ಚಿಕ್ಕ ವಯಸ್ಸಲ್ಲಿ ಪುನೀತ್ ಕೇಳಿದ್ದ ಕಾರನ್ನು ಮನೆಗೆ ಕಳುಹಿಸಿದ್ದ ಎನ್​ಟಿಆರ್

ಪುನೀತ್ ಅವರು ರಾಜ್​ಕುಮಾರ್ ಜೊತೆ ಅನೇಕ ಕಡೆಗಳಲ್ಲಿ ತೆರಳುತ್ತಿದ್ದರು. ಶೂಟಿಂಗ್​ಗೆ ಹೋದಾಗ ಅನೇಕ ಜನರ ಪರಿಚಯ ಅವರಿಗೆ ಆಗುತ್ತಿತ್ತು. ಅದೇ ರೀತಿ ಪುನೀತ್ ಅವರು ತಂದೆಯ ಜೊತೆ ಒಮ್ಮೆ ಚಿತ್ರೀಕರಣಕ್ಕೆ ತೆರಳಿದಾಗ ಎನ್​ಟಿಆರ್​ ಸಿಕ್ಕಿದ್ದರು. ಅವರ ಬಳಿ ಒಂದು ರೇಸ್ ಕಾರ್ ಇತ್ತು. ಈ ಕಾರು ಬೇಕು ಎಂದು ಪುನೀತ್ ಹಠ ಹಿಡಿಸಿದ್ದರು.

ಚಿಕ್ಕ ವಯಸ್ಸಲ್ಲಿ ಪುನೀತ್ ಕೇಳಿದ್ದ ಕಾರನ್ನು ಮನೆಗೆ ಕಳುಹಿಸಿದ್ದ ಎನ್​ಟಿಆರ್
ಚಿಕ್ಕ ವಯಸ್ಸಲ್ಲಿ ಪುನೀತ್ ಕೇಳಿದ್ದ ಕಾರನ್ನು ಮನೆಗೆ ಕಳುಹಿಸಿದ್ದ ಎನ್​ಟಿಆರ್
Follow us
| Updated By: ರಾಜೇಶ್ ದುಗ್ಗುಮನೆ

Updated on: Sep 12, 2024 | 7:44 AM

ಪುನೀತ್ ರಾಜ್​ಕುಮಾರ್ ಅವರು ಇಂದು ನಮ್ಮ ಜೊತೆಗೆ ಇಲ್ಲ. ಈ ನೋವು ಯಾವಾಗಲೂ ಕಡಿಮೆ ಆಗುವಂಥದ್ದಲ್ಲ. ಅವರು ಅನೇಕ ಕಲಾವಿದರ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದರು. ಅವರು ಸಣ್ಣ ವಯಸ್ಸಿನಿಂದಲೇ ಇಂಡಸ್ಟ್ರಿಯನ್ನು ಹತ್ತಿರದಿಂದ ಕಂಡವರು. ರಾಜ್​ಕುಮಾರ್ ಕಾರಣದಿಂದ ಅವರು ಅನೇಕ ದೊಡ್ಡ ಕಲಾವಿದರ ಜೊತೆ ಒಡನಾಟ ಹೊಂದಿದ್ದರು. ಒಮ್ಮೆ ಶೂಟಿಂಗ್​ಗೆ ಹೋದಾಗ ಅವರಿಗೆ ಒಂದು ಕಾರು ಸಖತ್ ಇಷ್ಟ ಆಗಿತ್ತು. ಅದಕ್ಕಾಗಿ ಅವರಯ ಬೇಡಿಕೆ ಇಟ್ಟಿದ್ದರು. ಆ ಬೇಡಿಕೆಯನ್ನು ಎನ್​ಟಿಆರ್​ ಅವರು ಈಡೇರಿಸಿದ್ದರು!

ಪುನೀತ್ ರಾಜ್​ಕುಮಾರ್ ಅವರು ರಾಜ್​ಕುಮಾರ್ ಜೊತೆ ಅನೇಕ ಕಡೆಗಳಲ್ಲಿ ತೆರಳುತ್ತಿದ್ದರು. ಶೂಟಿಂಗ್​ಗೆ ಹೋದಾಗ ಅನೇಕ ಜನರ ಪರಿಚಯ ಅವರಿಗೆ ಆಗುತ್ತಿತ್ತು. ಅದೇ ರೀತಿ ಪುನೀತ್ ಅವರು ತಂದೆಯ ಜೊತೆ ಒಮ್ಮೆ ಚಿತ್ರೀಕರಣಕ್ಕೆ ತೆರಳಿದಾಗ ಟಾಲಿವುಡ್ ನಟ ಎನ್​ಟಿಆರ್​ ಸಿಕ್ಕಿದ್ದರು. ಅವರ ಬಳಿ ಒಂದು ರೇಸ್ ಕಾರ್ ಇತ್ತು. ಈ ಕಾರು ಬೇಕು ಎಂದು ಪುನೀತ್ ಹಠ ಹಿಡಿಸಿದ್ದರು.

ಸಾಮಾನ್ಯವಾಗಿ ಸಣ್ಣ ವಯಸ್ಸಲ್ಲಿ ಚಾಕೋಲೇಟ್ ಬೇಕು ಎಂದರೆ ಅದನ್ನು ಕೊಡಿಸಬಹುದು. ಆದರೆ, ಪುನೀತ್ ಕೇಳಿದ್ದು ಕಾರನ್ನು. ಆದರೆ, ಎನ್​ಟಿಆರ್ ಅವರು ಇದನ್ನು ಗಂಭೀರವಾಗಿ ಸ್ವೀಕರಿಸಿದರು. ವಿಶೇಷ ಎಂದರೆ ಈ ಕಾರನ್ನು ಎನ್​ಟಿಆರ್​ ಅವರು ಪುನೀತ್ ಮನೆಗೆ ಕಳುಹಿಸಿದ್ದರು. ಅದು ರೇಸ್ ಕಾರಾಗಿತ್ತು. ಕೊನೆಗೆ ಅದನ್ನು ಹಿಂದಿರುಗಿಸಿ ಕಳುಹಿಸಲಾಗಿತ್ತು. ಈ ವಿಚಾರವನ್ನು ಪುನೀತ್ ಈ ಮೊದಲು ಹೇಳಿಕೊಂಡಿದ್ದರು.

ಪುನೀತ್ ಅವರಿಗೆ ಕಾರಿನ ಬಗ್ಗೆ ಅಪಾರ ಪ್ರೀತಿ ಇತ್ತು ಎಂಬುದನ್ನು ಮತ್ತೆ ಹೇಳಬೇಕಿಲ್ಲ. ಅವರು ಪ್ರೀತಿಯ ಪತ್ನಿಗೆ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಉಡುಗೊರೆ ಆಗಿ ನೀಡಿದ್ದರು. ಅವರ ಬಳಿಯೂ ಕೆಲವು ದುಬಾರಿ ಕಾರುಗಳು ಇವೆ.

ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್​ಕುಮಾರ್ ಬಗ್ಗೆ ಕೀಳು ಮಟ್ಟದ ಟ್ರೋಲ್: ಕೆಂಡವಾದ ಅಭಿಮಾನಿಗಳು

ಪುನೀತ್ ಅವರು ನಮ್ಮನ್ನು ಅಗಲಿ ಮೂರು ವರ್ಷ ಕಳೆಯುತ್ತಾ ಬಂದಿದೆ. ಈ ನೋವು ಎಂದಿಗೂ ಮರೆಯಾಗುವಂಥದ್ದಲ್ಲ. ಪುನೀತ್ ರಾಜ್​ಕುಮಾರ್ ಅವರು 2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಮೃತಪಟ್ಟ ಬಳಿಕ ಅನೇಕ ರಸ್ತೆಗಳಿಗೆ ಪುನೀತ್ ಅವರ ಹೆಸರನ್ನು ಇಡಲಾಗಿದೆ. ಪುನೀತ್ ಅವರ ಅಗಲುವಿಕೆ ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿದೆ. ಬಹುತೇಕ ಹೀರೋಗಳ ಜೊತೆ ಅವರು ಒಳ್ಳೆಯ ಸಂಬಂಧ ಹೊಂದಿದ್ದರು. ಅವರನ್ನು ಈಗಲೂ ನೆನಪು ಮಾಡಿಕೊಳ್ಳುವ ಕೆಲಸ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಚಹಾ ಕುಡಿಯುತ್ತಾ ಒಡಿಶಾದ ಮಹಿಳೆಯರ ಜೊತೆ ಪ್ರಧಾನಿ ಮೋದಿ ಸಂವಾದ
ಚಹಾ ಕುಡಿಯುತ್ತಾ ಒಡಿಶಾದ ಮಹಿಳೆಯರ ಜೊತೆ ಪ್ರಧಾನಿ ಮೋದಿ ಸಂವಾದ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು