AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಂಗ್ ರೀ-ರೆಕಾರ್ಡಿಂಗ್​ಗೆ ಮದ್ರಾಸ್​​ಗೆ ಹೋಗುವುದನ್ನು ತಪ್ಪಿಸಿದ್ದ ಶಂಕರ್​ ನಾಗ್

ಇಂದು (ನವೆಂಬರ್ 9) ಶಂಕರ್ ನಾಗ್ ಅವರ 70ನೇ ಜನ್ಮದಿನ. ಕನ್ನಡ ಚಿತ್ರರಂಗಕ್ಕೆ ಅವರ ಅಪಾರ ಕೊಡುಗೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಸಂಗೀತ ರೀ-ರೆಕಾರ್ಡಿಂಗ್ ಸ್ಟುಡಿಯೋ ಸ್ಥಾಪಿಸಿ ಕನ್ನಡ ಚಿತ್ರರಂಗದಲ್ಲಿ ಕ್ರಾಂತಿ ಮಾಡಿದವರು. ಮೆಟ್ರೋ ಮತ್ತು ನಂದಿ ಬೆಟ್ಟದ ರೋಪ್ ವೇಯಂತಹ ಅನೇಕ ದೂರದೃಷ್ಟಿಯ ಕನಸುಗಳನ್ನು ಕಂಡಿದ್ದರು.

ಸಾಂಗ್ ರೀ-ರೆಕಾರ್ಡಿಂಗ್​ಗೆ ಮದ್ರಾಸ್​​ಗೆ ಹೋಗುವುದನ್ನು ತಪ್ಪಿಸಿದ್ದ ಶಂಕರ್​ ನಾಗ್
ಶಂಕರ್ ನಾಗ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Nov 09, 2024 | 7:35 AM

Share

ಶಂಕರ್ ನಾಗ್ ಅವರಿಗೆ ಇಂದು (ನವೆಂಬರ್ 9) ಜನ್ಮದಿನ. ಅವರು ಬದುಕಿದ್ದರೆ 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ಕೇವಲ 35ನೇ ವಯಸ್ಸಿಗೆ ಶಂಕರ್ ನಾಗ್ ಅವರು ನಿಧನ ಹೊಂದಿದರು. ಶಂಕರ್ ನಾಗ್ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಅವರು ಕನ್ನಡ ಚಿತ್ರರಂಗದಲ್ಲಿ ಹಲವು ಕ್ರಾಂತಿ ಮಾಡಿದ್ದರು. ಇದರಲ್ಲಿ ಸಾಂಗ್ ರೀರೆಕಾರ್ಡಿಂಗ್ ಸ್ಟುಡಿಯೋ ಮಾಡಿದ ಖ್ಯಾತಿಯೂ ಅವರಿಗೆ ಸಿಗುತ್ತದೆ ಎಂದರೆ ತಪ್ಪಾಗಲಾರದು. ಆ ಬಗ್ಗೆ ಇಲ್ಲಿದೆ ವಿವರ.

ಮೊದಲು ಸಿನಿಮಾಗಳ ಹಾಡಿನ ರೀರೆಕಾರ್ಡಿಂಗ್ ಕೆಲಸಗಳು ಮದ್ರಾಸ್​ ಅಂದರೆ ಈಗಿನ ಚೆನ್ನೈನಲ್ಲಿ ನಡೆಯುತ್ತಿತ್ತು. ಕನ್ನಡ ಸಿನಿಮಾದ ಶೂಟಿಂಗ್ ಎಲ್ಲೇ ಆದರೂ, ಅದರ ಹಾಡಿಸ ಕೆಲಸಗಳಿಗೆ ಚೆನ್ನೈ ಅಥವಾ ಮುಂಬೈಗೆ ತೆರಳಬೇಕಿತ್ತು. ಹೀಗಾಗಿ, ಸಿನಿಮಾ ಕೆಲಸಗಳ ಕೇಂದ್ರ ಬಿಂದುವು ಮದ್ರಾಸೇ ಆಗಿತ್ತು. ಈ ಬಗ್ಗೆ ಶಂಕರ್ ನಾಗ್​ಗೆ ಬೇಸರ ಇತ್ತು. ಸಿನಿಮಾ ನಿರ್ಮಾಣ ಮಾಡೋದು ಕನ್ನಡಿಗರು, ಸಿನಿಮಾ ನೋಡೋದು ಕನ್ನಡಿಗರು ಹೀಗಿರುವಾಗ ಅದರ ಕೆಲಸಗಳು ಏಕೆ ಚೆನ್ನೈನಲ್ಲಿ ನಡೆಯಬೇಕು ಎಂಬುದು ಅವರ ಪ್ರಶ್ನೆ ಆಗಿತ್ತು.

‘ಒಂದು ಮುತ್ತಿನ ಕಥೆ’ ಚಿತ್ರದ ಶೂಟಿಂಗ್ ವಿದೇಶದಲ್ಲಿ ನಡೆದಿತ್ತು. ರಾಜ್​ಕುಮಾರ್ ನಟನೆಯ ಈ ಚಿತ್ರವನ್ನು, ಶಂಕರ್ ನಾಗ್ ನಿರ್ದೇಶನ ಮಾಡಿದ್ದರು. ಈ ಚಿತ್ರದ ಹಾಡಿನ ರೆಕಾರ್ಡ್ ಬೆಂಗಳೂರಿನಲ್ಲೇ ನಡೆದಿತ್ತು ಅನ್ನೋದು ವಿಶೇಷ. ‘ಮೊದಲು ಹಾಡುಗಳ ರೆಕಾರ್ಡಿಂಗ್ ಮಾಡಬೇಕು ಎಂದರೆ ಮದ್ರಾಸ್ ಅಥವಾ ಮುಂಬೈಗೆ ಹೋಗಬೇಕಿತ್ತು. ಆ ವ್ಯವಸ್ಥೆ ಕರ್ನಾಟಕದಲ್ಲಿ ಇರಲಿಲ್ಲ. ಪ್ರರಿ ಬಾರಿ ರೆಕಾರ್ಡಿಂಗ್ ಮಾಡಬೇಕಾದರೆ ತಿಂಗಳು ಗಟ್ಟಲೆ ನಿಂತು ಕಾಯಬೇಕಿತ್ತು’ ಎಂದಿದ್ದರು ಶಂಕರ್ ನಾಗ್.

‘ಸಿನಿಮಾ ನಿರ್ಮಾಪಕರ ಈ ಸ್ಥಿತಿ ಕಂಡು ಬೇಸರ ಆಗಿತ್ತು. ಹೀಗಾಗಿ ನಮ್ಮದೇ ಸ್ಟುಡಿಯೋ ಬೇಕು ಎನಿಸಿತು. ಅನಂತ್ ನಾಗ್​, ರಮೇಶ್ ಭಟ್, ಸೂರ್ಯ ರಾವ್ ಅವರಿಂದ ಆರ್ಥಿಕ ಸಹಾಯ ಪಡೆದು ರೀ-ರೆಕಾರ್ಡಿಂಗ್ ಸ್ಟುಡಿಯೋ ಮಾಡಿದೆವು. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅದನ್ನು ಉದ್ಘಾಟನೆ ಮಾಡಿದರು. ನಮ್ಮಲ್ಲೂ ಎಲ್ಲಾ ಸೌಲಭ್ಯ ಇದೆ ಎಂಬುದರ ಸಂಕೇತವೇ ಈ ಸ್ಟುಡಿಯೋ’ ಎಂದಿದ್ದರು ಶಂಕರ್ ನಾಗ್.

ಇದನ್ನೂ ಓದಿ: ಅಪಘಾತದ ವೇಳೆ ನಿಜಕ್ಕೂ ಶಂಕರ್ ನಾಗ್ ಕಾರು ಚಲಾಯಿಸುತ್ತಿದ್ದರಾ?

ಶಂಕರ್ ನಾಗ್ ಅವರು ಅನೇಕ ಕನಸನ್ನು ಕಂಡಿದ್ದರು. ಬೆಂಗಳೂರಲ್ಲಿ ಮೆಟ್ರೋ ನಿರ್ಮಾಣ ಮಾಡಬೇಕು ಎಂದು ಅವರು ಕನಸು ಕಂಡಿದ್ದರು. ನಂದಿ ಬೆಟ್ಟದಲ್ಲಿ ರೋಪ್​ವೇ ಬರಬೇಕು ಎಂಬುದು ಅವರ ಆಸೆ ಆಗಿತ್ತು. ಅವರು ಮೃತಪಟ್ಟ ಹಲವು ವರ್ಷಗಳ ಬಳಿಕ ಬೆಂಗಳೂರಿಗೆ ಮೆಟ್ರೋ ಬಂತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:33 am, Sat, 9 November 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ