AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್ 3’ ಯಾವಾಗ ಎಂದು ಯಶ್​ಗೆ ಪ್ರಶ್ನೆ ಮಾಡಿದ ಶುಭ್​ಮನ್​ ಗಿಲ್; ಉತ್ತರಿಸಿದ ರಾಕಿಂಗ್ ಸ್ಟಾರ್

‘ಹೊಂಬಾಳೆ ಫಿಲ್ಮ್ಸ್’ನ ವಿಜಯ್ ಕಿರಗಂದೂರು ಅವರು 3-4 ತಿಂಗಳಲ್ಲಿ ‘ಕೆಜಿಎಫ್ 3’ ಬಗ್ಗೆ ಅಪ್​ಡೇಟ್ ಕೋಡೋದಾಗಿ ಹೇಳಿದ್ದರು. ಕ್ರಿಕೆಟರ್ ಶುಭ್​ಮನ್​ ಗಿಲ್​ಗೆ ‘ಕೆಜಿಎಫ್ 3’ ಸಿನಿಮಾ ಬಗ್ಗೆ ಕುತೂಹಲ ಇದೆ. ಇದಕ್ಕೆ ಯಶ್ ಉತ್ತರ ಕೊಟ್ಟಿದ್ದಾರೆ.

‘ಕೆಜಿಎಫ್ 3’ ಯಾವಾಗ ಎಂದು ಯಶ್​ಗೆ ಪ್ರಶ್ನೆ ಮಾಡಿದ ಶುಭ್​ಮನ್​ ಗಿಲ್; ಉತ್ತರಿಸಿದ ರಾಕಿಂಗ್ ಸ್ಟಾರ್
ಶುಭ್​ಮನ್-ಯಶ್
Follow us
ರಾಜೇಶ್ ದುಗ್ಗುಮನೆ
|

Updated on:Oct 23, 2024 | 7:31 AM

‘ಕೆಜಿಎಫ್ 3 ಸಿನಿಮಾ ಸೆಟ್ಟೋರುದು ಯಾವಾಗ’ ಈ ಪ್ರಶ್ನೆ ಆಗಾಗ ಎಲ್ಲರಲ್ಲೂ ಮೂಡುತ್ತಲೇ ಇರುತ್ತದೆ. ಈಗಾಗಲೇ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ಎರಡು ವರ್ಷಗಳು ಪೂರ್ಣಗೊಂಡಿವೆ. ಇತ್ತೀಚೆಗೆ ಮಾತನಾಡಿದ್ದ ‘ಹೊಂಬಾಳೆ ಫಿಲ್ಮ್ಸ್’ನ ವಿಜಯ್ ಕಿರಗಂದೂರು ಅವರು 3-4 ತಿಂಗಳಲ್ಲಿ ಈ ಬಗ್ಗೆ ಅಪ್​ಡೇಟ್ ಕೋಡೋದಾಗಿ ಹೇಳಿದ್ದರು. ಈಗ ಯಶ್ ಈ ಬಗ್ಗೆ ಮಾತನಾಡಿದ್ದಾರೆ.

‘ದಿ ಹಾಲಿವುಡ್​ ರಿಪೋರ್ಟರ್​ ಇಂಡಿಯಾ’ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಯಶ್ ಮಾತನಾಡಿದ್ದಾರೆ. ಸಂದರ್ಶಕಿ ಅವರು ಕ್ರಿಕೆಟರ್ ಶುಭ್​​ಮನ್ ಗಿಲ್​ ಕೇಳಿದ ಪ್ರಶ್ನೆಯನ್ನು ಯಶ್​ಗೆ ಕೇಳಿದ್ದಾರೆ. ‘ಶುಭ್​ಮನ್​ ಗಿಲ್ ಅವರು ಕೆಜಿಎಫ್ 3 ಯಾವಾಗ ಆಗುತ್ತದೆ ಎಂದು ಕೇಳಿದ್ದಾರೆ’ ಎಂದರು ಸಂದರ್ಶಕಿ. ಇದಕ್ಕೆ ಯಶ್ ಉತ್ತರ ಕೊಟ್ಟಿದ್ದಾರೆ.

‘ಕೆಜಿಎಫ್ 3 ಆಗೇ ಆಗುತ್ತದೆ. ಈ ಎರಡು (ಟಾಕ್ಸಿಕ್ ಹಾಗೂ ರಾಮಾಯಣ) ಸಿನಿಮಾಗಳ ಮೇಲೆ ಗಮನ ಹರಿಸುತ್ತಿದ್ದೇನೆ. ನಮ್ಮ ಬಳಿ ಒಂದು ಐಡಿಯಾ ಇದೆ. ನಾವು ಆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಸರಿಯಾದ ಸಮಯದಲ್ಲಿ ಬರುತ್ತೇವೆ. ಪ್ರೇಕ್ಷಕರು ಸಾಕಷ್ಟು ನೀಡಿದ್ದಾರೆ. ಈ ಸಿನಿಮಾ ಕಲ್ಟ್​. ಹೀಗಾಗಿ ನಮ್ಮ ಬಗ್ಗೆ ಅವರು ಹೆಮ್ಮೆ ಪಡಬೇಕು. ಆ ರೀತಿಯಲ್ಲಿ ಸಿನಿಮಾ ಮಾಡುತ್ತೇವೆ. ಶುಭಮನ್​ ಗಿಲ್ ಸೇರಿ ಅನೇಕ ಕ್ರಿಕೆಟಿಗರು, ಸೆಲೆಬ್ರಿಟಿಗಳು ಈ ಬಗ್ಗೆ ಕೇಳಿದ್ದಾರೆ. ಎಲ್ಲರೂ ರಾಕಿಭಾಯ್ ಬರಬೇಕು ಎಂದು ಕೇಳುತ್ತಿದ್ದಾರೆ’ ಎಂದಿದ್ದಾರೆ ಯಶ್.

ಇದನ್ನೂ ಓದಿ: KGF 3: ‘ಕೆಜಿಎಫ್ 3’ ನಲ್ಲಿ ರಾಕಿಭಾಯ್ ಜೊತೆಗೆ ಮತ್ತೊಬ್ಬ ಪವರ್​ಫುಲ್ ಸ್ಟಾರ್

ಈ ಚಿತ್ರದ ಕಥೆಯ ಬಗ್ಗೆ, ಚಿತ್ರದ ಬಗ್ಗೆ ಯಶ್ ಹಾಗೂ ಪ್ರಶಾಂತ್ ನೀಲ್ ಚರ್ಚೆಗಳನ್ನು ನಡೆಸುತ್ತಾ ಇದ್ದಾರಂತೆ. ಇವರು ಕಥೆಯನ್ನು ಹೇಗೆ ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಬಗ್ಗೆ ಶೀಘ್ರವೇ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:30 am, Wed, 23 October 24

ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್