AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪೇಂದ್ರ ಸಿನಿಮಾಗಳ ಹೆಸರೇಕೆ ವಿಚಿತ್ರ, ಅದರ ಹಿಂದಿದೆ ಕಾರಣ

Upendra: ಸೆಪ್ಟೆಂಬರ್ 18 ರಂದು ಉಪೇಂದ್ರ ಹುಟ್ಟುಹಬ್ಬ. ಉಪೇಂದ್ರ ನಿರ್ದೇಶನ ಮಾಡಿದ ಬಹುತೇಕ ಸಿನಿಮಾಗಳಿಗೆ ಒಂದು ಅಕ್ಷರದ ಹೆಸರು ಇಟ್ಟಿದ್ದಾರೆ. ಹೀಗೆ ಒಂದಕ್ಷರದ ಹೆಸರು ಇಡಲು ಪ್ರಮುಖ ಕಾರಣ ಇದೆ.

ಉಪೇಂದ್ರ ಸಿನಿಮಾಗಳ ಹೆಸರೇಕೆ ವಿಚಿತ್ರ, ಅದರ ಹಿಂದಿದೆ ಕಾರಣ
ಮಂಜುನಾಥ ಸಿ.
|

Updated on: Sep 17, 2024 | 9:21 PM

Share

ಈಗಿನ ತಲೆ ಮಾರಿಗೆ ಉಪೇಂದ್ರ ಎಂದರೆ ಒಬ್ಬ ಆಕ್ಷನ್ ಹೀರೋ ಆದರೆ 90ರ ದಶಕದವರಿಗೆ ಅಥವಾ ನಿಜ ಸಿನಿಮಾ ಪ್ರೇಮಿಗಳಿಗೆ ಗೊತ್ತು ಉಪೇಂದ್ರರ ತಾಕತ್ತು. ಕತೆಯಲ್ಲಿ ಭಿನ್ನತೆ ಎಂಬುದನ್ನು ನಿಜವಾಗಿಯೂ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಪರಿಚಯಿಸಿದ್ದು ನಿರ್ದೇಶಕ ಉಪೇಂದ್ರ. ಸಿನಿಮಾದ ಕತೆ, ಪಾತ್ರ ಪೋಷಣೆಗಳಲ್ಲಿ ಮಾತ್ರವಲ್ಲ ಸಿನಿಮಾದ ಹೆಸರಿನಲ್ಲಿಯೂ ಪ್ರಯೋಗಗಳನ್ನು ಮಾಡಿದ್ದರು ಉಪ್ಪಿ. ಏಕ ಅಕ್ಷರಗಳನ್ನು ಹೆಸರುಗಳಾಗಿ ಬಳಸಲು ಆರಂಭಿಸಿದವರು ಉಪೇಂದ್ರ. ‘ಶ್’, ‘ಎ’, ‘ಓಂ’, ‘ಸ್ವಸ್ತಿಕ್’ ಹೀಗೆ ಸಿನಿಮಾ ಹೆಸರುಗಳನ್ನು ಭಿನ್ನವಾಗಿಯೇ ಇಡುತ್ತಿದ್ದರು. ಇದಕ್ಕೆ ಕಾರಣವೂ ಇದೆ.

ಉಪೇಂದ್ರ ನಿರ್ದೇಶಿಸಿದ ಮೊದಲ ಸಿನಿಮಾಕ್ಕೆ ‘ತರ್ಲೆ ನನ್ಮಗ’ ಎಂಬ ಸಾಮಾನ್ಯ ಹೆಸರನ್ನೇ ಇಟ್ಟಿದ್ದರು. ಆ ಸಿನಿಮಾ ಹಿಟ್ ಎನಿಸಿಕೊಂಡಿತು. ಆದರೆ ಭಾರಿ ದೊಡ್ಡ ಹಿಟ್ ಏನೂ ಆಗಿರಲಿಲ್ಲ. ಉಪೇಂದ್ರ ನಿರ್ದೇಶಿಸಿದ ಎರಡನೇ ಸಿನಿಮಾ ‘ಶ್’. ಈ ಸಿನಿಮಾಕ್ಕೆ ಕುಮಾರ್ ಗೋವಿಂದ್ ನಾಯಕ. ಸಿನಿಮಾ ಮಾಡಲು ನಿರ್ಧರಿಸಿ ಕುಮಾರ್ ಗೋವಿಂದ್ ಅವರನ್ನು ನಾಯಕನ್ನಾಗಿ ಹಾಕಿಕೊಳ್ಳುವ ನಿರ್ಣಯ ಮಾಡಿದಾಗ ಉಪೇಂದ್ರ ಅವರಿಗೆ ಅನುಮಾನ ಎದುರಾಯ್ತಂತೆ. ಸಿನಿಮಾದ ಕತೆ ಚೆನ್ನಾಗಿದೆ, ಚಿತ್ರಕತೆ ಎಲ್ಲ ಚೆನ್ನಾಗಿದೆ ಆದರೆ ಮೊದಲ ದಿನ ಸಿನಿಮಾಕ್ಕೆ ಕರೆದುಕೊಂಡು ಬರಲು ಏನಾದರೂ ಮಾಡಬೇಕು, ಸಿನಿಮಾ ಎಷ್ಟೇ ಚೆನ್ನಾಗಿದ್ದರು ಮೊದಲ ದಿನವೇ ಜನ ಬರದೇ ಹೋದರೆ ಮಾಡಿದ್ದೆಲ್ಲವೂ ವ್ಯರ್ಥವಾಗುತ್ತೆ ಎಂಬ ಯೋಚನೆ ಶುರುವಾಗಿತ್ತು.

ಉಪೇಂದ್ರ ಅವರೇ ಹೇಳಿಕೊಂಡಿರುವಂತೆ ‘ಆಗ ನಾನು ದೊಡ್ಡ ನಿರ್ದೇಶಕ ಅಲ್ಲ, ಎರಡನೇ ಸಿನಿಮಾ ಅಷ್ಟೆ, ನನ್ನ ಪರಿಚಯ ಪ್ರೇಕ್ಷಕರಿಗೆ ಇರಲಿಲ್ಲ. ಇನ್ನು ನಾಯಕ ಕುಮಾರ್ ಗೋವಿಂದ್ ಅವರಿಗೂ ಮೊದಲ ಸಿನಿಮಾ. ಹಾಗಾಗಿ ಸಿನಿಮಾದ ಹೆಸರೇ ಸಿನಿಮಾದ ಪ್ರಚಾರಕ್ಕೆ ಕಾರಣವಾಗುವಂತೆ ಒಂದು ಚರ್ಚೆ, ಕುತೂಹಲ ಹುಟ್ಟಿಸಬೇಕು, ಹಾರರ್ ಸಿನಿಮಾಕ್ಕೆ ‘ರಹಸ್ಯ’, ‘ನಿಗೂಢ’ ಎಂದೆಲ್ಲ ಹೆಸರಿಟ್ಟರೆ ಜನರಿಗೆ ಗೊತ್ತಾಗಿಬಿಡುತ್ತದೆ ಇದು ಹಾರರ್ ಸಿನಿಮಾ ಎಂದು, ಹಾಗಾಗಿ ಸಿನಿಮಾದ ಕತೆಗೂ ಹೊಂದಾಣಿಕೆ ಆಗಬೇಕು, ಕುತೂಹಲವೂ ಹುಟ್ಟಿಸಬೇಕು, ಚರ್ಚೆಯೂ ಆಗಬೇಕು ಅಂಥಹಾ ಹೆಸರಿಡಬೇಕು ಎಂಬ ಯೋಚನೆಯಲ್ಲಿದ್ದಾಗ, ಆಗೆಲ್ಲ ಡಾಕ್ಟರ್ ಶಾಪ್​ಗಳಲ್ಲಿ ‘ಶ್’ ಎಂದು ಬೋರ್ಡ್ ಹಾಕಿರುತ್ತಿದ್ದರು, ಅದನ್ನೇ ಹೆಸರನ್ನಾಗಿ ಬಳಸಿಕೊಂಡೆವು, ಆ ಹೆಸರಿನ ಡಿಸೈನ್ ಅನ್ನು ಮನೋಹರ್ ಮಾಡಿದರು’ ಎಂದಿದ್ದಾರೆ.

ಇದನ್ನೂ ಓದಿ:‘ಉಪೇಂದ್ರ’ ರಿಲೀಸ್​ಗೂ ಮೊದಲು ಅಭಿಮಾನಿಗಳನ್ನು ಕನ್​ಫ್ಯೂಸ್ ಮಾಡಿದ ಉಪ್ಪಿ

ಅದಾದ ಬಳಿಕವೂ ಸಹ ಹೆಸರಿನ ಮೂಲಕವೇ ಸಿನಿಮಾದ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸುವ ಪ್ರಯೋಗವನ್ನು ಮುಂದುವರೆಸಿದ ಉಪೇಂದ್ರ, ತಾವು ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಎ’ ಎಂದು ಹೆಸರಿಟ್ಟರು. ಆ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದರು. ಅದಕ್ಕೂ ಮುಂಚೆ ಶಿವರಾಜ್ ಕುಮಾರ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾಕ್ಕೆ ‘ಓಂ’ ಎಂದೇ ಹೆಸರಿಟ್ಟರು. ಉಪೇಂದ್ರ ಮಾಡಿದ ತೆಲುಗು ಸಿನಿಮಾಕ್ಕೂ ‘ರಾ’ ಎಂಬ ಸಿಂಗಲ್ ಅಕ್ಷರದ ಹೆಸರನ್ನೇ ಇಡಲಾಗಿತ್ತು. ಈಗಲೂ ಸಹ ಅದೇ ಟ್ರೆಂಡ್ ಮುಂದುವರೆಸಿರುವ ಉಪೇಂದ್ರ ತಮ್ಮ ಹೊಸ ಸಿನಿಮಾಕ್ಕೆ ‘ಯುಐ’ ಎಂದು ಹೆಸರಿಟ್ಟಿದ್ದಾರೆ. ಅಂದಹಾಗೆ ನಾಳೆ (ಸೆಪ್ಟೆಂಬರ್ 18) ಉಪೇಂದ್ರ ಹುಟ್ಟುಹಬ್ಬವಿದ್ದು, ‘ಯುಐ’ ಸಿನಿಮಾದ ಅಪ್​ಡೇಟ್ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು