‘ಹಿಂದೆ ನೋಡೋಕೆ ಇಷ್ಟವಿಲ್ಲ, ನಾನು ಗೋರಿ ಕಟ್ಕೊಂಡೇ ಮುಂದೆ ಹೋಗೋದು’; ಎಲ್ಲಾ ವಿಚಾರಕ್ಕೆ ಸ್ಪಷ್ಟನೆ ನೀಡಿದ ರಕ್ಷಿತ್​

ಪುಷ್ಕರ್​ ಅವರು ಮೊದಲ ಬಾರಿ ‘ಉಳಿದವರು ಕಂಡಂತೆ’ ಟೈಮ್​ನಲ್ಲಿ ನಂಗೆ ಸಿಕ್ಕಿದ್ರು. ‘ಸಿಂಪಲ್​ ಆಗ್​ ಒಂದ್​ ಲವ್​ ಸ್ಟೋರಿ’ ನೋಡಿ ಅವರು ಖುಷಿ ಪಟ್ಟಿದ್ದರು ಎಂದು ರಕ್ಷಿತ್ ಮಾತು ಆರಂಭಿಸಿದ್ದಾರೆ.

‘ಹಿಂದೆ ನೋಡೋಕೆ ಇಷ್ಟವಿಲ್ಲ, ನಾನು ಗೋರಿ ಕಟ್ಕೊಂಡೇ ಮುಂದೆ ಹೋಗೋದು’; ಎಲ್ಲಾ ವಿಚಾರಕ್ಕೆ ಸ್ಪಷ್ಟನೆ ನೀಡಿದ ರಕ್ಷಿತ್​
ರಕ್ಷಿತ್​ ಶೆಟ್ಟಿ
Follow us
| Updated By: ರಾಜೇಶ್ ದುಗ್ಗುಮನೆ

Updated on:Jul 11, 2021 | 7:50 PM

ನಟ ರಕ್ಷಿತ್​ ಶೆಟ್ಟಿ ಹಾಗೂ ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ ನಡುವೆ ವೈಮನಸ್ಸು ಬೆಳೆದಿದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿತ್ತು. ಮಾಧ್ಯಮವೊಂದು ಈ ಬಗ್ಗೆ ಕಾರ್ಯಕ್ರಮ ಕೂಡ ಪ್ರಸಾರ ಮಾಡಿತ್ತು. ರಕ್ಷಿತ್​ ಬಗ್ಗೆ ಇಲ್ಲಸಲ್ಲದ ವಿಚಾರವನ್ನು ಹೇಳಲಾಗಿತ್ತು. ಈ ಬಗ್ಗೆ ರಕ್ಷಿತ್​ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ.

ಪುಷ್ಕರ್​ ಮೊದಲು ಸಿಕ್ಕಿದ್ದು ಯಾವಾಗ? ಅವರ ಜತೆಗಿನ ಜರ್ನಿ ಹೇಗಿತ್ತು ಎಂದು ರಕ್ಷಿತ್​ ಮಾತನಾಡಿದ್ದಾರೆ. ‘ಪುಷ್ಕರ್​ ಅವರು ಮೊದಲ ಬಾರಿ ‘ಉಳಿದವರು ಕಂಡಂತೆ’ ಟೈಮ್​ನಲ್ಲಿ ನಂಗೆ ಸಿಕ್ಕಿದ್ರು. ‘ಸಿಂಪಲ್​ ಆಗ್​ ಒಂದ್​ ಲವ್​ ಸ್ಟೋರಿ’ ನೋಡಿ ಅವರು ಖುಷಿ ಪಟ್ಟಿದ್ದರು. ಹೀಗಾಗಿ, ಡೇಟ್ಸ್​ ಕೇಳಿಕೊಂಡು ಬಂದಿದ್ರು. ಆದರೆ, ಕೆಲ ಸಿನಿಮಾಗಳ ಕಮಿಟ್​ಮೆಂಟ್ಸ್​ ಇರುವುದರಿಂದ ಆಗುವುದಿಲ್ಲ ಎಂದಿದ್ದೆ. ‘ಉಳಿದವರು ಕಂಡಂತೆ’ ಸಿನಿಮಾ ನೋಡಿ ಡಿಸಪಾಯಿಂಟ್​ ಆಯ್ತು ಎಂದಿದ್ರು. ನಮ್ಮ ಫ್ರೆಂಡ್​ಶಿಪ್​ ಆದ್ಮೇಲೆ ಸಿನಿಮಾ ಚೆನ್ನಾಗಿದೆ ಅಂದಿದ್ರು. ಅವರು ಯಾಕೆ ಹಾಗೆ ಹೇಳಿದ್ರು ಅನ್ನೋದು ಗೊತ್ತಿಲ್ಲ’ ಎಂದಿದ್ದಾರೆ ರಕ್ಷಿತ್​.

‘ಗೋಧಿ ಬಣ್ಣ ಸಾಧಾರಾಣ ಮೈಕಟ್ಟು’ ಚಿತ್ರಕ್ಕೆ ಪುಷ್ಕರ್​, ನಾನು ಹಾಗೂ ಹೇಮಂತ್​ ರಾವ್​ ನಿರ್ಮಾಪಕರಾಗಿದ್ದೆವು. ‘ಗೋಧಿ ಬಣ್ಣ’ ರಿಮೇಕ್​ ರೈಟ್ಸ್​ ಮಾರಾಟವಾಗುವ ವಿಚಾರ ಬಂದಾಗ ಪುಷ್ಕರ್​ ಪಾಲು ಕೇಳಿದ್ರು. ಆಗ ಕೊಟ್ಟಿದ್ದೇವೆ. ‘ಕಿರಿಕ್​ ಪಾರ್ಟಿ’ ಮಾಡಬೇಕು ಎಂದಾಗ ಎಲ್ಲಾ ಪ್ರೊಡ್ಯೂಸರ್​ ರಿಜೆಕ್ಟ್​ ಮಾಡಿದ್ರು.  ದುಬೈ ಮೂಲದ ಜೆಎಸ್​ ಗುಪ್ತಾ ಅಂತ ಸಿನಿಮಾಗೆ ಇನ್ವೆಸ್ಟ್​ ಮಾಡಿದ್ರು. ಆಗ 25 ಲಕ್ಷ ಕೊಡಿ ನಾನು ಕ್ಯಾಮೆರಾ ಕೊಡ್ತೀನಿ ಅಂತ ಪುಷ್ಕರ್​ ಮುಂದೆ ಬಂದ್ರು. ಸಿನಿಮಾ ನೋಡಿದಮೇಲೆ ಗೆಲ್ಲುತ್ತೆ ಎನ್ನುವ ಕಾನ್ಫಿಡೆನ್ಸ್​ ಪುಷ್ಕರ್​ಗೆ ಬಂತು. ಅದೇ ಸಮಯದಲ್ಲಿ ಹೂಡಿಕೆದಾರರಿಗೆ ನಾನು 3 ಕೋಟಿ ಕೊಡಬೇಕಿತ್ತು. ಆಗ ಪುಷ್ಕರ್​ 3 ಕೋಟಿ ನೀಡಿದ್ರು. ಸಿನಿಮಾದಿಂದ ಬಂದ ಲಾಭದಲ್ಲಿ 70 ಪರ್ಸೆಂಟ್​ ನನಗೆ, 30 ಪರ್ಸೆಂಟ್​ ಅವರಿಗೆ ಎಂದಾಯ್ತು.  ಸಿನಿಮಾ ಹಿಟ್​ ಆಗಿದ್ದಕ್ಕೆ ಎಲ್ಲರೂ ಸೆಲೆಬ್ರೇಟ್​ ಮಾಡಿದ್ವಿ’ ಎಂದಿದ್ದಾರೆ ರಕ್ಷಿತ್​.

‘ನಂತರ ‘ಅವನೇ ಶ್ರೀಮನ್ನಾರಾಯಣ’ ಮಾಡೋಣ ಎಂದು ನಿರ್ಧರಿಸಿದೆವು. ಆರಂಭದಲ್ಲಿ ಒಟ್ಟು ಬಜೆಟ್​ನಲ್ಲಿ ನಾನು 25 ಪರ್ಸೆಂಟ್​, ಪುಷ್ಕರ್ 25 ಪರ್ಸೆಂಟ್​ ಹಾಗೂ ಪ್ರಕಾಶ್​ ಗೌಡ್ರು 50 ಪರ್ಸೆಂಟ್​ ಹಾಕೋದು ಎಂದಾಗಿತ್ತು. ನಂತರ ನಾನು ನಿರ್ಮಾಣ ಮಾಡಲ್ಲ ಎಂದೆ. ಆ ಸಂದರ್ಭದಲ್ಲಿ ಬೇರೆ ನಿರ್ಮಾಪಕರನ್ನು ಹುಡಕ್ತೀನಿ ಎಂದಿದ್ದೆ. ಆದರೆ, ಪುಷ್ಕರ್​ ಅವರು ನಾನೇ ಇನ್ವೆಸ್ಟ್ ಮಾಡ್ತೀನಿ ಅಂತೀನಿ ಎಂದರು. ಶ್ರೀಮನ್ನಾರಾಯಣ ಬಜೆಟ್​ ಜಾಸ್ತಿ ಆಗ್ತಾ ಹೋಯ್ತು. ಸಿನಿಮಾದ ಬಜೆಟ್​ನ ಅರ್ಧದಷ್ಟು ಬಡ್ಡಿ ಆಯ್ತು. ಇದು ನಮ್ಮ ತಪ್ಪಲ್ಲ, ಸಿನಿಮಾದ ತಪ್ಪಲ್ಲ. ವೈಯಕ್ತಿಕವಾಗಿ ತೆಗೆದುಕೊಂಡ ನಿರ್ಧಾರದ ತಪ್ಪು’ ಎಂದಿದ್ದಾರೆ ರಕ್ಷಿತ್​.

‘ಸಿನಿಮಾ ಲಾಸ್ ಆಯ್ತಾ? ನಾನು ಸಹಾಯ ಮಾಡ್ತೀನಿ ಎಂದು ಪುಷ್ಕರ್​ಗೆ ಹೇಳಿದೆ. ನನಗೆ ಹಿಂದೆ ನೋಡೋಕೆ ಇಷ್ಟವಿಲ್ಲ, ನಾನು ಗೋರಿ ಕಟ್ಕೊಂಡೇ ಮುಂದೆ ಹೋಗೋದು. ಹೀಗಾಗಿ, ‘777 ಚಾರ್ಲಿ’ ಸಿನಿಮಾ ಇಟ್ಟುಕೊಂಡು 20 ಕೋಟಿ ತೆಗೆದುಕೊಂಡೆ. ಶ್ರೀಮನ್ನಾರಾಯಣದಲ್ಲಿ ಎಲ್ಲರಿಗೂ ಕೋಡೋಕೆ ಬಾಕಿ ಇದ್ದ ಹಣವನ್ನು ಚಾರ್ಲಿಯಿಂದ ಬಂದ ಅಮೌಂಟ್​ನಿಂದ ಕ್ಲಿಯರ್ ಮಾಡಿದ್ದೇನೆ. ಉಳಿದ ಹಣವನ್ನು ಪುಷ್ಕರ್​​ಗೆ ನೀಡಿದ್ದೆ. ಇಷ್ಟಾದ ಮೇಲೂ ನನ್ನ ಸಿನಿಮಾ ಬಗ್ಗೆ ಲೂಸ್​ ಟಾಕ್​ ಮಾಡೋದೇಕೆ? ನೀವು ಸಿನಿಮಾನ ಪ್ರೀತಿ ಮಾಡಿಲ್ಲ. ಉದ್ಯುಮ ನೋಡಿಕೊಂಡ್ರಿ’ ಎಂದು ರಕ್ಷಿತ್ ಬೇಸರ ಹೊರ ಹಾಕಿದರು.

ಇದನ್ನೂ ಓದಿ: Hombale Films and Rakshith Shetty: ಅಭಿಮಾನಿಗಳ ಕಾಯುವಿಕೆಗೆ ಕೊನೆ ಹಾಡೇ ಬಿಟ್ರು ರಕ್ಷಿತ್​ ಶೆಟ್ಟಿ, ಡೈರೆಕ್ಟರ್ ಕ್ಯಾಪ್​ ಹಾಕ್ಕೊಳ್ಳೋ ಟೈಮ್ ಬಂದೇ ಬಿಡ್ತು!

Published On - 7:40 pm, Sun, 11 July 21

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ