‘ನೀನು ಬಿಗ್ ಬಾಸ್ನ ಮಂಗ ಮಾಡೋಕಾಗಲ್ಲ’; ರಕ್ಷಿತಾ ಸಣ್ಣ ಬುದ್ಧಿ ಎಕ್ಸ್ಪೋಸ್ ಮಾಡಿದ ಧ್ರುವಂತ್
ಬಿಗ್ ಬಾಸ್ ಸೀಕ್ರೆಟ್ ರೂಂನಲ್ಲಿ ಧ್ರುವಂತ್ ರಕ್ಷಿತಾ ಶೆಟ್ಟಿ ಅವರ 'ಸಣ್ಣ ಬುದ್ಧಿ'ಯನ್ನು ಎಕ್ಸ್ಪೋಸ್ ಮಾಡಿದ್ದಾರೆ. ರಕ್ಷಿತಾ ಅವರ ಬದಲಾವಣೆ, ಕಾವ್ಯಾ ನಾಮಿನೇಷನ್ ಕುರಿತ ವಾದವನ್ನು ಧ್ರುವಂತ್ ಸೂಕ್ಷ್ಮವಾಗಿ ಗಮನಿಸಿದ್ದಾರೆ. 'ನೀನು ಬಿಗ್ ಬಾಸ್ನ ಮಂಗ ಮಾಡೋಕಾಗಲ್ಲ' ಎಂದು ಧ್ರುವಂತ್ ಹೇಳಿಕೆ ವೈರಲ್ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಸದ್ಯ ಸೀಕ್ರೆಟ್ ರೂಂ ಟಾಸ್ಕ್ ನಡೆಯುತ್ತಿದೆ. ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಅವರನ್ನು ಈ ರೂಂನಲ್ಲಿ ಇಡಲಾಗಿದೆ. ಇಬ್ಬರ ಮಧ್ಯೆ ಆಗಾಗ ಕಿರಿಕ್ಗಳು ಆಗುತ್ತಲೇ ಇವೆ. ಈ ಮಧ್ಯೆ ಧ್ರುವಂತ್ ಅವರು ರಕ್ಷಿತಾ ಶೆಟ್ಟಿಯ ಸಣ್ಣ ಬುದ್ಧಿಯನ್ನು ಎಕ್ಸ್ಪೋಸ್ ಮಾಡುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಬಿಗ್ ಬಾಸ್ ಆರಂಭದಲ್ಲಿ ರಕ್ಷಿತಾ ಶೆಟ್ಟಿ ಅವರು ಇದ್ದಿದ್ದೇ ಬೇರೆ. ಈಗ ಅವರು ಇರೋದೇ ಬೇರೆ. ಕಿಚ್ಚನ ಚಪ್ಪಾಳೆ ಸಿಕ್ಕ ಬಳಿಕ ಅವರು ಸಂಪೂರ್ಣವಾಗಿ ಬದಲಾದರು ಎಂಬ ಮಾತಿದೆ. ಅದೆಷ್ಟರ ಮಟ್ಟಿಗೆ ಎಂದರೆ ಅವರು ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಈಗ ಇಲ್ಲ. ಈ ಬದಲಾವಣೆಯನ್ನು ಧ್ರುವಂತ್ ಅವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರು ಈ ಬಗ್ಗೆ ಮಾತನಾಡಿದ್ದಾರೆ.
ಮಾಳು ಅವರನ್ನು ಸೇವ್ ಮಾಡಿ, ಕಾವ್ಯಾ ಅವರನ್ನು ನಾಮಿನೇಟ್ ಮಾಡಬೇಕು ಎಂಬುದು ರಕ್ಷಿತಾ ಶೆಟ್ಟಿ ವಾದ ಆಗಿತ್ತು. ಆದರೆ, ಈ ವಾದವನ್ನು ಧ್ರುವಂತ್ ಅವರು ಒಪ್ಪಿಲ್ಲ. ಮಾಳುಗೆ ಹೋಲಿಸಿದರೆ ಕಾವ್ಯಾ ಸಮರ್ಥ ವ್ಯಕ್ತಿ. ಅವರನ್ನು ನಾಮಿನೇಟ್ ಮಾಡೋದು ಸರಿ ಅಲ್ಲ ಎಂದು ಧ್ರುವಂತ್ ವಾದ ಮಾಡಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಈ ರೀತಿ ಹೇಳಲು ಒಂದು ಕಾರಣ ಇದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
That is the truth Exposed clown 🤡 rakshita Jai mahakaal 💪#BBK12 pic.twitter.com/Scug46jniD
— Dr.Hemanth.t.m (@msdhonihemanth) December 15, 2025
Dhruvanth exposed the cunning Kage gameplay.👀
The so-called ‘sympathy queen’ mask is finally off
So much hatred towards Kav why?
Is it because Kav spends more time with Gilli?
If cunning had a face, it wouldn’t be anyone else but Rakshita.😈🧠#KavyaShaiva #GilliNata #BBK12 pic.twitter.com/E95LBWfTiW
— BB Follower (@BBFollower_45) December 15, 2025
ಗಿಲ್ಲಿ ಹಾಗೂ ಕಾವ್ಯಾ ಒಟ್ಟಾಗಿ ಸಮಯ ಕಳೆಯುತ್ತಾರೆ. ಈ ಕಾರಣದಿಂದಲೇ ಕಾವ್ಯಾ ಬಗ್ಗೆ ರಕ್ಷಿತಾ ದ್ವೇಷ ಕಾರುತ್ತಿದ್ದಾರೆ ಎಂಬುದು ಕೆಲವರ ವಾದ. ಇನ್ನು ಎದುರಿನವರು ಏನಾದರೂ ಹೇಳುವಾಗ ರಕ್ಷಿತಾ ಶೆಟ್ಟಿ ಓಡೋಡಿ ಹೋಗುತ್ತಾರೆ. ಮಾತನ್ನು ಕೇಳಿಸಿಕೊಳ್ಳುವುದೇ ಇಲ್ಲ. ಈ ವಿಷಯವನ್ನು ಧ್ರುವಂತ್ ಅವರು ಎತ್ತಿ ಹೇಳಿದ್ದಾರೆ.
ಇದನ್ನೂ ಓದಿ: ಧ್ರುವಂತ್, ರಕ್ಷಿತಾ ಶೆಟ್ಟಿ ಇನ್ನೂ ಔಟ್ ಆಗಿಲ್ಲ ಎಂಬ ರಹಸ್ಯ ಪತ್ತೆ ಹಚ್ಚಿದ ರಘು
ರಕ್ಷಿತಾ ಶೆಟ್ಟಿ ಅವರು ನಿದ್ದೆ ಮಾಡುತ್ತಿದ್ದರು. ಆದರೆ, ಇದನ್ನು ಅವರು ಒಪ್ಪಿಕೊಂಡಿಲ್ಲ. ಈ ವೇಳೆ ಧ್ರುವಂತ್ ಒಂದೇ ಮಾತನ್ನು ಹೇಳಿದರು. ‘ನೀನು ಜನರನ್ನು ಮಂಗ ಮಾಡಬಹುದು ಆದರೆ, ಬಿಗ್ ಬಾಸ್ನ ಅಲ್ಲ’ ಎಂದಿದ್ದಾರೆ. ಅವರ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:56 am, Tue, 16 December 25




