AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನಕ್ಕೆ ಮೂರು ಪಟ್ಟಾಯ್ತು ‘ಸು ಫ್ರಮ್ ಸೋ’ ಶೋ ಸಂಖ್ಯೆ; ಹೊಸ ಸ್ಟ್ರೆಟಜಿ ಮಾಡಿ ಗೆದ್ದ ರಾಜ್ ಬಿ ಶೆಟ್ಟಿ

‘ಸು ಫ್ರಮ್ ಸೋ’ ಚಿತ್ರದ ನಿರ್ಮಾಪಕ ರಾಜ್ ಬಿ ಶೆಟ್ಟಿ ಅವರು ಸಾಂಪ್ರದಾಯಿಕ ಪ್ರಚಾರದಿಂದ ದೂರ ಉಳಿದಿದ್ದಾರೆ. ಚಿತ್ರವನ್ನು ಮುಂಚಿತವಾಗಿ ಪ್ರೇಕ್ಷಕರಿಗೆ ತೋರಿಸುವ ಮೂಲಕ ಅಭೂತಪೂರ್ವ ಯಶಸ್ಸು ಕಂಡಿದ್ದಾರೆ. ಚಿತ್ರದ ಬಾಯಿ ಮಾತಿನ ಪ್ರಚಾರವೇ ಟಿಕೆಟ್ ಮಾರಾಟ ಹೆಚ್ಚಳಕ್ಕೆ ಕಾರಣ. ಪವನ್ ಕಲ್ಯಾಣ್ ಅವರ ‘ಹರಿ ಹರ ವೀರ ಮಲ್ಲು’ ಚಿತ್ರದ ಜೊತೆ ಬಿಡುಗಡೆಯಾದರೂ, ‘ಸು ಫ್ರಮ್ ಸೋ’ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ.

ಒಂದೇ ದಿನಕ್ಕೆ ಮೂರು ಪಟ್ಟಾಯ್ತು ‘ಸು ಫ್ರಮ್ ಸೋ’ ಶೋ ಸಂಖ್ಯೆ; ಹೊಸ ಸ್ಟ್ರೆಟಜಿ ಮಾಡಿ ಗೆದ್ದ ರಾಜ್ ಬಿ ಶೆಟ್ಟಿ
ಸು ಫ್ರಮ್ ಸೋ
ರಾಜೇಶ್ ದುಗ್ಗುಮನೆ
|

Updated on: Jul 26, 2025 | 12:08 PM

Share

ಸಾಮಾನ್ಯವಾಗಿ ಸಿನಿಮಾ ರಿಲೀಸ್ ಬಂತು ಎಂದರೆ ಚಿತ್ರ ತಂಡದವರು ಸಂದರ್ಶನ ನೀಡಿತ್ತಾರೆ. ಸಿನಿಮಾ ಪೋಸ್ಟರ್​ಗಳನ್ನು ರಸ್ತೆಗಳ ಬದಿಯಲ್ಲಿರೋ ಗೋಡೆಗೆ ಅಂಟಿಸುವ ಕೆಲಸ ಮಾಡುತ್ತಾರೆ. ಸಿನಿಮಾ ಜನರ ತಲುಪಲು ಏನೆಲ್ಲ ಬೇಕೋ ಅದೆಲ್ಲ ಪ್ರಯತ್ನವನ್ನು ಮಾಡುತ್ತಾರೆ. ಇದು ಮೊದಲಿನಿಂದಲೂ ನಡೆದುಕೊಂಡ ಪದ್ಧತಿ. ಹಾಗಂತ ಇದು ತಪ್ಪು ಕೂಡ ಅಲ್ಲ. ‘ಸು ಫ್ರಮ್ ಸೋ’ ನಿರ್ಮಾಪಕ ರಾಜ್​ ಬಿ ಶೆಟ್ಟಿ ಒಂದು ಹೊಸ ಪ್ರಯತ್ನ ಮಾಡಿ ಗೆದ್ದಿದ್ದಾರೆ. ‘ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರೇ ಬರುತ್ತಿಲ್ಲ’ ಎಂಬ ಮಾತಿನಿಂದ ‘ಚಿತ್ರಕ್ಕೆ ಟಿಕೇಟ್​ಗಳೇ ಸಿಗುತ್ತಿಲ್ಲ, ಎಲ್ಲಾ ಹೌಸ್ ಫುಲ್ ಆಗಿದೆ’ ಎಂಬ ಮಾತು ಬರುವಂತೆ ಮಾಡಿದ್ದಾರೆ. ‘ಸು ಫ್ರಮ್ ಸೋ’ ಸಿನಿಮಾ (Su From So Movie) ಗೆಲುವಿನ ಬಳಿಕ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

ಶೋ ತ್ರಿಬಲ್ ಆಯ್ತು..

ಕನ್ನಡ ಸಿನಿಮಾಗಳಿಗೆ ಶೋ ಸಿಗಲ್ಲ, ಪರ ಭಾಷೆಯವರು ಬಂದು ನಮ್ಮ ಶೋ ಕಸಿದುಕೊಳ್ಳುತ್ತಾರೆ ಎಂಬಿತ್ಯಾದಿ ಆರೋಪಗಳಿವೆ. ಆದರೆ, ‘ಸು ಫ್ರಮ್ ಸೋ’ ವಿಚಾರದಲ್ಲಿ ಅದು ಉಲ್ಟಾ ಆಗಿದೆ. ‘ದೊಡ್ಡ ಸಿನಿಮಾಗಳ ಮಧ್ಯೆ ಬರ್ತಿದೀವಿ ಎಂದಾಗ ಅನೇಕರು ಬೇಡ ಎಂದು ಸಲಹೆ ನೀಡಿದರು. ಆದರೆ, ನಾನು ಒಂದು ಸಂದೇಶ ಕೊಡಬೇಕಿತ್ತು. ಹೀಗಾಗಿ, ರಿಸ್ಕ್ ತೆಗೆದುಕೊಂಡು ಜುಲೈ 25ಕ್ಕೆ ಬಂದೆ. ಸಂದರ್ಶನ ಕೊಡಲು ಟಿವಿ ಮುಂದೆ ಕೂರಲ್ಲ, ಪೋಸ್ಟರ್ ಅಂಟಿಸಲ್ಲ ಎಂದು ಮೊದಲೇ ನಿರ್ಧರಿಸಿದ್ದೆ. ಬೇರೆ ರೀತಿ ಪ್ರಮೋಟ್ ಮಾಡಬೇಕು ಎಂದು ಅಂದುಕೊಂಡಿದ್ದೆ. ಇದು ವರ್ಕ್ ಆಗುತ್ತದೆ ಎನ್ನುವ ಯಾವುದೇ ಗ್ಯಾರಂಟಿ ಇರಲಿಲ್ಲ. ಏಕೆಂದರೆ ಹಿಂದೆ ಯಾರೂ ಮಾಡಿರಲಿಲ್ಲ. ಮೊದಲ ದಿನ ಬೆಂಗಳೂರಿನಲ್ಲಿ 78 ಶೋ ಕೊಡಲಾಗಿತ್ತು. ಎಡನೇ ದಿನಕ್ಕೆ ಅದು 210 ಶೋಗಳಾದವು’ ಎಂದು ಮಾಹಿತಿ ನೀಡಿದ್ದಾರೆ ರಾಜ್. ಈ ಮೂಲಕ ಒಂದೇ ದಿನಕ್ಕೆ ಶೋ ಮೂರು ಪಟ್ಟಾಗಿದೆ.

ಪ್ರಚಾರಕ್ಕೆ ಹೊಸ ತಂತ್ರ

ರಾಜ್ ಬಿ ಶೆಟ್ಟಿ ಅವರು ಈ ಬಾರಿ ಮಾಡಿದ ಹೊಸ ತಂತ್ರ ಎಂದರೆ ಸಿನಿಮಾ ರಿಲೀಸ್​ಗೆ ನಾಲ್ಕೈದು ದಿನ ಇರುವಾಗಲೇ ಜನರಿಗೆ ಸಿನಿಮಾ ತೋರಿಸಿದ್ದಾರೆ. ಸಿನಿಮಾ ನೋಡುವಾಗ ಜನರ ಭಾವನೆಯನ್ನು ಕ್ಯಾಪ್ಚರ್ ಮಾಡಿ ಅದನ್ನು ಜನರ ಮುಂದಿಡುವ ಕೆಲಸ ಮಾಡಿದ್ದಾರೆ. ಈ ತಂತ್ರ ಕೆಲಸ ಮಾಡಿದೆ. ಸಿನಿಮಾಗೆ ಒಳ್ಳೆಯ ರೀತಿಯಲ್ಲಿ ಬಾಯ್ಮಾತಿನ ಪ್ರಚಾರ ನೀಡಿದ್ದಾರೆ.

ಇದನ್ನೂ ಓದಿ
Image
ಕಡಿಮೆ ಶೋ ಕೊಟ್ಟರೂ ಸು ಫ್ರಮ್ ಸೋ ಆರ್ಭಟದ ಕಲೆಕ್ಷನ್; ಬಾಕ್ಸ್ ಆಫೀಸ್ ಉಡೀಸ್
Image
ಹರಿ ಹರ ವೀರ ಮಲ್ಲು ಕಲೆಕ್ಷನ್; ಮೊದಲ ದಿನ ಭರ್ಜರಿ ಎರಡನೇ ದಿನ ಒಂದಂಕಿ ಗಳಿಕೆ
Image
Su from So Review: ನಗುವಿನ ಅಲೆಯಲ್ಲಿ ತೇಲಿಸೋ ಸುಲೋಚನಾ
Image
Exclusive: ಅಳಿಯ ಚಂದು ಚಿತ್ರಕ್ಕೆ ವಿಲನ್ ಆದ ದರ್ಶನ್; ದಿನಕರ್ ನಿರ್ದೇಶನ

73 ಸಾವಿರ ಟಿಕೆಟ್

‘ನಾನು ಟೋಬಿ ಸಿನಿಮಾಗೆ ತುಂಬಾನೇ ಪ್ರಚಾರ ಮಾಡಿದ್ದೆ. ಅದಕ್ಕೆ ಮೊದಲ ದಿನ 43 ಸಾವಿರ ಟಿಕೆಟ್ ಮಾರಾಟ ಆಗಿತ್ತು. ಸು ಫ್ರಮ್ ಸೋಗೆ ಮೊದಲ ದಿನ 73 ಸಾವಿರ ಟಿಕೆಟ್ ಮಾರಾಟ ಆಗಿದೆ. ಜನರಿಂದ ಇನ್ನೂ ಹೆಚ್ಚು ಏನನ್ನು ಕೇಳಲು ಸಾಧ್ಯ’ ಎಂದು ಸಂತಸದ ಧ್ವನಿಯಲ್ಲಿ ರಾಜ್ ಮಾತನಾಡಿದರು.

ಇದನ್ನೂ ಓದಿ: ಬುಕಿಂಗ್​ನಲ್ಲಿ ಪವನ್ ಕಲ್ಯಾಣ್ ಚಿತ್ರವನ್ನೂ ಬೀಟ್ ಮಾಡಿದ ‘ಸು ಫ್ರಮ್ ಸೋ’

ಪವನ್ ಕಲ್ಯಾಣ್ ಅವರ ‘ಹರಿ ಹರ ವೀರ ಮಲ್ಲು’ ಸಿನಿಮಾ ಕೂಡ ಈ ವಾರ ರಿಲೀಸ್ ಆಗಿದೆ. ಅನೇಕ ಕಡೆಗಳಲ್ಲಿ ಪವನ್ ಸಿನಿಮಾ ತೆಗೆದು ‘ಸು ಫ್ರಮ್ ಸೋ’ ಶೋ ಹಾಕಲಾಗಿದೆ. ‘ಅನೇಕ ಕಡೆಗಳಲ್ಲಿ ಮೊದಲ ದಿನ ನಮಗೆ ಒಂದು ಶೋ ಮಾತ್ರ ಕೊಡಲಾಗಿತ್ತು. ಆ ಬಳಿಕ ಅದು ನೇರವಾಗಿ ನಾಲ್ಕಕ್ಕೆ ಏರಿಕೆ ಆಗಿದೆ. ಶೋ ನೀಡಿ ಎಂದು ನಾವು ಕೇಳುತ್ತಿಲ್ಲ. ಜನರ ಬೇಡಿಕೆಗೆ ತಕ್ಕಂತೆ ಅವರೇ ಶೋ ಸಂಖ್ಯೆ ಹೆಚ್ಚಿಸುತ್ತಿದ್ದಾರೆ’ ಎಂದಿದ್ದಾರೆ ರಾಜ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು