AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳೆಯ ಗೆಳೆಯಾ.. ನಿನಗೆ Happy Birthday ಹಳೆಯ ಗೆಳೆಯನಿಗೆ ಪವರ್​ಸ್ಟಾರ್ ವಿಶ್!

ಗೆಳೆಯ ಗೆಳೆಯ.. ಗೆಲುವೇ ನಿನದಯ್ಯ! ಅಂತಾ ಅಪ್ಪುಗಾಗಿ ಹಾಡಿದ್ದ ಯಂಗ್ ಟೈಗರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸುಸಂದರ್ಭದಲ್ಲಿ ನೆಚ್ಚಿನ ಗೆಳೆಯನಿಗೆ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಮನಸಾರೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಇದೇ ವಿಡಿಯೋವನ್ನೀಗ ಎನ್​ಟಿಆರ್ ಫ್ಯಾನ್ಸ್ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಪ್ಪು ಹಾಗೂ ಜೂ. ಎನ್​ಟಿಆರ್ ಇಬ್ಬರೂ ಉತ್ತಮ ಸ್ನೇಹಿತರು. ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಎಲ್ಲಿಲ್ಲದ ಗೌರವ. ಹಾಗಂತ ಜೂ. ಎನ್​ಟಿಆರ್ ಅಷ್ಟೇ ಅಲ್ಲ. ಡಾ.ರಾಜ್​ಕುಮಾರ್ ಹಾಗೂ ಎನ್​ಟಿಆರ್ ಕೂಡ ಉತ್ತಮ ಸ್ನೇಹಿತರಾಗಿದ್ದರು. ಹೀಗಾಗಿ ಅಪ್ಪು […]

ಗೆಳೆಯ ಗೆಳೆಯಾ.. ನಿನಗೆ Happy Birthday ಹಳೆಯ ಗೆಳೆಯನಿಗೆ ಪವರ್​ಸ್ಟಾರ್ ವಿಶ್!
ಸಾಧು ಶ್ರೀನಾಥ್​
|

Updated on: May 20, 2020 | 5:57 PM

Share

ಗೆಳೆಯ ಗೆಳೆಯ.. ಗೆಲುವೇ ನಿನದಯ್ಯ! ಅಂತಾ ಅಪ್ಪುಗಾಗಿ ಹಾಡಿದ್ದ ಯಂಗ್ ಟೈಗರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸುಸಂದರ್ಭದಲ್ಲಿ ನೆಚ್ಚಿನ ಗೆಳೆಯನಿಗೆ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಮನಸಾರೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಇದೇ ವಿಡಿಯೋವನ್ನೀಗ ಎನ್​ಟಿಆರ್ ಫ್ಯಾನ್ಸ್ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಪ್ಪು ಹಾಗೂ ಜೂ. ಎನ್​ಟಿಆರ್ ಇಬ್ಬರೂ ಉತ್ತಮ ಸ್ನೇಹಿತರು. ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಎಲ್ಲಿಲ್ಲದ ಗೌರವ. ಹಾಗಂತ ಜೂ. ಎನ್​ಟಿಆರ್ ಅಷ್ಟೇ ಅಲ್ಲ. ಡಾ.ರಾಜ್​ಕುಮಾರ್ ಹಾಗೂ ಎನ್​ಟಿಆರ್ ಕೂಡ ಉತ್ತಮ ಸ್ನೇಹಿತರಾಗಿದ್ದರು. ಹೀಗಾಗಿ ಅಪ್ಪು ಹಾಗೂ ಜೂ. ಎನ್​ಟಿಆರ್ ಸ್ನೇಹ ಇಂದು ಹುಟ್ಟಿದ್ದಲ್ಲ. ಈ ಇಬ್ಬರು ಸೂಪರ್ ಸ್ಟಾರ್​ಗಳ ಸ್ನೇಹಕ್ಕೆ ಬಹಳ ಹಳೆಯ ಇತಿಹಾಸವಿದೆ. ಇದೇ ಸ್ನೇಹಕ್ಕೆ ಬೆಲೆ ಕೊಟ್ಟು ಅಪ್ಪು ನಟಿಸಿದ ಚಕ್ರವ್ಯೂಹ ಚಿತ್ರಕ್ಕೆ ಜೂ. ಎನ್​ಟಿಆರ್ ಗೆಳೆಯ.. ಗೆಳೆಯ ಅಂತ ಹಾಡಿದ್ದರು. ಈ ಹಾಡು ಇಬ್ಬರ ಸ್ನೇಹದ ಸಂಕೇತವಾಗಿ ಚಕ್ರವ್ಯೂಹದಲ್ಲಿ ಮೂಡಿ ಬಂದಿತ್ತು.

ರಾಜಮೌಳಿಯ RRR ಸಿನಿಮಾದಲ್ಲಿ ನಟಿಸುತ್ತಿರೋ ಜೂ.ಎನ್​ಟಿಆರ್ ಮೇ 20 ರಂದು 37ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹೀಗಾಗಿ ಅಪ್ಪು ಗೆಳೆಯನಿಗೆ ‘ಹ್ಯಾಪಿ ಬರ್ತ್​ಡೇ ಬ್ರದರ್’ ಅಂತ ಶುಭಾಶಯ ತಿಳಿಸಿದ್ದಾರೆ. ಹಾಗೇ ಟಾಲಿವುಡ್​ನ ಸ್ನೇಹಿತರು ಹಾಗೂ ಆಸ್ಟ್ರೇಲಿಯಾದ ಓಪನಿಂಗ್ ಬ್ಯಾಟ್ಸ್​ಮನ್ ಡೇವಿಡ್ ವಾರ್ನರ್ ಕೂಡ ಯಂಗ್ ಟೈಗರ್​ಗೆ ವಿಭಿನ್ನವಾಗಿ ಬರ್ತ್​ಡೇ ವಿಶ್ ಮಾಡಿದ್ದಾರೆ.

https://twitter.com/i/status/1263042736976015360

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ