AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿನ್ನೆ ಮೊನ್ನೆ ಬಂದವ್ರೆಲ್ಲ ನಂಬರ್ 1 ಅಂತಾರೋ’; ವೈಲ್ಡ್ ಕಾರ್ಡ್ ಎಂಟ್ರಿಗಳ ಪರ್ಫಾರ್ಮೆನ್ಸ್​ಗೆ ಮೂಲ ನಿವಾಸಿಗಳಿಗೆ ಹೊಟ್ಟೆ ಉರಿ

ಈ ವಾರ ಬಿಗ್ ಬಾಸ್ ಕನ್ನಡದಲ್ಲಿ ರಜತ್ ಮತ್ತು ಶೋಭಾ ಶೆಟ್ಟಿ ಅವರ ವೈಲ್ಡ್ ಕಾರ್ಡ್ ಎಂಟ್ರಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮೊದಲಿನಿಂದಲೂ ಇದ್ದ ಸ್ಪರ್ಧಿಗಳು ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಯಾಪ್ಟನ್ಸಿ ರೇಸ್‌ನಲ್ಲಿ ರಜತ್ ಮತ್ತು ಶೋಭಾ ಅವರ ಇರುವಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.

‘ನಿನ್ನೆ ಮೊನ್ನೆ ಬಂದವ್ರೆಲ್ಲ ನಂಬರ್ 1 ಅಂತಾರೋ’; ವೈಲ್ಡ್ ಕಾರ್ಡ್ ಎಂಟ್ರಿಗಳ ಪರ್ಫಾರ್ಮೆನ್ಸ್​ಗೆ ಮೂಲ ನಿವಾಸಿಗಳಿಗೆ ಹೊಟ್ಟೆ ಉರಿ
ರಜತ್, ಶೋಭಾ ಶೆಟ್ಟಿ
Follow us
ರಾಜೇಶ್ ದುಗ್ಗುಮನೆ
|

Updated on:Nov 23, 2024 | 7:22 AM

ಈ ವಾರ ರಜತ್ ಹಾಗೂ ಶೋಭಾ ಶೆಟ್ಟಿ ಅವರು ದೊಡ್ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಇಬ್ಬರೂ ಪ್ರಬಲ ಸ್ಪರ್ಧಿಗಳು ಎಂದು ಎನಿಸಿಕೊಂಡಿದ್ದಾರೆ. ಅವರು ಈ ವಾರ ಉತ್ತಮವಾಗಿ ಆಟ ಆಡಿದರು. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಆದರೆ, ಮೊದಲಿನಿಂದಲೂ ಇಲ್ಲಿಯೇ ಇದ್ದ ಸ್ಪರ್ಧಿಗಳಿಗೆ ಅವರ ಬಗ್ಗೆ ಹೊಟ್ಟೆ ಉರಿ ಶುರುವಾಗಿದೆ. ಈ ಬಗ್ಗೆ ಅವರು ನೇರವಾಗಿ ಹೇಳಿಕೊಂಡಿದ್ದಾರೆ.

ಈ ವಾರ ಎರಡು ತಂಡಗಳನ್ನು ಮಾಡಲಾಗಿತ್ತು. ಶೋಭಾ ಶೆಟ್ಟಿ, ಮಂಜು, ರಜತ್, ಹನುಮಂತ, ಗೌತಮಿ, ಚೈತ್ರಾ ಒಂದು ತಂಡದಲ್ಲಿ ಇದ್ದರೆ ಮತ್ತೊಂದು ತಂಡದಲ್ಲಿ ಭವ್ಯಾ, ತ್ರಿವಿಕ್ರಂ, ಧನರಾಜ್, ಶಿಶಿರ್ ಮೊದಲಾದವರು ಇದ್ದರು. ಶೋಭಾ ತಂಡದಲ್ಲಿ ಇದ್ದ ಶೋಭಾ, ಮಂಜು, ರಜತ್, ಹನುಮಂತ, ಚೈತ್ರಾ ಕ್ಯಾಪ್ಟನ್ಸಿ ರೇಸ್​ಗೆ ಬಂದರು. ಈ ಪೈಕಿ ರಜತ್ ಹಾಗೂ ಶೋಭಾ ಶೆಟ್ಟಿ ವೈಲ್ಡ್ ಕಾರ್ಡ್ ಎಂಟ್ರಿಗಳು. ಈ ವಿಚಾರ ಚರ್ಚೆಯ ಕೇಂದ್ರ ಬಿಂದು ಆಗಿದೆ.

ತ್ರಿವಿಕ್ರಂ ಅವರು ಗೌತಮಿ ಹಾಗೂ ಮಂಜು ಬಳಿ ಈ ವಿಚಾರ ಮಾತನಾಡಿದ್ದಾರೆ. ‘ನಮ್ಮ ತಂಡದ ಒಬ್ಬರೂ ಕ್ಯಾಪ್ಟನ್ಸಿ ರೇಸ್​ನಲ್ಲಿ ಇಲ್ಲ. ಅದು ಬೇಸರದ ವಿಚಾರ’ ಎಂದು ಹೇಳಿಕೊಂಡರು ತ್ರಿವಿಕ್ರಂ. ‘ನಾನು ಶೋಭಾ ತಂಡದಲ್ಲಿ ಇದ್ದ ಹೊರತಾಗಿಯೂ ಕ್ಯಾಪ್ಟನ್ಸಿ ರೇಸ್​ಗೆ ಹೋಗೋಕೆ ಆಗುತ್ತಿಲ್ಲ. ಅದು ನನಗೆಷ್ಟು ಬೇಸರ ಮೂಡಿಸಿರಬಹುದು ಎಂದು ಯೋಚಿಸಿದ್ದೀರಾ’ ಎಂಬುದಾಗಿ ಗೌತಮಿ ಹೇಳಿದರು. ಆಗ ತ್ರಿವಿಕ್ರಂ ಅವರು ಮಂಜು ಬಳಿ ಕೆಲ ವಿಚಾರವನ್ನು ನೇರವಾಗಿ ಹೇಳಿಕೊಂಡರು.

ಇದನ್ನೂ ಓದಿ: ಹನುಮಂತನಿಗೆ ಕ್ಯಾಪ್ಟನ್​ ಪಟ್ಟ ಜಸ್ಟ್ ಮಿಸ್; ನಾಯಕತ್ವ ಸಿಕ್ಕಿದ್ದು ಯಾರಿಗೆ?

ಶಿವರಾಜ್​ಕುಮಾರ್ ಹಾಗೂ ಸುದೀಪ್ ನಟನೆಯ ‘ದಿ ವಿಲನ್’ ಸಿನಿಮಾದ ಸಾಂಗ್​ನಲ್ಲಿ ಬರುವ ‘ನಿನ್ನೆ ಮೊನ್ನೆ ಬಂದವ್ರೆಲ್ಲ ನಂಬರ್ 1 ಅಂತಾರೋ..’ ಸಾಲುಗಳನ್ನು ಹೇಳಿದ್ದಾರೆ ತ್ರಿವಿಕ್ರಂ. ‘ಏನೇ ಆಗಲಿ ನೀವು ಕ್ಯಾಪ್ಟನ್ ಆಗಬೇಕು. ಅವರಿಗೆ (ರಜತ್ ಹಾಗೂ ಶೋಭಾ) ಬಿಟ್ಟುಕೊಡಬಾರದು’ ಎಂದರು. ಈ ಮೂಲಕ ಮೊದಲಿನಿಂದ ದೊಡ್ಮನೆಯಲ್ಲಿ ಇರುವ ಆಟಗಾರರನ್ನು ಕ್ಯಾಪ್ಟನ್ ಆಗಬೇಕು ಎಂದು ಅವರು ಅಂದುಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:21 am, Sat, 23 November 24

ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ರಕ್ತ ಸುರಿಯುತ್ತಿದ್ದರೂ ನೊಯ್ಡಾದ ರಸ್ತೆಯಲ್ಲಿ ಯುವಕನ ಥಳಿಸಿದ ವಿಡಿಯೋ ವೈರಲ್
ರಕ್ತ ಸುರಿಯುತ್ತಿದ್ದರೂ ನೊಯ್ಡಾದ ರಸ್ತೆಯಲ್ಲಿ ಯುವಕನ ಥಳಿಸಿದ ವಿಡಿಯೋ ವೈರಲ್
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ