AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯುತ್ತಮ ಸಿನಿಮಾದ ಭರವಸೆ ನೀಡಿದ ರಾಜ್ ಬಿ ಶೆಟ್ಟಿ, ಯಾವುದು ಆ ಸಿನಿಮಾ?

Raj B Shetty: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ, ತಮ್ಮ ಹೊಸ ಸಿನಿಮಾ ಅತ್ಯುತ್ತಮ ಸಿನಿಮಾ ಆಗಿರಲಿದೆ ಎಂಬ ಭರವಸೆ ನೀಡಿದ್ದಾರೆ.

ಅತ್ಯುತ್ತಮ ಸಿನಿಮಾದ ಭರವಸೆ ನೀಡಿದ ರಾಜ್ ಬಿ ಶೆಟ್ಟಿ, ಯಾವುದು ಆ ಸಿನಿಮಾ?
ರಾಜ್ ಬಿ ಶೆಟ್ಟಿ
ಮಂಜುನಾಥ ಸಿ.
|

Updated on: May 28, 2023 | 11:27 PM

Share

ರಾಜ್ ಬಿ ಶೆಟ್ಟಿ (Raj B Shetty) ಚಂದನವನದ (Sandalwood) ಅತ್ಯುತ್ತಮ ನಟ ಹಾಗೂ ನಿರ್ದೇಶಕ ಎರಡೂ ಹೌದು. ಈ ವರೆಗೆ ನಿರ್ದೇಶಿಸಿರುವುದು ಎರಡೇ ಸಿನಿಮಾ ನಟಿಸಿರುವುದು ಸಹ ಬೆರಳೆಣಿಕೆ ಸಿನಿಮಾಗಳಾದರೂ ಕನ್ನಡದ ಅತ್ಯುತ್ತಮ ನಿರ್ದೇಶಕ, ನಟರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸಾಮಾನ್ಯ ಕಮರ್ಶಿಯಲ್ ಸಿನಿಮಾಗಳಲ್ಲದೆ ಭಿನ್ನ ಮಾದರಿಯ ಸಿನಿಮಾಗಳನ್ನು ರಾಜ್ ಬಿ ಶೆಟ್ಟಿ ಕಟ್ಟಿಕೊಡುತ್ತಿದ್ದಾರೆ. ಒಂದು ಮೊಟ್ಟೆ ಕತೆ ಹಾಗೂ ಗರುಡ ಗಮನ, ವೃಷಭ ವಾಹನ ಸಿನಿಮಾಗಳ ಬಳಿಕ ಇದೀಗ ಮತ್ತೊಂದು ಸಿನಿಮಾದ ನಿರ್ದೇಶನದಲ್ಲಿ ರಾಜ್ ಬಿ ಶೆಟ್ಟಿ ತೊಡಗಿಸಿಕೊಂಡಿದ್ದು ಒಂದು ಅದ್ಭುತವಾದ ಸಿನಿಮಾವನ್ನು ಕಟ್ಟಿಕೊಡುವ ಭರವಸೆ ನೀಡಿದ್ದಾರೆ.

ರಾಜ್ ಬಿ ಶೆಟ್ಟಿ, ಟೋಬಿ ಹೆಸರಿನ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ನಿರ್ದೇಶನದ ಮೂರನೇ ಸಿನಿಮಾ ಆಗಿದ್ದು, ಈ ಸಿನಿಮಾ ರಾಜ್ ಬಿ ಶೆಟ್ಟಿಯ ಈವರೆಗಿನ ದೊಡ್ಡ ಬಜೆಟ್​ ಸಿನಿಮಾ ಆಗಿದೆ. ಸಿನಿಮಾವನ್ನು ತಮ್ಮದೇ ಆದ ಲೈಟರ್ ಬುದ್ಧ ಫಿಲಮ್ಸ್ ಹಾಗೂ ಅಗಸ್ತ್ಯ ಫಿಲಮ್ಸ್ ಮೂಲಕ ಹೊರಗೆ ತರಲಾಗುತ್ತಿದೆ. ಈ ಸಿನಿಮಾದ ಮತ್ತೊಂದು ವಿಶೇಷತೆಯೆಂದರೆ ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ.

ಇನ್ನು ಈ ಸಿನಿಮಾ ಬಗ್ಗೆ ಟ್ವಿಟ್ಟರ್​ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ರಾಜ್ ಬಿ ಶೆಟ್ಟಿ, ಶೂಟಿಂಗ್ ಸೆಟ್​ನ ವಿಡಿಯೋ ಹಂಚಿಕೊಂಡು, ”ತಂತ್ರಜ್ಞ ಮತ್ತು ಕಲಾವಿದನಾಗಿ ನನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿದ ಚಿತ್ರ ಇದಾಗಿದೆ. ಶೀಘ್ರದಲ್ಲೇ ಈ ಯೋಜನೆಯ ಕುರಿತು ಇನ್ನಷ್ಟು ಹಂಚಿಕೊಳ್ಳುತ್ತೇನೆ. ಆದರೆ ಇದುವರೆಗಿನ ನಮ್ಮ ಕೆಲಸದಲ್ಲಿ ಇದು ಅತ್ಯುತ್ತಮವಾಗಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ಒಬ್ಬರಲ್ಲ ಇಬ್ಬರು ನಾಯಕಿಯರು ಜೊತೆಯಾಗಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಸಂಯುಕ್ತಾ ಹೊರನಾಡು ಹಾಗೂ ಗಾಯಕಿ ಕಮ್ ನಟಿ ಚೈತ್ರಾ ಆಚಾರ್ ಇದ್ರಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಇದರಲ್ಲಿ ಚೈತ್ರಾ ಆಚಾರ್‌ ಮೇನ್ ಕ್ಯಾರೆಕ್ಟರ್‌ನಲ್ಲಿ ನಟಿಸಿದ್ದರೆ, ಸಂಯುಕ್ತಾ ಪಾತ್ರ ಇಡೀ ಕಥೆಗೆ ಟ್ವಿಸ್ಟ್ ನೀಡಲಿದೆಯಂತೆ.

ಈ ಸಿನಿಮಾಕ್ಕೆ ಸುಮಾರು 16 ಕೋಟಿ ರುಪಾಯಿ ಬಜೆಟ್ ಹಾಕಲಾಗಿದ್ದು ಸಿನಿಮಾದ ಒಟಿಟಿ ಹಾಗೂ ಸ್ಟಾಟಲೈಟ್ ಹಕ್ಕು ಈಗಾಗಲೇ ಮಾರಾಟವಾಗಿದೆ ಎನ್ನಲಾಗುತ್ತಿದೆ. ರಾಜ್ ಬಿ ಶೆಟ್ಟಿ ನಿರ್ದೇಶನದ ಮೊತ್ತ ಮೊದಲ ಬಿಗ್ ಬಜೆಟ್ ಸಿನಿಮಾ ಇದಾಗಿದ್ದು. ರಾಜ್ ನಿರ್ದೇಶಿಸಿ ನಟಿಸಿದ್ದ ಈ ಹಿಂದಿನ ಗರುಡ ಗಮನ ವೃಷಭ ವಾಹನ ಸಿನಿಮಾ ಒಟಿಟಿ ಮೂಲಕ ರಾಷ್ಟ್ರದ ಹಲವು ಭಾಷಿಕರ ಗಮನ ಸೆಳೆದಿತ್ತು, ಅದರಲ್ಲಿಯೂ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಸಹ ಆ ಸಿನಿಮಾವನ್ನು ಮೆಚ್ಚಿ ಕೊಂಡಾಡಿದ್ದರು. ದೇಶದ ಇತರ ರಾಜ್ಯಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿರುವ ಕಾರಣ ರಾಜ್ ಬಿ ಶೆಟ್ಟಿ ತಮ್ಮ ಟೋಬಿ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ಮಾಡುತ್ತಿದ್ದಾರೆ.

ಇದರ ಜೊತೆಗೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಇದಾಗಲೇ ನಟಿಸಿದ್ದಾರೆ. ಈ ನಡುವೆ ಮಲಯಾಳಂ ಚಿತ್ರರಂಗಕ್ಕೂ ನಟನಾಗಿ ರಾಜ್ ಬಿ ಶೆಟ್ಟಿ ಎಂಟ್ರಿ ನೀಡಿದ್ದಾರೆ. ಕಾಂತಾರ 2 ಸಿನಿಮಾದಲ್ಲಿಯೂ ರಾಜ್ ಬಿ ಶೆಟ್ಟಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ