AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಪಲ್ ಸುನಿ ಹೊಸ ಸಿನಿಮಾ, ಕುವೆಂಪು ಕೃತಿಯಿಂದ ಸ್ಪೂರ್ತಿ

ಕನ್ನಡದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರಾದ ಸಿಂಪಲ್ ಸುನಿ ತಮ್ಮ ಮುಂದಿನ ಸಿನಿಮಾದ ಕತೆಯನ್ನು ಕುವೆಂಪು ಅವರ ಕವಿತೆಯಿಂದ ಸ್ಪೂರ್ತಿ ಪಡೆದು ಬರೆದಿದ್ದಾರೆ. ಈ ಸಿನಿಮಾ ಮೂಲಕ ಹೊಸ ನಟನೊಬ್ಬನನ್ನು ಪರಿಚಯಿಸುವ ಉಮೇದಿನಲ್ಲಿದ್ದಾರೆ.

ಸಿಂಪಲ್ ಸುನಿ ಹೊಸ ಸಿನಿಮಾ, ಕುವೆಂಪು ಕೃತಿಯಿಂದ ಸ್ಪೂರ್ತಿ
ಸಿಂಪಲ್ ಸುನಿ-ಕುವೆಂಪು
ಮಂಜುನಾಥ ಸಿ.
|

Updated on: Jul 02, 2024 | 12:50 PM

Share

ನಿರ್ದೇಶಕ ಸಿಂಪಲ್ ಸುನಿ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಹೀರೋಗಳ ಮಾಸ್ ಇಮೇಜು, ಅದ್ಧೂರಿ ಮೇಕಿಂಗ್ ಅನ್ನು ಮಾತ್ರವೇ ನೆಚ್ಚಿಕೊಳ್ಳದೆ, ಕತೆಗೆ ಒತ್ತು ಕೊಡುವ ಕೆಲವೇ ನಿರ್ದೇಶಕರಲ್ಲಿ ಸಿಂಪಲ್ ಸುನಿ ಸಹ ಒಬ್ಬರು. ಸಿಂಪಲ್ ಸುನಿ ಇದೀಗ ಹೊಸ ಸಿನಿಮಾ ಒಂದಕ್ಕೆ ಕೈ ಹಾಕಿದ್ದಾರೆ. ವಿಶೇಷವೆಂದರೆ ಸಿಂಪಲ್ ಸುನಿ ಅವರ ಹೊಸ ಸಿನಿಮಾಕ್ಕೆ ಸ್ಪೂರ್ತಿ ನೀಡಿರುವುದು ರಾಷ್ಟ್ರಕವಿ ಕುವೆಂಪು ಅವರ ಒಂದು ಕವಿತೆ. ಕುವೆಂಪು ಅವರ ಕವಿತೆಯ ಹೆಸರನ್ನೇ ಸಿಂಪಲ್ ಸುನಿ ಹೊಸ ಸಿನಿಮಾಕ್ಕೂ ಇರಿಸಿದ್ದಾರೆ.

‘ಕನ್ನಡಿಗರಿಗೆ ಸಾಹಿತ್ಯದ ಬಗ್ಗೆ ವಿಶೇಷ ಪ್ರೀತಿ ಇದೆ. ಕನ್ನಡದಲ್ಲಿ ಸಾಹಿತ್ಯ ನಿಧಿಯೇ ಇದೆ. ಅದರಿಂದ ಸ್ಪೂರ್ತಿ ಪಡೆದು ನಾವು ಸಿನಿಮಾ ಕತೆಗಳನ್ನು ಕಟ್ಟಬೇಕಿದೆ’ ಎಂದು ಸಿಂಪಲ್ ಸುನಿ. ಕುವೆಂಪು ಅವರ ಜನಪ್ರಿಯ ಕವಿತೆ ‘ದೇವರು ಋಜು ಮಾಡಿದನು’ ಇಂದ ಸ್ಪೂರ್ತಿ ಪಡೆದು ಹೊಸ ಕತೆ ಬರೆದು ಸಿನಿಮಾ ಮಾಡುತ್ತಿರುವ ಸಿಂಪಲ್ ಸುನಿ, ತಮ್ಮ ಸಿನಿಮಾಕ್ಕೆ ಅದೇ ಹೆಸರನ್ನು ಇರಿಸಿದ್ದಾರೆ.

ಇದನ್ನೂ ಓದಿ:ಒಟಿಟಿ ಬಗ್ಗೆ ಕಹಿ ಸತ್ಯ ಹೇಳಿದ ನಿರ್ದೇಶಕ ಸಿಂಪಲ್ ಸುನಿ

ಕತೆ ಹುಟ್ಟಿದ ರೀತಿಯ ಬಗ್ಗೆ ಮಾತನಾಡಿದ ಸಿಂಪಲ್ ಸುನಿ, ‘ನಾನು ಒಮ್ಮ ಸಂಜೆ ವೇಳೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮನೆಗೆ ಹೋಗಿದ್ದೆ. ಆಗ ಅವರೊಡನೆ ಮಾತನಾಡುತ್ತಾ, ಸಂಜೆ ವೇಳೆ ಇಲ್ಲಿ ವಾತಾವರಣ ಬಹಳ ರಮ್ಯವಾಗಿರುತ್ತದೆ. ಸಂಜೆ ನಮ್ಮ ಮನೆಯ ಮೇಲಿನಿಂದ ಗಿಳಿಗಳ ಹಿಂಡು ಒಟ್ಟಿಗೆ ಹಾರಿ ಹೋಗುತ್ತವೆ’ ಎಂದರಂತೆ. ಆಗ ಸಿಂಪಲ್ ಸುನಿಗೆ ಕುವೆಂಪು ಅವರ ‘ದೇವರು ಋಜು ಮಾಡಿದನು’ ಕವಿತೆ ನೆನಪಾಗಿದೆ. ಎಲ್ಲವೂ ಪೂರ್ವ ನಿರ್ಧರಿತ, ಎಲ್ಲವೂ ದೇವರ ಸೃಷ್ಟಿ ಎಂಬರ್ಥದ ಸಾಲುಗಳು ಅವರ ಮನದಲ್ಲಿ ಅನುರಣಿಸಿ ಅದೇ ಥೀಮ್ ಇಟ್ಟುಕೊಂಡು ಸಿನಿಮಾದ ಕತೆ ತಿದ್ದಿದರಂತೆ ಸುನಿ.

‘ದೇವರು ಋಜು ಮಾಡಿದರು’ ಎಂದು ಸಿನಿಮಾಕ್ಕೆ ಹೆಸರಿಟ್ಟಿದ್ದಲ್ಲದೆ, ಆ ಕವಿತೆಯ ಭಾವದ ಆಧಾರದಲ್ಲಿಯೇ ಕತೆ ರಚಿಸಿಕೊಂಡಿರುವ ಸಿಂಪಲ್ ಸುನಿ, ವಿರಾಜ್ ಹೆಸರಿನ ಹೊಸ ಪ್ರತಿಭೆಯನ್ನು ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಶೀಘ್ರವೇ ಪ್ರಾರಂಭ ಆಗಲಿದೆ.

ಕನ್ನಡ ಸಿನಿಮಾ ಪ್ರೇಕ್ಷಕರ ಬಗ್ಗೆಯೂ ಮಾತನಾಡಿರುವ ಸುನಿ, ‘ಕೋವಿಡ್​ಗೆ ಹಿಂದೆ ಸಾಧಾರಣ ಸಿನಿಮಾಗಳನ್ನು ಸಹ ಪ್ರೇಕ್ಷಕ ಒಪ್ಪಿಕೊಂಡು ಬಿಡುತ್ತಿದ್ದ, ಕೋವಿಡ್ ಬಳಿಕ ‘ಕೆಜಿಎಫ್’, ‘ಕಾಂತಾರ’ ಇನ್ನಿತರೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೋಡಿ ಈಗ ಅತ್ಯುತ್ತಮವಾದ ಸಿನಿಮಾಗಳನ್ನಷ್ಟೆ ಪ್ರೇಕ್ಷಕ ಗೆಲ್ಲಿಸುತ್ತಿದ್ದಾನೆ. ಅದ್ಭುತವಾದ ದೃಶ್ಯಗಳು, ಶಬ್ದ ವಿನ್ಯಾಸ ಎಲ್ಲವೂ ಚೆನ್ನಾಗಿದ್ದರೆ ಮಾತ್ರ ಪ್ರೇಕ್ಷಕ ಚಿತ್ರಮಂದಿರಕ್ಕೆ ಬರುತ್ತಾರೆ’ ಎಂದಿದ್ದಾರೆ ಸುನಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ