿ ಎಂಥದ್ದು ಎಂಬುದನ್ನು ಅವರ ಪುತ್ರ ಮನೋರಂಜನ್ ಅವರು ರವಿಚಂದ್ರನ್ ಬರ್ತ್​ಡೇ ಸಂದರ್ಭದಲ್ಲಿ ಟಿವಿ9 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

‘ನನಗೆ ನನ್ನ ತಂದೆ ಯಾವಾಗಲೂ ಸ್ಟಾರ್ ಆಗಿಯೇ ಕಾಣೋದು. ತೆರೆಮೇಲೆ ಯಾವ ರೀತಿ ಇರುತ್ತಾರೋ ನಿಜ ಜೀವನದಲ್ಲೂ ಹಾಗೆಯೇ ಇರುತ್ತಾರೆ. ಅವರು ಗತ್ತನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ’ ಎಂದಿದ್ದಾರೆ ಮನೋರಂಜನ್. ಸಿನಿಮಾ ರಂಗವನ್ನೇ ಆಯ್ಕೆ ಮಾಡಿಕೊಳ್ಳುವಂತೆ ಸೆಲೆಬ್ರಿಟಿಗಳು ಮಕ್ಕಳಿಗೆ ಫೋರ್ಸ್ ಮಾಡುತ್ತಾರೆ. ಆದರೆ, ರವಿಚಂದ್ರನ್ ಈ ವಿಚಾರದಲ್ಲಿ ಆ ರೀತಿ ಇಲ್ಲ. ‘ನಟನೆ ನನ್ನ ಆಯ್ಕೆ. ಅವರು ಫೋರ್ಸ್ ಮಾಡಿಲ್ಲ. ನಾನು ನಟನೆಯನ್ನು ಆಯ್ಕೆ ಮಾಡಿಕೊಂಡಿದ್ದು ಅವರಿಗೆ ಶಾಕ್ ಎನಿಸಿತು. ಹಾಬಿ ರೀತಿ ಇರಲಿ ಎಂದು ಸಣ್ಣ ವಯಸ್ಸಿನಲ್ಲೇ ನನ್ನನ್ನು ಮ್ಯೂಸಿಕ್ ಕ್ಲಾಸ್​ಗೆ ಸೇರಿಸಿದ್ರು. ಆಗಲೂ ನನ್ನ ಗಮನ ನಟನೆ ಬಗ್ಗೆ ಇತ್ತು’ ಎಂದಿದ್ದಾರೆ ಅವರು.

ಸ್ಟಾರ್ ಮಕ್ಕಳು ಎಂದಾಗ ಸ್ಕೂಲ್​ನಲ್ಲಿ ಅವರನ್ನು ನೋಡೋ ರೀತಿಯೇ ಬೇರೆ ಇರುತ್ತದೆ. ವಿಶೇಷ ಎಂದರೆ ಶಿಕ್ಷಣ ಕಲಿಯುವಾಗ ಮನೋರಂಜನ್ ಆ ವಿಚಾರಗಳನ್ನು ಶಾಲಾ-ಕಾಲೇಜಿನಲ್ಲಿ ರಿವೀಲ್ ಮಾಡಿಯೇ ಇರಲಿಲ್ಲವಂತೆ. ಇದು ಮನೋರಂಜನ್​ಗೆ ತಂದೆ-ತಾಯಿ ಹೇಳಿಕೊಟ್ಟ ಪಾಠ. ಇದನ್ನು ಅನುಸರಿಸಿಕೊಂಡು ಬಂದಿದ್ದಾರೆ ಅವರು. ‘ನಾನು ರವಿಚಂದ್ರನ್ ಮಗ ಎನ್ನುವ ವಿಚಾರವನ್ನು ಎಂದೂ ಆಚೆ ಹೇಳಿಲ್ಲ. ನಮ್ಮ ತಂದೆ ತಾಯಿ ನಮ್ಮನ್ನು ಬೆಳೆಸಿದ್ದು ಹಾಗೆ. ಒಂದೊಮ್ಮೆ ಗೊತ್ತಾದ್ರೆ ನಮಗೇನು ಎರಡು ಕೊಂಬು ಇದೆಯಾ ಅಂತ ಕೇಳು ಎಂದು ಅಮ್ಮ ಹೇಳಿದ್ರು. ಸಾಮಾನ್ಯರಂತೆ ಇರಬೇಕು ಅನ್ನೋದು ಅವರ ಉದ್ದೇಶ ಆಗಿತ್ತು’ ಎಂದಿದ್ದಾರೆ ಮನೋರಂಜನ್. ‘ನಮ್ಮ ತಂದೆ ತುಂಬಾನೇ ಡೆಡಿಕೇಟ್. ಅವರು ನಿತ್ಯ ಮುಂಜಾನೆ 4-5 ಗಂಟೆಗೆ ಏಳುತ್ತಾರೆ. ಆರು ಗಂಟೆ ಮೇಲೆ ಏಕೆ ಮಲಗುತ್ತೀರಾ ಎಂದು ಕೇಳುತ್ತಾರೆ. ಅವರಿಂದ ಕಲಿತಿದ್ದು ತುಂಬಾ ವಿಷಯಗಳಿವೆ. ಅವರಿಂದ ಒಂದು ದಿನಕ್ಕೆಲ್ಲ ಕಲಿಯೋಕೆ ಆಗಲ್ಲ, ತುಂಬಾ ವರ್ಷಗಳೇ ಬೇಕು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಪ್ರೇಮಲೋಕ 2’ ಚಿತ್ರಕ್ಕೆ ನಾಯಕಿ ಫೈನಲ್? ಯಾರಿಗೆ ಸಿಕ್ತು ಗೋಲ್ಡನ್ ಚಾನ್ಸ್? 

‘ಪ್ರೇಮಲೋಕ 2’ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಮನೋರಂಜನ್ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ರವಿಚಂದ್ರನ್ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾ ಶೀಘ್ರವೇ ಸೆಟ್ಟೇರಲಿದೆ. ಇದಕ್ಕಾಗಿ ಅವರು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ