Shivarajkumar: ಶಿವರಾಜ್​ಕುಮಾರ್ ಈಗ ‘ಮಾಲೀಕ’; ಹೇಗಿದೆ ನೋಡಿ ‘ಉತ್ತರಕಾಂಡ’ ಲುಕ್

Uttarakaanda Movie: ನಿರ್ಮಾಪಕರಾದ ಕಾರ್ತಿಕ್​ ಗೌಡ, ಯೋಗಿ ಜಿ. ರಾಜ್​ ಹಾಗೂ ನಟ ಡಾಲಿ ಧನಂಜಯ್ ಅವರು ‘ರತ್ನನ್ ಪ್ರಪಂಚ’ ಹಾಗೂ ‘ಗುರುದೇವ ಹೊಯ್ಸಳ’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಇವರ ಕಾಂಬಿನೇಷನ್​ನಲ್ಲಿ ‘ಉತ್ತರಕಾಂಡ’ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಶಿವಣ್ಣ ಕೂಡ ನಟಿಸುತ್ತಿದ್ದಾರೆ. ಅವರ ಲುಕ್ ರಿವೀಲ್ ಆಗಿದೆ.

Shivarajkumar: ಶಿವರಾಜ್​ಕುಮಾರ್ ಈಗ ‘ಮಾಲೀಕ’; ಹೇಗಿದೆ ನೋಡಿ ‘ಉತ್ತರಕಾಂಡ’ ಲುಕ್
ಶಿವರಾಜ್​ಕುಮಾರ್
Follow us
|

Updated on: Jul 11, 2024 | 12:04 PM

ಶಿವರಾಜ್​ಕುಮಾರ್ ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರು ವೈಲೆಂಟ್ ಲುಕ್​ನಲ್ಲಿ ಕಾಣಿಸಿಕೊಂಡರೆ ಸಿನಿಮಾ ಹಿಟ್ ಆಗುತ್ತದೆ ಎನ್ನುವ ನಂಬಿಕೆ ಅನೇಕರಲ್ಲಿ ಇದೆ. ಇದು ಸತ್ಯ ಕೂಡ. ಈಗ ಅವರ ನಟನೆಯ ‘ಉತ್ತರಕಾಂಡ’ ಸಿನಿಮಾದ ಲುಕ್ ರಿವೀಲ್ ಆಗಿದೆ. ಈ ಲುಕ್ ಸಖತ್ ರಗಡ್ ಆಗಿದೆ. ಅವರ ಬರ್ತ್​ಡೇಗೆ ಸಿಕ್ಕಿರುವ ಬೆಸ್ಟ್​ ಗಿಫ್ಟ್ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

ಶಿವರಾಜ್​ಕುಮಾರ್ ಅವರು ‘ಉತ್ತರಕಾಂಡ’ ಚಿತ್ರದಲ್ಲಿ ‘ಮಾಲಿಕ್’ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಅವರ ಮುಖದ ಒಂದು ಭಾಗಕ್ಕೆ ರಕ್ತ ಬಡಿದಿದೆ. ಶರ್ಟ್​ಗಳ ಮೇಲೂ ರಕ್ತದ ಕಲೆಗಳು ಇವೆ. ಮೈಮೇಲೆ ಬುಲೆಟ್​ಗಳ ಸರಮಾಲೆ ಇದೆ. ಕೈಯಲ್ಲಿ ಅವರು ಸಿಗಾರ್ ಹಿಡಿದುಕೊಂಡಿದ್ದಾರೆ. ಅವರ ಪಕ್ಕದಲ್ಲೇ ಬಾಂಗ್​ಗಳ ಬಾಕ್ಸ್ ಇದೆ. ಅವರ ಲುಕ್ ಫ್ಯಾನ್ಸ್​ಗೆ ಸಖತ್ ಇಷ್ಟ ಆಗಿದೆ.

ಶಿವರಾಜ್​ಕುಮಾರ್ ಅವರಿಗೆ ಜುಲೈ 12ರಂದು ಜನ್ಮದಿನ. ಈ ವಿಶೇಷ ದಿನ ಸಮೀಪಿಸಿರುವುದರಿಂದ ಅವರ ಸಿನಿಮಾಗಳ ತಂಡದಿಂದ ಹೊಸ ಹೊಸ ಲುಕ್​ಗಳು ರಿವೀಲ್ ಆಗುತ್ತಿವೆ. ‘ಉತ್ತರಕಾಂಡ’ ಲುಕ್ ಎಲ್ಲರಿಗೂ ಇಷ್ಟ ಆಗಿದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

‘ಉತ್ತರಕಾಂಡ’ ಆ್ಯಕ್ಷನ್‌ ಡ್ರಾಮಾ ಶೈಲಿಯಲ್ಲಿ ಮೂಡಿ ಬರುತ್ತಿದೆ. ರೋಹಿತ್‌ ಪದಕಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಮಿತ್‌ ತ್ರಿವೇದಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ, ಅಧ್ವೈತ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕೆ ಇದೆ. ವಿಶ್ವಾಸ್‌ ಕಶ್ಯಪ್‌ ಪ್ರೊಡಕ್ಷನ್‌ ವಿನ್ಯಾಸ ಮಾಡಿದ್ದು, ಅನಿಲ್ ಅನಿರುದ್ಧ್ ಮುಖ್ಯ ಸಂಕಲನಕಾರರಾಗಿರುತ್ತಾರೆ. ಕೆಆರ್​ಜಿ ಸ್ಟೂಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಕಾರ್ತಿಕ್‌ ಗೌಡ ಮತ್ತು ಯೋಗಿ ಜಿ ರಾಜ್‌ ಚಿತ್ರವನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ: ಎಲ್ಲೆಲ್ಲೂ ಶಿವಣ್ಣ; ‘ಉತ್ತರಕಾಂಡ’ ಸೆಟ್​ನಲ್ಲಿ ಶಿವರಾಜ್​ಕುಮಾರ್​ಗೆ ಅದ್ದೂರಿ ಸ್ವಾಗತ

ಈ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇದೆ. ಶಿವರಾಜ್​ಕುಮಾರ್, ಡಾಲಿ ಧನಂಜಯ, ಭಾವನಾ ಮೆನನ್‌, ಐಶ್ವರ್ಯ ರಾಜೇಶ್‌, ದಿಗಂತ್‌ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಕೆಣಕ್ಕಿದ ಬಾಬರ್; ಒಂದೇ ಓವರ್​ನಲ್ಲಿ 18 ರನ್ ಚಚ್ಚಿದ ಲಿಟನ್ ದಾಸ್! ವಿಡಿಯೋ
ಕೆಣಕ್ಕಿದ ಬಾಬರ್; ಒಂದೇ ಓವರ್​ನಲ್ಲಿ 18 ರನ್ ಚಚ್ಚಿದ ಲಿಟನ್ ದಾಸ್! ವಿಡಿಯೋ
ಮುಂಬೈನಲ್ಲಿ ಬೃಹತ್ ಪೈಪ್ ಒಡೆದು ಆಗಸದೆತ್ತರ ಹಾರಿದ ನೀರು; ವಿಡಿಯೋ ವೈರಲ್
ಮುಂಬೈನಲ್ಲಿ ಬೃಹತ್ ಪೈಪ್ ಒಡೆದು ಆಗಸದೆತ್ತರ ಹಾರಿದ ನೀರು; ವಿಡಿಯೋ ವೈರಲ್
ಎಂಬಿ ಪಾಟೀಲ್​​ರಿಂದ ಸರ್ಕಾರಕ್ಕೆ ₹ 300 ಕೋಟಿ ನಷ್ಟ: ಆರ್​ಟಿಐ ಕಾರ್ಯಕರ್ತ
ಎಂಬಿ ಪಾಟೀಲ್​​ರಿಂದ ಸರ್ಕಾರಕ್ಕೆ ₹ 300 ಕೋಟಿ ನಷ್ಟ: ಆರ್​ಟಿಐ ಕಾರ್ಯಕರ್ತ
ಪ್ರಿನ್ಸಿಪಾಲ್ ಬೈದರೆಂದು ಕಟ್ಟದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ
ಪ್ರಿನ್ಸಿಪಾಲ್ ಬೈದರೆಂದು ಕಟ್ಟದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ
ಎಐಸಿಸಿ ಮತ್ತು ರಾಜ್ಯ ನಾಯಕರ ಮೀಟಿಂಗ್; ವಿರೋಧಪಕ್ಷಗಳಿಗೆ ಹೆಚ್ಚು ಕುತೂಹಲ!
ಎಐಸಿಸಿ ಮತ್ತು ರಾಜ್ಯ ನಾಯಕರ ಮೀಟಿಂಗ್; ವಿರೋಧಪಕ್ಷಗಳಿಗೆ ಹೆಚ್ಚು ಕುತೂಹಲ!
ಮುಡಾ ಪ್ರಕರಣ: ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವ ಸಿಎಲ್​ಪಿ, ಹೈಕಮಾಂಡ್
ಮುಡಾ ಪ್ರಕರಣ: ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವ ಸಿಎಲ್​ಪಿ, ಹೈಕಮಾಂಡ್
ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ವಿರುದ್ಧ ದ್ವೇಷ ಹುಟ್ಟಿಕೊಂಡಿದೆ: ಜೋಶಿ
ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ವಿರುದ್ಧ ದ್ವೇಷ ಹುಟ್ಟಿಕೊಂಡಿದೆ: ಜೋಶಿ
ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಕಾಣುವ ಹಿರಿಯ ಮಹಿಳೆ ಸರಗಳ್ಳರ ಟಾರ್ಗೆಟ್
ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಕಾಣುವ ಹಿರಿಯ ಮಹಿಳೆ ಸರಗಳ್ಳರ ಟಾರ್ಗೆಟ್
ಉಕ್ರೇನ್​ ಭೇಟಿ ವೇಳೆ ಝೆಲೆನ್ಸ್ಕಿಯನ್ನು ತಬ್ಬಿಕೊಂಡ ಪ್ರಧಾನಿ ಮೋದಿ
ಉಕ್ರೇನ್​ ಭೇಟಿ ವೇಳೆ ಝೆಲೆನ್ಸ್ಕಿಯನ್ನು ತಬ್ಬಿಕೊಂಡ ಪ್ರಧಾನಿ ಮೋದಿ
ಪ್ರಧಾನಿ ಮೋದಿಗೆ ಕೈ ಮುಗಿದು ಸ್ವಾಗತಿಸಿದ ಉಕ್ರೇನ್ ಅಧಿಕಾರಿಗಳು
ಪ್ರಧಾನಿ ಮೋದಿಗೆ ಕೈ ಮುಗಿದು ಸ್ವಾಗತಿಸಿದ ಉಕ್ರೇನ್ ಅಧಿಕಾರಿಗಳು