ಸಾಲು ಮರದ ತಿಮ್ಮಕ್ಕನಿಗೆ ವಿದಾಯ ಪತ್ರ ಬರೆದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್
Salu Marada Thimmakka: ಸಾಲು ಮರದ ತಿಮ್ಮಕ್ಕನ ಅಗಲಿಕೆಗೆ ರಾಜ್ಯದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಕರ್ನಾಟಕದ ಗಣ್ಯರು ಮಾತ್ರವೇ ಅಲ್ಲದೆ ನೆರೆಯ ಆಂಧ್ರ ಪ್ರದೇಶದ ಉಪ ಮುಖ್ಯ ಮಂತ್ರಿ, ನಟ ಪವನ್ ಕಲ್ಯಾಣ್ ಅವರು ಸಹ ಸಾಲುಮರದ ತಿಮ್ಮಕ್ಕನ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಧೀರ್ಘವಾದ ಟ್ವೀಟ್ ಮಾಡುವ ಮೂಲಕ ತಮ್ಮ ಅಂತಿಮ ನಮನಗಳನ್ನು ಸಲ್ಲಿಸಿದ್ದಾರೆ.

ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಇಂದು (ನವೆಂಬರ್ 14) ಅಗಲಿದ್ದಾರೆ. ಅವರಿಗೆ 114 ವರ್ಷ ವಯಸ್ಸಾಗಿತ್ತು. ತಮ್ಮ ಜೀವತಾವಧಿಯಲ್ಲಿ ಸಾವಿರಾರು ಮರಗಳನ್ನು ನೆಟ್ಟು ಅವುಗಳ ಪಾಲನೆ ಪೋಷಣೆ ಮಾಡಿದ ಸಾಲು ಮರದ ತಿಮ್ಮಕ್ಕ ಕೋಟ್ಯಂತರ ಜನರಿಗೆ ಸ್ಪೂರ್ತಿಯಾಗಿದ್ದಾರೆ. ನಿಜವಾದ ಪರಿಸರವಾದಿ ಆಗಿದ್ದಾರೆ. ಸಾಲು ಮರದ ತಿಮ್ಮಕ್ಕನ ಅಗಲಿಕೆಗೆ ರಾಜ್ಯದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಕರ್ನಾಟಕದ ಗಣ್ಯರು ಮಾತ್ರವೇ ಅಲ್ಲದೆ ನೆರೆಯ ಆಂಧ್ರ ಪ್ರದೇಶದ ಉಪ ಮುಖ್ಯ ಮಂತ್ರಿ, ನಟ ಪವನ್ ಕಲ್ಯಾಣ್ ಅವರು ಸಹ ಸಾಲುಮರದ ತಿಮ್ಮಕ್ಕನ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಧೀರ್ಘವಾದ ಟ್ವೀಟ್ ಒಂದನ್ನು ಮಾಡಿದ್ದಾರೆ.
‘ಆಂಧ್ರಪ್ರದೇಶದಲ್ಲಿ, ಪರಿಸರವನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದವರು, ಮರಗಳನ್ನು ನಿರ್ದಯವಾಗಿ ಕಡಿದು, ಕಾಡುಗಳನ್ನು ನಾಶಮಾಡಿ, ಸ್ವಾರ್ಥ ಲಾಭಕ್ಕಾಗಿ ನಮ್ಮ ಪ್ರಮುಖ ಪರಿಸರ ಸಂಪನ್ಮೂಲಗಳ ಕಳ್ಳಸಾಗಣೆಯನ್ನು ಸಕ್ರಿಯಗೊಳಿಸಿದ್ದನ್ನು ನಾವು ನೋಡಿದ್ದೇವೆ. ಆದರೆ ಮತ್ತೊಂದು ದಿಕ್ಕಿನಲ್ಲಿ ಪ್ರಕೃತಿಗೆ ಸಂಪೂರ್ಣ ಸಮರ್ಪಣೆ ಮಾಡಿದ ವಿನಮ್ರ ವ್ಯಕ್ತಿ – ಸಾಲುಮರದ ತಿಮ್ಮಕ್ಕ, “ವೃಕ್ಷಗಳ ತಾಯಿ” ಎಂದು ಕರೆಯಲ್ಪಡುವ ಮಹಿಳೆಯನ್ನು ನಾವು ಕಂಡಿದ್ದೇವೆ’ ಎಂದಿದ್ದಾರೆ ಪವನ್ ಕಲ್ಯಾಣ್.
‘ಕರ್ನಾಟಕದ ಒಂದು ಸಣ್ಣ ಹಳ್ಳಿಯವರಾದ ತಿಮ್ಮಕ್ಕ ಮತ್ತು ಅವರ ಪತಿಗೆ ಮಕ್ಕಳಿಲ್ಲದಿದ್ದಾಗ ತಮ್ಮ ಜೀವನದ ಉದ್ದೇಶವನ್ನು ಕಂಡುಕೊಂಡರು. ಅವರು ಹಸಿರು ಕುಟುಂಬವನ್ನು ಬೆಳೆಸು ನಿರ್ಧಾರ ಮಾಡಿದರು. ಶುದ್ಧ ಪ್ರೀತಿ ಮತ್ತು ಶ್ರಮದಿಂದ, ಅವರು ಜಗತ್ತಿಗೆ ಉಸಿರು ನೀಡುವ ಹಸಿರು ಉಡುಗೊರೆಯನ್ನು ನೀಡಿದರು. 375 ಭವ್ಯವಾದ ಆಲದ ಮರಗಳು ಸೇರಿದಂತೆ 8,000 ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಪೋಷಿಸಿದರು. ಅವರ ಜೀವನವು ಅಧಿಕಾರ ಅಥವಾ ಸಂಪತ್ತನ್ನು ಹುಡುಕುವ ಬಗ್ಗೆ ಆಗಿರಲಿಲ್ಲ. ಅದು ಭೂಮಿ ತಾಯಿಗೆ ಬೇಷರತ್ತಾದ ಪ್ರೀತಿಯ ಪ್ರತಿಜ್ಞೆಯಾಗಿತ್ತು’ ಎಂದು ತಿಮ್ಮಕ್ಕನ ಶ್ರೇಷ್ಠತೆಯನ್ನು ಕೊಂಡಾಡಿದ್ದಾರೆ ಪವನ್.
ಇದನ್ನೂ ಓದಿ:ನೀರಿನ ಸಮಸ್ಯೆ ಬಗೆಹರಿಸಲು ಸಹೋದರನಾಗಿ ಪ್ರಯತ್ನ: ಆಂಧ್ರ ಡಿಸಿಎಂ ಪವನ್ ಕಲ್ಯಾಣ್
ಇಂದು, 114 ವರ್ಷ ವಯಸ್ಸಿನಲ್ಲಿ ಈ ಪ್ರಕೃತಿ ರಕ್ಷಕಿ ನಮ್ಮನ್ನು ಅಗಲಿದ್ದಾರೆ. ಅವರ ಜೀವನವು ನಿಜವಾದ ಸಾರ್ವಜನಿಕ ಸೇವೆಯ ನಿಜವಾದ ಪಾಠವಾಗಿದೆ. ಜನಸೇನಾ ಪಕ್ಷದ ಪರವಾಗಿ, ಮಹಾನ್ ಸಾಲುಮರದ ತಿಮ್ಮಕ್ಕ ಅವರಿಗೆ ನನ್ನ ಆಳವಾದ ಗೌರವಗಳನ್ನು ಅರ್ಪಿಸುತ್ತೇನೆ. ನಾವು ನಮ್ಮ ವೃಕ್ಷಗಳ ತಾಯಿಯನ್ನು ಕಳೆದುಕೊಂಡಿದ್ದೇವೆ, ಆದರೆ ಅವರ ಆತ್ಮವು ನಮ್ಮೊಂದಿಗೆ ಉಳಿದಿದೆ. ಪರಿಸರ ಸಂರಕ್ಷಣೆಯ ಕಡೆಗೆ ಕೆಲಸ ಮಾಡಲು, ನಮ್ಮ ಸಮುದಾಯಗಳಲ್ಲಿ ಮರಗಳನ್ನು ನೆಡಲು ಮತ್ತು ನಮ್ಮ ಭೂಗ್ರಹಕ್ಕೆ ತೀರಾ ಅಗತ್ಯವಿರುವ ಜವಾಬ್ದಾರಿಯುತ ನಾಗರಿಕರಾಗಲು ಅವರು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇರುತ್ತಾರೆ’ ಎಂದು ಪವನ್ ಕಲ್ಯಾಣ್ ಅಂತಿಮ ನಮನವನ್ನು ಸಲ್ಲಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




