AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ನಿರ್ಮಾಣಕ್ಕಿಳಿದ ಬೆಂಕಿ ತನಿಷಾ ಕುಪ್ಪಂಡ, ಕೋಮಲ್ ನಾಯಕ

ಬಿಗ್​ಬಾಸ್​ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ನಟಿ ತನಿಷಾ ಕುಪ್ಪಂಡ ನಟಿಯಾಗಿರುವ ಜೊತೆಗೆ ಉದ್ಯಮಿಯೂ ಹೌದು. ಈಗಾಗಲೇ ಹೋಟೆಲ್ ಸೇರಿದಂತೆ ಇನ್ನೂ ಕೆಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿ ಯಶಸ್ಸು ಗಳಿಸಿರುವ ತನಿಷಾ ಇದೀಗ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದು ಸಿನಿಮಾ ನಿರ್ಮಿಸುತ್ತಿದ್ದಾರೆ.

ಸಿನಿಮಾ ನಿರ್ಮಾಣಕ್ಕಿಳಿದ ಬೆಂಕಿ ತನಿಷಾ ಕುಪ್ಪಂಡ, ಕೋಮಲ್ ನಾಯಕ
ಮಂಜುನಾಥ ಸಿ.
|

Updated on: Sep 08, 2024 | 11:31 AM

Share

ನಟಿ ತಮಿಷಾ ಕುಪ್ಪಂಡ, ಬಿಗ್​ಬಾಸ್​ ರಿಯಾಲಿಟಿ ಶೋಗೆ ಬಂದ ಬಳಿಕ ದೊಡ್ಡ ಪ್ರಮಾಣದ ಜನಪ್ರಿಯತೆ ಹೆಚ್ಚಿಸಿಕೊಂಡರು. ಬಿಗ್​ಬಾಸ್​ನಲ್ಲಿ ಉತ್ತಮವಾಗಿ ಆಡಿದ್ದ ತನಿಷಾ ಕುಪ್ಪಂಡ ವೀಕ್ಷಕರ ಸೆಳೆಯಲು ಯಶಸ್ವಿಯಾದರು. ಫಿನಾಲೆಗೆ ಕೆಲವೇ ದಿನಗಳಿಗೆ ಮುಂಚಿತವಾಗಿ ಆಟದಿಂದ ಹೊರಗೆ ಹೋದ ತನಿಷಾ, ಬಿಗ್​ಬಾಸ್​ನಿಂದ ದೊರೆತ ಜನಪ್ರಿಯತೆಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳುತ್ತಿದ್ದಾರೆ. ನಟಿಯ ಜೊತೆಗೆ ಉದ್ಯಮಿಯೂ ಆಗಿರುವ ತನಿಷಾ ಕುಪ್ಪಂಡ, ಬಿಗ್​ಬಾಸ್​ನಿಂದ ಹೊರಬಂದ ಬಳಿಕ ಬೇರೆ ಬೇರೆ ಉದ್ಯಮಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೋಟೆಲ್, ಆಭರಣ ಮಳಿಗೆಗಳನ್ನು ಸ್ಥಾಪಿಸಿದ್ದ ತನಿಷಾ ಈಗ ಒಮ್ಮೆಲೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ತನಿಷಾ ಕುಪ್ಪಂಡ ತಮ್ಮದೇ ಹೆಸರಿನಲ್ಲಿ ‘ಕುಪ್ಪಂಡ ಪ್ರೊಡಕ್ಷನ್ಸ್’ ಪ್ರಾರಂಭ ಮಾಡಿದ್ದಾರೆ. ಮೊದಲ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು ಸಿನಿಮಾದ ಟೀಸರ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ. ಟೀಸರ್ ನೋಡಿದವರು ಗುಣಮಟ್ಟದ ಟೀಸರ್ ಎಂದು ಕೊಂಡಾಡಿದ್ದಾರೆ ಮಾತ್ರವಲ್ಲದೆ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ತನಿಷಾ ನಿರ್ಮಾಣ ಮಾಡುತ್ತಿರುವ ಸಿನಿಮಾದ ಹೆಸರು ‘ಕೋಣ’.

ಇದನ್ನೂ ಓದಿ:ಬಿಗ್​ ಬಾಸ್​ ಬೆಡಗಿ ಪ್ರಿಯಾಂಕಾ ತಿಮ್ಮೇಶ್​ಗೆ ಕೋಮಲ್​ ಜತೆ ನಟಿಸೋ ಅವಕಾಶ

‘ಕೋಣ’ ಸಿನಿಮಾನಲ್ಲಿ ಕೋಮಲ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ಗಮನ ಸೆಳೆಯುತ್ತಿದೆ. ಟೀಸರ್​ನಲ್ಲಿ ತೋರಿಸಿರುವಂತೆ ಕೋಣವೊಂದು ತಪ್ಪಿಸಿಕೊಂಡಿದೆ, ಅದನ್ನು ಹಿಡಿಯಲು ಊರ ಜನ ಭಾರಿ ಹಗ್ಗ, ಪಂಜುಗಳನ್ನು ಹಿಡಿದುಕೊಂಡು ಕೋಣದ ಹಿಂದೆ ಬಿದ್ದಿದ್ದಾರೆ. ಆದರೆ ಕೋಮಲ್ ಕೈಯಲ್ಲಿ ಮಾತ್ರ ಯಾವುದೋ ರೋಬೋಟ್ ಒಂದಿದೆ. ರೋಬೋಟ್​ ಮೈತುಂಬಾ ಲೈಟುಗಳಿದ್ದು, ಒಂದೇ ಸಮನೆ ಮಿನುಗುತ್ತಿದೆ. ಊರ ಜನರೆಲ್ಲ ಪಂಜು, ಹಗ್ಗ ಹಿಡಿದು ತಪ್ಪಿಸಿಕೊಂಡಿರುವ ಕೋಣದ ಹಿಂದೆ ಬಿದ್ದಿದ್ದರೆ ಕೋಮಲ್ ಆ ಪುಟ್ಟ ರೋಬೋಟ್ ಹಿಡಿದುಕೊಂಡು ಕೋಣದ ಹಿಂದೆ ಓಡುತ್ತಿದ್ದಾರೆ.

ಆ ಕೋಣ ತಪ್ಪಿಸಿಕೊಂಡಿದ್ದು ಏಕೆ? ಊರ ಜನರಿಗೆ ಆ ಕೋಣ ಏಕೆ ಬೇಕಾಗಿದೆ? ಕೋಮಲ್ ಕೈಯಲ್ಲಿರುವ ರೋಬೋಟ್ ಮಾದರಿಯ ವಸ್ತು ಯಾವುದು? ಅದಕ್ಕೂ ಕೋಣಕ್ಕೂ ಏನು ಲಿಂಕು, ಕೋಮಲ್​ಗೂ ರೋಬೋಟ್​ಗೆ ಇರುವ ಲಿಂಕ್ ಏನು? ಹೀಗೆ ಹಲವು ಪ್ರಶ್ನೆಗಳು ಟೀಸರ್ ನೋಡಿದರೆ ಏಳುತ್ತಿವೆ. ಟೀಸರ್ ಗುಣಮಟ್ಟದಿಂದ ಕೂಡಿದೆ. ಚಿತ್ರತಂಡದ ಪರಿಶ್ರಮ ಮತ್ತು ಶ್ರದ್ಧೆ ಟೀಸರ್​ನಿಂದ ತಿಳಿದು ಬರುತ್ತಿದೆ. ಸಿನಿಮಾದ ಮುಹೂರ್ತ ದೀಪಾವಳಿಗೆ ನಡೆಯಲಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ.

‘ಕೋಣ’ ಸಿನಿಮಾವನ್ನು ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ಇದು ಮೊದಲ ಸಿನಿಮಾ. ‘ಕೋಣ’ ಸಿನಿಮಾ ಬಗ್ಗೆ ಮಾತನಾಡಿರುವ ಕೋಮಲ್, ‘ಇದು ಬಹಳ ವಿಶಿಷ್ಟವಾದ ಕತೆ ಹೊಂದಿರುವ ಸಿನಿಮಾ, ನನ್ನದು ಒಂದು ರೀತಿ ಚಾರ್ಲಿ ಚಾಪ್ಲಿನ್ ರೀತಿಯ ಪಾತ್ರ. ಕತೆಯಲ್ಲಿ ಹಲವು ವಿಷಯಗಳು ಇವೆ. ಕೋಣ, ಭವಿಷ್ಯ ಹೇಳುವ ರೋಬೋಟ್, ಮೂಡನಂಭಿಕೆ, ನಂಬಿಕೆ ಇನ್ನೂ ಹಲವು ಅಂಶಗಳು ಈ ಸಿನಿಮಾದಲ್ಲಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ