AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ರಾಜ್​ಕುಮಾರ್ ಇಂದಾಗಿ ಪ್ರಿಯಾಮಣಿಗೆ ಸಿಕ್ತು ಶಾರುಖ್ ಜೊತೆ ಕೆಲಸ ಮಾಡುವ ಅವಕಾಶ

Priyamani: ಶಾರುಖ್ ಖಾನ್ ಜೊತೆ ನಟಿಸುವ ಕನಸು ನನಸಾಗಲು ಪುನೀತ್ ರಾಜ್​ಕುಮಾರ್ ಹೇಗೆ ಪರೋಕ್ಷವಾಗಿ ಕಾರಣರಾದರು ಎಂಬ ಬಗ್ಗೆ ನಟಿ ಪ್ರಿಯಾಮಣಿ ಮಾತನಾಡಿದ್ದಾರೆ.

ಪುನೀತ್ ರಾಜ್​ಕುಮಾರ್ ಇಂದಾಗಿ ಪ್ರಿಯಾಮಣಿಗೆ ಸಿಕ್ತು ಶಾರುಖ್ ಜೊತೆ ಕೆಲಸ ಮಾಡುವ ಅವಕಾಶ
ಪ್ರಿಯಾಮಣಿ-ಪುನೀತ್-ಶಾರುಖ್ ಖಾನ್
ಮಂಜುನಾಥ ಸಿ.
|

Updated on:Jun 27, 2023 | 5:48 PM

Share

ಅಪ್ಪಟ ಕನ್ನಡತಿಯಾಗಿದ್ದರೂ ಪ್ರಿಯಾಮಣಿ (Priyamani) ಹೆಚ್ಚು ಮಿಂಚಿರುವುದು ಪರ ಭಾಷೆಯ ಸಿನಿಮಾಗಳಲ್ಲಿಯೇ. ತಮಿಳಿನ ಕಣ್ಗಳ್ ಖೈದು ಸೇಯ್ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಪ್ರಿಯಾಮಣಿ, ತಮಿಳಿನ ಪರತ್ತಿವೀರನ್ ಸಿನಿಮಾದ ಅತ್ಯುತ್ತಮ ನಟನೆಗೆ ರಾಷ್ಟ್ರ ಪ್ರಶಸ್ತಿ ಸಹ ಪಡೆದಿದ್ದಾರೆ. ವೃತ್ತಿ ಬದುಕಿನ ಆರಂಭದಲ್ಲಿ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಪ್ರಿಯಾಮಣಿ ಕನ್ನಡಕ್ಕೆ ಬಂದಿದ್ದು ಪುನೀತ್ ರಾಜ್​ಕುಮಾರ್ (Puneeth Rajkumar) ನಟನೆಯ ರಾಮ್ ಸಿನಿಮಾ ಮೂಲಕ. ಪುನೀತ್ ಅವರ ಆತ್ಮೀಯ ಮಿತ್ರರಲ್ಲಿ ಒಬ್ಬರಾಗಿದ್ದ ಪ್ರಿಯಾಮಣಿ, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಮಗೆ ಶಾರುಖ್ ಖಾನ್ ಜೊತೆ ಡ್ಯಾನ್ಸ್ ಮಾಡುವ ಅವಕಾಶ ಸಿಗುವಲ್ಲಿ ಹೇಗೆ ಪುನೀತ್ ರಾಜ್​ಕುಮಾರ್ ಸಹ ಕಾರಣರಾದರು ಎಂಬ ಬಗ್ಗೆ ಮಾತನಾಡಿದ್ದಾರೆ.

ಪ್ರಿಯಾಮಣಿಯವರ ಮೆಚ್ಚಿನ ನಟ ಶಾರುಖ್ ಖಾನ್, ಅವರೊಟ್ಟಿಗೆ ತೆರೆ ಹಂಚಿಕೊಳ್ಳಬೇಕು ಎಂಬುದು ಪ್ರಿಯಾಮಣಿಯ ಬಹು ವರ್ಷದ ಕನಸಾಗಿತ್ತಂತೆ. ಆ ಕನಸು ನನಸಾಗಿದ್ದು 2013ರಲ್ಲಿ. ಶಾರುಖ್ ಖಾನ್​ರ ಸೂಪರ್ ಹಿಟ್ ಸಿನಿಮಾ ಚೆನ್ನೈ ಎಕ್ಸ್​ಪ್ರೆಸ್​ನಲ್ಲಿ ಪ್ರಿಯಾಮಣಿ, ಶಾರುಖ್ ಖಾನ್ ಜೊತೆ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದರು. ಒನ್, ಟು, ತ್ರೀ ಫೋರ್ ಎಂದು ಶುರುವಾಗುವ ಈ ಹಾಡು ಸಖತ್ ವೈರಲ್ ಆಯಿತು. ಆದರೆ ಆ ಹಾಡಿನ ಅವಕಾಶ ಹೇಗೆ ಸಿಕ್ಕಿತು. ಅದಕ್ಕೆ ಪರೋಕ್ಷವಾಗಿ ಪುನೀತ್ ಹೇಗೆ ಕಾರಣರಾದರು ಎಂಬುದನ್ನು ಪ್ರಿಯಾಮಣಿ ವಿವರಿಸಿದ್ದಾರೆ.

ಒಮ್ಮೆ ಪ್ರಿಯಾಮಣಿ ಬೆಂಗಳೂರಿನ ತಮ್ಮ ಮನೆಯಲ್ಲಿದ್ದಾಗ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಕಚೇರಿಯಿಂದ ಕರೆ ಬಂತಂತೆ. ನೀವು ನಮ್ಮ ಸಿನಿಮಾದಲ್ಲಿ ಹಾಡೊಂದಕ್ಕೆ ಡ್ಯಾನ್ಸ್ ಮಾಡಬೇಕು ಎಂದಿದ್ದಾರೆ. ಮೊದಲಿಗೆ ಪ್ರಿಯಾಮಣಿ ನಂಬಲಿಲ್ಲವಂತೆ. ರೋಹಿತ್ ಶೆಟ್ಟಿ ಸಿನಿಮಾದಲ್ಲಿ ನನಗೆ ಏಕೆ ಅವಕಾಶ ಸಿಗುತ್ತದೆ ಎಂದುಕೊಂಡಿದ್ದಾರೆ. ಆದರೆ ಪ್ರಿಯಾಮಣಿಯ ಮ್ಯಾನೇಜರ್, ಇಲ್ಲ ನಿಜಕ್ಕೂ ರೋಹಿತ್ ಶೆಟ್ಟಿ ಸಿನಿಮಾದಲ್ಲಿ ನಿಮಗೆ ಡ್ಯಾನ್ಸ್ ಮಾಡಲಿಕ್ಕಿದೆ ಎಂದಾಗ ಪ್ರಿಯಾಮಣಿ ಮುಂಬೈಗೆ ಹೋದರಂತೆ.

ಇದನ್ನೂ ಓದಿ: ನನ್ನ ಶಕ್ತಿಯನ್ನು ನನಗೆ ಪರಿಚಯಿಸಿದ್ದು ಪುನೀತ್ ರಾಜ್​ಕುಮಾರ್, ಅವರನ್ನು ಭೇಟಿಯಾಗಿದ್ದು ಪುಣ್ಯ: ರಶ್ಮಿಕಾ ಮಂದಣ್ಣ

ರೋಹಿತ್ ಶೆಟ್ಟಿ ಕಚೇರಿಗೆ ಹೋದಾಗ ಗೊತ್ತಾಯಿತಂತೆ ತಾವು ಡ್ಯಾನ್ಸ್ ಮಾಡಬೇಕಿರುವುದು ಶಾರುಖ್ ಖಾನ್ ಜೊತೆಗೆ ಎಂದು. ನೀವು ಏಕೆ ನನ್ನನ್ನೇ ಈ ಹಾಡಿಗೆ ಆಯ್ದುಕೊಂಡಿರಿ ಎಂದು ಕೇಳಿದಾಗ ರೋಹಿತ್ ಹೇಳಿದರಂತೆ, ನಾವು ಯೂಟ್ಯೂಬ್​ನಲ್ಲಿ ನಿಮ್ಮ ಹಾಡೊಂದನ್ನು ನೋಡಿದೆವು. ಅದರಲ್ಲಿ ನೀವು ಪುನೀತ್ ರಾಜ್​ಕುಮಾರ್ ಜೊತೆ ಡ್ಯಾನ್ಸ್ ಮಾಡುತ್ತಿದ್ದಿರಿ. ಆ ಹಾಡು ನಮಗೆ ಬಹಳ ಇಷ್ಟವಾಯಿತು ಹಾಗಾಗಿ ನಾವು ಚೆನ್ನೈ ಎಕ್ಸ್​ಪ್ರೆಸ್ ಸಿನಿಮಾದ ಹಾಡಿಗೆ ನಿಮ್ಮನ್ನು ಆರಿಸಿಕೊಂಡೆವು ಎಂದಿದ್ದಾರೆ. ಪುನೀತ್ ರಾಜ್​ಕುಮಾರ್ ಜೊತೆ ಪ್ರಿಯಾಮಣಿ ನಟಿಸಿದ್ದ ರಾಮ್ ಸಿನಿಮಾದ ಹೊಸ ಗಾನ ಬಜಾನ ಹಾಡನ್ನು ನೋಡಿದ ರೋಹಿತ್ ಶೆಟ್ಟಿ, ಪ್ರಿಯಾಮಣಿಯನ್ನು ತಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿದ್ದರಂತೆ.

ಸಂದರ್ಶನದಲ್ಲಿ ಸಹ ಪುನೀತ್ ಅನ್ನು ಪ್ರೀತಿಯಿಂದ ನೆನಪಿಸಿಕೊಂಡಿರುವ ಪ್ರಿಯಾಮಣಿ, ಪುನೀತ್ ಅದ್ಭುತವಾದ ವ್ಯಕ್ತಿ. ನನ್ನ ಅತ್ಯಂತ ಆತ್ಮೀಯ ಗೆಳೆಯ. ಅವರಷ್ಟು ಸಿಹಿಯಾದ ವ್ಯಕ್ತಿಯನ್ನು ನಾನು ನೋಡಿಲ್ಲ. ಈಗಲೂ ನನ್ನ ಪಾಲಿನ ಅತ್ಯಂತ ಆತ್ಮೀಯ ವ್ಯಕ್ತಿ ಅವರು. ಅವರ ನಗುವಿನಲ್ಲಿ ಸಾಂಕ್ರಾಮಿಕತೆ ಇತ್ತು, ನಗು ನೋಡಿದವರಿಗೂ ಮುಗುಳ್ನಗೆ ಮೂಡುತ್ತಿತ್ತು ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:03 pm, Tue, 27 June 23

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು