AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆರ್​ಆರ್​ಆರ್’ ಪ್ರೀ-ರಿಲೀಸ್​ ವೇದಿಕೆ ಮೇಲೆ ರಾಜಮೌಳಿಗೆ ಶಿವಣ್ಣ ವಿಶೇಷ ಮನವಿ

ಆರ್​ಆರ್​ಆರ್​’ ಸಿನಿಮಾನ ಫಸ್ಟ್​ಡೇ, ಫಸ್ಟ್ ಶೋ ನೋಡ್ತೀನಿ. ಕನ್ನಡ ಶೋ ಜಾಸ್ತಿ ಹಾಕಿ ಎಂದು ಕೋರಿದರು ಶಿವಣ್ಣ. ‘ಪುಷ್ಪ’, ‘ರಾಧೆ ಶ್ಯಾಮ್​’ ಸಿನಿಮಾ ತೆರೆಗೆ ಬಂದಾಗ ಕನ್ನಡ ವರ್ಷನ್​ಗೆ​ ಹೆಚ್ಚು ಶೋ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಶಿವಣ್ಣ ಈ ಮನವಿ ಮಾಡಿದ್ದಾರೆ. 

‘ಆರ್​ಆರ್​ಆರ್’ ಪ್ರೀ-ರಿಲೀಸ್​ ವೇದಿಕೆ ಮೇಲೆ ರಾಜಮೌಳಿಗೆ ಶಿವಣ್ಣ ವಿಶೇಷ ಮನವಿ
ರಾಜಮೌಳಿ, ಶಿವಣ್ಣ
TV9 Web
| Edited By: |

Updated on: Mar 19, 2022 | 10:11 PM

Share

ಇಂದು (ಮಾರ್ಚ್​ 19) ಚಿಕ್ಕಬಳ್ಳಾಪುರದಲ್ಲಿ ರಾಜಮೌಳಿ (Rajamouli) ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾದ (RRR Movie) ಪ್ರೀ-ರಿಲೀಸ್​ ಇವೆಂಟ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಸ್ಯಾಂಡಲ್​ವುಡ್​ ನಟ ಶಿವರಾಜ್​ಕುಮಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಕೆ. ಸುಧಾಕರ್​, ನಟ ರಾಮ್​ ಚರಣ್​, ಜ್ಯೂ. ಎನ್​ಟಿಆರ್ (JR. NTR) ಮೊದಲಾದವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ವೇದಿಕೆ ಏರಿದ ಶಿವಣ್ಣ ಅವರು ‘ಆರ್​ಆರ್​ಆರ್​’ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ನಾನು ರಾಜಮೌಳಿ ಅವರ ದೊಡ್ಡ ಫ್ಯಾನ್​ ಎಂದರು.

‘ಒಂದು ಕಡೆ ಸಂತೋಷನೂ ಆಗ್ತಾ ಇದೆ, ಮತ್ತೊಂದು ಕಡೆ ದುಃಖ ಇದೆ. ಅಪ್ಪುನ ಕಳೆದುಕೊಂಡು ದುಃಖದಲ್ಲಿದ್ದೇವೆ. ನಮ್ಮ ದುಃಖದಲ್ಲಿ ಭಾರತೀಯ ಚಿತ್ರರಂಗ ಇದೆ, ಸರ್ಕಾರ ಇದೆ. ಬೊಮ್ಮಾಯಿ ಅವರು ಅಣ್ಣನ ಸ್ಥಾನದಲ್ಲಿ ನಿಂತಿದ್ದಾರೆ. ನಮಗಾದಷ್ಟೇ ನೋವು ಅವರಿಗೂ ಆಗಿದೆ. ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಬಂದು ನಾವು ನಿಮ್ಮ ತಮ್ಮ ಎಂದಾಗ ಖುಷಿ ಆಯ್ತು. ಅಪ್ಪುನ ಇವರಲ್ಲಿ, ನಿಮ್ಮಲ್ಲಿ (ಅಭಿಮಾನಿಗಳಲ್ಲಿ) ಕಾಣ್ತೀನಿ. ಅಪ್ಪು ಎಲ್ಲ ಕಡೆಗಳಲ್ಲೂ ಇದ್ದಾರೆ’ ಎಂದರು ಶಿವರಾಜ್​ಕುಮಾರ್.

‘ನಾನು ರಾಜಮೌಳಿ ದೊಡ್ಡ ಫ್ಯಾನ್​. ಜ್ಯೂ. ಎನ್​ಟಿಆರ್​ ಅವರ ಎಲ್ಲಾ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ರಾಮ್​ ಚರಣ್​, ಪವನ್​ ಕಲ್ಯಾಣ್​, ಚಿರಂಜೀವಿ, ಅಜಿತ್​, ವಿಜಯ್​ ಪ್ರತಿಯೊಬ್ಬರ ಸಿನಿಮಾನೂ ನಾನು ಥಿಯೇಟರ್​ನಲ್ಲೇ ನೋಡೋದು. ನನಗೆ ಮನೆಯಲ್ಲೇ ಶೋ ಹಾಕಿಸಿಕೊಂಡು ಸಿನಿಮಾ ನೋಡೋದು ಇಷ್ಟ ಇಲ್ಲ. ನಾನು ಅಭಿಮಾನಿ ತರಹ ಥಿಯೇಟರ್​ಗೆ ಹೋಗೆ ಸಿನಿಮಾ ನೋಡೋದು’ ಎಂದಿದ್ದಾರೆ ಶಿವರಾಜ್​ಕುಮಾರ್.

‘ಬಾಹುಬಲಿ ಸಿನಿಮಾ ಫಸ್ಟ್​ ಡೇ ನೋಡಿ ಅದ್ಭುತ ಸಿನಿಮಾ ತೆಗೆದಿದ್ದೀರಿ ಎಂದು ಕಾಲ್​ ಮಾಡಿ ಹೇಳಿದ್ದೆ. ನಮ್ಮ ಸಿನಿಮಾ ಬಗ್ಗೆ ಇಂಟರ್​ನ್ಯಾಷನಲ್​ ಲೆವೆಲ್​ಗೆ ಮಾತಾಡೋ ರೀತಿ ಮಾಡಿದ ಡೈರೆಕ್ಟರ್​ ಸಿಕ್ಕಿದಾರೆ. ಅವರು ಎಲ್ಲಿ ಕರೆದರೂ ಬರ್ತೀನಿ. ನಮ್ಮ ಚಿತ್ರರಂಗದ ಹೆಸರನ್ನು ಅಲ್ಲಿವರೆಗೆ ತೆಗೆದುಕೊಂಡು ಹೋಗಬೇಕು ಎಂದರೆ ಅದು ಸಣ್ಣ ಕೆಲಸವಲ್ಲ. ಎಲ್ಲ ಕಡೆ ವೈರತ್ವ ಇರುತ್ತೆ. ಆದರೆ, ಈಗ ರಾಮ್​ ಚರಣ್​-ಜ್ಯೂ.ಎನ್​ಟಿಆರ್​ಗೆ​ ಒಟ್ಟಿಗೆ ನಿಂತಿದಾರೆ. ನಮಗೆ ಇಂಡಸ್ಟ್ರಿಯೇ ಫ್ಯಾಮಿಲಿ. ‘ಆರ್​ಆರ್​ಆರ್​’ ಸಿನಿಮಾನ ಫಸ್ಟ್​ಡೇ, ಫಸ್ಟ್ ಶೋ ನೋಡ್ತೀನಿ. ಕನ್ನಡ ಶೋ ಜಾಸ್ತಿ ಹಾಕಿ’ ಎಂದು ಕೋರಿದರು ಶಿವಣ್ಣ. ‘ಪುಷ್ಪ’, ‘ರಾಧೆ ಶ್ಯಾಮ್​’ ಸಿನಿಮಾ ತೆರೆಗೆ ಬಂದಾಗ ಕನ್ನಡ ವರ್ಷನ್​ಗೆ​ ಹೆಚ್ಚು ಶೋ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಶಿವಣ್ಣ ಈ ಮನವಿ ಮಾಡಿದ್ದಾರೆ.

ಆರ್​ಆರ್​ಆರ್​ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ಕಾರ್ಯಕ್ರಮವನ್ನು ಅನುಶ್ರೀ ನಡೆಸಿಕೊಟ್ಟರು. ಅನುಶ್ರೀ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು ಶಿವರಾಜ್​ಕುಮಾರ್. ‘ಅನುಶ್ರೀ ಇದ್ರೆ ಪಟಾಕಿ ತರ. ಅವರು ಆ್ಯಂಕರಿಂಗ್ ಅದ್ಭುತವಾಗಿ ಮಾಡ್ತಾರೆ. ಬಸವರಾಜ ಬೊಮ್ಮಾಯಿ ಸಿಂಪಲ್​ ಸಿಎಂ. ಅವರ ಪ್ರೀತಿಗೆ ನಾನು ಚಿರರುಣಿ’ ಎಂದರು ಅವರು.

‘ಜೇಮ್ಸ್’ ಬಗ್ಗೆ ಮಾತನಾಡಿದ ಶಿವರಾಜ್​ಕುಮಾರ್​, ‘ನನ್ನ ತಮ್ಮನಿಗೆ ಈ ರೀತಿ ವಾಯ್ಸ್​ ಕೊಡಬೇಕಾಯ್ತು. ಅದು ನನಗೆ ತುಂಬಾ ನೋವಾಯ್ತು. ಅಪ್ಪುಗೋಸ್ಕರ ವಾಯ್ಸ್ ಕೊಟ್ಟೆ. ಅದು ಇಷ್ಟ ಆಗಿದೆ ಎಂದುಕೊಂಡಿದ್ದೀನಿ. 25ಕ್ಕೆ ಮತ್ತೊಂದು ಹಬ್ಬ ಬರ್ತಿದೆ. ಎಲ್ಲರೂ ‘ಆರ್​ಆರ್​ಆರ್​’ ನೋಡಿ’ ಎಂದರು ಶಿವರಾಜ್​ಕುಮಾರ್.

ಇದನ್ನೂ ಓದಿ: ಅದ್ದೂರಿ ‘ಆರ್​ಆರ್​ಆರ್​’ ಪ್ರೀ-ರಿಲೀಸ್​ ಇವೆಂಟ್ ಲೈವ್ ನೋಡಲು ಇಲ್ಲಿ ಕ್ಲಿಕ್​ ಮಾಡಿ

‘ಪುನೀತ್​ ನಟನೆಯ ಜೇಮ್ಸ್​ ನೋಡಿದ್ರಾ?’; ಈ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸಿದ ಜ್ಯೂ.ಎನ್​ಟಿಆರ್​

ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ