AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ, ಆಸ್ತಿಗಳನ್ನೆಲ್ಲ ಮಾರಿ ಈಗ ಬಾಡಿಗೆ ಮನೆಯಲ್ಲಿದ್ದೇನೆ: ಹಿರಿಯ ನಟ ಶ್ರೀನಿವಾಸಮೂರ್ತಿ

Shrinivasa Murthy: ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿರುವ ಶ್ರೀನಿವಾಸ ಮೂರ್ತಿಯವರು, ಚಿತ್ರರಂಗದಿಂದ ತಾವು ಗಳಿಸಿದ ಆಸ್ತಿಯನ್ನು ಕಳೆದುಕೊಂಡು ಈಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸಂಗತಿ ಬಿಚ್ಚಿಟ್ಟಿದ್ದಾರೆ.

ಮನೆ, ಆಸ್ತಿಗಳನ್ನೆಲ್ಲ ಮಾರಿ ಈಗ ಬಾಡಿಗೆ ಮನೆಯಲ್ಲಿದ್ದೇನೆ: ಹಿರಿಯ ನಟ ಶ್ರೀನಿವಾಸಮೂರ್ತಿ
ಶ್ರೀನಿವಾಸ ಮೂರ್ತಿ
ಮಂಜುನಾಥ ಸಿ.
|

Updated on: May 04, 2023 | 11:10 PM

Share

ಹಿರಿಯ ನಟ ಶ್ರೀನಿವಾಸಮೂರ್ತಿಯವರ (Shirinvasa Murthy) ಪರಿಚಯ ಇಲ್ಲದ ಕನ್ನಡ ಸಿನಿಮಾ ಪ್ರೇಮಿಗಳಿಲ್ಲ. ಹಲವು ದಶಕಗಳಿಂದಲೂ ಚಿತ್ರರಂಗದಲ್ಲಿರುವ ಶ್ರೀನಿವಾಸಮೂರ್ತಿಯವರು ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ಪೋಷಕ ನಟ. ಕವಿರತ್ನ ಕಾಳಿದಾಸ (Kavirathna Kalidasa) ಸಿನಿಮಾದ ಭೋಜರಾಜನ ಪಾತ್ರವನ್ನು ಸಿನಿಮಾ ಪ್ರೇಮಿಗಳು ಮರೆಯುವಂತಿಲ್ಲ. ಇದೀಗ ಶ್ರೀನಿವಾಸ ಮೂರ್ತಿಯವರು ಕನ್ನಡ ಚಿತ್ರರಂಗ ಪ್ರವೇಶಿಸಿ 50 ವರ್ಷಗಳಾಗಿದ್ದು ಈ ಸಂದರ್ಭ ಆಯೋಜಿಸಲಾಗಿರುವ ವಿಶೇಷ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸಿನಿಜೀವನದ ಬಗ್ಗೆ ಅವರು ಮಾತನಾಡಿದ್ದಾರೆ. ಈ ಸಂದರ್ಭ, ತಾವು ಗಳಿಸಿದ್ದ ಆಸ್ತಿಯನ್ನೆಲ್ಲ ಸಿನಿಮಾ ಕಾರಣಕ್ಕಾಗಿ ಕಳೆದುಕೊಂಡ ವಿಚಾರವನ್ನು ಯಾವುದೇ ಉದ್ವೇಗ, ಪಶ್ಚಾಪಗಳಿಲ್ಲದೆ ಹೇಳಿಕೊಂಡಿದ್ದಾರೆ.

”ನಾನು ಬೆಂಗಳೂರಿಗೆ ಬಂದಾಗ ನನ್ನ ಬಳಿ ಹಳೆ ಸೂಟ್​ಕೇಸ್​ನಲ್ಲಿ ಕೆಲವು ಜೊತೆ ಬಟ್ಟೆಗಳ ಹೊರತಾಗಿ ಇನ್ನೇನೂ ಇರಲಿಲ್ಲ. ಇಲ್ಲಿಗೆ ಬಂದು ಕೇವಲ ಕಲಾವಿದನಾಗಿ ಸಾಕಷ್ಟು ದುಡಿದಿದ್ದೆ ಗಳಿಸಿದ್ದೆ. ಕತ್ರಿಗುಪ್ಪೆಯಲ್ಲಿ ದೊಡ್ಡ ಮನೆಯೊಂದನ್ನು ಕಟ್ಟಿಸಿದ್ದೆ. ಎಂಪಿ ಪ್ರಕಾಶ್ ಅವರು ಸಚಿವರಾಗಿದ್ದಾಗ ನಮಗೆಲ್ಲ ಬಿಡಿಎ ಸೈಟ್​ಗಳನ್ನು ನೀಡಿದ್ದರೂ ನನಗೂ ದೊಡ್ಡ 50-80 ಸೈಟ್ ಒಂದು ನೀಡಿದ್ದರು. ಅದರಲ್ಲಿ ದೊಡ್ಡದಾದ ಮನೆ ಕಟ್ಟಿಸಿದ್ದೆ. ಅದರ ಜೊತೆಗೆ ಬೆಂಗಳೂರಿನ ಅಲ್ಲಲ್ಲಿ ಏಳು ಸೈಟ್​ಗಳನ್ನೂ ನಾನು ಖರೀದಿ ಮಾಡಿದ್ದೆ. ಕಲಾವಿದನಾಗಿ ದುಡಿದ ಹಣದಲ್ಲಿ ನಾನು ಅಷ್ಟೆಲ್ಲ ಸಂಪಾದನೆ ಮಾಡಿದ್ದೆ” ಎಂದು ನೆನಪು ಮಾಡಿಕೊಂಡಿದ್ದಾರೆ ಶ್ರೀನಿವಾಸ ಮೂರ್ತಿ.

”ಅಷ್ಟೂ ಆಸ್ತಿಯನ್ನು ಕನ್ನಡ ಚಿತ್ರರಂಗ ನನಗೆ ಕೊಟ್ಟ ಬಳುವಳಿ ಆಗಿತ್ತು. ಕಲಾವಿದನಾಗಿ ಅಲ್ಲದೆ ಇನ್ಯಾವುದೇ ಆದಾಯದಿಂದ ನಾನು ಅವನ್ನು ಖರೀದಿಸಿರಲಿಲ್ಲ. ಆದರೆ ಎಂಟು ಸಿನಿಮಾಗಳ ನಿರ್ಮಾಣ ಮಾಡಿ ಆ ದೊಡ್ಡ ಮನೆ, ಏಳು ಸೈಟು ಎಲ್ಲವನ್ನೂ ಮಾರಿಕೊಂಡೆ. ಈಗ ನಾನು ಬಾಡಿಗೆ ಮನೆಯಲ್ಲಿದ್ದೀನಿ” ಎಂದು ನಗುತ್ತಲೇ ಹೇಳಿಕೊಂಡರು ಶ್ರೀನಿವಾಸ ಮೂರ್ತಿ.

”ನಾನು ಆಸ್ತಿ ಮಾರಿಕೊಂಡೆ ಎಂಬ ದುಃಖ ಗುಲಗಂಜಿಯಷ್ಟೂ ನನಗೆ ಇಲ್ಲ. ಏಕೆಂದರೆ ಬೆಂಗಳೂರಿಗೆ ಬಂದಾಗ ನನ್ನ ಹತ್ತಿರ ಏನೂ ಇರಲಿಲ್ಲ. ಆದರೆ ಇಷ್ಟೆಲ್ಲವನ್ನೂ ಸಂಪಾದನೆ ಮಾಡುವ ಶಕ್ತಿಯನ್ನು ನನಗೆ ಚಿತ್ರರಂಗ, ಅಭಿಮಾನಿಗಳು ಮಾಡಿಕೊಟ್ಟರು. ಅದೇ ನನಗೆ ಹೆಮ್ಮೆ. ದೇವರು ಕೊಟ್ಟ, ಅದೇ ದೇವರು ಕಿತ್ತುಕೊಂಡ. ಆದರೆ ನಾವು ಮಾಡುವ ಕೆಲಸ ಮಾಡುತ್ತಲೇ ಇರುತ್ತೇವೆ. ಕೊಟ್ಟರೆ ಸಂತೋಶ, ಕೊಡದೇ ಇದ್ದರೂ ಸಂತೋಶ” ಎಂದರು ಶ್ರೀನಿವಾಸ ಮೂರ್ತಿ.

ಇದನ್ನೂ ಓದಿ:Anasuya Bharadwaj: ಆ್ಯಂಕರ್​ಗೆ ಆಂಟಿ ಎಂದ ಪುಂಡರು; ಹಿರಿಯ ನಟಿ ಕೊಟ್ಟರು ತಿರುಗೇಟು

ಈಗಿನ ಚಿಕ್ಕಬಳ್ಳಾಪುರದ ಜಡಲತಿಮ್ಮನಹಳ್ಳಿಯವರಾದ ಶ್ರೀನಿವಾಸ ಮೂರ್ತಿ 1973 ರಲ್ಲಿ ಚಿತ್ರರಂಗ ಪ್ರವೇಶ ಮಾಡಿದರು. ಸುಂದರ ವದನರಾಗಿದ್ದ ಮೂರ್ತಿಯವರಿಗೆ ಹಲವು 1980 ರ ಬಳಿಕ ಹಲವು ಸಿನಿಮಾ ಅವಕಾಶಗಳು ದೊರೆತವು. ದೊಡ್ಡ ದೊಡ್ಡ ನಟರೊಟ್ಟಿಗೆ ಶ್ರೀನಿವಾಸ ಮೂರ್ತಿ ನಟಿಸಿದರು. ನಾಯಕ ನಟರಾಗಿಯೂ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಆ ಬಳಿಕ ಪೋಷಕ ಪಾತ್ರಗಳಲ್ಲಿ ಹೆಚ್ಚು ನಟಿಸಿದರು. ಬಳಿಕ ಗೆಳೆಯ ಜೈ ಜಗದೀಶ್ ಅವರೊಟ್ಟಿಗೆ ಸೇರಿ ಕೆಲವು ಸಿನಿಮಾಗಳ ನಿರ್ಮಾಣ ಮಾಡಿದರು. ಆದರೆ ಸಿನಿಮಾ ನಿರ್ಮಾಣ ಅವರ ಕೈ ಹಿಡಿಯಲಿಲ್ಲ. ಅವರ ನಿರ್ಮಾಣದ ಸಿನಿಮಾಗಳು ಒಂದರ ಹಿಂದೊಂದು ಹಳ್ಳ ಹಿಡಿದವು. ಇದೀಗ ಶ್ರೀನಿವಾಸ ಮೂರ್ತಿಯವರು ಚಿತ್ರರಂಗ ಪ್ರವೇಶಿಸಿ 50 ವರ್ಷಗಳಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ