ಸಿನಿಮಾ ನಿರ್ಮಾಣಕ್ಕಿಳಿದ ಬೆಂಕಿ ತನಿಷಾ ಕುಪ್ಪಂಡ, ಕೋಮಲ್ ನಾಯಕ

ಬಿಗ್​ಬಾಸ್​ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ನಟಿ ತನಿಷಾ ಕುಪ್ಪಂಡ ನಟಿಯಾಗಿರುವ ಜೊತೆಗೆ ಉದ್ಯಮಿಯೂ ಹೌದು. ಈಗಾಗಲೇ ಹೋಟೆಲ್ ಸೇರಿದಂತೆ ಇನ್ನೂ ಕೆಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿ ಯಶಸ್ಸು ಗಳಿಸಿರುವ ತನಿಷಾ ಇದೀಗ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದು ಸಿನಿಮಾ ನಿರ್ಮಿಸುತ್ತಿದ್ದಾರೆ.

ಸಿನಿಮಾ ನಿರ್ಮಾಣಕ್ಕಿಳಿದ ಬೆಂಕಿ ತನಿಷಾ ಕುಪ್ಪಂಡ, ಕೋಮಲ್ ನಾಯಕ
Follow us
|

Updated on: Sep 08, 2024 | 11:31 AM

ನಟಿ ತಮಿಷಾ ಕುಪ್ಪಂಡ, ಬಿಗ್​ಬಾಸ್​ ರಿಯಾಲಿಟಿ ಶೋಗೆ ಬಂದ ಬಳಿಕ ದೊಡ್ಡ ಪ್ರಮಾಣದ ಜನಪ್ರಿಯತೆ ಹೆಚ್ಚಿಸಿಕೊಂಡರು. ಬಿಗ್​ಬಾಸ್​ನಲ್ಲಿ ಉತ್ತಮವಾಗಿ ಆಡಿದ್ದ ತನಿಷಾ ಕುಪ್ಪಂಡ ವೀಕ್ಷಕರ ಸೆಳೆಯಲು ಯಶಸ್ವಿಯಾದರು. ಫಿನಾಲೆಗೆ ಕೆಲವೇ ದಿನಗಳಿಗೆ ಮುಂಚಿತವಾಗಿ ಆಟದಿಂದ ಹೊರಗೆ ಹೋದ ತನಿಷಾ, ಬಿಗ್​ಬಾಸ್​ನಿಂದ ದೊರೆತ ಜನಪ್ರಿಯತೆಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳುತ್ತಿದ್ದಾರೆ. ನಟಿಯ ಜೊತೆಗೆ ಉದ್ಯಮಿಯೂ ಆಗಿರುವ ತನಿಷಾ ಕುಪ್ಪಂಡ, ಬಿಗ್​ಬಾಸ್​ನಿಂದ ಹೊರಬಂದ ಬಳಿಕ ಬೇರೆ ಬೇರೆ ಉದ್ಯಮಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೋಟೆಲ್, ಆಭರಣ ಮಳಿಗೆಗಳನ್ನು ಸ್ಥಾಪಿಸಿದ್ದ ತನಿಷಾ ಈಗ ಒಮ್ಮೆಲೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ತನಿಷಾ ಕುಪ್ಪಂಡ ತಮ್ಮದೇ ಹೆಸರಿನಲ್ಲಿ ‘ಕುಪ್ಪಂಡ ಪ್ರೊಡಕ್ಷನ್ಸ್’ ಪ್ರಾರಂಭ ಮಾಡಿದ್ದಾರೆ. ಮೊದಲ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು ಸಿನಿಮಾದ ಟೀಸರ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ. ಟೀಸರ್ ನೋಡಿದವರು ಗುಣಮಟ್ಟದ ಟೀಸರ್ ಎಂದು ಕೊಂಡಾಡಿದ್ದಾರೆ ಮಾತ್ರವಲ್ಲದೆ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ತನಿಷಾ ನಿರ್ಮಾಣ ಮಾಡುತ್ತಿರುವ ಸಿನಿಮಾದ ಹೆಸರು ‘ಕೋಣ’.

ಇದನ್ನೂ ಓದಿ:ಬಿಗ್​ ಬಾಸ್​ ಬೆಡಗಿ ಪ್ರಿಯಾಂಕಾ ತಿಮ್ಮೇಶ್​ಗೆ ಕೋಮಲ್​ ಜತೆ ನಟಿಸೋ ಅವಕಾಶ

‘ಕೋಣ’ ಸಿನಿಮಾನಲ್ಲಿ ಕೋಮಲ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ಗಮನ ಸೆಳೆಯುತ್ತಿದೆ. ಟೀಸರ್​ನಲ್ಲಿ ತೋರಿಸಿರುವಂತೆ ಕೋಣವೊಂದು ತಪ್ಪಿಸಿಕೊಂಡಿದೆ, ಅದನ್ನು ಹಿಡಿಯಲು ಊರ ಜನ ಭಾರಿ ಹಗ್ಗ, ಪಂಜುಗಳನ್ನು ಹಿಡಿದುಕೊಂಡು ಕೋಣದ ಹಿಂದೆ ಬಿದ್ದಿದ್ದಾರೆ. ಆದರೆ ಕೋಮಲ್ ಕೈಯಲ್ಲಿ ಮಾತ್ರ ಯಾವುದೋ ರೋಬೋಟ್ ಒಂದಿದೆ. ರೋಬೋಟ್​ ಮೈತುಂಬಾ ಲೈಟುಗಳಿದ್ದು, ಒಂದೇ ಸಮನೆ ಮಿನುಗುತ್ತಿದೆ. ಊರ ಜನರೆಲ್ಲ ಪಂಜು, ಹಗ್ಗ ಹಿಡಿದು ತಪ್ಪಿಸಿಕೊಂಡಿರುವ ಕೋಣದ ಹಿಂದೆ ಬಿದ್ದಿದ್ದರೆ ಕೋಮಲ್ ಆ ಪುಟ್ಟ ರೋಬೋಟ್ ಹಿಡಿದುಕೊಂಡು ಕೋಣದ ಹಿಂದೆ ಓಡುತ್ತಿದ್ದಾರೆ.

ಆ ಕೋಣ ತಪ್ಪಿಸಿಕೊಂಡಿದ್ದು ಏಕೆ? ಊರ ಜನರಿಗೆ ಆ ಕೋಣ ಏಕೆ ಬೇಕಾಗಿದೆ? ಕೋಮಲ್ ಕೈಯಲ್ಲಿರುವ ರೋಬೋಟ್ ಮಾದರಿಯ ವಸ್ತು ಯಾವುದು? ಅದಕ್ಕೂ ಕೋಣಕ್ಕೂ ಏನು ಲಿಂಕು, ಕೋಮಲ್​ಗೂ ರೋಬೋಟ್​ಗೆ ಇರುವ ಲಿಂಕ್ ಏನು? ಹೀಗೆ ಹಲವು ಪ್ರಶ್ನೆಗಳು ಟೀಸರ್ ನೋಡಿದರೆ ಏಳುತ್ತಿವೆ. ಟೀಸರ್ ಗುಣಮಟ್ಟದಿಂದ ಕೂಡಿದೆ. ಚಿತ್ರತಂಡದ ಪರಿಶ್ರಮ ಮತ್ತು ಶ್ರದ್ಧೆ ಟೀಸರ್​ನಿಂದ ತಿಳಿದು ಬರುತ್ತಿದೆ. ಸಿನಿಮಾದ ಮುಹೂರ್ತ ದೀಪಾವಳಿಗೆ ನಡೆಯಲಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ.

‘ಕೋಣ’ ಸಿನಿಮಾವನ್ನು ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ಇದು ಮೊದಲ ಸಿನಿಮಾ. ‘ಕೋಣ’ ಸಿನಿಮಾ ಬಗ್ಗೆ ಮಾತನಾಡಿರುವ ಕೋಮಲ್, ‘ಇದು ಬಹಳ ವಿಶಿಷ್ಟವಾದ ಕತೆ ಹೊಂದಿರುವ ಸಿನಿಮಾ, ನನ್ನದು ಒಂದು ರೀತಿ ಚಾರ್ಲಿ ಚಾಪ್ಲಿನ್ ರೀತಿಯ ಪಾತ್ರ. ಕತೆಯಲ್ಲಿ ಹಲವು ವಿಷಯಗಳು ಇವೆ. ಕೋಣ, ಭವಿಷ್ಯ ಹೇಳುವ ರೋಬೋಟ್, ಮೂಡನಂಭಿಕೆ, ನಂಬಿಕೆ ಇನ್ನೂ ಹಲವು ಅಂಶಗಳು ಈ ಸಿನಿಮಾದಲ್ಲಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು