AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vasanthi Nalidaga: ಮತ್ತೊಂದು ವಾರಕ್ಕೆ ಕಾಲಿಟ್ಟ ಯೂಥ್​ಫುಲ್​ ಚಿತ್ರ ‘ವಾಸಂತಿ ನಲಿದಾಗ’

New Kannada Movie: ‘ವಾಸಂತಿ ನಲಿದಾಗ’ ಸಿನಿಮಾಗೆ ಹೊಸ ನಟ ರೋಹಿತ್​ ಶ್ರೀಧರ್​ ಹೀರೋ. ಅವರ ಜೊತೆ ಸಾಧು ಕೋಕಿಲ, ಸುಧಾರಾಣಿ, ಸಾಯಿ ಕುಮಾರ್​ ಅವರಂತಹ ಅನುಭವಿ ಕಲಾವಿದರು ನಟಿಸಿದ್ದಾರೆ.

Vasanthi Nalidaga: ಮತ್ತೊಂದು ವಾರಕ್ಕೆ ಕಾಲಿಟ್ಟ ಯೂಥ್​ಫುಲ್​ ಚಿತ್ರ ‘ವಾಸಂತಿ ನಲಿದಾಗ’
‘ವಾಸಂತಿ ನಲಿದಾಗ’ ಸಿನಿಮಾ
TV9 Web
| Edited By: |

Updated on:Dec 11, 2022 | 4:09 PM

Share

ವರ್ಷದ ಈ ಕೊನೇ ತಿಂಗಳಿನಲ್ಲಿ ಹತ್ತು ಹಲವು ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ತೆರೆಕಾಣುತ್ತಿವೆ. ಕಳೆದ ವಾರ ಕನ್ನಡದಲ್ಲೇ 10ಕ್ಕೂ ಹೆಚ್ಚು ಸಿನಿಮಾಗಳು (Kannada Movies) ರಿಲೀಸ್​ ಆದವು. ಅದರ ಜೊತೆ ಪರಭಾಷೆ ಚಿತ್ರಗಳ ಪೈಪೋಟಿಯೂ ಜೋರಾಗಿದೆ. ಈ ಸಂದರ್ಭದಲ್ಲಿ ಹೊಸ ಕಲಾವಿದರ ಸಿನಿಮಾ ಒಂದು ವಾರ ಪೂರೈಸಿ ಮುನ್ನುಗ್ಗುವುದು ತಮಾಷೆಯೇ ಅಲ್ಲ. ಡಿಸೆಂಬರ್​ 2ರಂದು ತೆರೆಕಂಡ ‘ವಾಸಂತಿ ನಲಿದಾಗ’ (Vasanthi Nalidag) ಚಿತ್ರ ಎರಡನೇ ವೀಕೆಂಡ್​ನಲ್ಲೂ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಮೂರನೇ ವಾರದಲ್ಲಿ ಇನ್ನಷ್ಟು ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುವ ಭರವಸೆ ಹೊಂದಿದೆ ಈ ಚಿತ್ರತಂಡ. ಈ ಸಿನಿಮಾದಲ್ಲಿನ ಒಂದಷ್ಟು ಅಂಶಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತಿವೆ.

ಚಿತ್ರರಂಗವೆಂದರೆ ಕೇವಲ ಬಿಗ್​ ಬಜೆಟ್​ ಸಿನಿಮಾಗಳ ಪ್ರಾಬಲ್ಯ ಮಾತ್ರವಲ್ಲ. ಹೊಸಬರ ಪ್ರಯತ್ನಗಳಿಗೂ ಇಲ್ಲಿ ಜಾಗವಿದೆ. ಕಂಟೆಂಟ್​ ಇಷ್ಟವಾದರೆ ಜನರು ಇಂಥ ಸಿನಿಮಾಗಳಿಗೆ ಖಂಡಿತಾ ಬೆಂಬಲ ನೀಡುತ್ತಾರೆ. ಏನಾದರೂ ಒಂದಷ್ಟು ಹೊಸತನ ಇದ್ದರೆ ಪ್ಲಸ್​ ಪಾಯಿಂಟ್​. ಪಕ್ಕಾ ಕಾಲೇಜು ಕಹಾನಿಯನ್ನು ಇಟ್ಟುಕೊಂಡು ಈ ಸಿನಿಮಾ ಮೂಡಿಬಂದಿದೆ. ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಮೊದಲ ಕ್ರಶ್​, ಮೊದಲ ಪ್ರೀತಿ, ಎಕ್ಸಾಂ ಟೆನ್ಷನ್​, ತರಲೆ-ತಮಾಷೆ ಸೇರಿದಂತೆ ಹತ್ತಾರು ವಿಚಾರಗಳು ಈ ಸಿನಿಮಾದಲ್ಲಿ ಮನರಂಜನೆ ನೀಡುತ್ತಿವೆ.

ಇದನ್ನೂ ಓದಿ: New Movies: ‘ಬಾಂಡ್​ ರವಿ’, ‘ವಿಜಯಾನಂದ’ ಜತೆ ರಿಲೀಸ್​ ಆಗ್ತಿವೆ ಸಿಕ್ಕಾಪಟ್ಟೆ ಸಿನಿಮಾ; ಈ ವಾರ 18ಕ್ಕೂ ಹೆಚ್ಚು ಚಿತ್ರ

ಬಣ್ಣದ ಲೋಕಕ್ಕೆ ಕಾಲಿಡುವ ಹೊಸಬರಿಗೆ ಹಳೆಯ ಕಲಾವಿದರು ಸಾಥ್​ ನೀಡಿದರೆ ಕಲಿಯಲು ಸಾಕಷ್ಟು ವಿಷಯ ಸಿಗುತ್ತದೆ. ‘ವಾಸಂತಿ ನಲಿದಾಗ’ ಸಿನಿಮಾದಲ್ಲಿ ಹೊಸ ನಟ ರೋಹಿತ್​ ಶ್ರೀಧರ್​ ಹೀರೋ ಆಗಿ ನಟಿಸಿದ್ದಾರೆ. ಅವರ ಜೊತೆ ಸಾಧು ಕೋಕಿಲ, ಸುಧಾರಾಣಿ, ಸಾಯಿ ಕುಮಾರ್​ ಅವರಂತಹ ಅನುಭವಿ ಕಲಾವಿದರು ಇದ್ದಾರೆ. ‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂಬ ಕವಿವಾಣಿ ರೀತಿಯೇ ಈ ಸಿನಿಮಾದಲ್ಲಿ ಹಿರಿ-ಕಿರಿಯ ಕಲಾವಿದರ ಸಮಾಗಮ ಆಗಿದೆ.

ಇದನ್ನೂ ಓದಿ: Pankaj Tripathi: ಸೌತ್​ ಸಿನಿಮಾ ಒಪ್ಪಿಕೊಳ್ಳದೇ ಇರಲು ಬಹಿರಂಗ ವೇದಿಕೆಯಲ್ಲಿ ಕಾರಣ ತಿಳಿಸಿದ ಪಂಕಜ್​ ತ್ರಿಪಾಠಿ

ರೋಹಿತ್​ ಶ್ರೀಧರ್​, ಸಾಧು ಕೋಕಿಲ, ಭಾವನಾ ಶ್ರೀನಿವಾಸ್​, ಜೀವಿತಾ ವಸಿಷ್ಠ, ರಾಘು ರಾಮನಕೊಪ್ಪ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಜೇನುಗೂಡು ಕೆ.ಎನ್​. ಶ್ರೀಧರ್​ ಬಂಡವಾಳ ಹೂಡಿದ್ದಾರೆ. ರವೀಂದ್ರ ವಂಶಿ ನಿರ್ದೇಶನ, ಶ್ರೀಗುರು ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:09 pm, Sun, 11 December 22

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?