AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ’ ರೀತಿ ಮೂಡಿಬರುತ್ತಿದೆ ‘ರಾಜನಿವಾಸ’ ಸಿನಿಮಾ; ಇಲ್ಲಿದೆ ಟ್ರೇಲರ್

ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ಕೂಡ ‘ರಾಜನಿವಾಸ’ ಸಿನಿಮಾ ಬಿಡುಗಡೆ ಆಗಲಿದೆ. ಈಗ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ದೃಶ್ಯಗಳಲ್ಲಿ ‘ಕಾಂತಾರ’ ಸಿನಿಮಾದ ಛಾಯೆ ಕಾಣಿಸಿದೆ. ತುಳುನಾಡು ಭಾಗದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಕಾಂತಾರ’ ರೀತಿ ಮೂಡಿಬರುತ್ತಿದೆ ‘ರಾಜನಿವಾಸ’ ಸಿನಿಮಾ; ಇಲ್ಲಿದೆ ಟ್ರೇಲರ್
Rajanivaasa Movie Poster
ಮದನ್​ ಕುಮಾರ್​
|

Updated on: Feb 17, 2026 | 4:06 PM

Share

ಶೀರ್ಷಿಕೆಯಿಂದ ಗಮನ ಸೆಳೆದಿರುವ ‘ರಾಜನಿವಾಸ’ (Rajanivasa) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಟ್ರೇಲರ್ ನೋಡಿದರೆ ‘ಕಾಂತಾರ’ ಸಿನಿಮಾದ ಝಲಕ್ ಕಾಣಿಸಿದೆ. ಚಿತ್ರತಂಡ ಹೇಳುವ ಪ್ರಕಾರ, ಇದು ಕಾಂತಾರಕ್ಕಿಂತಲೂ‌ ಮೊದಲೇ ತಯಾರಾದ ಕಥೆ. ಆದರೆ ಸಿನಿಮಾ ಪೂರ್ಣಗೊಂಡು ರಿಲೀಸ್ ಹಂತಕ್ಕೆ ಬರಲು ಇಷ್ಟು ಸಮಯ ಹಿಡಿಯಿತು. ‘ಕಾಂತಾರ’ (Kantara) ಸಿನಿಮಾ ಮೊದಲೇ ತೆರೆಕಂಡಿದ್ದರಿಂದ ಹೋಲಿಕೆಯ ಆರೋಪ ಎದುರಾಗುವುದು ಸಹಜ. ಹಾಗಾಗಿ ಸಾಕಷ್ಟು ಬದಲಾವಣೆಯನ್ನು ಕೂಡ ಮಾಡಲಾಗಿದೆ ಎಂದು ‘ರಾಜನಿವಾಸ’ ಚಿತ್ರತಂಡ ತಿಳಿಸಿದೆ.

ಇದು ತುಳುನಾಡು ಭಾಗದ ಕಥೆಯಾದ ಕಾರಣ ಸಹಜವಾಗಿ ಒಂದಷ್ಟು ಹೋಲಿಕೆಗಳು ಕಾಣುತ್ತವೆ. ಆದರೆ ಸಿನಿಮಾದಲ್ಲಿ ಬೇರೆಯೇ ಕಥೆ ಇದೆ ಎಂದು ನಿರ್ದೇಶಕ ಮಿಥುನ್ ಸುವರ್ಣ ಅವರು ಹೇಳಿದ್ದಾರೆ. ರಾಘವ್ ನಾಯಕ್ ಅವರು ‘ರಾಜ‌ನಿವಾಸ’ ಸಿನಿಮಾದಲ್ಲಿ ನಾಯಕ ಪಾತ್ರ ಮಾಡಿದ್ದಾರೆ. ಟ್ರೇಲರ್ ಜೊತೆ ಹಾಡು ಹಾಗೂ ಆ್ಯಕ್ಷನ್ ಸನ್ನಿವೇಶದ ಗ್ಲಿಂಪ್ಸ್ ನೋಡಿದರೆ ಇದು ಮಾಸ್ ಸಿನಿಮಾ ಎಂಬುದು ತಿಳಿಯುತ್ತದೆ.

‘ರಾಜ‌ನಿವಾಸ’ ಸಿನಿಮಾದಲ್ಲಿ ಕೃತಿಕಾ ಅವರು ನಾಯಕಿಯಾಗಿ ನಟಿಸಿದ್ದಾರೆ. ಖ್ಯಾತ ನಟ ಶ್ರೀನಗರ ಕಿಟ್ಟಿ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಈ ಸಿನಿಮಾದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡಿದೆ. ಟ್ರೇಲರ್ ಹಾಗೂ 3 ಹಾಡುಗಳು ಈಗಾಗಲೇ ಗಮನ ಸೆಳೆದಿದೆ. ನಾಲ್ಕು ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದೆ.

ರಾಜನಿವಾಸ ಸಿನಿಮಾದ ಟ್ರೇಲರ್:

ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ರಾಜನಿವಾಸ’ ನಿರೀಕ್ಷೆ ಸೃಷ್ಟಿಸಿದೆ. ಟ್ರೇಲರ್ ನೋಡಿದ ಹಲವರು ಭರವಸೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾಗೆ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತದಲ್ಲಿವೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುತ್ತದೆ. ಚಿತ್ರದ ವಿತರಣೆಗೆ ಕನ್ನಡ ಮಾತ್ರವಲ್ಲದೇ ತೆಲುಗು ಮತ್ತು ತಮಿಳಿನಲ್ಲೂ ಬೇಡಿಕೆ ಬಂದಿದೆ ಎಂದು ಚಿತ್ರತಂಡ ಹೇಳಿದೆ.

ಇದನ್ನೂ ಓದಿ: ದೈವದ ಗಗ್ಗರ ಕಟ್ಟಲು ಕಾಲುಗಳೇ ಇಲ್ಲ: ದೈವ ನರ್ತಕನಿಗೆ ಆಸರೆಯಾದ ಕೃತಕ ಕಾಲು

‘ಡಿಎಎಂ 36 ಸ್ಟುಡೀಯೋಸ್’ ಮೂಲಕ ‘ರಾಜ‌ನಿವಾಸ’ ಸಿನಿಮಾವನ್ನು ಮಾಡಲಾಗಿದೆ. ದಾ.ಪಿ. ಆಂಜನಪ್ಪ ಅವರು ಈ ಸಿನಿಮಾದ ನಿರ್ಮಾಪಕರು. ಲೋಕೇಶ್ ಗೌಡ ಅವರು ಸಹ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ. ವಿಜಯ್ ಯಾರ್ಡ್ಲಿ ಸಂಗೀತ ನೀಡಿದ್ದಾರೆ. ರಮೇಶ್ ರಾಜ್ ಛಾಯಾಗ್ರಹಣ ಮಾಡಿದ್ದಾರೆ. ಬಲ ರಾಜ್ವಾಡಿ , ಯಮುನಾ ಶ್ರೀನಿಧಿ, ಸಹನಾ, ಪ್ರಶಾಂತ್‌, ನೀನಾಸಂ ಅಶ್ವಥ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬೈಕ್​​ ಗುದ್ದಿದ ರಭಸಕ್ಕೆ ಹಾರಿಬಿದ್ದು ಪ್ರಾಣಬಿಟ್ಟ ಯುವತಿ
ಬೈಕ್​​ ಗುದ್ದಿದ ರಭಸಕ್ಕೆ ಹಾರಿಬಿದ್ದು ಪ್ರಾಣಬಿಟ್ಟ ಯುವತಿ
ಮೊದಲು ಪ್ರಕಟವಾಗುವ PU ಇಂಟರ್​​​ನಲ್ ಮಾರ್ಕ್ಸ್​​ ಹೇಗೆ? ಎಲ್ಲಿ ನೋಡಬೇಕು?
ಮೊದಲು ಪ್ರಕಟವಾಗುವ PU ಇಂಟರ್​​​ನಲ್ ಮಾರ್ಕ್ಸ್​​ ಹೇಗೆ? ಎಲ್ಲಿ ನೋಡಬೇಕು?
W,W,W,W,W,W,W,W: ವಿಕೆಟ್ ಮೇಲೆ ವಿಕೆಟ್: ಶಮಿ ಬೆಂಕಿ ಬೌಲಿಂಗ್
W,W,W,W,W,W,W,W: ವಿಕೆಟ್ ಮೇಲೆ ವಿಕೆಟ್: ಶಮಿ ಬೆಂಕಿ ಬೌಲಿಂಗ್
30 ನಿಮಿಮಿಷಗಳ ಕಾಲ ಸಿಪಿಆರ್ ಮಾಡಿ ರೋಗಿಯ ಜೀವ ಉಳಿಸಿದ ವೈದ್ಯೆ
30 ನಿಮಿಮಿಷಗಳ ಕಾಲ ಸಿಪಿಆರ್ ಮಾಡಿ ರೋಗಿಯ ಜೀವ ಉಳಿಸಿದ ವೈದ್ಯೆ
ಬೈಕ್​​ ಡಿಕ್ಕಿ ರಭಸಕ್ಕೆ ಮುರಿದುಬಿದ್ದ ವಿದ್ಯುತ್​​ ಕಂಬ: ಸವಾರರು ಬಚಾವ್​​
ಬೈಕ್​​ ಡಿಕ್ಕಿ ರಭಸಕ್ಕೆ ಮುರಿದುಬಿದ್ದ ವಿದ್ಯುತ್​​ ಕಂಬ: ಸವಾರರು ಬಚಾವ್​​
VIDEO: ಅದ್ಭುತ, ಅತ್ಯದ್ಭುತ... ಇದು ವಿಶ್ವಕಪ್​ನ ಬೆಸ್ಟ್ ಕ್ಯಾಚ್!
VIDEO: ಅದ್ಭುತ, ಅತ್ಯದ್ಭುತ... ಇದು ವಿಶ್ವಕಪ್​ನ ಬೆಸ್ಟ್ ಕ್ಯಾಚ್!
ಬೆಂಗಳೂರಿನಲ್ಲಿ ರೈಲ್ವೆ ಮೆಗಾ ಕೋಚಿಂಗ್ ಸೆಂಟರ್: ವಿ ಸೋಮಣ್ಣ ಮಹತ್ವದ ಘೋಷಣೆ
ಬೆಂಗಳೂರಿನಲ್ಲಿ ರೈಲ್ವೆ ಮೆಗಾ ಕೋಚಿಂಗ್ ಸೆಂಟರ್: ವಿ ಸೋಮಣ್ಣ ಮಹತ್ವದ ಘೋಷಣೆ
ಮುಡಾ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​: ಆಡಿಯೋ ಬಾಂಬ್​​ ಸಿಡಿಸಿದ ಸ್ನೇಹಮಯಿ
ಮುಡಾ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​: ಆಡಿಯೋ ಬಾಂಬ್​​ ಸಿಡಿಸಿದ ಸ್ನೇಹಮಯಿ
ಭಾರತೀಯ ಎಐ ಆವಿಷ್ಕಾರಗಳನ್ನು ವೀಕ್ಷಿಸಿದ ಪ್ರಧಾನಿ ಮೋದಿ
ಭಾರತೀಯ ಎಐ ಆವಿಷ್ಕಾರಗಳನ್ನು ವೀಕ್ಷಿಸಿದ ಪ್ರಧಾನಿ ಮೋದಿ
ಬಿಕ್ಲು ಶಿವ ಕೊಲೆಗೆ ಕಾರಣವಾಗಿದ್ದು ಇದೇ ಘಟನೆ: Exclusive ವಿಡಿಯೋ ಇಲ್ಲಿದೆ
ಬಿಕ್ಲು ಶಿವ ಕೊಲೆಗೆ ಕಾರಣವಾಗಿದ್ದು ಇದೇ ಘಟನೆ: Exclusive ವಿಡಿಯೋ ಇಲ್ಲಿದೆ