AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vasanthi Nalidaga: ಮತ್ತೊಂದು ವಾರಕ್ಕೆ ಕಾಲಿಟ್ಟ ಯೂಥ್​ಫುಲ್​ ಚಿತ್ರ ‘ವಾಸಂತಿ ನಲಿದಾಗ’

New Kannada Movie: ‘ವಾಸಂತಿ ನಲಿದಾಗ’ ಸಿನಿಮಾಗೆ ಹೊಸ ನಟ ರೋಹಿತ್​ ಶ್ರೀಧರ್​ ಹೀರೋ. ಅವರ ಜೊತೆ ಸಾಧು ಕೋಕಿಲ, ಸುಧಾರಾಣಿ, ಸಾಯಿ ಕುಮಾರ್​ ಅವರಂತಹ ಅನುಭವಿ ಕಲಾವಿದರು ನಟಿಸಿದ್ದಾರೆ.

Vasanthi Nalidaga: ಮತ್ತೊಂದು ವಾರಕ್ಕೆ ಕಾಲಿಟ್ಟ ಯೂಥ್​ಫುಲ್​ ಚಿತ್ರ ‘ವಾಸಂತಿ ನಲಿದಾಗ’
‘ವಾಸಂತಿ ನಲಿದಾಗ’ ಸಿನಿಮಾ
TV9 Web
| Updated By: ಮದನ್​ ಕುಮಾರ್​|

Updated on:Dec 11, 2022 | 4:09 PM

Share

ವರ್ಷದ ಈ ಕೊನೇ ತಿಂಗಳಿನಲ್ಲಿ ಹತ್ತು ಹಲವು ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ತೆರೆಕಾಣುತ್ತಿವೆ. ಕಳೆದ ವಾರ ಕನ್ನಡದಲ್ಲೇ 10ಕ್ಕೂ ಹೆಚ್ಚು ಸಿನಿಮಾಗಳು (Kannada Movies) ರಿಲೀಸ್​ ಆದವು. ಅದರ ಜೊತೆ ಪರಭಾಷೆ ಚಿತ್ರಗಳ ಪೈಪೋಟಿಯೂ ಜೋರಾಗಿದೆ. ಈ ಸಂದರ್ಭದಲ್ಲಿ ಹೊಸ ಕಲಾವಿದರ ಸಿನಿಮಾ ಒಂದು ವಾರ ಪೂರೈಸಿ ಮುನ್ನುಗ್ಗುವುದು ತಮಾಷೆಯೇ ಅಲ್ಲ. ಡಿಸೆಂಬರ್​ 2ರಂದು ತೆರೆಕಂಡ ‘ವಾಸಂತಿ ನಲಿದಾಗ’ (Vasanthi Nalidag) ಚಿತ್ರ ಎರಡನೇ ವೀಕೆಂಡ್​ನಲ್ಲೂ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಮೂರನೇ ವಾರದಲ್ಲಿ ಇನ್ನಷ್ಟು ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುವ ಭರವಸೆ ಹೊಂದಿದೆ ಈ ಚಿತ್ರತಂಡ. ಈ ಸಿನಿಮಾದಲ್ಲಿನ ಒಂದಷ್ಟು ಅಂಶಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತಿವೆ.

ಚಿತ್ರರಂಗವೆಂದರೆ ಕೇವಲ ಬಿಗ್​ ಬಜೆಟ್​ ಸಿನಿಮಾಗಳ ಪ್ರಾಬಲ್ಯ ಮಾತ್ರವಲ್ಲ. ಹೊಸಬರ ಪ್ರಯತ್ನಗಳಿಗೂ ಇಲ್ಲಿ ಜಾಗವಿದೆ. ಕಂಟೆಂಟ್​ ಇಷ್ಟವಾದರೆ ಜನರು ಇಂಥ ಸಿನಿಮಾಗಳಿಗೆ ಖಂಡಿತಾ ಬೆಂಬಲ ನೀಡುತ್ತಾರೆ. ಏನಾದರೂ ಒಂದಷ್ಟು ಹೊಸತನ ಇದ್ದರೆ ಪ್ಲಸ್​ ಪಾಯಿಂಟ್​. ಪಕ್ಕಾ ಕಾಲೇಜು ಕಹಾನಿಯನ್ನು ಇಟ್ಟುಕೊಂಡು ಈ ಸಿನಿಮಾ ಮೂಡಿಬಂದಿದೆ. ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಮೊದಲ ಕ್ರಶ್​, ಮೊದಲ ಪ್ರೀತಿ, ಎಕ್ಸಾಂ ಟೆನ್ಷನ್​, ತರಲೆ-ತಮಾಷೆ ಸೇರಿದಂತೆ ಹತ್ತಾರು ವಿಚಾರಗಳು ಈ ಸಿನಿಮಾದಲ್ಲಿ ಮನರಂಜನೆ ನೀಡುತ್ತಿವೆ.

ಇದನ್ನೂ ಓದಿ: New Movies: ‘ಬಾಂಡ್​ ರವಿ’, ‘ವಿಜಯಾನಂದ’ ಜತೆ ರಿಲೀಸ್​ ಆಗ್ತಿವೆ ಸಿಕ್ಕಾಪಟ್ಟೆ ಸಿನಿಮಾ; ಈ ವಾರ 18ಕ್ಕೂ ಹೆಚ್ಚು ಚಿತ್ರ

ಬಣ್ಣದ ಲೋಕಕ್ಕೆ ಕಾಲಿಡುವ ಹೊಸಬರಿಗೆ ಹಳೆಯ ಕಲಾವಿದರು ಸಾಥ್​ ನೀಡಿದರೆ ಕಲಿಯಲು ಸಾಕಷ್ಟು ವಿಷಯ ಸಿಗುತ್ತದೆ. ‘ವಾಸಂತಿ ನಲಿದಾಗ’ ಸಿನಿಮಾದಲ್ಲಿ ಹೊಸ ನಟ ರೋಹಿತ್​ ಶ್ರೀಧರ್​ ಹೀರೋ ಆಗಿ ನಟಿಸಿದ್ದಾರೆ. ಅವರ ಜೊತೆ ಸಾಧು ಕೋಕಿಲ, ಸುಧಾರಾಣಿ, ಸಾಯಿ ಕುಮಾರ್​ ಅವರಂತಹ ಅನುಭವಿ ಕಲಾವಿದರು ಇದ್ದಾರೆ. ‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂಬ ಕವಿವಾಣಿ ರೀತಿಯೇ ಈ ಸಿನಿಮಾದಲ್ಲಿ ಹಿರಿ-ಕಿರಿಯ ಕಲಾವಿದರ ಸಮಾಗಮ ಆಗಿದೆ.

ಇದನ್ನೂ ಓದಿ: Pankaj Tripathi: ಸೌತ್​ ಸಿನಿಮಾ ಒಪ್ಪಿಕೊಳ್ಳದೇ ಇರಲು ಬಹಿರಂಗ ವೇದಿಕೆಯಲ್ಲಿ ಕಾರಣ ತಿಳಿಸಿದ ಪಂಕಜ್​ ತ್ರಿಪಾಠಿ

ರೋಹಿತ್​ ಶ್ರೀಧರ್​, ಸಾಧು ಕೋಕಿಲ, ಭಾವನಾ ಶ್ರೀನಿವಾಸ್​, ಜೀವಿತಾ ವಸಿಷ್ಠ, ರಾಘು ರಾಮನಕೊಪ್ಪ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಜೇನುಗೂಡು ಕೆ.ಎನ್​. ಶ್ರೀಧರ್​ ಬಂಡವಾಳ ಹೂಡಿದ್ದಾರೆ. ರವೀಂದ್ರ ವಂಶಿ ನಿರ್ದೇಶನ, ಶ್ರೀಗುರು ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:09 pm, Sun, 11 December 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!