Kannada Language: ಕನ್ನಡಕ್ಕೆ ಅವಮಾನ; ಸಿಡಿದೆದ್ದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು

ಗೂಗಲ್​ನಲ್ಲಿ ಕನ್ನಡ ಭಾಷೆಗೆ ಅವಮಾನವಾಗಿದೆ. ಭಾರತದಲ್ಲಿನ ಕೊಳಕು ಭಾಷೆ ಎಂದು ಸರ್ಚ್​ ಮಾಡಿದರೆ ಅದರಲ್ಲಿ ಕನ್ನಡ ಬರುತ್ತಿದೆ. ಅನೇಕ ಸೆಲೆಬ್ರಿಟಿಗಳು ಕೂಡ ಈ ಬೆಳವಣಿಗೆ ಬಗ್ಗೆ ಸಿಡಿದೆದ್ದಿದ್ದಾರೆ.

Kannada Language: ಕನ್ನಡಕ್ಕೆ ಅವಮಾನ; ಸಿಡಿದೆದ್ದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು
ಕನ್ನಡಕ್ಕೆ ಅವಮಾನ; ಸಿಡಿದೆದ್ದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು
Follow us
| Updated By: ಮದನ್​ ಕುಮಾರ್​

Updated on: Jun 03, 2021 | 3:34 PM

ಗೂಗಲ್​ನಲ್ಲಿ ಕನ್ನಡ ಭಾಷೆಗೆ ಅವಮಾನವಾಗಿದೆ. ಭಾರತದ ಕೊಳಕು ಭಾಷೆ ಎಂದು ಸರ್ಚ್​ ಮಾಡಿದರೆ ಅದರಲ್ಲಿ ಕನ್ನಡ ಬರುತ್ತಿದೆ. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಾಕಷ್ಟು ಜನರು ಗೂಗಲ್​ ಮುಖ್ಯಸ್ಥ ಸುಂದರ್ ಪಿಚ್ಚೈ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಈ ಮಧ್ಯೆ ಅನೇಕ ಸೆಲೆಬ್ರಿಟಿಗಳು ಕೂಡ ಈ ಬೆಳವಣಿಗೆ ಬಗ್ಗೆ ಸಿಡಿದೆದ್ದಿದ್ದಾರೆ.

ಕನ್ನಡದ ನಿರ್ದೇಶಕ ಸಾಯಿ ಕೃಷ್ಣ ಅವರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಭಾರತದ ಕೊಳಕು ಭಾಷೆ ಎಂದು ಸರ್ಚ್​ ಮಾಡಿದರೆ ಕನ್ನಡ ಬರುತ್ತಿದೆ. ಇದಕ್ಕೆ ನೀವು ಉತ್ತರಿಸುವಿರಾ ಎಂದು ಸುಂದರ್​ ಪಿಚ್ಚೈ ಅವರನ್ನು ಟ್ವಿಟರ್​ನಲ್ಲಿ ಟ್ಯಾಗ್​ ಮಾಡುವ ಮೂಲಕ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ನಿಧಿ ಸುಬ್ಬಯ್ಯ ಕೂಡ ಮಾತನಾಡಿದ್ದಾರೆ. ಕೊಳಕು ಭಾಷೆ ಎಂದು ಸರ್ಚ್​ ಮಾಡಿದಾಗ ಕನ್ನಡ ಎಂದು ಏಕೆ ಬರುತ್ತಿದೆಯೋ ನನಗೆ ಗೊತ್ತಿಲ್ಲ. ಕ್ವೀನ್ಸ್​ ಆಫ್​ ದಿ ಲ್ಯಾಂಗ್ವೇಜಸ್​ ಎಂದು ಸರ್ಚ್​ ಮಾಡಿ. ಆಗಲೂ ಕನ್ನಡವೇ ಬರುತ್ತದೆ. ಇದನ್ನು ಹೆಚ್ಚು ಸರ್ಚ್​ ಮಾಡೋಣ. ಈ ಮೂಲಕ ಹೊರ ಜಗತ್ತಿಗೆ ನಾವು ಏನು ಎಂಬುದನ್ನು ತೋರಿಸೋಣ ಎಂದಿದ್ದಾರೆ.

ಈ ಬಗ್ಗೆ ನಿರ್ದೇಶಕ ಪನ್ನಗಭರಣ ಕೂಡ ಮಾತನಾಡಿದ್ದು, ಕ್ವೀನ್ಸ್​ ಆಫ್​ ಆಲ್​ ದಿ ಲ್ಯಾಂಗ್ವೇಜಸ್ ಅನ್ನೋದನ್ನು ಸರ್ಚ್​ ಮಾಡಿ. #QueenOfLanguagesKannada ಬಳಕೆ ಮಾಡಿ. ಈ ಮೂಲಕ ಕನ್ನಡಿಗರ ಶಕ್ತಿಯನ್ನು ತೋರಿಸೋಣ ಎಂದಿದ್ದಾರೆ.

ನನಗೆ ಈ ಬಗ್ಗೆ ಸಾಕಷ್ಟು ಮೆಸೇಜ್​ ಬರುತ್ತಿದೆ. ಇದರ ಹಿಂದೆ ಯಾರಿದ್ದಾರೆ ಗೊತ್ತಿಲ್ಲ. ಕನ್ನಡ ಸುಂದರ ಭಾಷೆ ಮತ್ತು ಈ ಲಿಪಿ ಮೇಲೆ ನಮಗೆ ತುಂಬಾ ಹೆಮ್ಮೆ ಇದೆ ಎಂಬುದು ಎಲ್ಲರಿಗೂ ತೋರಿಸುವ ಸಮಯ ಬಂದಿದೆ. ಕ್ವೀನ್ಸ್​ ಆಫ್​ ಲ್ಯಾಂಗ್ವೇಜಸ್​ ಎಂದು ಸರ್ಚ್​ ಮಾಡಿ. ಆಗ ಕನ್ನಡ ಬರುತ್ತಿದೆ. ಈ ಮೂಲಕ ಪಾಸಿಟಿವಿಟಿ ಹೆಚ್ಚಿಸಿ ಎಂದಿದ್ದಾರೆ.

ಕಿರುತೆರೆ ನಟ ಅನಿರುದ್ಧ್​ ಕೂಡ ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ. ಯಾರೋ ಏನೋ ಹೇಳ್ತಾರೆ ಅಂದಮಾತ್ರಕ್ಕೆ ಅದನ್ನು ನಾವು ಕೇಳೋಕೆ ಆಗಲ್ಲ. ಕನ್ನಡ ಭಾಷೆ ಹೇಗೆ, ಅದರ ಸೊಗಡು ಏನು ಎಂಬುದು ನಮಗೆ ಗೊತ್ತು. ಕನ್ನಡ ಕೊಳಕು ಭಾಷೆ ಎಂದು ಆರ್ಟಿಕಲ್​ ಬರೆದವರಿಗೆ ಶಿಕ್ಷೆ ಆಗಬೇಕು. ಈ ಮೂಲಕ ಮುಂದೆ ಈ ರೀತಿ ತಪ್ಪು ಆಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: Ugliest Language in India: ಕನ್ನಡಿಗರ ಸ್ವಾಭಿಮಾನ ಕೆಣಕಿದ ಗೂಗಲ್​; ಕನ್ನಡವನ್ನು ಕೊಳಕು ಭಾಷೆ ಎಂದು ಅಪಮಾನಿಸಿದ ಸರ್ಚ್​ ಎಂಜಿನ್

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು