ರಾಘವೇಂದ್ರ ಸ್ಟೋರ್ಸ್​ನಲ್ಲಿ ಬಹಳ ಚೆನ್ನಾಗಿದ್ದ ಸೀನ್ ಒಂದನ್ನು ತೆಗೆಯಲೇಬೇಕಾಯ್ತು: ಜಗ್ಗೇಶ್

Raghavendra Stores: ಕಳೆದ ವಾರವಷ್ಟೆ ಬಿಡುಗಡೆ ಆದ ರಾಘವೇಂದ್ರ ಸ್ಟೋರ್ಸ್ ಕನ್ನಡ ಸಿನಿಮಾ ಇದೀಗ ಸಕ್ಸಸ್ ಮೀಟ್ ಮಾಡಿದ್ದು, ಒಂದು ಸುಂದರವಾದ ದೃಶ್ಯವನ್ನು ಸಿನಿಮಾದಿಂದ ಹೊರಗೆ ಇಡಬೇಕಾದ ಅನಿವಾರ್ಯತೆ ನಿರ್ಮಾಣವಾದ ಬಗ್ಗೆ ಜಗ್ಗೇಶ್ ಮಾತನಾಡಿದರು.

ರಾಘವೇಂದ್ರ ಸ್ಟೋರ್ಸ್​ನಲ್ಲಿ ಬಹಳ ಚೆನ್ನಾಗಿದ್ದ ಸೀನ್ ಒಂದನ್ನು ತೆಗೆಯಲೇಬೇಕಾಯ್ತು: ಜಗ್ಗೇಶ್
ರಾಘವೇಂದ್ರ ಸ್ಟೋರ್ಸ್
Follow us
|

Updated on: May 04, 2023 | 6:20 PM

ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ (Raghavendra Stores) ಸಿನಿಮಾ ಕಳೆದ ವಾರ ಬಿಡುಗಡೆ ಆಗಿ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ನಿನ್ನೆಯಷ್ಟೆ (ಏಪ್ರಿಲ್ 4) ಚಿತ್ರತಂಡವು ಸಿನಿಮಾದ ಸಕ್ಸಸ್ ಮೀಟ್ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ನಿರ್ದೇಶಕ ಸಂತೋಶ್ ಆನಂದ್ ರಾಮ್ (Santhosh Anandram), ನಟ ಜಗ್ಗೇಶ್ (Jaggesh), ನಾಯಕಿ ಶ್ವೇತಾ ಶ್ರೀವಾತ್ಸವ್, ದತ್ತಣ್ಣ (Dattanna), ರವಿಶಂಕರ್ ಇನ್ನಿತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಗ್ಗೇಶ್, ಸಿನಿಮಾದಲ್ಲಿದ್ದ ಒಂದು ಬಹಳ ಒಳ್ಳೆಯ ದೃಶ್ಯವನ್ನು ಅನಿವಾರ್ಯವಾಗಿ ತೆಗೆಯಬೇಕಾಗಿ ಬಂದ ಪ್ರಸಂಗವನ್ನು ವಿವರಿಸಿದರು.

ನಿರ್ದೇಶಕ ಸಂತೋಶ್ ಆನಂದ್​ರಾಮ್ ಅವರನ್ನು ಹೊಗಳುತ್ತಾ, ”ನಮ್ಮ ಸಂತೋಶ ಬಹಳ ಒಳ್ಳೆಯ ಮೇಧಾವಿ. ಆತ ನಿರ್ಮಾಪಕರ ಪರ ಮತ್ತು ಪ್ರೇಕ್ಷಕರ ಪರ. ಅವರ ನಾಡಿಮಿಡಿತವನ್ನು ಅಭ್ಯಾಸ ಮಾಡಿರುವ ತಂತ್ರಜ್ಞ ಅವನು. ಪ್ರತಿ ಬೆಳವಣಿಗೆಯ ಬಗ್ಗೆಯೂ ಅಪ್​ಡೇಟ್ ಮಾಡುತ್ತಿದ್ದ. ಒಂದು ಬಾರಿ ಕರೆ ಮಾಡಿ ಎಡಿಟಿಂಗ್ ಮುಗಿಯಿತು ಎನ್ನುತ್ತಿದ್ದ, ಮತ್ತೊಮ್ಮೆ ಕಾಲ್ ಮಾಡಿ ದೃಶ್ಯಗಳ ಅನುಕ್ರಮ ಬದಲಾಯಿಸಿದ್ದೇನೆ ಎನ್ನುತ್ತಿದ್ದ. ಹೀಗೆ ಹೇಳುತ್ತಿದ್ದ, ಕೊನೆಗೆ ಸಿನಿಮಾದಲ್ಲಿ ಎರಡು ನಿಮಿಷದ ದೃಶ್ಯ ಹಾಗೂ ಒಂದು ಹಾಡನ್ನು ತೆಗೆದಿದ್ದಾನೆ” ಎಂದರು. ಆ ದೃಶ್ಯ ಏನಾಗಿತ್ತು ಎಂಬುದನ್ನೂ ವಿವರಿಸಿದರು.

”ನಿಮ್ಮನ್ನು ನವರಸ ನಾಯಕ ಎಂದು ಏಕೆ ಕರೆಯುತ್ತಾರೆ ಎಂದು ಜನಗಳಿಗೆ ತೋರಿಸುತ್ತೇನೆ” ಎಂದು ಹೇಳಿ ಒಂದು ದೃಶ್ಯವನ್ನು ಚಿತ್ರೀಕರಣ ಮಾಡಿಸಿದ್ದ. ಅದೊಂದು ಕ್ಲೌನ್ ರೀತಿಯ ಮೂಗಾಭಿನಯ ರೀತಿಯ ದೃಶ್ಯ. ಆ ದೃಶ್ಯ ಅದ್ಭುತವಾಗಿತ್ತು, ಆ ದೃಶ್ಯ ನೋಡಿ ನನಗೇ ಕಣ್ಣಿನಲ್ಲಿ ನೀರು ಬಂದು ಬಿಡ್ತು, ಏನಯ್ಯ ಇಷ್ಟು ಚೆನ್ನಾಗಿ ಮಾಡಿಸಿದ್ದೀಯ ಎಂದು ಧನ್ಯವಾದ ಹೇಳಿದೆ. ಆದರೆ ಕೊನೆಗೆ ಸಿನಿಮಾ ಚೆನ್ನಾಗಿ ಬರಬೇಕು, ಪ್ರೇಕ್ಷಕನಿಗೆ ಬೇಸರ ಆಗಬಾರದು ಎಂದು ಆ ದೃಶ್ಯವನ್ನೂ ಕತ್ತರಿಸಿ ಪಕ್ಕಕ್ಕೆ ಇಟ್ಟ. ಒಂದು ಹಾಡನ್ನೂ ಪಕ್ಕಕ್ಕ ಇಟ್ಟೆವು” ಎಂದು ಜಗ್ಗೇಶ್ ವಿವರಿಸಿದರು.

”ಕೊಟ್ಟ ಸಮಯದಲ್ಲಿ ಸರಿಯಾಗಿ ಸಿನಿಮಾ ಮುಗಿಸುವುದರಲ್ಲಿ ಹಾಗೂ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುವುದರಲ್ಲಿ ಸಂತೋಶ ನಂಬರ್ 1, ಅವನೆಂದರೆ ನನಗೆ ಹೃದಯ ತುಂಬಿಬರುತ್ತದೆ. ಇಂಥಹಾ ತಂತ್ರಜ್ಞರು ಹೆಚ್ಚಾದರೆ ನಿರ್ಮಾಪಕರು ಒಂದರ ಹಿಂದೊಂದು ಸಿನಿಮಾ ಮಾಡುತ್ತಾರೆ. ಮುಂಚೆ ಹಾಗೆಯೇ ಇತ್ತು, ಒಬ್ಬ ನಿರ್ಮಾಪಕ ಯಾವುದಾದರೂ ನಟರೊಡನೆ ಸಿನಿಮಾ ಮಾಡಿದರೆ ಅದರ ಹಿಂದೆಯೇ ಮೂರು ನಾಲ್ಕು ಸಿನಿಮಾ ಮಾಡಿ ಆ ಬಳಿಕ ಬೇರೆ ನಟರ ಬಳಿಗೆ ಹೋಗುತ್ತಿದ್ದರು” ಎಂದು ನೆನಪು ಮಾಡಿಕೊಂಡರು.

”ಹೊಂಬಾಳೆಯವರು ಬಹಳ ದೊಡ್ಡ ಸಿನಿಮಾಗಳನ್ನು ಮಾಡಿದವರು ಕೌಟುಂಬಿಕ ಹಾಸ್ಯ ಕತೆಗೆ ಬಂಡವಾಳ ಹಾಕಿದ್ದಾರಲ್ಲ ಎಂದು ಹಲವರು ಆಶ್ಚರ್ಯ ಪಟ್ಟರು. ನನಗೂ ಭಯ ಇತ್ತು. ಆದರೆ ನನ್ನ ಭಯ ಇದ್ದಿದ್ದು ನನ್ನ ಬಗ್ಗೆ ಅಲ್ಲ. ಸಿನಿಮಾದಲ್ಲಿ ರಾಯರ ಹೆಸರಿದೆ ರಾಘವೇಂದ್ರ ಸ್ಟೋರ್ಸ್ ಎಂದು ಹಾಗಾಗಿ ಈ ಸಿನಿಮಾ ಗೆಲ್ಲಲೇ ಬೇಕಿತ್ತು. ಕೊನೆಗೆ ರಾಯರೇ ಪ್ರೇಕ್ಷಕರ ಪ್ರಭುಗಳ ರೂಪದಲ್ಲಿ ಬಂದು ತಮ್ಮ ಸಿನಿಮಾವನ್ನು ಗೆಲ್ಲಿಸಿಕೊಂಡಿದ್ದಾರೆ” ಎಂದ ಜಗ್ಗೇಶ್, ತಮ್ಮ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಗೆಲ್ಲಲು ಕಾರಣರಾದ ಎಲ್ಲರಿಗೂ ಧನ್ಯವಾದ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು