ಸಾಧುಗೆ ‘ಕೋಕಿಲ’ ಟೈಟಲ್ ಕೊಟ್ಟಿದ್ದೇ ಉಪೇಂದ್ರ; ವೃತ್ತಿ ಬದಲಿಸಿದ್ದೂಇವರೇ

ಉಪೇಂದ್ರ ನಿರ್ದೇಶನದ ‘ಶ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಸಿನಿಮಾಗೆ ಸಾಧು ಕೋಕಿಲ ಅವರೇ ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಕೂಡ ಮಾಡಿದ್ದರು. ಇದಕ್ಕೆಲ್ಲ ಕಾರಣ ಆಗಿದ್ದು ಉಪೇಂದ್ರ ಅವರು ಅನ್ನೋದು ವಿಶೇಷ.

ಸಾಧುಗೆ ‘ಕೋಕಿಲ’ ಟೈಟಲ್ ಕೊಟ್ಟಿದ್ದೇ ಉಪೇಂದ್ರ; ವೃತ್ತಿ ಬದಲಿಸಿದ್ದೂಇವರೇ
ಸಾಧುಗೆ ‘ಕೋಕಿಲ’ ಟೈಟಲ್ ಕೊಟ್ಟಿದ್ದೇ ಉಪೇಂದ್ರ; ವೃತ್ತಿ ಬದಲಿಸಿದ್ದೂಇವರೇ
Follow us
| Updated By: ರಾಜೇಶ್ ದುಗ್ಗುಮನೆ

Updated on:Sep 18, 2024 | 7:45 AM

ನಟ ಉಪೇಂದ್ರ ಅವರಿಗೆ ಇಂದು (ಸೆಪ್ಟೆಂಬರ್ 18) ಜನ್ಮದಿನ. ಅನೇಕ ಭಿನ್ನ ಸಿನಿಮಾಗಳನ್ನು ನೀಡಿದ ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರು ‘ಯುಐ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇಂದು ಸಿನಿಮಾದ ಸುದ್ದಿಗೋಷ್ಠಿ ನಡೆಯುತ್ತಿದೆ. ಸಾಕಷ್ಟು ಜನ ಶಿಷ್ಯರನ್ನು ಸಿದ್ಧಪಡಿಸಿದ್ದು ಇದೇ ಉಪೇಂದ್ರ. ಉಪೇಂದ್ರ ಅವರು ಸಾಧು ಕೋಕಿಲ ಅವರನ್ನು ಹಾಸ್ಯ ಕಲಾವಿದನಾಗಿ ಮಾಡಿದ್ದರು. ಆ ಬಗೆಗಿನ ಅಪರೂಪದ ವಿಚಾರವನ್ನು ನಾವು ನಿಮಗೆ ಹೇಳುತ್ತಾ ಇದ್ದೇವೆ.

‘ಶ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಉಪೇಂದ್ರ. ಈ ಸಿನಿಮಾಗೆ ಸಾಧು ಕೋಕಿಲ ಅವರೇ ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಕೂಡ ಮಾಡಿದ್ದರು. ಇದಕ್ಕೆ ಕಾರಣ ಆಗಿದ್ದು ಉಪೇಂದ್ರ ಅವರೇ. ನಂತರ ಹಾಸ್ಯ ಪಾತ್ರಗಳ ಮೂಲಕ ಮಿಂಚಲು ಶುರು ಮಾಡಿದರು ಸಾಧು.

ವಿ. ಮನೋಹರ್ ಅವರಿಂದ ಉಪೇಂದ್ರಗೆ ಸಾಧು ಪರಿಚಯ ಆಯಿತು. ‘ಶ್’ ಸಂಗೀತ ಸಂಯೋಜನೆಯ ಜವಾಬ್ದಾರಿ ಅವರಿಗೆ ಸಿಕ್ಕಿತ್ತು. ಒಮ್ಮೆ ಅವರು ಸಾಧುಗೆ ಸೆಟ್​ಗೆ ಬರೋಕೆ ಹೇಳಿದ್ದರು. ಅದರಂತೆ ಸಾಧು ಸೆಟ್​ಗೆ ಹೋಗಿದ್ದರು. ಆಗ ಅವರು ನಟನೆ ಮಾಡುವಂತೆ ಸೂಚಿಸಿದರು. ಅದರಂತೆ ಸಾಧು ‘ಶ್​’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದರು. ಅಲ್ಲಿಂದ ಸಾಧುವಿನ ನಟನಾ ರಂಗ ಆರಂಭ. ಹೀಗಾಗಿ ಸಾಧುಗೆ ಉಪೇಂದ್ರ ಅವರೇ ಗಾಡ್ ಫಾದರ್.

ಇದನ್ನೂ ಓದಿ: ಉಪೇಂದ್ರ ಸಿನಿಮಾಗಳ ಹೆಸರೇಕೆ ವಿಚಿತ್ರ, ಅದರ ಹಿಂದಿದೆ ಕಾರಣ

ಕೋಕಿಲ ಟೈಟಲ್ ನೀಡಿದ್ದೂ ಕೂಡ ಉಪೇಂದ್ರ ಅವರೇ. ಕೋಕಿಲ ಎಂದರೆ ಕೋಗಿಲೆ ಎಂಬ ಅರ್ಥ ಇದೆ. ಕೋಗಿಲೆ ಕೂಗು ಎಲ್ಲರಿಗೂ ಇಷ್ಟ. ‘ನಾನು ಉತ್ತಮವಾಗಿ ಮ್ಯೂಸಿಕ್ ಮಾಡುತ್ತೇನೆ ಎಂಬ ಕಾರಣಕ್ಕೆ ಕೋಕಿಲ ಎಂದು ನನ್ನ ಹೆಸರಿಗೆ ಸೇರ್ಪಡೆ ಮಾಡಿದ್ದು ಉಪೇಂದ್ರ. ನನ್ನ ಹೆಸರು ಮೊದಲು ಸಾಧು ಎಂದು ಇತ್ತು. ಕೋಗಿಲೆ ಚೆನ್ನಾಗಿ ಹಾಡುತ್ತದೆ. ನೀವು ಸೂಪರ್​ ಆಗಿ ಮ್ಯೂಸಿಕ್ ಮಾಡುತ್ತೀರಾ. ಹೀಗಾಗಿ, ನಿಮ್ಮ ಹೆಸರಿಗೆ ಕೋಕಿಲ ಅನ್ನೋದನ್ನು ಸೇರಿಸಿ ಎಂದಿದ್ದರು’ ಎಂಬುದಾಗಿ ಸಾಧು ಹೇಳಿಕೊಂಡಿದ್ದರು.  ಅಲ್ಲಿಂದ ಇಲ್ಲಿಯವರೆಗೆ ಅವರು ಸಾಧು ಅವರು ಸಾಧು ಕೋಕಿಲ ಎಂದೇ ಫೇಮಸ್ ಆಗಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಅವರು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:45 am, Wed, 18 September 24

ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?