AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

70ರ ವಸಂತಕ್ಕೆ ಕಾಲಿಟ್ಟ ಸೂಪರ್ ಸ್ಟಾರ್, ದರ್ಬಾರ್ ಟ್ರೇಲರ್ ರಿಲೀಸ್ ಮಡೋಕೆ ಪ್ಲ್ಯಾನ್

ಟಾಲಿವುಡ್ ಸೂಪರ್ ಸ್ಟಾರ್​.. ಅಭಿಮಾನಿಗಳ ಪಾಲಿನ ಆರಾಧ್ಯ ದೈವ, ತಲೈವಾ ರಜನಿಕಾಂತ್​ಗೆ​ ಹುಟ್ಟು ಹಬ್ಬದ ಸಂಭ್ರಮ. 70ರ ವಸಂತಕ್ಕೆ ಕಾಲಿಟ್ಟಿರೋ ಸೂಪರ್ ಸ್ಟಾರ್​ರ ಈ ಬಾರಿಯ ಹುಟ್ಟುಹಬ್ಬ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಸ್ಟೈಲ್ ಕಿಂಗ್ ರಜಿನಿಕಾಂತ್ ಸ್ಕ್ರೀನ್​ ಮೇಲೆ ಕಾಣಿಸಿಕೊಂಡ್ರೆ ಸಾಕು, ಇಡೀ ಥಿಯೇಟರ್​ಗೆ ಥಿಯೇಟರ್​ ಶಿಳ್ಳೆ ಚಪ್ಪಾಳೆಯಿಂದ ಮಾರ್ದನಿಸುತ್ತೆ. ತಲೈವಾ ಫ್ಯಾನ್ಸ್ ಹುಚ್ಚೆದ್ದು ಕುಣೀತಾರೆ. ತಮಿಳುನಾಡಿನ ಸಿನಿರಸಿಕರಿಗೆ ಮಾತ್ರವಲ್ಲಾ ಭಾರತೀಯ ಚಿತ್ರರಂಗಕ್ಕೂ ಪಡೆಯಪ್ಪನೇ ಆರಾಧ್ಯ ದೈವ. ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳಲ್ಲಿ ಹೇಗೆ ಸ್ಟೈಲ್​ ಕಿಂಗ್ […]

70ರ ವಸಂತಕ್ಕೆ ಕಾಲಿಟ್ಟ ಸೂಪರ್ ಸ್ಟಾರ್, ದರ್ಬಾರ್ ಟ್ರೇಲರ್ ರಿಲೀಸ್ ಮಡೋಕೆ ಪ್ಲ್ಯಾನ್
ಸಾಧು ಶ್ರೀನಾಥ್​
|

Updated on:Dec 12, 2019 | 11:24 AM

Share

ಟಾಲಿವುಡ್ ಸೂಪರ್ ಸ್ಟಾರ್​.. ಅಭಿಮಾನಿಗಳ ಪಾಲಿನ ಆರಾಧ್ಯ ದೈವ, ತಲೈವಾ ರಜನಿಕಾಂತ್​ಗೆ​ ಹುಟ್ಟು ಹಬ್ಬದ ಸಂಭ್ರಮ. 70ರ ವಸಂತಕ್ಕೆ ಕಾಲಿಟ್ಟಿರೋ ಸೂಪರ್ ಸ್ಟಾರ್​ರ ಈ ಬಾರಿಯ ಹುಟ್ಟುಹಬ್ಬ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.

ಸ್ಟೈಲ್ ಕಿಂಗ್ ರಜಿನಿಕಾಂತ್ ಸ್ಕ್ರೀನ್​ ಮೇಲೆ ಕಾಣಿಸಿಕೊಂಡ್ರೆ ಸಾಕು, ಇಡೀ ಥಿಯೇಟರ್​ಗೆ ಥಿಯೇಟರ್​ ಶಿಳ್ಳೆ ಚಪ್ಪಾಳೆಯಿಂದ ಮಾರ್ದನಿಸುತ್ತೆ. ತಲೈವಾ ಫ್ಯಾನ್ಸ್ ಹುಚ್ಚೆದ್ದು ಕುಣೀತಾರೆ. ತಮಿಳುನಾಡಿನ ಸಿನಿರಸಿಕರಿಗೆ ಮಾತ್ರವಲ್ಲಾ ಭಾರತೀಯ ಚಿತ್ರರಂಗಕ್ಕೂ ಪಡೆಯಪ್ಪನೇ ಆರಾಧ್ಯ ದೈವ.

ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳಲ್ಲಿ ಹೇಗೆ ಸ್ಟೈಲ್​ ಕಿಂಗ್ ಆಗಿ, ದಾನಸೂರ ಕರ್ಣನಂತೆ ಕಂಗೊಳಿಸ್ತಾರೋ ತೆರೆ ಹಿಂದೆಯೂ ಥೇಟ್ ಕಲಿಯುಗದ ಕರ್ಣನೇ ಸರಿ. ಅಭಿಮಾನಿಗಳ ಹೃದಯ ಸಿಂಹಾಸನಾಧೀಶ್ವರ ರಜಿನಿಯ ಹುಟ್ಟುಹಬ್ಬ ಅಂದ್ರೆ ಅದೊಂದು ಹಬ್ಬವೇ ಸರಿ. 70ನೇ ವರ್ಷಕ್ಕೆ ಕಾಲಿಟ್ಟಿರೋ ರಜಿನಿಕಾಂತ್​ಗೆ ಈ ಬಾರಿ ಬರ್ತ್​ ಡೇ ಯಂದೇ ಹೊಸ ಸಿನಿಮಾ ಸೆಟ್ಟೇರ್ತಿದೆ. ರಜನಿಯ 168ನೇ ಸಿನಿಮಾದ ಮುಹೂರ್ಥ ನೆರವೇರಿದೆ. ಈ ಚಿತ್ರದಲ್ಲಿ ನಟಿ ಮೀನಾ ಮತ್ತು ಖುಷ್ಬೂ ಪಡೆಯಪ್ಪನಿಗೆ ಜೊತೆಯಾಗಿರೋದು ಮತ್ತೊಂದು ವಿಶೇಷ.

ಇನ್ನೂ ರಜನಿಯ ಹುಟ್ಟುಹಬ್ಬದ ಅಂಗವಾಗಿ ದರ್ಬಾರ್ ಸಿನಿಮಾದ ಟ್ರೇಲರ್​ ರಿಲೀಸ್​ ಮಾಡೋ ಪ್ಲ್ಯಾನ್​ನಲ್ಲಿದೆ ಚಿತ್ರತಂಡ. ಎ.ಆರ್​.ಮುರುಗದಾಸ್​ ನಿರ್ದೇಶನದ ದರ್ಬಾರ್​ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟು ಹಾಕಿದ್ದು, ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರ್ತಿದೆ. ಮತ್ತೊಂದು ವಿಶೇಷ ಅಂದ್ರೆ, ಸೂಪರ್ ಹಿಟ್ ಚಿತ್ರ “ಬಾಷಾ” ಕೂಡ ಬರ್ತ್ ಡೇ ಯಂದು ರೀ ರಿಲೀಸ್ ಆಗ್ತಿದೆ.

ಇನ್ನು ರಜಿನಿ ಹುಟ್ಟು ಹಬ್ಬ ಅಂದ್ರೆ ಅಭಿಮಾನಿಗಳಿಗೆ ದೊಡ್ಡ ಜಾತ್ರೆ ಇದ್ದಂತೆ. ಆದ್ರೆ, ಈ ಬಾರಿ ರಜನಿಕಾಂತ್​ ತಮ್ಮ ಅಭಿಮಾನಿಗಳಿಗೆ ದುಂದು ವೆಚ್ಚ ಮಾಡೋದು ಬೇಡ ಎಂದಿದ್ದಾರೆ. ಹುಟ್ಟುಹಬ್ಬಕ್ಕೆ ಖರ್ಚು ಮಾಡೋ ಹಣವನ್ನ ಸಾಮಾಜಿಕ ಕಾರ್ಯಗಳಿಗೆ ಬಳಸಿ ಎಂದು ಸಲಹೆ ನೀಡಿದ್ದಾರೆ.

Published On - 11:24 am, Thu, 12 December 19

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ