ಬಾಲಿವುಡ್​ನ ‘ಕರಾಳ ಮುಖ’ ಬಿಚ್ಚಿಟ್ಟ ಕೃಷ್ಣ ಸುಂದರಿ ಸಮೀರಾ ರೆಡ್ಡಿ!

ಮುಂಬೈ: ನಟ ಸುಶಾಂತ್​ ಸಿಂಗ್​ ರಜಪೂತ್​ನ ಹಠಾತ್​ ನಿಧನದ ಬಳಿಕ ದೇಶಾದ್ಯಂತ ಯುವಕರನ್ನು ತನ್ನತ್ತ ಸೆಳೆಯುತ್ತಿದ್ದ ಬಾಲಿವುಡ್​ನ ಕರಾಳಮುಖ ಈಗ ನಿಧಾನವಾಗಿ ಹೊರಬರುತ್ತಿದೆ. ಇದೀಗ ದಕ್ಷಿಣ ಸಿನಿರಂಗದಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಸಮೀರಾ ರೆಡ್ಡಿ ಕೂಡ ಬಾಲಿವುಡ್​ನಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್​ನ ಹಲವಾರು ಚಿತ್ರಗಳ ಆಡಿಷನ್​ಗೆ ಹೋದ ವೇಳೆ ಈ ಕೃಷ್ಣಸುಂದರಿಗೆ ನೀನು ತುಂಬಾ ಕಪ್ಪಗಿದ್ದೀಯಾ ಅಥವಾ ನೀನು ತುಂಬಾ ಉದ್ದ ಇದ್ದೀಯಾ ಎಂದು ಹೇಳಿ ರಿಜೆಕ್ಟ್​ ಮಾಡುತ್ತಿದ್ದರಂತೆ. ಕೆಲು ಸಲ ನೀನು […]

ಬಾಲಿವುಡ್​ನ ‘ಕರಾಳ ಮುಖ’ ಬಿಚ್ಚಿಟ್ಟ ಕೃಷ್ಣ ಸುಂದರಿ ಸಮೀರಾ ರೆಡ್ಡಿ!
Follow us
| Updated By: ಸಾಧು ಶ್ರೀನಾಥ್​

Updated on:Aug 25, 2020 | 10:34 AM

ಮುಂಬೈ: ನಟ ಸುಶಾಂತ್​ ಸಿಂಗ್​ ರಜಪೂತ್​ನ ಹಠಾತ್​ ನಿಧನದ ಬಳಿಕ ದೇಶಾದ್ಯಂತ ಯುವಕರನ್ನು ತನ್ನತ್ತ ಸೆಳೆಯುತ್ತಿದ್ದ ಬಾಲಿವುಡ್​ನ ಕರಾಳಮುಖ ಈಗ ನಿಧಾನವಾಗಿ ಹೊರಬರುತ್ತಿದೆ. ಇದೀಗ ದಕ್ಷಿಣ ಸಿನಿರಂಗದಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಸಮೀರಾ ರೆಡ್ಡಿ ಕೂಡ ಬಾಲಿವುಡ್​ನಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್​ನ ಹಲವಾರು ಚಿತ್ರಗಳ ಆಡಿಷನ್​ಗೆ ಹೋದ ವೇಳೆ ಈ ಕೃಷ್ಣಸುಂದರಿಗೆ ನೀನು ತುಂಬಾ ಕಪ್ಪಗಿದ್ದೀಯಾ ಅಥವಾ ನೀನು ತುಂಬಾ ಉದ್ದ ಇದ್ದೀಯಾ ಎಂದು ಹೇಳಿ ರಿಜೆಕ್ಟ್​ ಮಾಡುತ್ತಿದ್ದರಂತೆ. ಕೆಲು ಸಲ ನೀನು ತುಂಬಾ ದಪ್ಪಗಿದ್ದೀಯಾ ಎಂದು ಸಹ ಹೇಳಿದ್ದುಂಟಂತೆ. ಪ್ರತಿ ಬಾರಿ ಇಂಥ ಸಬೂಬುಗಳನ್ನು ಕೇಳಿ ರೋಸುಹೋದ ಸಮೀರಾಗೆ ನಾನು ಯಾಕಾದ್ರೂ ಇಲ್ಲಿ ಬಂದೆ ಅಂತಾ ಸಹ ಅನ್ನಿಸಿದ್ದು ಉಂಟು.

ಈ ನೋವಿನ ಸಂಗತಿಗಳನ್ನು ಹಂಚಿಕೊಂಡ ನಟಿ ಇದು ತಾರತಮ್ಯವಲ್ಲ. ಆದರೆ, ಈ ಸಿನಿಮಾ ರಂಗದಲ್ಲಿ ನಟಿಸಲು ನಟಿಯರು ಹೀಗೇ ಕಾಣಬೇಕೆಂಬ ಅಲಿಖಿತ ನಿಯಮ ಇದೆ ಅಂತಾ ನನಗೆ ಭಾಸವಾಯಿತು ಎಂದು ಹೇಳಿದ್ದಾರೆ.

Published On - 7:39 pm, Mon, 24 August 20